ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಶ್ರೀರಾಮ್‌ ಜನರಲ್‌ ಇನ್ಶ್ಯೂರೆನ್ಸ್‌ ನ ಜಿಎಂಪಿ ಶೇ. 28 ಹಾಗೂ ನಿವ್ವಳ ಲಾಭ ಶೇ. 6ರಷ್ಟು ಏರಿಕೆ

ಉತ್ತಮ ಫಲಿತಾಂಶ ದಾಖಲಿಸಿದ ಶ್ರೀರಾಮ್‌ ಜನರಲ್‌ ಇನ್ಶ್ಯೂರೆನ್ಸ್‌

ನಮ್ಮ ಮೊಟಾರ್ ಇನ್ಶ್ಸೂರೆನ್ಸ್‌ ಪೊರ್ಟ್‌ಫೊಲಿಯೊದ ಸುಸ್ಥಿರ ಬೆಳವಣಿಗೆಯು ನಮ್ಮ ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ಭರವಸೆ, ನಂಬಿಕೆಯನ್ನು ಬಿಂಬಿಸುತ್ತದೆ. ಇದು ನಾವೀ ನ್ಯತೆ, ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯನ್ನು ಒತ್ತಿ ಹೇಳುತ್ತದೆ. ಪ್ರತಿ ಪಯಣವನ್ನು ರಕ್ಷಿಸುವ ಮತ್ತು ಸಬಲೀಕರಣಗೊಳಿಸುವತ್ತ ಕಾರ್ಯನಿರ್ವಹಿಸುತ್ತೇವೆ

Bangalore News: ಸಾಹಸಮಯ ಥಂಡರ್ಬೋಲ್ಟ್‌ ಬೈಕ್‌ ಬಿಡುಗಡೆ ಮಾಡಿದ ಕ್ಲಾಸಿಕ್‌ ಲೆಜೆಂಡ್‌ ಸಹಭಾಗಿತ್ವದ ಬಿಎಸ್‌ಎ

ಬೈಕ್‌ ಬಿಡುಗಡೆ ಮಾಡಿದ ಕ್ಲಾಸಿಕ್‌ ಲೆಜೆಂಡ್‌ ಸಹಭಾಗಿತ್ವದ ಬಿಎಸ್‌ಎ

ಹೊಸ BSA ಥಂಡರ್ಬೋಲ್ಟ್ ಮಾರುಕಟ್ಟೆಗೆ ಪರಿಚಯಿಸಿದೆ. 2026 ರ ಮಧ್ಯದಲ್ಲಿ ಮಾರು ಕಟ್ಟೆಗೆ ಬರಲಿರುವ ಬ್ರ್ಯಾಂಡ್‌ನ ನಾಲ್ಕನೇ ಬೈಕ್, ಏಂತಹ ರೋಡ್‌ಗಳಾಗಿದ್ದರೂ ಸುಲಭ ವಾಗಿ ರೈಡ್‌ ಮಾಡುವ ಮಜ ನೀಡಲಿದೆ. ಮಳೆ, ಗಾಳಿ, ಧೂಳುಮಯ ಪ್ರದೇಶಕ್ಕೂ ಹೊಂದಿಕೆಯಾಗು ವಂತೆ ಬೈಕ್‌ನನ್ನು ವಿನ್ಯಾಸಗೊಳಿಸಲಾಗಿದೆ.

‘ಒನ್ ಹೆಲ್ತ್’ ಕಾರ್ಯಕ್ರಮ: ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜಾಗೃತಿ ವಾಕ್‌ಥಾನ್

ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಜಾಗೃತಿ ವಾಕ್‌ಥಾನ್

ಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರಾಜಾಜಿನಗರ ಆವರಣ ದಲ್ಲಿ ಸಮುದಾಯ ವೈದ್ಯಕೀಯ ವಿಭಾಗದಿಂದ ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದಲ್ಲಿ “ಒನ್ ವರ್ಲ್ಡ್, ಒನ್ ಹೆಲ್ತ್ – ಮಾನವ, ಪ್ರಾಣಿ ಮತ್ತು ಪರಿಸರ ಕ್ಷೇಮಕ್ಕಾಗಿ ಏಕತೆ” ಎಂಬ ವಿಷಯಾಧಾರಿತ ಜಾಗೃತಿ ವಾಕ್‌ಥಾನ್ ಆಯೋಜಿಸಲಾಯಿತು.

