ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

NREGA Bachao Sangram Movement: ಪ್ರತಿದಿನ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿರುವ ಶಾಸಕ ಸಚಿವ

ಪ್ರತಿದಿನ ಸಮಾವೇಶದ ಸ್ಥಳಕ್ಕೆ ಶಾಸಕ, ಸಚಿವ ಭೇಟಿ: ಪರಿಶೀಲನೆ

ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜನಪರ ಯೋಜನೆಗಳಿಗೆ ನಮ್ಮ ಸರಕಾರ ಇಟ್ಟಿದ್ದ ಹೆಸರು ಗಳನ್ನು ಮೋದಿ ಸರಕಾರ ಬದಲಾವಣೆ ಮಾಡಿದೆ. ಯುಪಿಎ ಸರಕಾರದ ಮೊದಲ ಅವಧಿ 2005ರಲ್ಲಿ ರಾಷ್ಟ್ರದಲ್ಲಿದ್ದ  ನಿರುದ್ಯೋಗ ಸಮಸ್ಯೆ ನಿವಾರಿಸಲು ದೂರ ದೃಷ್ಟಿ ಯಿಂದ ನರೇಗಾ ಯೋಜನೆ ಜಾರಿಗೆ ತಂದಿತ್ತು.ಈ ಕಾನೂನಿನಡಿ ವರ್ಷಕ್ಕೆ 100 ದಿನಗಳ ಉದ್ಯೋಗಕ್ಕೆ ಅವಕಾಶ ವಿದ್ದು ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯಿತ್ತು.

Chikkaballapur news: 25ನೇ ವರ್ಷದ ಸಂಸ್ಥಾಪನಾ ದಿನಾಚರಣೆ: ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ಕೀಟನಾಶಕಗಳನ್ನು ಸಾಗಿಸುವಾಗ ಅವುಗಳನ್ನು ಆಹಾರ ಪದಾರ್ಥಗಳು, ಜನರು ಮತ್ತು ಪ್ರಾಣಿ ಗಳಿಂದ ದೂರವಿಡಬೇಕು. ಸಿಂಪಡಿಸುವ ಮೊದಲು ಕೀಟನಾಶಕ ಲೇಬಲ್ ಮತ್ತು ಲಗತ್ತಿಸಲಾದ ಕರಪತ್ರವನ್ನು ಎಚ್ಚರಿಕೆಯಿಂದ ಓದಿ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಯಾವಾ ಗಲೂ ಸೂಕ್ತ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಿ ಮತ್ತು ಸುರಕ್ಷಿತಾ ಸಾಧನಗಳನ್ನು ಧರಿಸಿ ಸಿಂಪಡಣೆಯನ್ನು ಯಾವಾಗಲೂ ಗಾಳಿ ಬೀಸುವ ದಿಕ್ಕಿನಲ್ಲಿಯೇ ಮಾಡಬೇಕು.

Pralhad Joshi: ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಪ್ರಲ್ಹಾದ್‌ ಜೋಶಿ ಕಿಡಿ

ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತರಕ್ಷಣೆಗೆ ಬದ್ಧವಾಗಿಯೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಅಮೆರಿಕ ಸೇರಿ ವಿದೇಶಗಳೊಂದಿಗೆ ವಾಣಿಜ್ಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

ಶಾಸಕತ್ವದ ಸ್ಥಾನಮಾನ ಅರಿತು ಮಾತನಾಡುವುದನ್ನು ಕಲಿಯಿರಿ : ಸಂದೀಪ್ ಬಿ ರೆಡ್ಡಿ ಮನವಿ

ಶಾಸಕತ್ವದ ಸ್ಥಾನಮಾನ ಅರಿತು ಮಾತನಾಡುವುದನ್ನು ಕಲಿಯಿರಿ

ಬಿಜೆಪಿ ಪಕ್ಷದ ಬಗ್ಗೆ ಯಾರೋ ಏನೋ ಮಾತನಾಡುತ್ತಾರೆ ಎಂದರೆ ಕೈಕಟ್ಟಿ ಕೂರುವವರು ನಾವಲ್ಲ.ನಮ್ಮ ಊರಿನವರೇ ಆದ ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ ಮನವಿ ಮಾಡುತ್ತೇನೆ. ನಮ್ಮ ಊರಿನ ನನ್ನ ಕಿರಿಯ ಸಹೋದರ ನೀವು.ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಬಂದು ಶಾಸಕರಾಗಿದ್ದೀರಿ

