ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming case: ಹೆಂಡ್ತಿ ಬಿಟ್ಟು ಹೋದಳೆಂದು ರೈಲಿಗೆ ತಲೆಕೊಟ್ಟ ಪತಿರಾಯ; ಸಾವಿಗೂ ವಿಡಿಯೊ ರೆಕಾರ್ಡ್‌!

ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯ ಅನಂದ್ ದೇವಾಂಗನ್ ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆಗೂ ಮೊದಲು 30 ನಿಮಿಷಗಳ ವಿಡಿಯೊ ಮೂಲಕ ಆತ್ಮಹತ್ಯೆಗೆ ಕಾರಣವನ್ನು ಹಂಚಿಕೊಂಡಿದ್ದಾನೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಹೆಂಡ್ತಿ ಬಿಟ್ಟು ಹೋದಳೆಂದು ರೈಲಿಗೆ ತಲೆಕೊಟ್ಟ ಪತಿರಾಯ

Profile Rakshita Karkera Jun 16, 2025 4:07 PM

ಛತ್ತೀಸ್‌ಗಢ: ಮದುವೆಯಾದ ನಾಲ್ಕೇ ನಾಲ್ಕು ತಿಂಗಳಲ್ಲಿ ಪತ್ನಿ ತನ್ನನ್ನು ತೊರೆದು ಹೋದ ಕಾರಣ ತೀರ ಖಿನ್ನತೆಗೊಳಗಾದ ವ್ಯಕ್ತೊಯೊರ್ವ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ(Self Harming case) ಘಟನೆ ವರದಿಯಾಗಿದೆ. ಇಲ್ಲಿನ ಬಿಲಾಸ್ಪುರ ಜಿಲ್ಲೆಯ ಅನಂದ್ ದೇವಾಂಗನ್ ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆಗೂ ಮೊದಲು 30 ನಿಮಿಷಗಳ ಯೂಟ್ಯೂಬ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಮದುವೆಯಾದ ನಂತರದ ಪತ್ನಿಯ ನಡವಳಿಕೆ ಹಾಗೂ ಅತ್ತೆಮಾವಂದಿರ ವರ್ತನೆಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾನೆ.

ಆನಂದ್ ನವೆಂಬರ್ 27, 2024 ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ. ಆದರೆ ಮದುವೆಯಾದ ಕೆಲವೇ ನಾಲ್ಕು ತಿಂಗಳಲ್ಲಿ, 2025ರ ಮಾರ್ಚ್ 25ರಂದು ಅವನ ಹೆಂಡತಿ ಮನೆ ಬಿಟ್ಟುಹೋಗಿದ್ದಾಳೆ. ಇದರಿಂದ ಆನಂದ್‌ ಬಹಳಷ್ಟು ಬೇಸರಗೊಂಡಿದ್ದ. ಖಿನ್ನತೆಗೂ ಒಳಗಾಗಿದ್ದ. ಕೊನೆಗೆ ಆತ ಆತ್ಮಹತ್ಯೆಗ ಮುಂದಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ವಿಡಿಯೊವೊಂದನ್ನು ರೆಕಾರ್ಡ್‌ ಮಾಡಿ ಶೇರ್‌ ಮಾಡಿರುವ ಆನಂದ್‌, ತನ್ನ ಪತ್ನಿ ಮತ್ತು ಅವಳ ಮನೆಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವಳು ತನ್ನ ತಾಯಿ ಮತ್ತು ತಂಗಿಯ ಮಾತು ಕೇಳಿ ನನ್ನನ್ನು ಬಿಟ್ಟುಹೋಗಿದ್ದಾಳೆ. ನಾನು ಈ ವಿಷಯದಲ್ಲಿ ಕಾನೂನಿನ ಮೊರೆ ಹೋಗೋಣ ಎಂದು ವಕೀಲರನ್ನು ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಹಿಳೆಯರಿಗೆ ಕಾನೂನಿನಲ್ಲಿ ಹೆಚ್ಚು ಮನ್ನಣೆ ಇದೆ. ನೀವು ಏನೇ ಸಾಕ್ಷಿ ಕೊಟ್ಟರೂ ಪ್ರಯೋಜನವಾಗಲ್ಲ ಎಂದು ಹೇಳಿದ್ದಾನೆ.

ನಾನು, ನನ್ನ ತಂದೆ-ತಾಯಿ ಮತ್ತು ಪತ್ನಿ ಮನೆಯಲ್ಲಿದ್ದೆವು. ಪತ್ನಿಗೆ ಯಾವುದೇ ನಿರ್ಬಂಧವಿರಲಿಲ್ಲ. ಎರಡು ತಿಂಗಳ ಕಾಲ ಅವಳನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದೆ. ಅವಳ ಬಟ್ಟೆಯ ಬಗ್ಗೆ ಯಾರೂ ಪ್ರಶ್ನಿಸಿಲ್ಲ. ಮದುವೆಯ ನಾಲ್ಕು ತಿಂಗಳಲ್ಲಿ ಅವಳಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಆದರೂ ಅವಳು ನಮ್ಮನ್ನ ಬಿಟ್ಟು ಹೋದಳು. ಆತ್ಮಹತ್ಯೆಯ ಹಿಂದಿನ ದಿನ ಅಂತಿಮವಾಗಿ ಪತ್ನಿಯೊಂದಿಗೆ ಮಾತನಾಡಿ ನಮ್ಮ ಮನೆಗೆ ಬಾ ಎಂದು ಕರೆದಿದ್ದೆ. ಅವಳು ನಾನು ಮತ್ತೆ ಬರುವುದಿಲ್ಲ ಎಂದು ಹೇಳಿದ ಬಗ್ಗೆ ಅನಂದ್ ವಿಡಿಯೋದಲ್ಲಿ ತಿಳಿಸಿದ್ದು, ಇಷ್ಟೆಲ್ಲಾ ಆದಮೇಲೆ ಇದೀಗ ನನ್ನ ಬಳಿ ಬೇರೆ ಯಾವುದೇ ಆಯ್ಕೆ ಇಲ್ಲ. ನಾನು ಸಾಯಬೇಕೆಂಬ ನಿರ್ಧಾರ ಮಾಡಿದ್ದೇನೆ. ನನ್ನ ನೋವನ್ನು ಈ ಸಮಾಜ, ಕಾನೂನು, ವ್ಯವಸ್ಥೆ ಸೇರಿದಂತೆ ಯಾರು ಕೇಳುವುದಿಲ್ಲ ನಾನು ಕೂಡ ಮನುಷ್ಯ, ನನಗೂ ನೋವಿದೆ." ಎಂದು ಹೇಳಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಪ್ರಕರಣಕ್ಕೆ ಸಂಬಂಧಿಸದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.