ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ನ.೫ಕ್ಕೆ ಕನ್ನಡ ಭವನದಲ್ಲಿ ವಿ.ಕೃಷ್ಣರಾವ್ ಶತಮಾನೋತ್ಸವ ಕಾರ್ಯಕ್ರಮ : ಲಾಯರ್ ನಾರಾಯಣಸ್ವಾಮಿ

ನ.೫ಕ್ಕೆ ಕನ್ನಡ ಭವನದಲ್ಲಿ ವಿ.ಕೃಷ್ಣರಾವ್ ಶತಮಾನೋತ್ಸವ ಕಾರ್ಯಕ್ರಮ

ವಂಗತ ವಿ.ಕೃಷ್ಣರಾವ್ ಅವರು ಸತತವಾಗಿ ಮೂರು ಅವಧಿಗಳ ಕಾಲ ಲೋಕಸಭಾ ಸದಸ್ಯರಾಗಿ ಪ್ರತಿನಿಧಿಸಿದರು. ಜನರ ನಾಡಿ ಅರಿತಿದ್ದ ಅವರು ಜನ ಸೇವಕರಾಗಿ ಸದಾ ಕೆಲಸ ಮಾಡಿದರು. ಅವರ ನೇತೃತ್ವದಲ್ಲಿ ಅನೇಕ ಯುವ ಮುಖಂಡರು ರಾಜಕೀಯ ವಾಗಿ ಬೆಳೆದಿದ್ದಾರೆ. ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು

Gudibande News: ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಿ : ಡಾ.ಸುಬ್ರಮಣಿ

ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಿ

ಒಂದು ರಾಸುವಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ. ಕಾಲು ಬಾಯಿ ಜ್ವರ ಎಲ್ಲ ಸೀಳು ಗೊರಸುಳ್ಳ ಪ್ರಾಣಿಗಳಾದ ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಲ್ಲಿ ವೈರಾಣುವಿನಿಂದ ಬರುವ ಕಾಯಿಲೆ ಯಾಗಿದೆ

Sadhguru Shri Madhusudan Sai: ಮಕ್ಕಳಿಗೆ ಸೌಲಭ್ಯ ನೀಡಿ ಜಾಗತಿಕ ನಾಗರಿಕರನ್ನಾಗಿ ಮಾಡುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಮಕ್ಕಳಿಗೆ ಸೌಲಭ್ಯ ನೀಡಿ ಜಾಗತಿಕ ನಾಗರಿಕರನ್ನಾಗಿ ಮಾಡುವುದೇ ನಮ್ಮ ಗುರಿ

ಮಗು ಯಾರದ್ದೇ ಆಗಿರಲಿ, ಯಾವುದೇ ಭಾಗದಲ್ಲಿ ಇರಲಿ ಆ ಮಗು ಜಾಗತಿಕ ನಾಗರಿಕ. ಮಗುವನ್ನು ನೋಡಿಕೊಳ್ಳುವುದು ಕೇವಲ ಪೋಷಕರ ಜವಾಬ್ದಾರಿಯಲ್ಲ ಇಡೀ ಸಮಾಜದ ಜವಾಬ್ದಾರಿಯಾಗಿದೆ. ಅವರು ಎಲ್ಲಿದ್ದರೂ ಅವರನ್ನು ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ನಮ್ಮಂತೆಯೇ ಯೋಚಿಸುವ ಸಂಸ್ಥೆಗಳಿಂದಿಗೆ ಕೆಲಸ ಮಾಡುವುದನ್ನು ನಾವು ನಿಜವಾಗಿಯೂ ಆನಂದಿಸುತ್ತೇವೆ.

