ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಏ.30 ರಿಂದ ಮೇ 5ರವರೆಗೆ ಹೊಸಪೇಟೆಯಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದ ನೂತನ ಗರ್ಭಗುಡಿ ಆಲಯ ಸಮರ್ಪಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ

ಹೊಸಪೇಟೆಯಲ್ಲಿ ಏ.30 ರಿಂದ ಶ್ರೀ ಕಾಳಿಕಾದೇವಿ ದೇವಸ್ಥಾನ ಪ್ರತಿಷ್ಠಾಪನೆ

Vijayanagara News: ಹೊಸಪೇಟೆ ತಾಲೂಕು ವಿಶ್ವಕರ್ಮ ಸಮಾಜದಿಂದ ಏ.30 ರಿಂದ ಮೇ 5 ರವರೆಗೆ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕಂಚುಗಾರಪೇಟೆಯಲ್ಲಿರುವ ನೂತನ ಗರ್ಭಗುಡಿ ಆಲಯ ಸಮರ್ಪಣೆ ಹಾಗೂ ಶ್ರೀ ಕಾಳಿಕಾದೇವಿ ಕಮಟೇಶ್ವರ ದೇವರ ಹಾಗೂ ಪರಿವಾರ ದೇವರ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಹಾಗೂ ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಜಿಲ್ಲಾಧ್ಯಕ್ಷ ಕೆ.ವಿ. ಪತ್ತಾರ್ ಹಾಗೂ ವಿ. ಶಂಕರಾಚಾರ್ಯ ತಿಳಿಸಿದ್ದಾರೆ.

MLC Bharathi Shetty: ತಾಲೂಕು ದಂಡಾಧಿಕಾರಿಗಳ ವಿರುದ್ಧ ಎಂಎಲ್ಸಿ ಭಾರತಿ ಶೆಟ್ಟಿ ಕೆಂಡಾಮಂಡಲ

ತಾಲೂಕು ದಂಡಾಧಿಕಾರಿಗಳ ವಿರುದ್ಧ ಎಂಎಲ್ಸಿ ಭಾರತಿ ಶೆಟ್ಟಿ ಕೆಂಡಾಮಂಡಲ

ಚಿಂತಾಮಣಿಯ ತಾಲೂಕು ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿ ಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾರತಿ ಶೆಟ್ಟಿ ಅವರು ಪಾಲ್ಗೊಂಡಿದ್ದರು.ಈ ವೇಳೆ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಲು ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಭಾರತಿ ಶೆಟ್ಟಿ ಆಕ್ರೋಶಕ್ಕೆ ಕಾರಣವಾಯಿತು.

Gauribidanur News: ಆರ್ಯ ವೈಶ್ಯ ಸಮುದಾಯ ವಹಿವಾಟಿನ ಜೊತೆಗೆ ಸೇವಾ ಕಾಯಗಳಿಗೂ ಒತ್ತು: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು

ವಹಿವಾಟು ಜೊತೆಗೆ ಸೇವಾ ಕಾಯಗಳಿಗೂ ಆರ್ಯ ವೈಶ್ಯ ಸಮುದಾಯ ಒತ್ತು

ಆರ್ಯ ವೈಶ್ಯ ಸಮಮುದಾಯದ ಅಭಿವೃದ್ಧಿಗೆ ನನ್ನ ಸಹಕಾರ ನೀಡುವುದಾಗಿ ತಿಳಿಸಿದ ಅವರು ಆರ್ಯ ವೈಶ್ಯ ಸಮುದಾಯ ಅತ್ಯಂತ ಪ್ರಭಾವಶಾಲಿ ಸಮುದಾಯ, ಬಹುತೇಕರು ವ್ಯಾಪಾರ ವಹಿವಾಟು ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ. ತಾಲೂಕಿನ ರಾಜಕಾರಣವನ್ನು ಬದಲಿಸುವಷ್ಷು ಪ್ರಭಾವ ಹೊಂದಿರುವ ಇವರು ತಮ್ಮ ದುಡಿಮೆಯಲ್ಲಿನ ಒಂದು ಪಾಲನ್ನು ಧಾರ್ಮಿಕ ಕಾರ್ಯಗಳಿಗೆ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳಿಗೆ ನೀಡುತ್ತಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಂಘದ ಸಭೆ : ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ಆಯ್ಕೆ

ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ಆಯ್ಕೆ

ನಗರದ ಗೋಲ್ಡನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯಲ್ಲಿ ನೂತನವಾಗಿ ಪ್ರಾಂಶುಪಾಲರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಸುಮಿತ್ರಾ ಪಾಟೀಲ್ ನೇಮಕವಾಗಿದ್ದಾರೆ. ನಗರದ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿನಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಗಂಗರಾಜ್ ಡಿ.ಜಿ. ಚಂದ್ರಪ್ಪ ಸಿ.ಕೆ. ನಾರಾಯಣ ಸ್ವಾಮಿ.ಎಂ., ಟಿ.ಆರ್.ನಾಗರಾಜ್, ನಿರ್ಮಲಾ, ವಿಜಯಶ್ರೀ, ಭಾಗ್ಯಮ್ಮ ಜಿ. ಇತರರು ಸೇರಿ ನೂತನ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಬೆಂಗಳೂರು ಗೂಗಲ್ ಕ್ಯಾಂಪಸ್‌ನಲ್ಲಿ ಮೊಮ್ಮಗನ ಜತೆ ಕಾಲ ಕಳೆದ ಅಜ್ಜ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಗೂಗಲ್ ಕ್ಯಾಂಪಸ್‌ನಲ್ಲಿ ತಾತನೊಂದಿಗೆ ಸಮಯ ಕಳೆದ ಮೊಮ್ಮಗ

Viral Video: ಪೋಷಕರಿಗೆ ತಮ್ಮ ಮಕ್ಕಳಿಗೆ ಉತ್ತಮ ಕಂಪನಿಯ ಉದ್ಯೋಗ ಸಿಗಬೇಕು ಎನ್ನುವ ಕನಸು, ಆಸೆ ಇರುತ್ತದೆ. ಅದರಲ್ಲೂ ಹೆಚ್ಚು ಪ್ಯಾಕೇಜ್ ಇರುವ ಕೆಲಸ ಸಿಕ್ಕಾಗ ಅದೊಂದು ದೊಡ್ಡ ಯಶಸ್ಸು ಎಂದೇ ಹೇಳಬಹುದು. ಆದರೆ ಕೆಲಸ ಎಂದಾಗ ಉತ್ತಮ ವೇತನ ಮಾತ್ರ ಮುಖ್ಯ ಅಲ್ಲ ಎಂಬುವುದನ್ನು ಇಲ್ಲೊಬ್ಬ ಬೆಂಗಳೂರಿನ ಯುವಕ ತೋರಿಸಿಕೊಟ್ಟಿದ್ದಾನೆ. ಯಶಸ್ಸು ಎಂದರೆ ಕೇವಲ ದೊಡ್ಡ ಮೊತ್ತದ ಸಂಬಳ ಮಾತ್ರವಲ್ಲ ನಮ್ಮ ಆತ್ಮೀಯರಲ್ಲಿ ಕಾಣಿಸುವ ಖುಷಿ ಕೂಡ ದೊಡ್ಡ ಸಾಧನೆ, ಯಶಸ್ಸು ಎಂದು ತೋರಿಸಿಕೊಟ್ಟಿದ್ದಾನೆ.

Mangaluru cooker Blast Case: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಅಪರಾಧಿ ಮೊಹಮ್ಮದ್ ಶಾರೀಕ್​ಗೆ 10 ವರ್ಷ ಜೈಲು ಶಿಕ್ಷೆ

ಕುಕ್ಕರ್ ಬಾಂಬ್ ಸ್ಫೋಟ; ಅಪರಾಧಿ ಮೊಹಮ್ಮದ್ ಶಾರೀಕ್​ಗೆ 10 ವರ್ಷ ಜೈಲು

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿರುವ ಎನ್‌ಐಎ ವಿಶೇಷ ನ್ಯಾಯಾಲಯವು, ಆರೋಪಿ ವಿರುದ್ಧದ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಮೊಹಮ್ಮದ್ ಶಾರೀಕ್ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿದೆ.

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವೇನು? ಅರಣ್ಯಾಧಿಕಾರಿ ಬಿಚ್ಚಿಟ್ರು ಬೆಚ್ಚಿ ಬೀಳಿಸುವ ಅಂಕಿ-ಅಂಶ

ಅರಣ್ಯ ನಾಶದಿಂದ ಬೆಂಗಳೂರಿನ ತಾಪಮಾನ ಹೆಚ್ಚಳ

ಬೆಂಗಳೂರಿನ ತಾಪಮಾನ ಹೆಚ್ಚಾಗಲು ಅರಣ್ಯ ನಾಶವೇ ಕಾರಣ ಎಂದು ಭಾರತೀಯ ಅರಣ್ಯ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ಪೋಸ್ಟ್ ಭಾರಿ ವೈರಲ್ ಆಗಿದ್ದು, ಅನೇಕರು ಅವರನ್ನು ಬೆಂಬಲಿಸಿ, ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಕುರಿತು ಕಾಮೆಂಟ್ ಕೂಡ ಮಾಡಿದ್ದಾರೆ.