ಗಂಡ ಮೃತಪಟ್ಟ ಒಂದೇ ವಾರಕ್ಕೆ ಪೊಲೀಸಪ್ಪನಿಂದ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ

ಪೊಲೀಸ್‌ ಪೇದೆ ಕಿರುಕುಳ; ಗಂಡ ಮೃತಪಟ್ಟ ಒಂದೇ ವಾರಕ್ಕೆ ಪತ್ನಿಯೂ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅವರು ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.

Dr.M.C.Sudhakar: ವೈರಲ್ ಆದ ಡಾ.ಎಂ.ಸಿ.ಸುಧಾಕರ್ ಅವರದೆನ್ನಲಾದ ಆಡಿಯೋ???

ವೈರಲ್ ಆದ ಡಾ.ಎಂ.ಸಿ.ಸುಧಾಕರ್ ಅವರದೆನ್ನಲಾದ ಆಡಿಯೋ???

ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಅವರು ಸಚಿವರಾಗುವುದುಕ್ಕೂ ಮುನ್ನ ತಮ್ಮದೇ ಪಕ್ಷದ ರೇಖಾ ಅವರು ಚಿಂತಾಮಣಿ ನಗರಸಭೆ ಅಧ್ಯಕ್ಷರಾಗಿದ್ದಾಗ ಅವರ ಪತಿ ಉಮೇಶ್ ಜತೆ ಮೊಬೈಲ್‌ ನಲ್ಲಿ ಮಾತನಾಡಿರುವ ’ಕಮೀಷನರ್ ವಿರುದ್ದ ಧರಣಿ ಮಾಡಿ, ಶಾಸಕರಿಗೂ ಸಚಿವರಿಗೂ ಧಿಕ್ಕಾರ ಕೂಗಿ’ ಎಂದು ಪ್ರಚೋದನೆ ನೀಡಿ ಮಾತನಾಡಿರುವುದು ಆಡಿಯೋ ದಲ್ಲಿದ್ದು ರಾಜೀವ್‌ಗೌಡ ಗುಂಪಿನಲ್ಲಿ ವೈರಲ್ ಆಗಿದೆ

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಪ್ರಲ್ಹಾದ್‌ ಜೋಶಿ

ಪ್ರಧಾನಿ ಮೋದಿ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದೆಲ್ಲೆಡೆ ಇಂದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪುನರುತ್ಥಾನದ ಕೈಂಕರ್ಯ ನಡೆದಿದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಭದ್ರಾವತಿ ಉಕ್ಕು ಕಾರ್ಖಾನೆ, ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌.ಡಿ.ಕುಮಾರಸ್ವಾಮಿ ಭರವಸೆ

ಭದ್ರಾವತಿ ಉಕ್ಕು ಕಾರ್ಖಾನೆ, ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌ಡಿಕೆ

ಭ್ರದಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ ₹5000 ಕೋಟಿಗಳನ್ನಾದರೂ ಈ ಕಾರ್ಖಾನೆಗೆ ಹೂಡಿಕೆ ಮಾಡಲಾಗುವುದು. ಹಾಗೆಯೇ ಎಚ್‌ಎಂಟಿಗೂ ಕಾಯಕಲ್ಪ ನೀಡುವ ಉದ್ದೇಶವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಪತ್ತೆ ಕೇಸ್‌ ಸುಖಾಂತ್ಯ; ಪ್ರಿಯಕರನನ್ನು ಬಿಟ್ಟು ಗಂಡನ ಮನೆಗೆ ಹೋಗಲು ಒಪ್ಪಿದ ಪ್ರಿಯಾಂಕ