ಭಾರತದ ಟೆಕ್-ಚಾಲಿತ ಕ್ರಿಪ್ಟೋ ಪವರ್‌ಹೌಸ್ ಆಗಿ ಹೊರಹೊಮ್ಮಿದ ಬೆಂಗಳೂರು: ಕಾಯಿನ್‌ಸ್ವಿಚ್ Q3 ವರದಿ

ಭಾರತದ ಟೆಕ್-ಚಾಲಿತ ಕ್ರಿಪ್ಟೋ ಪವರ್‌ಹೌಸ್ ಆಗಿ ಹೊರಹೊಮ್ಮಿದ ಬೆಂಗಳೂರು

ಬೆಂಗಳೂರು 8.9% ಪಾಲು ಹೊಂದಿದ್ದು, ಭಾರತದ ಎರಡನೇ ಅತಿದೊಡ್ಡ ಕ್ರಿಪ್ಟೋ ಹೂಡಿಕೆ ಕೇಂದ್ರ ವಾಗಿ ಹೊರಹೊಮ್ಮಿದೆ. ಇದು ನಗರದ ಡಿಜಿಟಲ್ ಪ್ರಬುದ್ಧತೆ ಮತ್ತು ನಾವೀನ್ಯತೆ ಆಧರಿತ ಹೂಡಿಕೆ ದಾರರ ಸಮೂಹವನ್ನು ಪ್ರತಿಬಿಂಬಿಸುತ್ತದೆ. ಟೆಕ್ ಪರಿಣಿತ ಜನಸಮೂಹವನ್ನು ಹೊಂದಿರುವ ಬೆಂಗಳೂರು, ತನ್ನ "ಭಾರತದ ಸಿಲಿಕಾನ್ ವ್ಯಾಲಿ" ಖ್ಯಾತಿಯನ್ನು ಡಿಜಿಟಲ್ ಅಸೆಟ್‌ಗಳ ಜಗತ್ತಿ ನಲ್ಲೂ ಹೊಂದಿದೆ.

Assault Case: ಮಹಿಳೆಯ ಖಾಸಗಿ ಅಂಗಕ್ಕೆ ಹಲ್ಲೆ ದೂರು, ವರ್ತೂರು ಪೊಲೀಸರ ಮೇಲೆ ಪ.ಬಂಗಾಳ ಸಿಎಂ ಕಚೇರಿ ಅಸಮಾಧಾನ

ಮಹಿಳೆಯ ಖಾಸಗಿ ಅಂಗಕ್ಕೆ ಹಲ್ಲೆ, ವರ್ತೂರು ಪೊಲೀಸರ ಮೇಲೆ ದೂರು

Bengaluru: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸುಂದರಿ ಬೀಬಿ ಮನೆ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹಣ ಬಿದ್ದಿರುವುದನ್ನು ತೆಗೆದುಕೊಂಡು ಮನೆ ಮಾಲೀಕರಿಗೆ ಕೊಡಲು ಹೋಗಿದ್ದಾರೆ. ಇದನ್ನ ಸಿಸಿಟಿವಿಯಲ್ಲಿ ಗಮನಿಸಿದ ಅಪಾರ್ಟ್ಮೆಂಟ್‌ ಫ್ಲ್ಯಾಟ್‌ನ ಮಾಲೀಕರು ಬೀಬಿ ಮೇಲೆ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಠಾಣೆಯಲ್ಲಿ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಕ್ಷಯಕಲ್ಪ ಫೌಂಡೇಶನ್ ನಿಂದ ಪ್ರೋಟೀನ್ ಯುಕ್ತ ಹಾಲು ಬಿಡುಗಡೆ; ಡೈರಿ ಉದ್ಯಮದಲ್ಲಿ ವಾರ್ಷಿಕ 550 ಕೋಟಿ ಆದಾಯ ನಿರೀಕ್ಷೆ

ಅಕ್ಷಯಕಲ್ಪ ಫೌಂಡೇಶನ್ ನಿಂದ ಪ್ರೋಟೀನ್ ಯುಕ್ತ ಹಾಲು ಬಿಡುಗಡೆ

ಹಸುವಿನ ತಾಜಾ ಹಾಲಿನಿಂದ ಅಲ್ಟ್ರಾಫಿಲ್ಟ್ರೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ 250 ಎಂ ಎಲ್ ಗೆ 25 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಲ್ಯಾಕ್ಟೋಸ್ ಮುಕ್ತ ಆಗಿರುತ್ತದೆ. ಹಾಗು ಅಂಟಿಬಯೋಟಿಕ್ಸ್ ಸಂರಕ್ಷಕಗಳು ಮತ್ತು ಹೆಚ್ಚುವರಿ ಹಾರ್ಮೋನುಗಳಿಂದ ಮುಕ್ತವಾಗಿದೆ.