ಪೋಷಕರ ಬೇಜವಾಬ್ದಾರಿಯ ಪರಮಾವಧಿ: ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ: ವಿಡಿಯೊ ನೋಡಿ ನೆಟ್ಟಿಗರು ಕಿಡಿಕಿಡಿ

Viral Video: ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಲು ಎಷ್ಟೇ ಕ್ರಮ ಕೈಗೊಂಡರೂ ಹಲವಾರು ಇದನ್ನು ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಸ್ಕೂಟರ್ ನಲ್ಲಿ ಆರು ಮಕ್ಕಳು ಪ್ರಯಾಣ ಮಾಡಿದ್ದಾರೆ. ಈ ಆಘಾತಕಾರಿ ದೃಶ್ಯವು ಬೆಳಿಗ್ಗೆ 10:45 ರ ಸುಮಾರಿಗೆ ಪಾದರಾಯನಪುರ ಮುಖ್ಯ ರಸ್ತೆಯಲ್ಲಿ ಗೋರಿಪಾಳ್ಯ ಬಳಿ, ಟೋಟಲ್ ಎಂಜಿನಿಯರ್ ಆಟೋ ಗ್ಯಾಸ್ ಎದುರು ಸಂಭವಿಸಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ಮಂಗಳೂರು, ಮೈಸೂರು ಸೇರಿ 100 ನಗರಗಳಲ್ಲಿ 'ಅಮೆಜಾನ್ ನೌ ಕ್ವಿಕ್‌ ಕಾಮರ್ಸ್‌ ಆರಂಭ'; ಕಂಪನಿಯಿಂದ ₹2,800 ಕೋಟಿ ಹೂಡಿಕೆ

100 ನಗರಗಳಲ್ಲಿ 'ಅಮೆಜಾನ್ ನೌ ಕ್ವಿಕ್‌ಕಾಮರ್ಸ್‌ ಆರಂಭ'

ತನ್ನ ಕಾರ್ಯಾಚರಣಾ ಜಾಲವನ್ನು ಬಲಪಡಿಸಲು ಅಮೆಜಾನ್ ಬರೋಬ್ಬರಿ 2,800 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ಬೃಹತ್ ಮೊತ್ತವನ್ನು ಕೇವಲ ವ್ಯಾಪಾರ ವಿಸ್ತರಣೆಗೆ ಮಾತ್ರವಲ್ಲದೆ, ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮಕ್ಕೂ ವಿನಿಯೋಗಿಸಲು ಅಮೆಜಾನ್ ನಿರ್ಧರಿಸಿದೆ.

PM Narendra Modi: ಮದುವೆಗೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಬಂತು ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ

ರಾಯಚೂರಿನ ಯುವಕನ ಮದುವೆಗೆ ಪ್ರಧಾನಿ ಮೋದಿಯಿಂದ ಶುಭಾಶಯ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ. ಈ ಬಗ್ಗೆ ಯುವಕನ ಕುಟುಂಬ ಸಂತಸ ವ್ಯಕ್ತಪಡಿಸಿದೆ.

Panchamasali Mutt: ಪಂಚಮಸಾಲಿ ಮಠದ ಲೆಕ್ಕ ಕೊಡುವ ಸಮಾವೇಶದಲ್ಲಿ ಭಾರಿ ಹೈಡ್ರಾಮಾ; ಟ್ರಸ್ಟಿಗಳು, ವಚನಾನಂದ ಶ್ರೀಗಳ ಬೆಂಬಲಿಗರ ನಡುವೆ ತಳ್ಳಾಟ-ನೂಕಾಟ!

ಪಂಚಮಸಾಲಿ ಮಠದ ಲೆಕ್ಕ ಕೊಡುವ ಸಮಾವೇಶದಲ್ಲಿ ಭಾರಿ ಹೈಡ್ರಾಮಾ!

