ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda: ಗಂಡನ ಜೊತೆ 117 ಅಡಿ ಎತ್ತರದಿಂದ ಕೆಳಗೆ ಜಿಗಿದ ನಟಿ ವೈಷ್ಣವಿ ಗೌಡ

ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಗಂಡ ಹೇಳಿದಕ್ಕೆ ಬರೋಬ್ಬರಿ 117 ಅಡಿ ಎತ್ತರದಿಂದ ನಟಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್ ಮಿಶ್ರಾ ಕೆಳಗೆ ಜಿಗಿದಿದ್ದಾರೆ.

ಗಂಡನ ಜೊತೆ 117 ಅಡಿ ಎತ್ತರದಿಂದ ಕೆಳಗೆ ಜಿಗಿದ ವೈಷ್ಣವಿ ಗೌಡ

Vaishnavi Gowda

Profile Vinay Bhat Jun 25, 2025 7:30 AM

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ಜೋಡಿ ಹನುಮೂನ್ ಮೂಡ್​ನಲ್ಲಿದೆ. ಇಬ್ಬರೂ ಪ್ರವಾಸದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದರ ಮಧ್ಯೆ ಒಂದು ವಿಡಿಯೋ ವೈರಲ್ ಆಗುತ್ತಿದೆ. ನಟಿ ವೈಷ್ಣವಿ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ. ಉತ್ತರ ಭಾರತದ ಕಡೆ ಪ್ರವಾಸ ಮಾಡುತ್ತಿರುವ ವೈಷ್ಣವಿ ಗೌಡ ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ.

ಶಾಕಿಂಗ್ ಎಂದರೆ. ಗಂಡ ಹೇಳಿದಕ್ಕೆ ಬರೋಬ್ಬರಿ 117 ಅಡಿ ಎತ್ತರದಿಂದ ನಟಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್​ ಮಿಶ್ರಾ ಕೆಳಗೆ ಜಿಗಿದಿದ್ದಾರೆ. ಇದೇ ವಿಡಿಯೋ ಶೇರ್ ಮಾಡಿಕೊಂಡು, ಇದು ನಂಬಿಕೆಯ ಜಿಗಿತ.. 117 ಮೀಟರ್‌ ಎತ್ತರದಿಂದ. ಪ್ರತಿ ಸೆಕೆಂಡ್‌ ಕೂಡ ಯೋಗ್ಯವಾದದ್ದು. ಇದನ್ನ ನನ್ನಿಂದ ಮಾಡಿಸಿದ್ದು ನನ್ನ ಪತಿ ಎಂದು ಬರೆದುಕೊಂಡಿದ್ದಾರೆ ವೈಷ್ಣವಿ ಗೌಡ. ಇದು ಇಡೀ ಭಾರತದಲ್ಲೇ ಅತೀ ಎತ್ತರದ ಬಂಗೀ ಜಂಪ್ ಆಗಿದೆ.

ಸದ್ಯ ಈ ವಿಡಿಯೋ ಹಲವರ ಗಮನ ಸೆಳೆಯುತ್ತಿದೆ. ವೈಷ್ಣವಿ ಅವರ ಈ ಸಾಹಸಕ್ಕೆ ಮೆಚ್ಚುಗೆ ಕೂಡ ಸಿಗುತ್ತಿದೆ. ಹಲವರು ನಿಮಗೆ ಪ್ರೀತಿ ಮತ್ತು ಕಾಳಜಿ ತೋರಿಸುವ ಹುಡುಗ ಸಿಕ್ಕಿದ್ದಾನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ತರಹದ ಸಾಹಸ ಕಾರ್ಯಕ್ರಮಗಳಿಂದ ದೂರ ಇರಿ ಪ್ರಾಣಕ್ಕಿಂತ ದೊಡ್ಡದು ಯಾವುದು ಇಲ್ಲ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ವೈಷ್ಣವಿ ಪತಿ ಅನುಕೂಲ್ ಉತ್ತರ ಭಾರತದ ಛತ್ತಿಸ್​ಗಡದ ಮೂಲದವರು. ಹೀಗಾಗಿ ಸದ್ಯ ಉತ್ತರ ಭಾರತದ ಕಡೆ ಪ್ರವಾಸ ಮಾಡುತ್ತಿರುವ ವೈಷ್ಣವಿ ಗೌಡ, ಉತ್ತರಾಖಂಡ ಋಷಿಕೇಶ್ ಬಳಿ ಇರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ.

Ugramm Manju: ಬಿಗ್ ಬಾಸ್​ನಿಂದ ಹೊರಬಂದ ಬಳಿಕ ನಡೆದ ಆ ಘಟನೆ ನೆನೆದು ಕಣ್ಣೀರಿಟ್ಟ ಉಗ್ರಂ ಮಂಜು