ಪ್ರಿಯಕರನನ್ನು ಬಿಟ್ಟು ಗಂಡನ ಜತೆ ಹೋಗಲು ಒಪ್ಪಿದ ಪ್ರಿಯಾಂಕ

ನಾಪತ್ತೆ ನಾಟಕವಾಡಿ ಪ್ರಿಯಕರ ಡೇವಿಡ್‌ ಜತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಪ್ರಿಯಾಂಕ ಕೊನೆಗೂ ಗಂಡನ ಮನೆ ಸೇರಲು ಒಪ್ಪಿದ್ದಾಳೆ. ಹಾಸನದ ಸಾಂತ್ವನ ಕೇಂದ್ರದಿಂದ ತವರು ಮನೆಗೆ ಹೋಗಿ, ಅಲ್ಲಿಂದ ಗಂಡ ರುದ್ರೇಶ್‌ ಮನೆಗೆ ಹೋಗಲು ಒಪ್ಪಿದ್ದಾಳೆ ಎಂದು ತಿಳಿದುಬಂದಿದೆ.

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

ಅಕ್ಟೋಬರ್ 29 ರಿಂದ ಡಿಸೆಂಬರ್ 14, 2025 ರವರೆಗೆ ನಡೆದ ಹ್ಯಾಕಥಾನ್‌ನಲ್ಲಿ ಭಾರತ ದಾದ್ಯಂತ 250 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇವು ಆರೋಗ್ಯ ರಕ್ಷಣೆ, ಹಣಕಾಸು, ಐಓಟಿ ಮತ್ತು ಜ್ಞಾನ ನಿರ್ವಹಣೆ ಸೇರಿದಂತೆ ಬಳಕೆಯ ಪ್ರಕರಣಗಳನ್ನು ಪರಿಹರಿಸಿ, GridDB® ಡೇಟಾಬೇಸ್ ಸೇವೆಯ ಬಹುಮುಖವನ್ನು ಪ್ರದರ್ಶಿಸಿದವು

Aequs Limited: ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ ಏರೋಸ್ಪೇಸ್‌ ಎಂಜಿನ್ ತಯಾರಿಕಾ ಘಟಕ; 4000 ಕೋಟಿ ಹೂಡಿಕೆ

ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ 4000 ಕೋಟಿ ಹೂಡಿಕೆ

ತಮಿಳೂನಾಡಿನ ಹೊಸೂರಿನ ಶೂಲಗಿರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್‌ಗೆ 4,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಆದರೆ, ಬೆಳಗಾವಿ ಮೂಲದ ಕಂಪನಿಯು ಕರ್ನಾಟಕಕ್ಕೆ ಬದಲಾಗಿ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ತುಮಕೂರಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಿಸಿದ ಮಾಜಿ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಣೆ

Tumkur News: ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ದೇವಿಗೆ ಸಮರ್ಪಣೆ ಮಾಡಿದರು.

ಮುಖ್ಯ ಕಾರ್ಯದರ್ಶಿ ವಿರುದ್ಧ ಭ್ರಷ್ಟಾಚಾರ ಆರೋಪ; ಮುಡಾ ಕೇಸ್‌ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್‌

ಮುಡಾ ಕೇಸ್‌ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್‌

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್‌ 1.6 ಕೋಟಿ ರೂ. ಹಣ ನೀಡಿ ಮುಂಬಡ್ತಿ ತೆಗೆದುಕೊಂಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಡಿ.ಬಿ. ನಟೇಶ್‌ ನೀಡಿದ ದೂರಿನ ಮೇರೆಗೆ ಸ್ನೇಹಮಯಿ ಕೃಷ್ಣ ಬಂಧನವಾಗಿದೆ.