ಹನಿವೆಲ್ ಗ್ರೋತ್ ಸಿಂಪೋಸಿಯಂ 2025ರಲ್ಲಿ ದೇಶಾದ್ಯಂತ ನಡೆಯಲಿರುವ ತನ್ನ ವಿನೂತನ ಇನ್ನೋವೇಷನ್ ರೋಡ್‌ಶೋಗೆ ಚಾಲನೆ ನೀಡಿದ ಹನಿವೆಲ್

ವಿನೂತನ ಇನ್ನೋವೇಷನ್ ರೋಡ್‌ಶೋಗೆ ಚಾಲನೆ ನೀಡಿದ ಹನಿವೆಲ್

ಲೈವ್, ಸಂವಾದ ಪ್ರದರ್ಶನಗಳ ಮೂಲಕ ಹನಿವೆಲ್‌ ನ ತಂತ್ರಜ್ಞಾನಗಳು ವಿಭಿನ್ನ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಸುರಕ್ಷತೆ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಪ್ರದರ್ಶಿಸ ಲಾಗುತ್ತದೆ. ಪ್ರತೀ ನಗರದಲ್ಲಿಯೂ ಸ್ಥಳೀಯ ಮಾರುಕಟ್ಟೆ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ಡ್ ಅನುಭವಗಳನ್ನು ಒದಗಿಸಲಾಗುತ್ತದೆ.

RSS Row: ಕಾಂಗ್ರೆಸ್‌ ಜಾಲದಲ್ಲಿ ಸಿಕ್ಕಿಬೀಳಬೇಡಿ: ಬಿಜೆಪಿ ನಾಯಕರಿಗೆ ಆರೆಸ್ಸೆಸ್‌ ಬೈಠಕ್‌

ಕಾಂಗ್ರೆಸ್‌ ಜಾಲಕ್ಕೆ ಸಿಕ್ಕಿಬೀಳಬೇಡಿ: ಬಿಜೆಪಿ ನಾಯಕರಿಗೆ ಆರೆಸ್ಸೆಸ್‌ ನೀತಿ

RSS: ಆರ್‌ಎಸ್ಎಸ್ ಬಗ್ಗೆ ಕಾಂಗ್ರೆಸ್ನವರು ಕೆಟ್ಟ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಸಂಘಕ್ಕೆ 100 ವರ್ಷದ ಇತಿಹಾಸ ಇದ್ದು ಇಂಥ ಎಷ್ಟೋ ಕಠಿಣ ಸಂದರ್ಭಗಳನ್ನು ಸಂಘ ಎದುರಿಸಿ ಮೆಟ್ಟಿ ನಿಂತಿದೆ. 3 ಸಲ ಸಂಘವನ್ನು ನಿಷೇಧ ಮಾಡುವ ಅವರ ಪ್ರಯತ್ನಗಳೇ ವಿಫಲವಾಗಿದೆ. ಈಗ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಘದ ವಿಚಾರ ಕೆದಕಿದ್ದಾರೆ. ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ. ಈಗಿನ ಸವಾಲಿನ ಪರಿಸ್ಥಿತಿಯನ್ನೂ ಸಂಘ ಯಶಸ್ವಿಯಾಗಿ ಎದುರಿಸುತ್ತದೆ ಎಂದು ತಿಳಿಸಿದ್ದಾರೆ. ಆರ್ಎಸ್ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಸೂಚನೆ ನೀಡಲಾಗಿದೆ.

Priyank Kharge: ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸಸ್‌ ಹೇಳಿದೆ: ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್‌ ಖರ್ಗೆ