ಹೊಸಕೋಟೆಯಲ್ಲಿ 6 ಎಕರೆ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡ ಸೌಖ್ಯ: ಕೈಗೆಟಕುವ ದರದಲ್ಲಿ ಆಯುಷ್‌ ಆರೋಗ್ಯಸೇವಾ ವಲಯ ಪ್ರವೇಶದ ಘೋಷಣೆ

ಹೊಸಕೋಟೆಯಲ್ಲಿ 6 ಎಕರೆ ಜಮೀನು ಸ್ವಾಧೀನಕ್ಕೆ ತೆಗೆದುಕೊಂಡ ಸೌಖ್ಯ

ಸರ್ವಾಂಗೀಣವಾದ ಆರೋಗ್ಯಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಜಾಗತಿಕ ಮಟ್ಟ ದಲ್ಲಿ ಹೊಸ ಮಾನದಂಡಗಳನ್ನು ರೂಪಿಸಿಕೊಟ್ಟ ಕಾರಣದಿಂದಾಗಿ ಖ್ಯಾತಿ ಪಡೆದಿರುವ ʼಸೌಖ್ಯʼ, ಬಹಳ ವಿಶಿಷ್ಟವಾದ ಮಾದರಿಯೊಂದನ್ನು ಸೃಷ್ಟಿಸಿದೆ. ಇದು ವೈದ್ಯಕೀಯ ವಿಜ್ಞಾನವನ್ನು ಸಾಂಪ್ರದಾಯಿಕ ಚಿಕಿತ್ಸೆ, ನೈಸರ್ಗಿಕ ಉಪಶಮನ ಕ್ರಮಗಳು ಮತ್ತು ರೋಗತಡೆ ಕ್ರಮಗಳ ಜೊತೆ ಬಹಳ ಸುಲಲಿತವಾಗಿ ಬೆರೆಸುತ್ತದೆ.

CPM: ನ.೧ರಿಂದ ಡಿ.೧೫ ರವರೆಗೆ ರಾಜ್ಯಾದ್ಯಂತ ಸಿಪಿಎಂ ರಾಜಕೀಯ ಪ್ರಚಾರಾಂದೋಲನ : ಎಂ.ಪಿ.ಮುನಿವೆಂಕಟಪ್ಪ

ನ.೧ರಿಂದ ಡಿ.೧೫ ರವರೆಗೆ ರಾಜ್ಯಾದ್ಯಂತ ಸಿಪಿಎಂ ರಾಜಕೀಯ ಪ್ರಚಾರಾಂದೋಲನ

ಅರಣ್ಯ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ?೩೬ ಸಾವಿರ ಪಿಂಚಣಿ ಜಾರಿಗೊಳಿಸಬೇಕು. ಕಟ್ಟಡ, ಸಾರಿಗೆ ನೌಕರರಿಗೆ ಸೌಲಭ್ಯ ಕಲ್ಪಿಸಬೇಕು. ಶಿಕ್ಷಣದ ಖಾಸಗಿಕರಣ, ವ್ಯಾಪಾರಿಕರಣ ತಡೆಗಟ್ಟಬೇಕು. ಪ್ರತಿ ಜಿಲ್ಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ಕಲ್ಪಿಸ ಬೇಕು