Mysuru News: ಪ್ರವಾಸಕ್ಕೆ ಹೋಗಲು ಗಂಡ ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ

ಪ್ರವಾಸಕ್ಕೆ ಹೋಗಲು ಗಂಡ ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ

ಮೈಸೂರಿನ ಸರಸ್ವತಿಪುರಂನಲ್ಲಿ ಘಟನೆ ನಡೆದಿದೆ. ನೆನ್ನೆ ರಾತ್ರಿ ಪ್ರವಾಸದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಗಂಡ ಮನೆಯಿಂದ ಹೊರ ಹೋದ ನಂತರ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Karnataka weather: ಈ ವರ್ಷ ಬೆನ್ನು ಸುಡಲಿದೆ ಬಿಸಿಲಿನ ಬೇಗೆ, ಐಎಂಡಿ ಎಚ್ಚರಿಕೆ

ಈ ವರ್ಷ ಬೆನ್ನು ಸುಡಲಿದೆ ಬಿಸಿಲಿನ ಬೇಗೆ, ಐಎಂಡಿ ಎಚ್ಚರಿಕೆ

2026ರ ಮಾರ್ಚ್‌ನಿಂದ ಮೇ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದ್ದು, ಕೇರಳ ಮತ್ತು ತಮಿಳುನಾಡು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ವಾಡಿಕೆಗಿಂತಲೂ ಬಿಸಲು ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಕರ್ನಾಟಕದ ಬಹುತೇಕ ಭಾಗಗಳಿಗೆ ಮಾರ್ಚ್–ಮೇ ಅವಧಿಯಲ್ಲಿ ಉಷ್ಣ ಅಲೆ (ಹೀಟ್‌ವೇವ್) ತೀವ್ರಗೊಳ್ಳುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಿದೆ.

ಬಾಗಲಕೋಟೆ ಕಲ್ಲು ತೂರಾಟ ಕೇಸ್; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಬಾಗಲಕೋಟೆಯಲ್ಲಿ ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ: ಸಿಎಂ

Stone Pelting in Bagalkot: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಘಟನೆಯಲ್ಲಿ ಎಸ್‌ಪಿ ಎಸ್ ಪಿ ಸಿದ್ಧಾರ್ಥ್ ಗೋಯೆಲ್ ಸೇರಿ ಇಬ್ಬರಿಗೆ ಗಾಯಗಳಾಗಿತ್ತು. ಪ್ರಕರಣ ಸಂಬಂದ ಈಗಾಗಲೇ 8 ಆರೋಪಿಗಳನ್ನು ಬಂಧಿಸಲಾಗಿದೆ.

Chikkaballapur News: ಅರ್ಹತೆಯ ಆಧಾರದಲ್ಲಿ ನೇಮಕಾತಿ ಹೊಂದುವ ಸಿಬ್ಬಂದಿ ಸರಕಾರದ ಆಶಯಕ್ಕನು ಗುಣವಾಗಿ ಕಾರ್ಯ ನಿರ್ವಹಿಸಲಿ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವರಿಂದ ನೇಮಕಾತಿ ಆದೇಶ ಪತ್ರ ವಿತರಣೆ

ಅಂಗನವಾಡಿ ಸಿಬ್ಬಂದಿ ನೇಮಕದ ಬಗ್ಗೆ ಈ ಹಿಂದೆ ಬಹಳ ತತ್ಸಾರ ಇತ್ತು, ಆ ಕೆಲಸವನ್ನು ನಾವೇಕೆ ಮಾಡಬೇಕು ಎಂಬ ಭಾವನೆ ಇತ್ತು. ಪ್ರಸ್ತುತ ಆ ಭಾವನೆ ಬದಲಾಗಿದೆ. ಅಂಗನ ವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಬಹಳ ಬೇಡಿಕೆ ಇದೆ, ಅದೇ ರೀತಿ ಸ್ಪರ್ಧೆಯು ಇದೆ

