ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡ್ತೇವೆ: ಸಿಎಂ ಘೋಷಣೆ

ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ಹೆಸರಿಡ್ತೇವೆ: ಸಿಎಂ ಘೋಷಣೆ

ಮನರೇಗಾ ಕಾಯ್ದೆಯನ್ನು ವಿಬಿ ಜಿ ರಾಮ್‌ ಜಿ ಎಂದು ಬದಲಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ʼನರೇಗಾ ಉಳಿಸಿ ಆಂದೋಲನ ಮತ್ತು‌ ಲೋಕಭವನ ಚಲೋʼ ಪ್ರತಿಭಟನಾ ಸಮಾವೇಶವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

MGNREGA Bachao Sangram: ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿ.ಕೆ. ಶಿವಕುಮಾರ್

ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಕೆಶಿ

DK Shivakumar: ಕೇಂದ್ರ ಸರ್ಕಾರ ರೈತರ, ಕಾರ್ಮಿಕರ ಹಕ್ಕು, ಪಂಚಾಯಿತಿ ಅಧಿಕಾರ ಕಸಿಯುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯ್ತಿಯಲ್ಲಿ ನರೇಗಾ ಕಾರ್ಮಿಕರನ್ನು ಒಳಗೊಂಡು ತಾಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಪರಿಷತ್ ಸದಸ್ಯರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಬೇಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Lalbagh flower show: ತೇಜಸ್ವಿ ವಿಸ್ಮಯ ಫ್ಲವರ್‌ ಶೋಗೆ ತೆರೆ,  8.10 ಕೋಟಿ ಜನ ಭೇಟಿ, ದಾಖಲೆ 2.46 ಕೋಟಿ ರೂ. ಸಂಗ್ರಹ

ಲಾಲ್‌ಬಾಗ್‌ ಫ್ಲವರ್‌ ಶೋಗೆ ತೆರೆ, ದಾಖಲೆ 8.10 ಕೋಟಿ ಜನ ಭೇಟಿ

ಲಾಲ್‌ಬಾಗ್‌ ಫ್ಲವರ್‌ ಶೋಗೆ 11 ದಿನಗಳಲ್ಲಿ 8,10,973 ಜನರು ಭೇಟಿ ನೀಡಿದರು. ಟಿಕೆಟ್ ಮಾರಾಟದಿಂದ ಮಾತ್ರ 2,46,27,088 ರೂ. ಸಂಗ್ರಹವಾಗಿದ್ದು, ಒಟ್ಟು ಆದಾಯ 2,74,77,088 ರೂ. ಆಗಿದೆ. ಕೇವಲ 3 ಕೋಟಿ ವೆಚ್ಚದಲ್ಲಿ ಆಯೋಜಿಸಿದ ಈ ಶೋಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಕೊನೆಯ ದಿನವೇ ಅತಿ ಹೆಚ್ಚು ಜನ (1,89,155) ಭೇಟಿ ನೀಡಿ 65 ಲಕ್ಷಕ್ಕೂ ಅಧಿಕ ಆದಾಯ ತಂದರು.

Self Harming: ಮದುವೆಯಾದ ಎರಡೇ ತಿಂಗಳಿಗೆ ಮತ್ತೊಬ್ಬನ ಜೊತೆ ಪತ್ನಿ ಪರಾರಿ; ಪತಿ, ಮದುವೆ ಮಾಡಿಸಿದವನೂ ಆತ್ಮಹತ್ಯೆ

ಬೇರೊಬ್ಬನೊಂದಿಗೆ ನವವಿವಾಹಿತೆ ಪರಾರಿ; ಪತಿ, ಮದುವೆ ಮಾಡಿಸಿದವನೂ ಆತ್ಮಹತ್ಯೆ

ತನ್ನ ಸಾವಿಗೆ ಹೆಂಡತಿ, ಅತ್ತೆ, ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಡೆತ್‌ನೋಟ್‌ ಬರೆದಿಟ್ಟು ಪತಿ ಹರೀಶ್‌ ಆರೋಪಿಸಿದ್ದಾರೆ. ಹರೀಶ್ ಸಾವಿನಿಂದ ಮನನೊಂದು, ಮುಂದೆ ನಿಂತು ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.‌