ರಾಜ್ಯ ಮಿನಿ ಒಲಂಪಿಕ್ಸ್ ಜಿಲ್ಲೆಗೆ ಕಂಚಿನ ಪದಕ

ರಾಜ್ಯ ಮಿನಿ ಒಲಂಪಿಕ್ಸ್ ಜಿಲ್ಲೆಗೆ ಕಂಚಿನ ಪದಕ

ಬೆಂಗಳೂರಿನ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ರಾಜ್ಯಮಟ್ಟದ ಮಿನಿ ಒಲಂಪಿಕ್ ಕ್ರೀಡಾ ಕೂಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ೧೦ ಕ್ರೀಡಾಪಟುಗಳು ಭಾಗವಹಿಸಿದ್ದು, ೧೪ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಧೀರಜ್ ಭರ್ಜಿ ಎಸೆತದಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

MLA Pradeep Eshwar: ಅಹಿಂದ ವರ್ಗದ ಆಶಾಕಿರಣ ಶಾಸಕ ಪ್ರದೀಪ್ ಈಶ್ವರ್ ; ಅಭಿವೃದ್ದಿಯ ಹರಿಕಾರ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್‌ ರೆಡ್ಡಿ

ಅಹಿಂದ ವರ್ಗದ ಆಶಾಕಿರಣ ಶಾಸಕ ಪ್ರದೀಪ್ ಈಶ್ವರ್

ಕ್ಷೇತ್ರದ ಜನತೆಗೆ ಹತ್ತು ಹಲವು ಉಚಿತ ಸೇವೆ ಒದಗಿಸುತ್ತಿರುವ ಶಾಸಕರು ಮಹಿಳೆಯರಿಗೆ ಬಾಗೀನ ನೀಡುವ ಸತ್ಸಂಪ್ರದಾಯವನ್ನು ಕಳೆದ ೩ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.ತಡವಾದರೂ ಕೂಡ ಕೊಟ್ಟ ಮಾತನ್ನು ಉಳಿಸಿಕೊಂಡು ಸೀರೆ ವಿತರಣೆ ಮಾಡುವ ಮೂಲಕ ನುಡಿದಂತೆ ನಡೆದು ಯುವಕ ಯುವತಿಯರ ಕಣ್ಮಣಿಯಾಗಿರುವ ಪ್ರದೀಪ್ ಈಶ್ವರ್ ಅವರು ನಿಜಾರ್ಥದಲ್ಲಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ

Sadhguru Shri Madhusudan Sai: ಸತ್ಯಸಾಯಿ ಸಂಸ್ಥೆಗಳ ವಿದ್ಯಾರ್ಥಿಗಳು ದೇಶದ ವ್ಯವಸ್ಥೆಯ ಭಾಗವಾಗುತ್ತಾರೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯಸಾಯಿ ಸಂಸ್ಥೆಗಳ ವಿದ್ಯಾರ್ಥಿಗಳು ದೇಶದ ವ್ಯವಸ್ಥೆಯ ಭಾಗವಾಗುತ್ತಾರೆ

ಜಾಗತಿಕ ಸಾಂಸ್ಕೃತಿಕ ಉತ್ಸವದಲ್ಲಿ ಪ್ರತಿದಿನ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಗಣ್ಯ ರನ್ನು ಗುರುತಿಸಿ  ವೇದಿಕೆಯ ಮೇಲೆ ಕೂರಿಸಿ ಅವರ ಕಥೆಗಳನ್ನು ಕೇಳುತ್ತಿದ್ದೇವೆ. ಇದರಿಂದ ಮುಂದಿನ ಪೀಳಿಗೆ ಸ್ಪೂರ್ತಿಯನ್ನು ಪಡೆಯುತ್ತಿದೆ. ಜೆತೆಗೆ ವಿದ್ಯಾರ್ಥಿಗಳಿಗೆ ಸಮಾಜ, ದೇವರ ಕಡೆಗೆ ಇರಬೇಕಾದ ದೊಡ್ಡ ಕರ್ತವ್ಯಗಳನ್ನು ನೆನಪಿಸುತ್ತದೆ,

