ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Kalaburagi News: ಲಾರಿ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವು

ಲಾರಿ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವು

Kalaburagi News: ಕೆಂಪು ಮಣ್ಣು ತುಂಬಿಕೊಂಡು ಸಿಮೆಂಟ್ ಕಾರ್ಖಾನೆಯೊಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಐದು ವರ್ಷದ ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

Assembly Session: ನಮ್ಮ ಸರ್ಕಾರದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ: ಸಿಎಂ ಸಿದ್ದರಾಮಯ್ಯ

ನಮ್ಮ ಸರ್ಕಾರದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ: ಸಿಎಂ ಸಿದ್ದರಾಮಯ್ಯ

Assembly Session: 2022-23 ರಲ್ಲಿ 1147 ಕೋಟಿ ರೂಪಾಯಿಗಳಷ್ಟು ಸಹಾಯಧನವನ್ನು ರೈತರಿಗೆ ಹಾಲಿನ ಪ್ರೋತ್ಸಾಹಧನವಾಗಿ ನೀಡಲಾಗಿತ್ತು. 2024-25 ರಲ್ಲಿ 1500 ಕೋಟಿ ರೂಪಾಯಿಗಳನ್ನು ಫೆಬ್ರವರಿ ಅಂತ್ಯದವರೆಗೆ ನೀಡಿದ್ದೇವೆ. ಇದರಲ್ಲಿ 2019 ರಿಂದ ಬಾಕಿ ಉಳಿಸಿದ್ದ ಮೊತ್ತವೂ ಸೇರಿದೆ. ಈ ವರ್ಷ ಮತ್ತೆ 1500 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Fashion Interview: ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕಂಡಂತೆ ಅಪ್ಪು

ಫ್ಯಾಷನ್ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕಂಡಂತೆ ಅಪ್ಪು

Fashion Interview: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿಂಪಲ್ ಫ್ಯಾಷನ್ ಕುರಿತಂತೆ ಫ್ಯಾಷನ್‌ಲೋಕದ ಶೋ ಡೈರೆಕ್ಟರ್, ಡಿಸೈನರ್ ಹಾಗೂ ಕೊರಿಯಾಗ್ರಾಫರ್ ರಾಜೇಶ್ ಶೆಟ್ಟಿಯವರು ಒಂದಿಷ್ಟು ಫ್ಯಾಷನ್ ಸ್ಟೈಲಿಂಗ್ ವಿಷಯಗಳನ್ನು ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನದ ಸಾರಾಂಶ ಇಲ್ಲಿದೆ .

ಪಟ್ಟಣಕ್ಕೆ ಹೊಂದಿಕೊಂಡಿದ್ದರೂ ಸಮಸ್ಯೆಗಳ ಸುಳಿಯಲ್ಲಿ ಪಾತಬಾಗೇಪಲ್ಲಿ

ಚರಂಡಿ, ರಸ್ತೆ, ಕುಡಿಯುವ ನೀರಿನ ಸಮಸ್ಯೆಗಳಿಂದ ಹೈರಾಣು

ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿಗಳು ಹಲವೆಡೆ ಹೂಳು ತುಂಬಿ ದ್ದು, ಮತ್ತೆ ಹಲವೆಡೆ ಸಂಪೂರ್ಣ ಮುಚ್ಚಿಹೋಗಿವೆ. ಇನ್ನೊಂದೆಡೆ ಕೊಳಚೆ ನೀರಿನಿಂದ ಮಡು ಗಟ್ಟುವ ಪರಿಸ್ಥಿತಿಯಲ್ಲಿದ್ದು, ಸರಾಗವಾಗಿ ಹರಿಯದೇ ಒಂದೆಡೆಯೇ ನಿಂತು ಕೊಳೆಯುತ್ತಿದೆ. ಇದರಿಂದಾಗಿ ಸೊಳ್ಳೆ ಗಳ ಕಾಟ ಹೆಚ್ಚಾಗಿದ್ದು, ದುರ್ವಾಸನೆಗೆ ಹೈರಾಣಾಗಬೇಕಿದೆ.