ಸಮಸ್ಯೆಗೆ ಪರಿಹಾರ ಸೂಚಿಸಿದ ಐದು ಸ್ಟಾರ್ಟ್‌ಅಪ್ಸ್‌ʼಗೆ ತಲಾ 25 ಲಕ್ಷ ರೂ. ಬಹುಮಾನ

ಸಮಸ್ಯೆಗೆ ಪರಿಹಾರ ಸೂಚಿಸಿದ ಸ್ಟಾರ್ಟ್‌ಅಪ್ಸ್‌ʼಗೆ ಬಹುಮಾನ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಬೆಂಬಲದಲ್ಲಿ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಆಯೋಜಿಸಿದ್ದ “ನಮ್ಮ ಬೆಂಗಳೂರು ಚಾಲೆಂಜ್‌ʼ೨೬ ಸ್ಪರ್ಧೆಯ ವಿಜೇತ ತಂಡಗಳ ಘೋಷಣಾ ಸಮಾರಂಭದಲ್ಲಿ, ಬೆಂಗಳೂರಿನ ಸಮಸ್ಯೆಗೆ ವಿನೂತನ ಐಡಿಯಾ ನೀಡಿದ್ದ ಐದು ಸ್ಟಾರ್ಟ್‌ ಅಪ್‌ಗಳನ್ನು ಬಿಐಸಿಯಲ್ಲಿ ನಡೆದ ಸಮಾರಂಭದಲ್ಲಿ ಆಯ್ಕೆ ಮಾಡಲಾ ಯಿತು. ನಮ್ಮ ಬೆಂಗಳೂರು ಚಾಲೆಂಜ್‌ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಒಟ್ಟು 60ಕ್ಕೂ ಅಧಿಕ ಅರ್ಜಿಗಳು ಈ ವೇಳೆ ಸ್ವೀಕೃತವಾಗಿದ್ದು, ಈ ಪೈಕಿ ೫ ಸ್ಟಾರ್ಟ್‌ಅಪ್‌ಗಳು ಆಯ್ಕೆಯಾದವು.

ಗರ್ಭಾಶಯದ ಅಸಹಜ ರಕ್ತಸ್ರಾವ ಕುರಿತು ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಇವರ ವತಿಯಿಂದ ಗರ್ಭಾಶಯದ ಆಸಹಜ ರಕ್ತಸ್ರಾವ (Abnormal Uterine Bleeding – AUB) ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಉಚಿತ ಆಯುರ್ವೇದ ಸಮಾಲೋಚನೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

Thawar Chand Gehlot: ಅಧಿವೇಶನದಲ್ಲಿ ಭಾಷಣ ಗೊಂದಲ: ರಾಷ್ಟ್ರಪತಿಗಳಿಗೆ ಪ್ರತ್ಯೇಕ ವರದಿ ನೀಡಿದ ರಾಜ್ಯಪಾಲರು

ಅಧಿವೇಶನದಲ್ಲಿ ಭಾಷಣ ಗೊಂದಲ: ರಾಷ್ಟ್ರಪತಿಗಳಿಗೆ ರಾಜ್ಯಪಾಲರ ಪ್ರತ್ಯೇಕ ವರದಿ

ಜಂಟಿ ಅಧಿವೇಶನ ಹಿಂದಿನ ದಿನ ಅಂದರೆ ಜನವರಿ 21 ಮತ್ತು ಮರುದಿನ (ಜನವರಿ 22) ನಡೆದ ವಿದ್ಯಮಾನಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿದ್ದ ಭಾಷಣವನ್ನು ಯಥಾವತ್ತಾಗಿ ಓದಲು ರಾಜ್ಯಪಾಲರು ನಿರಾಕರಿಸಿದ್ದರು. ವಿಬಿ ಜಿ ರಾಮ್ ಜಿ ಕಾಯ್ದೆಯೂ ಸೇರಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಲಾಗಿತ್ತು. ಈ ಭಾಗವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು.

