ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುರುಕುಗೊಂಡ ಸ್ವಚ್ಛತಾ ಅಭಿಯಾನ
ರಸ್ತೆಗಳ ಎರಡೂ ಬದಿಗಳಲ್ಲಿ ಬಿದ್ದಿರುವ ಕಲ್ಲು, ಮಣ್ಣುಗುಡ್ಡೆಗಳು ಮುಂತಾದ ತ್ಯಾಜ್ಯ ಹಾಗೂ ಉಪಯೋಗಿಸದೇ ಬಿಟ್ಟಿರುವ ತಳ್ಳುವ ಬಂಡಿಗಳನ್ನು ತೆಗೆಸಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಾಜಕಾಲುವೆಗಳು, ಕೆಳಸೇತುವೆಗಳು ಹಾಗೂ ತೆರೆದ ಚರಂಡಿ ಗಳನ್ನು ಸ್ವಚ್ಛಗೊಳಿಸುತ್ತಿರುವುದರಿಂದ ಮಳೆಯಿಂದ ಯಾವುದೇ ರೀತಿಯ ಅಡಚಣೆ ಯಾಗುವುದನ್ನು ತಡೆಯಲಾಗುತ್ತಿದೆ.