Chikkaballapur news: ಒತ್ತುವರಿ ತೆರವು ಗೊಳಿಸಿದ ಕಂದಾಯ, ಭೂಮಾಪನ ಇಲಾಖೆ ಅಧಿಕಾರಿಗಳು

ದಾರಿ ಗುರುತಿಸಿ ಪಂಚಾಯಿತಿಗೆ ಹಸ್ತಾಂತರ ಮಾಡಿದ ಅಧಿಕಾರಿಗಳು

ಕಾಲುದಾರಿ ರಸ್ತೆ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ರೈತರ ಹೊಲಗಳಿಗೆ ಹೋಗಲು ದಾರಿ ಗುರುತಿಸಿ ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿ ತಿಗೆ ಹಸ್ತಾಂತರಿಸುವ ಘಟನೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Chikkaballapur Crime: ಕಾಡ್ಗಿಚ್ಚಿಗೆ ಶ್ರೀಗಂಧದ ಮರಗಳು ಬೆಂಕಿಗಾಹುತಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿ ರೈತ

ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ಮರಗಳು ಬೆಂಕಿಗೆ ಆಹುತಿ

ಕಾಡ್ಗಿಚ್ಚಿಗೆ ಒಳಗಾಗಿ ಅಪಾರ ಪ್ರಮಾಣದ ಮರಗಳು ಸುಟ್ಟಿದ್ದು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಿ ದ್ದೇನೆ. ದಯವಿಟ್ಟು ಜಿಲ್ಲಾ ಧಿಕಾರಿಗಳು ನನಗೆ ಆಗಿರುವ ನಷ್ಟದ ಅಂದಾಜನ್ನು ಅಧಿಕಾರಿಗಳ ಮೂಲಕ ಸಮೀಕ್ಷೆ ಮಾಡಿಸಿ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಈಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ

Congress guarantees: ಗ್ಯಾರಂಟಿಗಳಿಂದ ಬಡವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಹೆಚ್ಚಿದೆ: ಸಿಎಂ

ಗ್ಯಾರಂಟಿಗಳಿಂದ ಬಡವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಹೆಚ್ಚಿದೆ: ಸಿಎಂ

Congress guarantees: ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಗ್ಯಾರಂಟಿಗಳನ್ನು ಶ್ಲಾಘಿಸಿದ್ದಾರೆ ಎಂದು ತಿಳಿಸಿದ್ದಾರೆ.

Chikkaballapur Crime: ಮೈಕ್ರೋ ಫೈನಾನ್ಸ್ ಹಾವಳಿಗೆ ತಾಲೂಕಿನಲ್ಲಿ ಮತ್ತೊಂದು ಬಲಿ

ಮೈಕ್ರೋ ಫೈನಾನ್ಸ್ ಹಾವಳಿ: ತಾಲೂಕಿನಲ್ಲಿ ಮತ್ತೊಂದು ಬಲಿ

ನಮ್ಮ ಗ್ರಾಮದ ಮಂಜುನಾಥ್ ತೆಲುಗು ಖಾಸಗಿ ಫೈನಾನ್ಸ್ ಗಳಲ್ಲಿ 6.25 ಲಕ್ಷ ಸಾಲ ಪಡೆದು ಕಂತಿಲ ರೂಪದಲ್ಲಿ ಕಟ್ಟುತ್ತಿದ್ದು, ಎಲ್‌ಎಲ್‌ಟಿ ಫೈನಾನ್ಸ್ ಅವರಿಗೆ ಹಣ ಕಟ್ಟಲು ಇಲ್ಲದ ಕಾರಣ ಮನೆಯಲ್ಲಿ ಸಾಲದ ರೂಪದಲ್ಲಿ ಹಣ ತರುತ್ತೇನೆ ಎಂದು ಮಂಜುನಾಥ್ ಹೋಗಿದ್ದು ನೇಣು ಹಾಕಿಕೊಂಡು ಸಾವನಪ್ಪಿದ್ದಾನೆ.

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

ಏಪ್ರಿಲ್ 1 ರಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸ ಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸ ಬಹುದು.ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡ ಬೇಕು

ಸೈಬರ್ ಸವಾಲು ಎದುರಿಸಲು ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಅಧ್ಯಯನ ಕೇಂದ್ರ ಪ್ರಾರಂಭ