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ, 1.37 ಕೋಟಿ ರೂ. ಲೂಟಿ

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ವಾಹನ ದರೋಡೆ, 1.37 ಕೋಟಿ ರೂ. ಲೂಟಿ

ಬೆಂಗಳೂರಿನಲ್ಲಿ ಎಸ್‌ಬಿಐ, ಎಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬುವ ಕಂಪನಿ ಹಿಟಾಚಿ ಸಿಬ್ಬಂದಿಯಿಂದ ಎಟಿಎಂ ವಾಹನ ದರೋಡೆ ಮಾಡಲಾಗಿದೆ. ಎರಡು ತಂಡಗಳು ಸೇರಿ 1.37 ಕೋಟಿ ರೂ. ಹಣ ಲೂಟಿ ಮಾಡಿವೆ. ಒಂದು ತಂಡ 57 ಲಕ್ಷ ರೂ. ದೋಚಿದರೆ, ಮತ್ತೊಂದು ತಂಡ 80 ಲಕ್ಷ ರೂ. ದರೋಡೆ ಮಾಡಿದೆ. ಜನವರಿ 19 ರಂದು ಎಟಿಎಂ ವಾಹನ ದರೋಡೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

400 ಕೋ. ದರೋಡೆ: ಅಂತೆ, ಕಂತೆಗಳ ಸದ್ದು

400 ಕೋ. ದರೋಡೆ ಅಂತೆ, ಕಂತೆಗಳ ಸದ್ದು

400 ಕೋಟಿ ರು. ಹಣ ಇದ್ದ ಕಂಟೇನರ್ ದರೋಡೆ ಪ್ರಕರಣ ಅಂತೆ ಕಂತೆಗಳ ಮೇಲೆ ಸಾಗಿದೆ. ಈ ನಡುವೆ ಅಪಹರಣ ಪ್ರಕರಣ ಬಂಧನಕ್ಕೆ ಒಳಗಾದ ವಿರಾಟ್ ಗಾಂಧಿ ಹಾಗೂ ಜಯೇಶ್ ಮಧ್ಯೆ ನಡೆದ ವಾಟ್ಸಪ್ ಕರೆ ಸಂಭಾಷಣೆ ವೈರಲ್ ಆಗಿದೆ. ಸಂಭಾಷಣೆ ಪ್ರಕಾರ ಹಣ ಗುಜರಾತ್ ಮೂಲದ ರಾಜಕಾರಣಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಬಾಲಾಜಿ ಟ್ರಸ್ಟ್ ಹೆಸರು ತಳುಕು ಹಾಕಿಕೊಂಡಿದೆ.

Murder Case: ಮದ್ಯದ ನಶೆಯಲ್ಲಿ ಜಗಳ, ಮರಕ್ಕೆ ಕಾರು ಗುದ್ದಿಸಿ ಸ್ನೇಹಿತನನ್ನು ಕೊಂದ ಟೆಕ್ಕಿ

ಮದ್ಯದ ನಶೆಯಲ್ಲಿ ಜಗಳ, ಮರಕ್ಕೆ ಕಾರು ಗುದ್ದಿಸಿ ಸ್ನೇಹಿತನನ್ನು ಕೊಂದ ಟೆಕ್ಕಿ

ವಿಚಿತ್ರ ರೀತಿಯಲ್ಲಿ ಸ್ನೇಹಿತನ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ ಬೆಂಗಳೂರಿನ ಒಬ್ಬಸಾಫ್ಟ್‌ವೇರ್‌ ಇಂಜಿನಿಯರ್.‌ ಮದ್ಯದ ನಶೆಯಲ್ಲಿ ಹೊಡೆದಾಟ ಆರಂಭವಾಗಿ ಅದು ಕೊಲೆಯಲ್ಲಿ ಮುಕ್ತಾಯವಾಗಿದೆ. ತನ್ನ ಕಾರಿಗೆ ನೇತು ಬಿದ್ದು ಕೊಲೆ ಬೆದರಿಕೆ ಹಾಕುತ್ತಿದ್ದ ಸ್ನೇಹಿತನನ್ನು ಹಾಗೇ ಮರಕ್ಕೆ ಗುದ್ದಿಸಿ ಕೊಲೆ ಮಾಡಿದ್ದಾನೆ. ಈ ವೇಳೆ ಟೆಕ್ಕಿಗೂ ಗಾಯವಾಗಿದೆ.