Nandini Products: ನಂದಿನಿ ಉತ್ಪನ್ನಗಳ ನಕಲಿಗೆ ಬ್ರೇಕ್‌ ಹಾಕಲು ಕೆಎಂಎಫ್‌ ಪ್ಲಾನ್‌

ನಂದಿನಿ ಉತ್ಪನ್ನಗಳ ನಕಲಿಗೆ ಬ್ರೇಕ್‌ ಹಾಕಲು ಕೆಎಂಎಫ್‌ ಪ್ಲಾನ್‌

ಕಳೆದ ಕೆಲ ದಿನಗಳ ಹಿಂದೆ ಹೆಮ್ಮೆಯ ನಂದಿನಿ ಬ್ರ‍್ಯಾಂಡ್ ಹೆಸರಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದವು. ಕೆಎಂಎಫ್ ಅಧಿಕಾರಿಗಳೇ ಪೊಲೀಸರೊಂದಿಗೆ ಇವುಗಳ ಪತ್ತೆ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರೋ ಕೆಎಂಎಫ್ ಉತ್ಪನ್ನದ ಮತ್ತಷ್ಟು ಸುರಕ್ಷತೆಗೆ ಹೊಸ ಪ್ಲಾನ್ ಜಾರಿ ಮಾಡಿದೆ.

ಬೇರೂರು, ದಿ ಪರ್ಪಲ್ ಟರ್ಟಲ್ಸ್ & ಓರ್ಜಾ ವತಿಯಿಂದ ವಿಶೇಷ ವೇರ್‌ಹೌಸ್ ಕ್ಲಿಯರೆನ್ಸ್ ಸೇಲ್ 2026

ವಿಶೇಷ ವೇರ್‌ಹೌಸ್ ಕ್ಲಿಯರೆನ್ಸ್ ಸೇಲ್ 2026 ಪ್ರಕಟಣೆ

ಈ ವಿಶೇಷ ಸೇಲ್ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ, ವೈಟ್‌ಫೀಲ್ಡ್‌ನಲ್ಲಿರುವ ದಿ ಪರ್ಪಲ್ ಟರ್ಟಲ್ಸ್ ನ ಹೊಸ ವೇರ್‌ಹೌಸ್‌ನಲ್ಲಿ ನಡೆಯಲಿದೆ. ಈ ಸೀಮಿತ ಅವಧಿಯ ಕಾರ್ಯಕ್ರಮವು ಆಯ್ದ, ವಿನ್ಯಾಸ ಕೇಂದ್ರೀಕೃತ ಸಂಗ್ರಹಗಳನ್ನು ವಿಶೇಷ ವೇರ್‌ಹೌಸ್ ದರಗಳಲ್ಲಿ ಖರೀದಿಸುವ ಅಪರೂಪದ ಅವಕಾಶ ವನ್ನು ಒದಗಿಸುತ್ತದೆ.

street dog Attack: ಐದು ಮಕ್ಕಳಿಗೆ ಯದ್ವಾತದ್ವಾ ಕಚ್ಚಿ ಗಾಯಗೊಳಿಸಿದ ರಕ್ಕಸ ಬೀದಿ ನಾಯಿಗಳು

ಐದು ಮಕ್ಕಳಿಗೆ ಯದ್ವಾತದ್ವಾ ಕಚ್ಚಿ ಗಾಯಗೊಳಿಸಿದ ರಕ್ಕಸ ಬೀದಿ ನಾಯಿಗಳು

ಘಟನೆಯ ನಂತರ ದೇವಿನಗರ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಹೊರಗೆ ಆಟವಾಡಲು ಹೆದರುತ್ತಿದ್ದಾರೆ. ಸ್ಥಳೀಯರು ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಹಲವಾರು ಬಾರಿ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Assault Case: ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿಯ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಪರೀಕ್ಷೆಯಲ್ಲಿ ನಕಲು ತಡೆದ ಶಿಕ್ಷಕರ ಮೇಲೆ ವಿದ್ಯಾರ್ಥಿ ಹಲ್ಲೆ, ವಿಡಿಯೊ ಲಭ್ಯ

ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿ, ಉತ್ತರ ಪತ್ರಿಕೆಯನ್ನು ಪ್ರಾಧ್ಯಾಪಕ ವಶಪಡಿಸಿಕೊಂಡಿದ್ದಾರೆ. ಉತ್ತರ ಪತ್ರಿಕೆ ಪಡೆದು ತರಗತಿ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದರಿಂದ ವಿದ್ಯಾರ್ಥಿ ಕೋಪಗೊಂಡು ಸಹಾಯಕ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಪರೀಕ್ಷಾ ಹಾಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.

mysterious death: ಕರ್ನಾಟಕದ ಇನ್ನೊಬ್ಬ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ಕರ್ನಾಟಕದ ಇನ್ನೊಬ್ಬ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು

ಕಡಬದ ಕುಟ್ರಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಗ್ಯೂ ಈ ಸಾವಿನ ಹಿಂದಿನ ಕಾರಣಗಳ ಕುರಿತು ಐರಿಶ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೇವಲ 28 ದಿನಗಳ ಹಿಂದೆ ಸುನಿಲ್‌ ಐರ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಲಿಷ್ಮಾ ಅವರೊಂದಿಗೆ ವಾಸಿಸಲು ತೆರಳಿದ್ದರು.

Netherlands prime minister: ಬೆಂಗಳೂರಿಗೆ ಬಂದಿಳಿದ ನೆದರ್ ಲ್ಯಾಂಡ್ಸ್ ಪ್ರಧಾನಿ ಡಿಕ್ ಶೂಫ್

ಬೆಂಗಳೂರಿಗೆ ಬಂದಿಳಿದ ನೆದರ್ ಲ್ಯಾಂಡ್ಸ್ ಪ್ರಧಾನಿ ಡಿಕ್ ಶೂಫ್

ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿಗಳು ಫೆ.20 ರಂದು ಆರ್.ಟಿ. ನಗರದಲ್ಲಿರುವ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್ (Philips Innovation Campus), ಇನ್ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ಸಂಚಾರ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ (BTP Control Centre), ಭಾರತೀಯ ವಿಜ್ಞಾನ ಸಂಸ್ಥೆ (IISc) ಗೆ ಮುಂತಾದ ಕಡೆಗಳಿಗೆ ಭೇಟಿ ನೀಡಲಿದ್ದಾರೆ.‌

Bengaluru garbage crisis: ಬೆಂಗಳೂರಿನ ಕಸಕ್ಕೆ ಕೊನೆಗೂ ಮುಕ್ತಿ, ಡಂಪಿಂಗ್‌ ಯಾರ್ಡ್‌ಗಳಿಗೆ 350 ಕೋಟಿ ರೂ. ಕೊಟ್ಟು ಕಸ ವಿಲೇವಾರಿ

ಡಂಪಿಂಗ್‌ ಯಾರ್ಡ್‌ಗಳಿಗೆ 350 ಕೋಟಿ ರೂ., ಬೆಂಗಳೂರಿನ ಕಸಕ್ಕೆ ಮುಕ್ತಿ

ಡಂಪಿಂಗ್ ಯಾರ್ಡ್‌ಗಳ ಅಸಮರ್ಪಕ ನಿರ್ವಹಣೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಿಗದಿಗಿಂತ ಹೆಚ್ಚಿನ ಕಸದ ಲಾರಿಗಳ ಸಂಚಾರದಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಬಳಿಯ ಡಂಪಿಂಗ್ ಯಾರ್ಡ್‌ ವ್ಯಾಪ್ತಿಯ ನಾಗರಿಕರು ಹಾಗೂ ಸ್ಥಳೀಯ ಶಾಸಕರು ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

Loading...