ಆರೆಸ್ಸೆಸ್ ನೋಂದಾಯಿತ ಸಂಸ್ಥೆಯಲ್ಲ:‌ ಪ್ರಿಯಾಂಕ್‌ ಖರ್ಗೆ ದಾಖಲೆ ಬಿಡುಗಡೆ

RSS: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆ ಟಿಪ್ಪಣಿಗಳು ಮುಂದುವರಿದಿವೆ. ತಾನು ನೋಂದಣಿ ಮಾಡಿಕೊಂಡ ಸಂಸ್ಥೆಯಲ್ಲ ಎಂದಿರುವ ಆರೆಸ್ಸೆಸ್ನ ಹೇಳಿಕೆಯನ್ನು ಖರ್ಗೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ʼಆರ್ಎಸ್ಎಸ್ ಅನ್ನು ನೋಂದಾಯಿಸದಿದ್ದರೆ ಮತ್ತು ಹೊಣೆಗಾರಿಕೆ ಹೊಂದಿಲ್ಲದ್ದಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೋಧನೆ ಹಾಗೂ ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶ ಭಕ್ತರನ್ನಾಗಿಸುತ್ತದೆ?ʼ ಎಂದು ಕೇಳಿದ್ದಾರೆ. ಈ ನಡುವೆ, ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ.

CM Siddaramaiah: ಗ್ರೇಟರ್‌ ಮೈಸೂರು ಆಗಲಿ, ಸಂಸ್ಕೃತಿಗೆ ಧಕ್ಕೆ ಆಗದಿರಲಿ: ಸಿಎಂ ಸಿದ್ದರಾಮಯ್ಯ

ಗ್ರೇಟರ್‌ ಮೈಸೂರು ಆಗಲಿ, ಸಂಸ್ಕೃತಿಗೆ ಧಕ್ಕೆ ಆಗದಿರಲಿ: ಸಿಎಂ ಸಿದ್ದರಾಮಯ್ಯ

Greater Mysuru: ಬೆಂಗಳೂರಿನ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್ಟಿಪಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಸ್ಪಷ್ಟವಾದ, ವೈಜ್ಞಾನಿಕವಾದ ಬ್ಲೂ ಪ್ರಿಂಟ್ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾ ಬದ್ಧವಾಗಿರಬೇಕು. ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ‌ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿ, ಅನುಷ್ಠಾನ ಮಾಡಬೇಕು ಎಂದಿದ್ದಾರೆ. ಈ ಬಗ್ಗೆ ಅವರು ಎಕ್ಸ್ ಪೋಸ್ಟ್ ಅನ್ನೂ ಹಂಚಿಕೊಂಡಿದ್ದಾರೆ.

Animal Cruelty: ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!  ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಸಾಕಲೆಂದು ಬಂದವಳು, ನೆಲಕ್ಕೆ ಬಡಿದು ನಾಯಿಮರಿಯನ್ನು ಕೊಂದಳು!

viral video: ಕೆಲವರ ಕ್ರೌರ್ಯಕ್ಕೆ ಕಾರಣ ಊಹಿಸಲೂ ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ರುಜುವಾತು ಆಗಿದೆ. ಆ ಮನೆ ಮಾಲೀಕರು ತಾವು ಇಲ್ಲದಾಗ ತಮ್ಮ ನಾಯಿ ಮರಿಯನ್ನು ನೋಡಿಕೊಳ್ಳಲಿ ಎಂದು ಒಬ್ಬಾಕೆ ಮಹಿಳೆಯನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಾಕಲೆಂದು ಬಂದವಳೇ ಆ ನಾಯಿ ಮರಿಗೆ ಯಮಸ್ವರೂಪಿಯಾಗಿದ್ದಾಳೆ. ಅದೂ ಆಕೆ ನಾಯಿ ಮರಿ ಮೇಲೆ ತೋರಿದ್ದು ಅಂತಿಂಥಾ ಕ್ರೌರ್ಯವಲ್ಲ. ಲಿಫ್ಟ್‌ ಒಳಗೆ ನಾಯಿಮರಿಯನ್ನು ಅದರ ಕೊರಳಿಗೆ ಕಟ್ಟಿದ ಬೆಲ್ಟ್‌ನಿಂದಲೇ ಎತ್ತಿ ಬಟ್ಟೆ ಕುಕ್ಕಿದಂತೆ ಕುಕ್ಕಿ ಕೊಂದುಹಾಕಿದ್ದಾಳೆ. ನಂತರ ನಾಯಿ ಮರೆ ಹೇಗೆ ಸತ್ತಿತು ಎಂದು ತನಗೆ ಗೊತ್ತೇ ಇಲ್ಲ ಎಂದು ನಾಟಕ ಆಡಿದ್ದಾಳೆ.