Vijayapura Robbery Case: ರಾಜ್ಯದಲ್ಲಿ ಮತ್ತೊಂದು ದರೋಡೆ, ಕಂಟ್ರಿ ಪಿಸ್ತೂಲ್‌ ತೋರಿಸಿ 205 ಗ್ರಾಂ ಚಿನ್ನಾಭರಣ ಕಳವು

ಮತ್ತೊಂದು ದರೋಡೆ, ಕಂಟ್ರಿ ಪಿಸ್ತೂಲ್‌ ತೋರಿಸಿ 205 ಗ್ರಾಂ ಚಿನ್ನಾಭರಣ ಕಳವು

ದರೋಡೆಕೋರರು ಚಿನ್ನ ದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹಲಸಂಗಿ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದ ಬಂದ ದರೋಡೆಕೋರರೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನ ಆಧಾರವಾಗಿಟ್ಟುಕೊಂಡು ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.

400 crore robbery case: ಚೋರ್ಲಾ ಘಾಟ್‌ ದರೋಡೆಗೆ ಟ್ವಿಸ್ಟ್‌, ಗುಜರಾತ್‌ ರಾಜಕಾರಣಿ ಕೈವಾಡ?

ಚೋರ್ಲಾ ಘಾಟ್‌ ದರೋಡೆಗೆ ಟ್ವಿಸ್ಟ್‌, ಗುಜರಾತ್‌ ರಾಜಕಾರಣಿ ಕೈವಾಡ?

ದರೋಡೆಯಾಗಿತ್ತು ಎನ್ನಲಾದ 400 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಜಯೇಶ್ ಎಂಬಾತನ ಜೊತೆ ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಮಾತನಾಡಿದ್ದಾನೆ ಎನ್ನಲಾದ ಆಡಿಯೋವೊಂದು ಸೋಮವಾರ ಬಹಿರಂಗವಾಗಿದೆ. ಅದರಲ್ಲಿ ಗುಜರಾತ್‌ನ ರಾಜಕಾರಣಿಯೊಬ್ಬರ ಹೆಸರು ಪ್ರಸ್ತಾಪವಾಗಿದೆ. ಮೂರೂ ರಾಜ್ಯಗಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

MLA SN Subbareddy: ಗಂಟ್ಲಮಲ್ಲಮ್ಮ ಕಣವೆಯಲ್ಲಿ ಡ್ಯಾಂ ನಿರ್ಮಾಣ ತಡೆಗೆ ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಡ್ಯಾಂ ನಿರ್ಮಾಣಕ್ಕೆ ಭೂಮಿ ನೀಡಲ್ಲ ಎಂಬ ಹೇಳಿಕೆಗೆ ಶಾಸಕರ ಕಿಡಿ

ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಕೆಲವರು ರಾಜಕೀಯ ದೃಷ್ಟಿ ಇಟ್ಟು ಕೊಂಡು ಇಂತಹ ಪ್ರಚಾರಗಳು ಮಾಡುತ್ತಿದ್ದಾರೆ ಇದಕ್ಕೆ ಜನರು ಆಸ್ಪದ ನೀಡಬಾರದು ಎಂದ ಅವರು ಯಾರೇ ಈ ಬೃಹತ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರೂ ಎದುರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಕಲ್ಪ ಮಾಡಿದ್ದೇನೆ

ಧಮ್ಕಿ ರಾಜೀವ್‌ಗೌಡ 13 ದಿನಗಳ ನಂತರ ಕೇರಳದಲ್ಲಿ ಪೊಲೀಸ್ ಬಲೆಗೆ : ಖಚಿತಪಡಿಸಿದ ಎಸ್ಪಿ ಕುಶಾಲ್ ಚೌಕ್ಸೆ