Pralhad Joshi: ರಾಜ್ಯ ಸರ್ಕಾರ ಒಂದು ಕ್ಷಣವೂ ತಡಮಾಡದೆ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲಿ: ಪ್ರಲ್ಹಾದ್‌ ಜೋಶಿ ಆಗ್ರಹ

ರಾಜ್ಯ ಸರ್ಕಾರ ಕ್ಷಣವೂ ತಡಮಾಡದೆ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲಿ: ಜೋಶಿ

Sugarcane Farmers Protest: ರಾಜ್ಯ ಸರ್ಕಾರ ತಕ್ಷಣವೇ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಮಾತುಕತೆಗೆ ಕರೆದು ಚರ್ಚಿಸಿ ತ್ವರಿತವಾಗಿ ಸಮಸ್ಯೆ ಪರಿಹರಿಸಬೇಕೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಒತ್ತಾಯಿಸಿದ್ದಾರೆ. ಅನ್ನದಾತರನ್ನು ರಸ್ತೆ ಮೇಲೆ ಕೂರಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಸಂಬಂಧಿತ ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Sugarcane Farmers Protest: ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ಸಮಯ ಕೋರಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ

CM Siddaramaiah's letter to PM Narendra Modi: ಉತ್ತರ ಕರ್ನಾಟಕದ, ವಿಶೇಷವಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುರ್ತಾಗಿ ಚರ್ಚಿಸಲು ತಾವು ಅವಕಾಶ ನೀಡಬೇಕು ಎಂದು ಪ್ರಧಾನಿಗೆ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇಂಟರ್‌ನ್ಯಾಷನಲ್ ವರ್ಕ್‌ಪ್ಲೇಸ್ ಗ್ರೂಪ್ ಬೆಂಗಳೂರಿನ ಎಂ.ಎಸ್.ಆರ್ ನಾರ್ತ್ ಟವರ್‌ನಲ್ಲಿ ಹೊಸ ರೀಗಸ್ ಕೇಂದ್ರ ಆರಂಭ

ಎಂ.ಎಸ್.ಆರ್ ನಾರ್ತ್ ಟವರ್‌ನಲ್ಲಿ ಹೊಸ ರೀಗಸ್ ಕೇಂದ್ರ ಆರಂಭ

ಹೊಸ ಕೇಂದ್ರವು IWG ಅವರ ಹೆಜ್ಜೆಗುರುತನ್ನು ಭಾರತದ ಮಂಚೂಣಿ ತಂತ್ರಜ್ಞಾನ ಹಬ್ಸ್ ಗಳನ್ನು ಹೆಚ್ಚಿಸುತ್ತದೆ, ಈ ಮೂಲಕ ಹೆಚ್ಚಿನ ಅನುಕೂಲಕರ, ಸಂಪರ್ಕಿತ ಮತ್ತು ದಕ್ಷತೆ ಯೊಂದಿಗೆ ವ್ಯವಹಾರಗಳ ಕಾರ್ಯಾಚರಣೆ ನಡೆಸುವುದನ್ನು ಚಾಲನೆಗೊಳುಸಲು ಪ್ರೀಮಿಯರ್, ಆನ್-ಡಿಮ್ಯಾಂಡ್ ಕಚೇರಿ ಪರಿಹಾರಗಳನ್ನು ಒದಗಿಸುತ್ತದೆ.

Karnataka Lokayukta: ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

ಆಸ್ತಿ ವಿವರ ಸಲ್ಲಿಸದ ರಾಜ್ಯದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ

Minister and MLA asset data: ಕರ್ನಾಟಕ ಲೋಕಾಯುಕ್ತ ಕಾಯಿದೆ ಅನ್ವಯ ಶಾಸಕರು, ಸಚಿವರು ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಹಲವು ಶಾಸಕರು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪಟ್ಟಿ ಬಿಡುಗಡೆ ಮಾಡಿದೆ.