BY Vijayendra:  ನಾಳೆ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವೆ;  ಬಿ.ವೈ.ವಿಜಯೇಂದ್ರ

ನಾಳೆ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವೆ: ಬಿವೈವಿ

State Congress Government: ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಉತ್ತರ ಕನ್ನಡದಲ್ಲೂ ಕಬ್ಬು ಬೆಳೆಗಾರರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಸಚಿವರು ತಲೆ ಕೆಡಿಸಿಕೊಂಡಿಲ್ಲ. ನಾಳೆ ಬೆಳಗಾವಿಗೆ ತೆರಳಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಉತ್ತರ ಕನ್ನಡದಲ್ಲೂ ಕಬ್ಬು ಬೆಳೆಗಾರರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಸಚಿವರು ತಲೆ ಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ ಅವರು, ನಾಳೆ ಬೆಳಗಾವಿಗೆ ತೆರಳಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.

Movie ticket price: ಮಲ್ಟಿಪ್ಲೆಕ್ಸ್‌ಗಳ ಪರ ಸುಪ್ರೀಂ ತೀರ್ಪು, ಟಿಕೆಟ್‌ ದರದ ಬಗ್ಗೆ ಕೋರ್ಟ್‌ ಅಸಮಾಧಾನ

ಮಲ್ಟಿಪ್ಲೆಕ್ಸ್‌ಗಳ ಪರ ಸುಪ್ರೀಂ ತೀರ್ಪು, ಟಿಕೆಟ್‌ ದರದ ಬಗ್ಗೆ ಅಸಮಾಧಾನ

Supreme Court: ಸಿನಿಮಾ ಟಿಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್‌ಮೈಶೋನಂತಹ ಆನ್‌ಲೈನ್ ಆ್ಯಪ್ಗಳ ಮೂಲಕ ಮಾರಾಟ ಮಾಡಲಾಗುತ್ತಿವೆ. ಈ ರೀತಿ ಬುಕ್ ಮಾಡುವಾಗ ಅವರ ಖಾತೆಗಳನ್ನು ಮತ್ತು ಖರೀದಿದಾರರ ಗುರುತನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಗ್ರಾಹಕರ ವಿವರ ಅವರ ಬಳಿ ಇರುತ್ತವೆ. ನಾವು ಯಾವುದೇ ವಿವರಗಳು ಅಥವಾ ಐಡಿಗಳ ವಿವರ ಇಟ್ಟುಕೊಳ್ಳುವುದಿಲ್ಲ. ಟಿಕೆಟ್ ಖರೀದಿಸಲು ಯಾರೂ ಈಗ ಕೌಂಟರ್‌ಗೆ ಹೋಗುವುದಿಲ್ಲ ಎಂದು ಮಲ್ಟಿಪ್ಲೆಕ್ಸ್‌ ಪರ ಮುಕುಲ್ ರೋಹಟ್ಗಿ‌ ಅವರು ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದರು. ಈ ವಾದವನ್ನು ಸುಪ್ರೀಂ ಕೋರ್ಟ್‌ ನ್ಯಾಪೀಠ ಒಪ್ಪಿಕೊಂಡಿದ್ದು, ಮಲ್ಟಿಪ್ಲೆಕ್ಸ್‌ಗಳ ಪರ ತೀರ್ಪು ನೀಡಿದೆ.

DK Shivakumar: ನಮ್ಮ ಮೆಟ್ರೋ ಪಿಂಕ್‌ ಲೈನ್‌ ಕಾರ್ಯಾರಂಭ ಸನಿಹ: ಡಿಕೆ ಶಿವಕುಮಾರ್‌ ಮಾಹಿತಿ

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಕಾರ್ಯಾರಂಭ ಸನಿಹ: ಡಿಕೆ ಶಿವಕುಮಾರ್‌ ಮಾಹಿತಿ