ಧಮ್ಕಿ ರಾಜೀವ್‌ಗೌಡ 13 ದಿನಗಳ ನಂತರ ಕೇರಳದಲ್ಲಿ ಪೊಲೀಸ್ ಬಲೆಗೆ

ಶಿಡ್ಲಘಟ್ಟ ನಗರದಲ್ಲಿ ಜಮೀರ್‌ಅಹ್ಮದ್ ಪುತ್ರನ ಕಲ್ಟ್ ಸಿನಿಮಾ ಪ್ರಪೋಷನ್‌ಗೆ ಹಾಕಿದ್ದ ಪ್ಲೆಕ್ಸ್ ಒಂದನ್ನು ನಗರಸಭೆ ಆಯುಕ್ತೆ ಅಮೃತಗೌಡ ಮತ್ತು ಸಿಬ್ಬಂದಿ ತೆರವು ಗೊಳಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಪೋನ್ ಮಾಡಿ ಅಶ್ಲೀಲವಾಗಿ ಮಾತನಾಡಿ ದ್ದಲ್ಲದೆ ಶಾಸಕರನ್ನು ಕೂಡ ಏಕವಚನದಲ್ಲಿ ನಿಂದಿಸಿ  ಆಯುಕ್ತೆಗೆ ಧಮ್ಕಿ ಹಾಕಿದ್ದರು

Misuse of Position: ಪೌರಾಯುಕ್ತರು ಅಧಿಕಾರ ದುರ್ಬಳಿಕೆ ಮಾಡಿಕೊಂಡು ಕಾನೂನಿನ ವಿರುದ್ಧವಾಗಿ ಕೆಲಸ ಕಾರ್ಯಗಳು ಮಾಡುತ್ತಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿನಗರ ಸಭಾ ಸದಸ್ಯ ಮಹಮ್ಮದ್ ಶಫೀಕ್ ಗಂಭೀರ ಆರೋಪ

ಚಿಂತಾಮಣಿ ನಗರಸಭಾ ವ್ಯಾಪ್ತಿಯ ವಾರ್ಡುಗಳ ಚರಂಡಿಗಳು ಸ್ವಚ್ಛತೆ ಮಾಡುವವರು ಇಲ್ಲ!ಎಲ್ಲಿ ನೋಡಿದರೂ ಚರಂಡಿಗಳಲ್ಲಿ ಗೊಬ್ಬು ವಾಸನೆ ಬರುತ್ತಿದೆ! ಬೀದಿ ದೀಪಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ನಗರ ಭಾಗದಲ್ಲಿ ಆಗುತ್ತಿಲ್ಲ! ಇದರ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ

Teacher negligence: ಮಂಚೇನಹಳ್ಳಿಯಲ್ಲಿ ಶಿಕ್ಷಕರ ಲೋಪ ರಾಷ್ಟ್ರಧ್ವಜದ ತಲೆಕೆಳಗು ಹಾರಾಟ

ಮಂಚೇನಹಳ್ಳಿಯಲ್ಲಿ ಶಿಕ್ಷಕರ ಲೋಪ ರಾಷ್ಟ್ರಧ್ವಜದ ತಲೆಕೆಳಗು ಹಾರಾಟ

ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜವನ್ನು ಕೇಸರಿ ಬಿಳಿಹಸಿರು ಬಣ್ಣಯಿರುವಂತೆ ಕಟ್ಟುವ ಬದಲಿಗೆ ಹಸಿರು, ಬಿಳಿ ಕೇಸರಿ ಇರುವಂತೆ ಕಟ್ಟಿರುವ ಈ ಘಟನೆ ನಡೆದಿದ್ದು ತಪ್ಪಿನ ಅರಿವಾಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಧ್ವಜವನ್ನು ಕೆಳಗಿಳಿಸಿ ಮತ್ತೆ ನಿಯಮ ದಂತೆ ಹಾರಿಸಲಾಗಿದೆ