ಮುಂದಿನ ಪೀಳಿಗೆಗೆ ಸುರಕ್ಷತೆ ಕಲ್ಪಿಸುವುದು ಪ್ರಧಾನ ಧ್ಯೇಯ

ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ, ವಿಧಿವಿಜ್ಞಾನ, ನೈಜ ಸಮಯದ ಅಪರಾಧ ತನಿಖೆ, ಮಾದಕ ದ್ರವ್ಯಗಳ ಮತ್ತು ಸ್ಫೋಟಕಗಳ ಪತ್ತೆಯಲ್ಲಿ ವ್ಯಾಪಕ ಶ್ರೇಣಿಯ ಸಂಶೋಧನೆಗಳ ಜೊತೆಗೆ ಅಪರಾಧ ಪತ್ತೆ ಮಾಡ ಲು ಸೂಕ್ತ ರೀತಿಯಲ್ಲಿ ಉಪಯೋಗಕಾರಿ ಮಾರ್ಗೋಪಾಯಗಳನ್ನು ರೂಪಿಸಲಿದೆ.

CM Siddaramaiah: ಆರ್‌ಎಸ್‌ಎಸ್‌ ಅವರನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ಆರ್‌ಎಸ್‌ಎಸ್‌ ಅವರನ್ನು ಎದುರಿಸಲು ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

CM Siddaramaiah: ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್‌ನಲ್ಲಿ ತೆಗೆದಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಶೇ. 7.46 ರಷ್ಟು ಹಣ ಮೀಸಲಿಟ್ಟು, ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Davanagere News: ಬಟ್ಟೆ ತೊಳೆಯುವ ವೇಳೆ ಕೆರೆಯಲ್ಲಿ ಮುಳುಗಿ ಮೂವರು ಮಹಿಳೆಯರ ಸಾವು

ಬಟ್ಟೆ ತೊಳೆಯುವ ವೇಳೆ ಕೆರೆಗೆ ಬಿದ್ದು ಮೂವರು ಮಹಿಳೆಯರ ಸಾವು

Davanagere News: ದಾವಣಗೆರೆ ಜಿಲ್ಲೆಯ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಕ್ಷ್ಮೀಸಾಗರ- ದುಗ್ಗೇನಹಳ್ಳಿ ಗ್ರಾಮದ ಮಧ್ಯೆ ಘಟನೆ ನಡೆದಿದೆ. ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ-ತಂಗಿ ಸೇರಿ ಮೂವರು ಮೃತಪಟ್ಟಿದ್ದಾರೆ.

South Indian Bank: ಸೌತ್ ಇಂಡಿಯನ್ ಬ್ಯಾಂಕ್‌ನಿಂದ 'ವುಮೆನ್ ಲೈಕ್ ಯು' ಕಾಫಿ ಟೇಬಲ್ ಪುಸ್ತಕ ರಿಲೀಸ್‌

ಸೌತ್ ಇಂಡಿಯನ್ ಬ್ಯಾಂಕ್ ವತಿಯಿಂದ ಪುಸ್ತಕ ಬಿಡುಗಡೆ

Book Release: ಸೌತ್ ಇಂಡಿಯನ್ ಬ್ಯಾಂಕ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ್ದು ಮಹಿಳೆಯರ ಸ್ಪೂರ್ತಿದಾಯಕ ಪ್ರಯಾಣವನ್ನು ವಿವರಿಸುವ ವಿಶೇಷ ಕಾಫಿ ಟೇಬಲ್ ಪುಸ್ತಕ 'ವುಮೆನ್ ಲೈಕ್ ಯು' ಅನ್ನು ಬಿಡುಗಡೆ ಮಾಡಿದೆ. ಸೌತ್ ಇಂಡಿಯನ್ ಬ್ಯಾಂಕಿನ ನಿರ್ದೇಶಕಿ ಲಕ್ಷ್ಮೀ ರಾಮಕೃಷ್ಣ ಶ್ರೀನಿವಾಸ್ ಅವರು ಪುಸ್ತಕವನ್ನು ಅನಾವರಣಗೊಳಿಸಿದರು.