Namm Metro Pink Line: ಬೆಂಗಳೂರಿನ ಪಿಂಕ್‌ ಲೈನ್‌ ನಮ್ಮ ಮೆಟ್ರೋ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದರ ಕಾರ್ಯಾಚರಣೆ ಯಾವಾಗಿನಿಂದ ಎಂಬ ಮಾಹಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್‌ ನೀಡಿದ್ದಾರೆ. ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗವು 21 ಕಿಮೀ ಉದ್ದ ಹೊಂದಿದ್ದು, ಇದರ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಇದರಲ್ಲಿ 13.76 ಕಿಮೀ ಸುರಂಗ ಮಾರ್ಗವಾಗಿದೆ. ಇದು ಅತಿ ಉದ್ದದ ಭೂಗತ ಮಾರ್ಗ. ಈ ಸುರಂಗದಲ್ಲಿ 12 ನಿಲ್ದಾಣಗಳು ಇವೆ. ಭೂಗತ ನಿಲ್ದಾಣಗಳಲ್ಲಿ ಮೆಟ್ಟಿಲು ನಿರ್ಮಾಣ, ಹಳಿ ಜೋಡಣೆ, ವಿದ್ಯುತ್ ಸಂಪರ್ಕ, ಎಲಿವೇಟರ್, ಎಸಿ, ಮತ್ತು ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ.

Actor Darshan: ನವೆಂಬರ್‌ 10ಕ್ಕೆ ದರ್ಶನ್‌ ವಿಚಾರಣೆ ಮುಂದೂಡಿಕೆ

ನವೆಂಬರ್‌ 10ಕ್ಕೆ ದರ್ಶನ್‌ ವಿಚಾರಣೆ ಮುಂದೂಡಿಕೆ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಸೇರಿದಂತೆ ಆರೋಪಿಗಳ ವಿಚಾರಣೆಯನ್ನು 57ನೇ ಸೆಷನ್ ಕೋರ್ಟ್ ನವೆಂಬರ್‌ 10ಕ್ಕೆ ವಿಚಾರಣೆ ಮುಂದೂಡಿದೆ. ಜೈಲು ಸೇರಿರುವ ದರ್ಶನ್‌ ಸೇರಿದಂತೆ ಆರೋಪಿಗಳು ನವೆಂಬರ್‌ 3ರಂದು ಬೆಂಗಳೂರು 64ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾದರು.

CM Siddaramaiah: ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ

ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ

Devaraj Arasu statue Unveiling: ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ದೇವರಾಜ ಅರಸು ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವುದು ಪ್ರತಿಯೊಬ್ಬ ರಾಜಕಾರಣಿಯ ಹೊಣೆಗಾರಿಕೆ ಆಗಬೇಕು. ಅರಸು ಅವರು ಅತ್ಯಂತ ಕೆಳಮಟ್ಟದಲ್ಲಿರುವ ಜನ ಸಮುದಾಯಗಳ ಪ್ರತಿನಿಧಿಗಳನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

Golden Chariot: ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು; 6 ದಿನ ಹೋಗಿ ಅರಸರಾಗಿ ಬನ್ನಿ

ಗೋಲ್ಡನ್ ಚಾರಿಯಟ್‌ ಎಂಬ ಐಷಾರಾಮಿ ರೈಲಿನಲ್ಲಿ ಸುತ್ತಾಡಿ

Pravasi Prapancha: ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ, ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡಲು ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್, ತನ್ನ ವೈಭವದ ಓಡಾಟವನ್ನು ಮತ್ತೆ ಆರಂಭಿಸಿದೆ. ಈ ಗೋಲ್ಡನ್ ಚಾರಿಯಟ್ನೊಂದಿಗೆ ಪ್ರವಾಸಕ್ಕೆ ಬರುವವರಿಗೆ ರಾಜ್ಯದ ಗೋಲ್ಡನ್ ಚರಿತ್ರೆಯ ಅನುಭವ ರೈಲಿನಲ್ಲಿಯೇ ರೀ ಓಪನ್ ಆಗಲಿದೆ. ಹೌದು, ಸುಂದರ ವಿನ್ಯಾಸದ ಈ ಚಾರಿಯಟ್ ಒಳಾಂಗಣವು ವಿಭಿನ್ನ ಬೋಗಿಗಳಲ್ಲಿ ಮತ್ತದೇ ವಿಭಿನ್ನ ರಾಜಮನೆತನದ ವೈಭೋಗವನ್ನು ಅನುಭವಕ್ಕೆ ತರಲಿದೆ.