77ನೇ ಗಣರಾಜ್ಯೋತ್ಸವಕ್ಕೆ ಮುಖ್ಯಶಿಕ್ಷಕ ಗೈರು ಸಸ್ಪೆಂಡ್‌ಗೆ ಗ್ರಾಮಸ್ಥರ ಆಗ್ರಹ

ಮುಖ್ಯ ಶಿಕ್ಷಕ ಗೈರು ಸಸ್ಪೆಂಡ್‌ಗೆ ಗ್ರಾಮಸ್ಥರ ಆಗ್ರಹ

ತಾಲ್ಲೂಕಿನ ಗೂಳೂರು ಹೋಬಳಿ ಹಾಗೂ ಗ್ರಾಪಂ ವ್ಯಾಪ್ತಿಯ ಸದ್ದುಪಲ್ಲಿ ಮತ್ತು ಸದ್ದುಪಲ್ಲಿ ಲಂಬಾಣಿ ತಾಂಡಾ ಗ್ರಾಮಗಳಿಗೆ ಇರುವ ಏಕೈಕ ಸರಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕೆ.ಶ್ರೀನಿ ವಾಸ ಎಂಬುವವರು 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಧ್ವಜಾರೋಹಣ ನೆರವೇರಿಸಬೇಕಾಗಿತ್ತು. ಆದರೆ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ಕರ್ತವ್ಯಲೋಪ ಎಸಗಿದ್ದಾರೆ

ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಸದ್ಗುರು ಹಾಗೂ ಸಂಸದ ತೇಜಸ್ವಿ ಸೂರ್ಯ

ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ

ಕೇವಲ ಬದುಕುವ ಹಂತವನ್ನು ಮೀರಿ ಯುವಜನತೆಯ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. “ಇಲ್ಲಿ ಕುಳಿತಿರುವ ಯುವಜನತೆಗೆ ಹಿಂದೆಂದಿ ಗಿಂತಲೂ ಹೆಚ್ಚಿನ ಸಾಧ್ಯತೆಗಳು ಲಭ್ಯವಿದೆ. ಇಂತಹ ನಂಬಲಸಾಧ್ಯ ಸಾಧ್ಯತೆಗಳನ್ನು ನಾನು ಕೂಡ ಹಿಂದೆಂದೂ ಊಹಿಸಿರ ಲಿಲ್ಲ. ಈ ಸಾಧ್ಯತೆಗಳನ್ನು ಭಯ ಅಥವಾ ಅಸುರಕ್ಷಿತ ಭಾವನೆ ಯಿಂದ ನೋಡಬಾರದು

ಹೊನ್ನುಡಿ ಪ್ರಭಾಕರ್ ನಿಧನ: ಜಿಲ್ಲಾ ಪತ್ರಕರ್ತರ ಸಂಘ ಸಂತಾಪ

ಹೊನ್ನುಡಿ ಪ್ರಭಾಕರ್ ನಿಧನ: ಜಿಲ್ಲಾ ಪತ್ರಕರ್ತರ ಸಂಘ ಸಂತಾಪ

ಹಿರಿಯ ವರದಿಗಾರ ವೆಂಕಟೇಶ್ ಮಾತನಾಡಿ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹೊನ್ನುಡಿ ಪತ್ರಿಕೆ ಸಂಪಾದಕ ಎಂ.ಜಿ. ಪ್ರಭಾಕರ (76) ಭಾನುವಾರ ರಾತ್ರಿ ನಗರದ ಕೋಟೆಯ ತಮ್ಮ ನಿವಾಸದಲ್ಲಿ ನಿಧನರಾದ ಸುದ್ದಿ ಕೇಳಿ ಆಘಾತವಾಯಿತು

ರಾಷ್ಟ್ರೀಯ ಚೈತನ್ಯ ಶಿರೋಮಣಿ ಪುರಸ್ಕಾರ ಅಡ್ಕಸ್ಥಳ ಕಬೀರ್ ಪಾಲು, ವಿಶ್ವ ಜ್ಞಾನಶ್ರೀ ಪುರಸ್ಕಾರ ಶ್ರೀಮತಿ ಖುಸ್ತರ್ ಬಾನು ಬಗಲಿಗೆ.

ರಾಷ್ಟ್ರೀಯ ಚೈತನ್ಯ ಶಿರೋಮಣಿ ಪುರಸ್ಕಾರ ಅಡ್ಕಸ್ಥಳ ಕಬೀರ್ ಪಾಲು

ರಾಷ್ಟ್ರೀಯ ಯುವ ದಿನಾಚರಣೆಯಂದು ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಗಣ ರಾಜ್ಯೋತ್ಸವದ ಸಂಭ್ರಮದ ಸನ್ನಿವೇಶದಲ್ಲಿ ಪ್ರತಿಷ್ಠಾನದ ಆಶ್ರಯದಲ್ಲಿ  ಆಯೋಜಿಸ ಲಾದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಲಾಲ್ ಸಾಬ್ ಪೆಂಡಾರಿ ಅವರು ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಸ್ತಿಗಳನ್ನು ವಿತರಿಸಿದರು.