Chakravarthy Sulibele: ಅನ್ಯ ಧರ್ಮೀಯರನ್ನು ಮದುವೆಯಾಗಲು ಕರೆ ಕೊಟ್ಟಿದ್ದ ಸೂಲಿಬೆಲೆ ವಿರುದ್ಧ ಎಫ್‌ಐಆರ್‌

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲು

Chakravarthy Sulibele: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ರಚೋದನಕಾರಿ ಭಾಷಣ ಮಾಡಿ,‌ ಕೋಮು ದ್ವೇಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಶೀದ್ ನೀಡಿದ ದೂರಿನ‌ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

CM Siddaramaiah: ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಬಳಿ 3 ಬಾರಿ ಮನವಿ ಮಾಡಿದ್ದೆವು, ಆದ್ರೂ ನ್ಯಾಯ ಸಿಗಲಿಲ್ಲ: ಸಿಎಂ

ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದ್ರೂ ನ್ಯಾಯ ಸಿಗಲಿಲ್ಲ: ಸಿಎಂ

CM Siddaramaiah: ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಒದಗಿಸಿ ಎಂದು ಮೂರು ಬಾರಿ ಭೇಟಿಯಾಗಿ ಮನವಿ ಮಾಡಿದ್ದರೂ, ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಿಸಿದ್ದರೂ ಒಂದು ರೂಪಾಯಿ ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Power Star Fashion: ಹೀಗಿತ್ತು ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟೈಲಿಂಗ್!

ಹೀಗಿತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಟೈಲಿಂಗ್!

Power Star Fashion: ನಮ್ಮ ನಿಮ್ಮೆಲ್ಲರ ನೆನಪಿನಾಳದಲ್ಲಿ ಉಳಿದಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಒಂದೊಂದು ಸಿನಿಮಾ ಲುಕ್ & ಸ್ಟೈಲಿಂಗ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿತ್ತು, ಮಾದರಿಯಾಗಿತ್ತು. ಸಾಕಷ್ಟು ಬಾರಿ ಟ್ರೆಂಡ್ ಕೂಡ ಸೆಟ್ ಮಾಡಿತ್ತು. ಅವರ ಹುಟ್ಟಿದ ದಿನದ ಹಿನ್ನೆಲೆಯಲ್ಲಿ ಅಪ್ಪು ಅವರ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್ಸ್ ಕುರಿತ ಹಳೆಯ ಸಂದರ್ಶನದ ಸಾರಾಂಶವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಅವರಿಗೆ ವಿಶ್ವವಾಣಿ ನ್ಯೂಸ್‌ನ ಫ್ಯಾಷನ್ ಲೋಕ ನಮನ ಸಲ್ಲಿಸಿದೆ.

Karnataka Weather: ನಾಳೆ ಮೈಸೂರು, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ನಿರೀಕ್ಷೆ

ನಾಳೆ ಮೈಸೂರು, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ನಿರೀಕ್ಷೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮುಖ್ಯವಾಗಿ ಸ್ಪಷ್ಟ ಆಕಾಶವಿರಲಿದೆ. ಮಧ್ಯಾಹ್ನ/ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

WCD Karnataka Recruitment 2025: ಅಂಗನವಾಡಿಯಲ್ಲಿದೆ ಬರೋಬ್ಬರಿ 2,500 ಹುದ್ದೆ; ಪರೀಕ್ಷೆ ಇಲ್ಲ, ನೇರ ನೇಮಕಾತಿ

ಅಂಗನವಾಡಿಯಲ್ಲಿದೆ ಬರೋಬ್ಬರಿ 2,500 ಹುದ್ದೆ

Job Guide: ಕರ್ನಾಟಕದಲ್ಲೇ ಉತ್ತಮ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ರಾಜ್ಯಾದ್ಯಂತ ಖಾಲಿ ಇರುವ ಬರೋಬ್ಬರಿ 2,500 ಅಂಗನವಾಡಿ ವರ್ಕರ್‌ ಮತ್ತು ಹೆಲ್ಪರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏ. 4.

CM Siddaramaiah: 36 ಸಾವಿರ ಕೋಟಿ ಬಾಕಿ ಬಿಲ್‌ಗಳು ಬಿಜೆಪಿಯ ಬಳುವಳಿ: ಸಿಎಂ ಸಿದ್ದರಾಮಯ್ಯ

36 ಸಾವಿರ ಕೋಟಿ ಬಾಕಿ ಬಿಲ್‌ಗಳು ಬಿಜೆಪಿಯ ಬಳುವಳಿ: ಸಿಎಂ ಸಿದ್ದರಾಮಯ್ಯ

CM Siddaramaiah: ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿರಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್‌ಗಳು ನಿಮ್ಮ ಬಳುವಳಿ. ನಿಮ್ಮಿಂದ ನಾವು ಕಷ್ಟಪಡುವ ಸಂದರ್ಭ ಒದಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