CM Siddaramaiah: ಹೈಕಮಾಂಡ್ ನಿರ್ಧಾರವೇ ಅಂತಿಮ; ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಹೈಕಮಾಂಡ್ ನಿರ್ಧಾರವೇ ಅಂತಿಮ: ಸಿದ್ದರಾಮಯ್ಯ

''ಜನರ ಅಭಿಪ್ರಾಯವೇನೇ ಇದ್ದರೂ, ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿಲ್ಲ. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನರ್‌ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದುʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

Snake Bite: ಒಂದೇ ಮನೆಯ ಮೂವರು ಮಕ್ಕಳಿಗೆ ಕಡಿದ ವಿಷಪೂರಿತ ಹಾವು; ಪ್ರಾಣಾಪಾಯದಿಂದ ಕಾಪಾಡಿದ ನಾಟಿ ವೈದ್ಯ

ಒಂದೇ ಮನೆಯ ಮೂವರು ಮಕ್ಕಳಿಗೆ ಕಡಿದ ವಿಷಪೂರಿತ ಹಾವು

Dakshina Kannada News: ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ವಿಷಪೂರಿತ ಹಾವೊಂದು ಕಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ನಡೆದಿದೆ . ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಅವರಿಗೆ ವಿಷ ಪೂರಿತ ಕನ್ನಡಿ ಹಾವು ಕಡಿದಿದೆ. ಸಕಾಲದಲ್ಲಿ ನಾಟಿ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು; ತನಿಖೆಗೆ ಸಚಿವ ಈಶ್ವರ್‌ ಖಂಡ್ರೆ ಆದೇಶ

ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿವೆ. ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಜಮೀನಿನ ಬೇಲಿಗೆ ಅಕ್ರಮವಾಗಿ ಮನೆಯಿಂದ ವಿದ್ಯುತ್ ಸಂಪರ್ಕ ನೀಡಿದ್ದ ಆರೋಪದಲ್ಲಿ ರೈತ ಗಣಪತಿ ಸಾತೇರಿ ಗುರವ್ ಅವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Kasa Suriyuva Habba: ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೊ ಕಳುಹಿಸಿ 250 ರೂ. ಗಳಿಸಿ; BSWMLನಿಂದ ಹೊಸ ಯೋಜನೆ

ಎಲ್ಲೆಂದರಲ್ಲಿ ಕಸ ಎಸೆಯುವವರ ವಿಡಿಯೊ ಕಳುಹಿಸಿ 250 ರೂ. ಗಳಿಸಿ

ಬೆಂಗಳೂರಿನಲ್ಲಿ ಬಿಗಡಾಯಿಸಿರುವ ಕಸದ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕಠಿಣ ಕ್ರಮ ಕೈಗೊಂಡಿದೆ. ಕಸ ಸುರಿಯುವ ಹಬ್ಬ ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದೆ. ಅದರ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆಗಳ ಮುಂದೆ ಕಸ ಸುರಿದು, ದಂಡ ವಿಧಿಸುತ್ತಿದೆ. ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ದೃಶ್ಯವನ್ನು ಚಿತ್ರೀಕರಿಸಿ ಕಳುಹಿಸಿ ಕೊಟ್ಟವರಿಗೆ 250 ರೂ. ನೀಡುವುದಾಗಿ ಘೋಷಿಸಿದೆ.

Gold price today on 3rd November 2025: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ; ಇಂದಿನ ರೇಟ್‌ ಎಷ್ಟಿದೆ?

ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ; ಇಂದಿನ ರೇಟ್‌ ಎಷ್ಟಿದೆ?

Gold and silver rate in bengaluru: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಏರಿಕೆ ಕಂಡು ಬಂದಿದ್ದು, 11,290 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 17 ರೂ. ಏರಿಕೆಯಾಗಿ, 12,317 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 90,320 ರೂ. ಬಾಳಿದರೆ, 10 ಗ್ರಾಂಗೆ ನೀವು 1,12,900 ಹಾಗೂ 100 ಗ್ರಾಂಗೆ 12,29,000 ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 98,536 ರೂ. ಆದರೆ, 10 ಗ್ರಾಂಗೆ ನೀವು 1,23,170 ರೂ. ಹಾಗೂ 100 ಗ್ರಾಂಗೆ 12,31,700 ರೂ. ಪಾವತಿಸಬೇಕಾಗುತ್ತದೆ.

