Sharmishta Panoli: ಜಾತ್ಯತೀತತೆ ಎರಡು ದಾರಿಗಳ ಬೀದಿಯಾಗಿರಬೇಕು; ಶರ್ಮಿಷ್ಠ ಪನೋಲಿ ಬಂಧನವನ್ನು ಪ್ರಶ್ನಿಸಿದ ಪವನ್ ಕಲ್ಯಾಣ್, ಕಂಗನಾ
22 ವರ್ಷದ ಕಾನೂನು ವಿದ್ಯಾರ್ಥಿನಿ ಮತ್ತು ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ಬಂಧನವು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಆಯ್ದ ಕ್ರಮ ಮತ್ತು "ತುಷ್ಟೀಕರಣ ರಾಜಕೀಯ"ವನ್ನು ಅನುಸರಿಸುತ್ತಿದೆ ಎಂದು ಹಲವಾರು ಬಿಜೆಪಿ ನಾಯಕರು ಆರೋಪಿಸಿದ್ದಾರೆ.


ಕೊಲ್ಕತ್ತಾ: 22 ವರ್ಷದ ಕಾನೂನು ವಿದ್ಯಾರ್ಥಿನಿ ಮತ್ತು ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ಬಂಧನವು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಆಯ್ದ ಕ್ರಮ ಮತ್ತು "ತುಷ್ಟೀಕರಣ ರಾಜಕೀಯ"ವನ್ನು ಅನುಸರಿಸುತ್ತಿದೆ ಎಂದು ಹಲವಾರು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಶರ್ಮಿಷ್ಠಾ ಪನೋಲಿ (Sharmishta Panoli) ಅವರನ್ನು ಕೋಲ್ಕತಾ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ನೀಡಿದೆ. ಇದೀಗ ಶರ್ಮಿಷ್ಠಾ ಬಂಧನದ ಕುರಿತು ಕೆಲವು ವಿರೋಧಗಳು ಎದ್ದಿವೆ.
ಆಪರೇಷನ್ ಸಿಂದೂರ್ ಬಗ್ಗೆ ಬಾಲಿವುಡ್ ನಟರು ಮಾತನಾಡದಿದ್ದಕ್ಕಾಗಿ ಟೀಕಿಸುವಾಗ ಕೋಮುವಾದಿ ಹೇಳಿಕೆಗಳನ್ನು ಹೇಳಿದ್ದಕ್ಕಾಗಿ ಅವರ ಬಂಧನ ಮಾಡಲಾಗಿದೆ. ವೀಡಿಯೊವು ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಸಿಕೊಂಡು "ಅವಮಾನಕರ ಮತ್ತು ಅಗೌರವದ" ಭಾಷೆಯನ್ನು ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪನೋಲಿ ವೀಡಿಯೊವನ್ನು ಅಳಿಸಿ ಸಾರ್ವಜನಿಕ ಕ್ಷಮೆಯಾಚಿಸಿದರು.
ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಮತಾ ಬ್ಯಾನರ್ಜಿ ಅವರ ಸರ್ಕಾರವನ್ನು ಟೀಕಿಸಿದ್ದಾರೆ. ಜಾತ್ಯತೀತತೆಯು ದ್ವಿಮುಖವಾಗಿರಬೇಕು ಎಂದು ಅವರು ಹೇಳಿದ್ದಾರೆ. ಪರೇಷನ್ ಸಿಂಧೂರ್ ಸಮಯದಲ್ಲಿ, ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಮಾತನಾಡುತ್ತಾ, ತನ್ನ ಮಾತುಗಳು ವಿಷಾದಕರ ಮತ್ತು ಕೆಲವರಿಗೆ ನೋವುಂಟುಮಾಡಿದವು. ಅವಳು ತನ್ನ ತಪ್ಪನ್ನು ಒಪ್ಪಿಕೊಂಡಳು, ವೀಡಿಯೊವನ್ನು ಅಳಿಸಿಹಾಕಿದಳು ಮತ್ತು ಕ್ಷಮೆಯಾಚಿಸಿದಳು. ಪಶ್ಚಿಮ ಬಂಗಾಳ ಪೊಲೀಸರು ಶರ್ಮಿಷ್ಠಾ ವಿರುದ್ಧ ಕ್ರಮ ಕೈಗೊಂಡು ತ್ವರಿತವಾಗಿ ಕಾರ್ಯನಿರ್ವಹಿಸಿದರು. ಆದರೆ ಟಿಎಂಸಿಯ ಚುನಾಯಿತ ನಾಯಕರು, ಸಂಸದರು ಸನಾತನ ಧರ್ಮವನ್ನು ಅಪಹಾಸ್ಯ ಮಾಡಿದಾಗ ಲಕ್ಷಾಂತರ ಜನರ ಮೇಲೆ ಉಂಟಾದ ಆಳವಾದ, ತೀವ್ರವಾದ ನೋವಿನ ಬಗ್ಗೆ ಏನು? ನಮ್ಮ ನಂಬಿಕೆಯನ್ನು 'ಗಂಧ ಧರ್ಮ' ಎಂದು ಕರೆಯುವಾಗ ಆಕ್ರೋಶ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mamata Banerjee: ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ; ಫಲಕ ಹಿಡಿದು ಪ್ರತಿಭಟಿಸಿದ ವಿದ್ಯಾರ್ಥಿಗಳು
22 ವರ್ಷದ ಕಾನೂನು ವಿದ್ಯಾರ್ಥಿನಿ ಮತ್ತು ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಶರ್ಮಿಷ್ಠಾ ಪನೋಲಿ ಬಂಧನವು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಆಯ್ದ ಕ್ರಮ ಮತ್ತು "ತುಷ್ಟೀಕರಣ ರಾಜಕೀಯ"ವನ್ನು ಅನುಸರಿಸುತ್ತಿದೆ ಎಂದು ಹಲವಾರು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ಶರ್ಮಿಷ್ಠಾ ಪನೋಲಿ (Sharmishta Panoli) ಅವರನ್ನು ಕೋಲ್ಕತಾ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ನೀಡಿದೆ. ಇದೀಗ ಶರ್ಮಿಷ್ಠಾ ಬಂಧನದ ಕುರಿತು ಕೆಲವು ವಿರೋಧಗಳು ಎದ್ದಿವೆ.