HD Kumaraswamy: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳ ಕೇಳಿ ಸಿಎಂಗೆ ಪತ್ರ ಬರೆದ ಎಚ್.ಡಿ. ಕುಮಾರಸ್ವಾಮಿ

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ಥಳ ಕೇಳಿ ಸಿಎಂಗೆ ಪತ್ರ ಬರೆದ ಎಚ್‌ಡಿಕೆ

Mandya News: ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆ ಮಾಡಬೇಕೆನ್ನುವ ಬೇಡಿಕೆ ಇದೆ. ನಾನು ಸಂಸದನಾಗಿ ಒಂದೂವರೆ ವರ್ಷ ಆಯಿತು. ಕೈಗಾರಿಕೆಗೆ ಜಾಗ ಕೊಡಿ ಎಂದು ಡಿಸಿ ಅವರಿಗೆ ಪತ್ರ ಬರೆದಿದ್ದೇನೆ. ಪಾಪ.. ಅವರು ಜಾಗ ಹುಡುಕುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.

ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾಕೂಟಕ್ಕೆ ತೆರೆ

ಎ.ಪಿ.ಎಸ್. ಒಲಿಂಪಿಕ್ಸ್ – 2025 – ಕ್ರೀಡಾಕೂಟಕ್ಕೆ ತೆರೆ

ಟ್ರಸ್ಟಿ ತಂಡವನ್ನು ಸಿ.ಎ. ಡಾ. ವಿಷ್ಣು ಭಾರತ್‌ ಅಲಂಪಲ್ಲಿ (ಟ್ರಸ್ಟ್ ಅಧ್ಯಕ್ಷರು) ನೇತೃತ್ವ ವಹಿಸಿದ್ದ ಅವರು, ಉತ್ತಮ ಕ್ರೀಡಾಪಟುವಾಗಿ ಎಪಿಎಸ್ ಸ್ಥಾಪಕರಾದ ಪ್ರೊ.ಅನಂತಚಾರ್ ಅವರಿಗೆ ಗೌರವ ಸಲ್ಲಿಸಬೇಕು. ಅವರು ಪ್ರಸಿದ್ಧ ಕ್ರೀಡಾಪಟು ಮತ್ತು ದೂರದೃಷ್ಟಿ ನಾಯಕ ರಾಗಿದ್ದು, ಅವರ ಶಾಶ್ವತ ಪರಂಪರೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಿಸುತ್ತದೆ

Karnataka Weather: ನಾಳೆ ಶಿವಮೊಗ್ಗ, ಕೊಡಗು ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಗುಡುಗು ಸಹಿತ ಮಳೆ ನಿರೀಕ್ಷೆ

ಹವಾಮಾನ ವರದಿ; ನಾಳೆ ಶಿವಮೊಗ್ಗ ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗು (Weather forecast) ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಸೆ. ಮತ್ತು 20 ಡಿಗ್ರಿ ಸೆ. ಆಗಿರಬಹುದು.

Belagavi Farmers Protest: ಕಬ್ಬು ಬೆಳೆಗಾರರ ಪ್ರತಿಭಟನೆ; ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ಸಿಎಂ ಸಭೆ

ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಸಿಎಂ ಸಭೆ

Sugarcane Growers Protest: ಕಬ್ಬಿಗೆ ಬೆಲೆ ನಿಗದಿ (ಎಫ್‌ಆರ್‌ಪಿ) ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ನಾಳೆ ಪಿಎಂ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಅವರು ಭೇಟಿಗೆ ಸಮಯ ನೀಡಿದರೆ, ರೈತರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

DK Shivakumar: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ರೇಖೆ ದಾಟುವುದಿಲ್ಲ- ಡಿ.ಕೆ. ಶಿವಕುಮಾರ್‌ ಹೀಗ್ಯಾಕೆ ಅಂದ್ರು?

ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ರೇಖೆ ದಾಟುವುದಿಲ್ಲ: ಡಿಕೆಶಿ

DK Shivakumar Latest Statement: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ʼನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಏನಿದ್ದರೂ ನಿಮ್ಮದು ಎಂದು ತಿಳಿಸಿದ್ದಾರೆ.

Chikkamagaluru News: ಜಮೀನು ವಿವಾದ; ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!

Assault Case: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಮೀನು ಸರ್ವೆ ಮಾಡುವ ವೇಳೆ ದೈವ ಮೈಮೇಲೆ ಬಂದಿದೆ ಎನ್ನುವ ರೀತಿ ವ್ಯಕ್ತಿಯೊಬ್ಬ ವರ್ತಿಸಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ನೋಡಿ ಪೊಲೀಸರು ಹಾಗೂ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

BY Vijayendra: ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸನ್ನೂ ನೀಡದ ಸಿದ್ದರಾಮಯ್ಯ ಸರ್ಕಾರ: ಬಿ.ವೈ. ವಿಜಯೇಂದ್ರ

ರಾಜ್ಯ ಸರ್ಕಾರ ರೈತರ ಬಗ್ಗೆ ನೈಜ ಕಾಳಜಿಯಿಂದ ಕೆಲಸ ಮಾಡುತ್ತಿಲ್ಲ: ಬಿವೈವಿ

Sugarcane Farmers Protest: ರೈತರಿಗೆ ಸಹಕಾರಿ ಆಗುವಂಥ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಅತಿವೃಷ್ಟಿ ಸಂದರ್ಭದಲ್ಲೂ ಕೃಷಿ ಸಚಿವರು, ಕಂದಾಯ ಸಚಿವರು, ಇಲಾಖೆಯ ಕಾರ್ಯದರ್ಶಿಗಳು ಯಾವುದೇ ಜಿಲ್ಲೆಗೆ ತೆರಳಿಲ್ಲ. ಅಲ್ಲಿನ ರೈತರ ಪರಿಸ್ಥಿತಿಯನ್ನು ಅಧ್ಯಯನ ಮಾಡುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.

Bomb threat: ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ : ಮಹಿಳಾ ಟೆಕ್ಕಿ ಆರೆಸ್ಟ್

ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ: ಭಗ್ನಪ್ರೇಮಿ ಮಹಿಳಾ ಟೆಕ್ಕಿ ಸೆರೆ

Bengaluru Crime news: ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ಳನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ರೆನೆ ಜೋಶಿಲ್ದಾ ಎನ್ನುವ ಮಹಿಳಾ ಟೆಕ್ಕಿಯನ್ನು ಆರೆಸ್ಟ್ ಮಾಡಿದ್ದಾರೆ. ಈಕೆ ಬೆಂಗಳೂರಿನ ಶಾಲೆಗಳಿಗೆ, ಜೊತೆಗೆ ಚೆನ್ನೈ, ಹೈದರಾಬಾದ್ ಹಾಗೂ ಗುಜರಾತಿನ ಶಾಲೆಗಳಿಗೂ ಕೂಡ ಈಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾಳೆ.

Zameer Ahmed: ಜೋಳದ ವ್ಯಾಪಾರಿಗೆ ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

ವಂಚನೆ ಪ್ರಕರಣ; ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ದೂರು

Complaint against Zameer Ahmed: ವಂಚನೆ ಮಾಡಿದ ವ್ಯಕ್ತಿಯ ಪರವಾಗಿ ಜಮೀರ್ ಅಹ್ಮದ್ ನಿಂತಿರುವ ಆರೋಪ ಕೇಳಿ ಬಂದಿತ್ತು. ಹೈದರಾಬಾದ್ ವ್ಯಕ್ತಿಗೆ ಸಹಕರಿಸುವಂತೆ ಪೊಲೀಸ್‌ ಅಧಿಕಾರಿಗೆ ಜಮೀರ್ ಅಹ್ಮದ್ ಫೋನ್ ಕರೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೂರು ನೀಡಿದ್ದಾರೆ.