ಧಮ್ಕಿ ರಾಜೀವ್‌ ಗೌಡಗೆ ಮಂಗಳೂರಿನಲ್ಲಿ ಆಶ್ರಯ ಕೊಟ್ಟವರು ಯಾರು?; ಸಿಕ್ಕಿಬಿದ್ದಿದ್ದು ಹೇಗೆ?

ಧಮ್ಕಿ ರಾಜೀವ್‌ ಗೌಡಗೆ ಆಶ್ರಯ ಕೊಟ್ಟವರು ಯಾರು?; ಸಿಕ್ಕಿಬಿದ್ದಿದ್ದು ಹೇಗೆ?

ಬ್ಯಾನರ್ ವಿಚಾರಕ್ಕೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ನಿಂದಿಸಿ, ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆರೋಪಿ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 13 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ರಾಜೀವ್​​ ಗೌಡನನ್ನು ಕೇರಳ ಗಡಿಯಲ್ಲಿ ಬಂಧಿಸಲಾಗಿದೆ.

ರಾಜ್ಯಪಾಲರಿಗೆ ಅಪಮಾನ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ನಾಳೆ ಪ್ರತಿಭಟನೆ

ರಾಜ್ಯಪಾಲರಿಗೆ ಅಪಮಾನ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ನಾಳೆ ಪ್ರತಿಭಟನೆ

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಬೆರಳು ತೋರಿಸಿ, ಎಚ್ಚರಿಕೆ ಸಂದೇಶ ನೀಡಿ ಅಪಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್, ಎಸ್. ರವಿ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಬೇಡ್ತಿ-ವರದಾ ನದಿ ಜೋಡಣೆಗಾಗಿ ಪಕ್ಷಾತೀತವಾಗಿ ಹೋರಾಡೋಣ: ಬೊಮ್ಮಾಯಿ ಕರೆ

ಬೇಡ್ತಿ-ವರದಾ ನದಿ ಜೋಡಣೆಗಾಗಿ ಪಕ್ಷಾತೀತವಾಗಿ ಹೋರಾಡೋಣ: ಬೊಮ್ಮಾಯಿ

Bedti-Varada river linking project : ನಿಸರ್ಗವು ಮುಕ್ತವಾಗಿ ಎಲ್ಲವನ್ನು ಕೊಡುತ್ತದೆ. ಅದನ್ನು ಹಂಚಿಕೊಳ್ಳಲು ನಾವು ಪ್ರಯತ್ನ ಮಾಡುತ್ತೇವೆ. ಬೇಡ್ತಿ-ವರದಾ ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ. ಇದು ಅಂತಾರಾಜ್ಯ ನದಿ ಸಮಸ್ಯೆಯಾಗುವುದಿಲ್ಲೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೋಲಾರದಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಬೈರತಿ ಸುರೇಶ್ ಚಾಲನೆ

ಕೋಲಾರದಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Kolar News: ಕೋಲಾರ ಜಿಲ್ಲಾ ನರ್ಸರಿಯಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೋಮವಾರ ಚಾಲನೆ ನೀಡಿದರು. ಜನವರಿ 28 ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಹೂವುಗಳಿಂದ ಸಿದ್ಧಗೊಂಡ ಪ್ರಾಣಿಗಳು, ರೈತರ ಕಲಾಕೃತಿಗಳು ಹಾಗೂ ಮರಳಿನಲ್ಲಿ ಅರಳಿದ ಸಾಲುಮರದ ತಿಮ್ಮಕ್ಕ ಅವರ ಮರಳಿನ ಕೃತಿಗಳು ಜನರನ್ನು ಆಕರ್ಷಿಸುತ್ತಿವೆ.

Loading...