Puneeth Rajkumar Birthday: ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಹಿರಿಯ ನಾಗರಿಕರಿಗೆ ವಾಕರ್ ವಿತರಿಸಿದ ನಟ ವಿನೋದ್ ರಾಜ್

ಪುನೀತ್ ಹುಟ್ಟುಹಬ್ಬ; ಹಿರಿಯ ನಾಗರಿಕರಿಗೆ ವಾಕರ್ ವಿತರಿಸಿದ ನಟ ವಿನೋದ್ ರಾಜ್

Puneeth Rajkumar Birthday: ನೆಲಮಂಗಲದ ಮಂಚೇನಹಳ್ಳಿ ಗ್ರಾಮದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಯುವಕರ ಸಂಘದಿಂದ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸೋಮವಾರ ಆಚರಣೆ‌ ಮಾಡಲಾಗಿತ್ತು. ಈ ವೇಳೆ ವಿನೋದ್ ರಾಜ್ ಅವರು, ಹಿರಿಯ ನಾಗರಿಕರಿಗೆ ವಾಕರ್‌ಗಳನ್ನು ವಿತರಿಸಿದ್ದಾರೆ.

Lakshmi Hebbalkar: ಮತೀಯ ಶಕ್ತಿಗಳ ಮೇಲೆ ನಿಗಾ ವಹಿಸಿ: ಯುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಲಕ್ಷ್ಮೀ ಹೆಬ್ಬಾಳಕರ್‌ ಕರೆ

ಮತೀಯ ಶಕ್ತಿಗಳ ಮೇಲೆ ನಿಗಾ ವಹಿಸಿ: ಲಕ್ಷ್ಮೀ ಹೆಬ್ಬಾಳಕರ್‌ ಕರೆ

Lakshmi Hebbalkar: ಬಿಜೆಪಿ, ಆರ್‌ಎಸ್‌ಎಸ್‌, ಎಬಿವಿಪಿ ಇವೆಲ್ಲದರ ಬಗ್ಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅತ್ಯಂತ ನಿಗಾ ವಹಿಸಬೇಕಿದೆ. ನಗರ, ಹಳ್ಳಿಗಳೆನ್ನದೆ ಎಲ್ಲ ಕಡೆಗಳಲ್ಲೂ ಬಹಳ ಸೂಕ್ಷ್ಮವಾಗಿ ಮತೀಯ ಶಕ್ತಿಗಳ ಮೇಲೆ ಕಣ್ಣು ಇಡಬೇಕಾಗಿದೆ. ಹೆಚ್ಚು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳನ್ನು ಯುವ ಕಾಂಗ್ರೆಸ್‌ ಕಾರ್ಯಕರ್ತರು ಜನತೆಗೆ ತಿಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ವಿಜಯಪುರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

Car Accident: ವಿಜಯಪುರ ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ಘಟನೆ ನಡೆದಿದೆ. ಉಕ್ಕಲಿ ಗ್ರಾಮದಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಡಿಸೈರ್ ಕಾರು ಅಪಘಾತಕ್ಕೀಡಾಗಿದೆ. ಕಾರು ಮರಕ್ಕೆ ಡಿಕ್ಕಿಯಾದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Dr Bro: ಡಾ.ಬ್ರೋ ವಿರುದ್ಧ ಆಟೋ, ಕ್ಯಾಬ್‌ ಚಾಲಕರ ಆಕ್ರೋಶ; ಕಾರಣವೇನು?

ಡಾ.ಬ್ರೋ ವಿರುದ್ಧ ಆಟೋ, ಕ್ಯಾಬ್‌ ಚಾಲಕರ ಆಕ್ರೋಶ; ಕಾರಣವೇನು?

Dr Bro: ʼನಮ್ಮ ಯಾತ್ರಿʼ ಅಪ್ಲಿಕೇಶನ್‌ ಬಗ್ಗೆ ವಿಡಿಯೊವೊಂದನ್ನು ಡಾ.ಬ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಮಿಷನ್‌ ಇಲ್ಲ, ಕೇವಲ ಸರಳವಾದ ವೇದಿಕೆ ಎಂದು ತಿಳಿಸಿದ್ದಾರೆ. ಹೀಗಾಗಿ ಡಾ. ಬ್ರೋ ವಿರುದ್ಧ ಆಟೋ ಹಾಗೂ ಕ್ಯಾಬ್‌ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳಿವು.

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.