Harsh Rai Death: ಭೂಗತ ಲೋಕದ ನಂಟು ಹೊಂದಿದ್ದ ಹರೀಶ್‌ ಆಚಾರಿ, ರಾಯ್‌ ಆಗಿದ್ದು ಹೇಗೆ?

ಭೂಗತ ಲೋಕದ ನಂಟು ಹೊಂದಿದ್ದ ಹರೀಶ್‌ ಆಚಾರಿ, ರಾಯ್‌ ಆಗಿದ್ದು ಹೇಗೆ?

Harish rai no more: ಹರೀಶ್‌ ರಾಯ್‌ ಅವರು ಕರಾವಳಿಯ ಉಡುಪಿಯವರು. ಅವರ ಮೊದಲ ಹೆಸರು ಹರೀಶ್‌ ಆಚಾರಿ. ಅಪ್ಪನಿಗೆ ಹೆದರಿ ಭಯದಿಂದ ಊರು ಬಿಟ್ಟು ಬಾಂಬೆಗೆ ಓಡಿ ಹೋದ ಅವರು 2 ವರ್ಷ ಅಲ್ಲೇ ಇದ್ದರು. ಮುಂಬಯಿಯಲ್ಲಿ ಅವರ ಮೇಲೆ ಕೆಲವು ಕೇಸ್​ಗಳು ಇದ್ದವು. ಕೆಲವು ರೌಡಿಗಳನ್ನು ಎದುರು ಹಾಕಿಕೊಂಡಿದ್ದರು. ಭೂಗತ ಜಗತ್ತಿನ ಪರಿಚಯವೂ ಆಗಿತ್ತು. ಬೆಂಗಳೂರಿಗೆ ಬಂದ ನಂತರ ಉಪೇಂದ್ರ ಪರಿಚಯದಿಂದ ಸಿನಿಮಾ ಇಂಡಸ್ಟ್ರಿಗೆ ಬರುವಂತಾಯಿತು.

Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ

Harish Rai no more: ʼಓಂʼ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದ ಹರೀಶ್ ರಾಯ್, ಜೋಡಿ ಹಕ್ಕಿ, ಚಕ್ರವರ್ತಿ, ಕಾಶಿ, ಸಂಜು ವೆಡ್ಸ್ ಗೀತ, ನಲ್ಲ,ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಜಿಎಫ್ ಚಿತ್ರದ ನಂತರ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡಿದ್ದು, ಮೂರ್ನಾಲ್ಕು ವರ್ಷದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

RSS row: ಆರೆಸ್ಸೆಸ್‌ ಪಥಸಂಚಲನ ನಿರಾಳ, ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

ಆರೆಸ್ಸೆಸ್‌ ಪಥಸಂಚಲನ ನಿರಾಳ, ಸರ್ಕಾರದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ

Karnataka high court: ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಕೆಯಾದ ಮೇಲ್ಮನವಿ ಅರ್ಜಿಯ ವಿಚಾರಣೆ ಹೈಕೋರ್ಟ್ ಧಾರವಾಡದ ವಿಭಾಗೀಯ ಪೀಠದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಚಟುವಟಿಕೆಗಳಿಗೆ ಪರೋಕ್ಷ ನಿಷೇಧ ಹೇರುವ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗಿತ್ತು. 10 ಜನಕ್ಕಿಂತ ಹೆಚ್ಚು ಜನರು ಸೇರಿಕೊಂಡರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಅಧಿಸೂಚನೆ ನಾಗರಿಕರ ಹಕ್ಕಿಗೆ ಧಕ್ಕೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು. ಈ ಆದೇಶಕ್ಕೆ ಏಕ ಸದಸ್ಯ ಪೀಠ ತಡೆಯಾಜ್ಞೆ ತಂದಿತ್ತು.

Loading...