Bengaluru Jala Mandali: ಶುದ್ಧ ನೀರಿನ ಘಟಕದಲ್ಲಿ ಏಕರೂಪ ದರ ಜಾರಿಗೆ ಜಲ ಮಂಡಳಿ ಚಿಂತನೆ

ನೀರಿನ ಘಟಕದಲ್ಲಿ ಏಕರೂಪ ದರ; ಜಲ ಮಂಡಳಿ ಚಿಂತನೆ

Bengaluru News: ಬೆಂಗಳೂರು ಜಲಮಂಡಳಿಯು ನಗರದಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಕ್ಯೂ ಆರ್‌ಕೋಡ್ ಸ್ಕ್ಯಾನಿಂಗ್ ಮೂಲಕ ಅಥವಾ ಪ್ರೀಪೇಯ್ಡ್‌ ಕಾರ್ಡ್ ಮೂಲಕ ನೀರು ಪಡೆಯುವ ಹಾಗೂ ಏಕರೂಪ ದರ ನಿಗದಿ ಸಂಬಂಧ ಯೋಜನೆಯನ್ನು ರೂಪಿಸಿದೆ. ಬಿಬಿಎಂಪಿ ನಿರ್ವಹಣೆಯಲ್ಲಿದ್ದಾಗ ಏಕರೂಪದಲ್ಲಿ ಇರಲಿಲ್ಲ. ಕೆಲವು ಕಡೆ 20 ಲೀಟರ್‌ಗೆ 5 ರೂ., 10 ರೂ. ಇಲ್ಲವೇ 15 ರೂ. ಇತ್ತು. ಇದನ್ನು ತಪ್ಪಿಸಿ ಒಂದೇ ದರ ನಿಗದಿ ಮಾಡುವ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ.

DK Shivakumar: ಮತದಾನಕ್ಕೆ ತೆರಳುವ ಬಿಹಾರಿಗಳಿಗೆ ಮೂರು ದಿನ ರಜೆ: ಡಿಕೆಶಿ ಘೋಷಣೆ

ಮತದಾನಕ್ಕೆ ತೆರಳುವ ಬಿಹಾರಿಗಳಿಗೆ ಮೂರು ದಿನ ರಜೆ: ಡಿಕೆಶಿ ಘೋಷಣೆ

Bihar Election: ಬ್ಯಾಟರಾಯನಪುರದ ಕಾಫಿ ಬೋರ್ಡ್ ಲೇಔಟ್ ನಲ್ಲಿ ಬಿಹಾರ ಮೂಲದ ಬೆಂಗಳೂರು ನಿವಾಸಿಗಳ ಸಂಘದ ಸದಸ್ಯರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಡಿಕೆಶಿ, ನನಗೆ ದೊಡ್ಡ ಸ್ಥಾನ ಬೇಕು ಎಂದು ನೀವೆಲ್ಲರೂ ಹೇಳಿದ್ದೀರಿ. ನನಗೆ ಅದು ಮುಖ್ಯವಲ್ಲ. ಬಿಹಾರದಲ್ಲಿ ಮಹಾಘಟ ಬಂಧನ ಅಧಿಕಾರಕ್ಕೆ ತಂದರೆ ನನಗೆ ಎಲ್ಲಾ ಸ್ಥಾನವನ್ನು ನೀವು ಕೊಟ್ಟಂತೆ. ನಿಮ್ಮ ಒಂದೊಂದು ಮತವೂ ಮಹಾಘಟಬಂದನ್ ಅಧಿಕಾರಕ್ಕೆ ಬರಲು ಮುಖ್ಯವಾದುದು. ಈ ಮೊದಲಿನಂತೆ ನಿತೀಶ್ ಕುಮಾರ್ ಅವರ ಕೈಯಲ್ಲಿ ಬಿಹಾರವಿಲ್ಲ. ಅವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ ಎಂದರು.

Loading...