ಹರಿಹರ ಪಂಚ ಮಠದ ದೇಣಿಗೆ ಹಾಗೂ ಅನುದಾನ ಬಳಕೆಯಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ಹಣದ ಲೆಕ್ಕ ನೀಡಬೇಕು ಎಂದು ವಚನಾನಂದ ಸ್ವಾಮೀಜಿ ಹಾಗೂ ಭಕ್ತರು, ಲೆಕ್ಕ ಕೊಡಿ ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 2008ರಿಂದ 2026ರವರೆಗೆ ಮಠದ ಆರ್ಥಿಕ ವ್ಯವಹಾರಗಳ ಲೆಕ್ಕವನ್ನು ಟ್ರಸ್ಟಿಗಳು ನೀಡಿದ್ದಾರೆ. ಈ ವೇಳೆ ಟ್ರಸ್ಟಿಗಳು ಹಾಗೂ ಸ್ವಾಮೀಜಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.

Karnataka CM Row: ಮೇ 15ರೊಳಗೆ ಡಿಸಿಎಂ ಡಿಕೆಶಿಗೆ ಹೈಕಮಾಂಡ್‌ನಿಂದ ಬರ್ತ್‌ಡೇ ಗಿಫ್ಟ್: ಶಾಸಕ ರಂಗನಾಥ್

ಮೇ 15ರೊಳಗೆ ಡಿಕೆಶಿಗೆ ಹೈಕಮಾಂಡ್‌ನಿಂದ ಬರ್ತ್‌ಡೇ ಗಿಫ್ಟ್: ಶಾಸಕ ರಂಗನಾಥ್

ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಿಸಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಒಳ್ಳೆಯ ಸ್ಥಾನ ಸಿಗಬೇಕು ಎಂಬುವುದು ನಮ್ಮ ಆಸೆಯಾಗಿದೆ. ಅವರ ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಸಿಎಂ ಸ್ಥಾನ ಬದಲಾವಣೆಯ ವದಂತಿಗಳಿಗೆ ಕುಣಿಗಲ್‌ ಶಾಸಕ ರಂಗನಾಥ್‌ ಅವರು ಪರೋಕ್ಷವಾಗಿ ಪುಷ್ಟಿ ನೀಡಿದ್ದಾರೆ.

UGCET exam: ವಿದ್ಯಾರ್ಥಿಗಳೇ ಗಮನಿಸಿ, ಯುಜಿಸಿಇಟಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ

ವಿದ್ಯಾರ್ಥಿಗಳೇ ಗಮನಿಸಿ, ಯುಜಿಸಿಇಟಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಮೊದಲು ಏಪ್ರಿಲ್ 29, 2026 ರಂದು ನಡೆಸಲು ಉದ್ದೇಶಿಸಿದ್ದ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಈಗ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ಪರೀಕ್ಷೆಯು ಈಗ ಮೇ 10, 2026 ರಂದು ನಡೆಯಲಿದೆ.

ಮೆಡ್‌ ಟ್ರಾನಿಕ್‌ ನಿಂದ ಭಾರತದ ಪಾರ್ಕಿನ್ಸನ್ ರೋಗಿಗಳಿಗಾಗಿ 'ಅಡಾಪ್ಟಿವ್ ಡೀಪ್ ಬ್ರೈನ್ ಸ್ಟಿಮ್ಯುಲೇಶನ್' ವ್ಯವಸ್ಥೆ ಬಿಡುಗಡೆ

'ಅಡಾಪ್ಟಿವ್ ಡೀಪ್ ಬ್ರೈನ್ ಸ್ಟಿಮ್ಯುಲೇಶನ್' ವ್ಯವಸ್ಥೆ ಬಿಡುಗಡೆ

ಚಲನೆಗೆ ಸಂಬಂಧಿಸಿದ ಸವಾಲುಗಳು ಹೆಚ್ಚಾಗಿ ಗೋಚರಿಸುತ್ತವೆಯಾದರೂ, ಈ ಸ್ಥಿತಿಯು ಸಂವಹನ, ನಿದ್ರೆ ಮತ್ತು ಒಟ್ಟಾರೆ ಯೋಗಕ್ಷೇಮ ಸೇರಿದಂತೆ ದೈನಂದಿನ ಜೀವನದ ಇತರ ಅಂಶ ಗಳ ಮೇಲೂ ಪ್ರಭಾವ ಬೀರಬಹುದು. ಇಂದು, ರೋಗವು ವಿಕಸನಗೊಂಡಂತೆ ರೋಗ ಲಕ್ಷಣ ಗಳನ್ನು ನಿರ್ವಹಿಸಲು ವಿವಿಧ ಚಿಕಿತ್ಸಾ ವಿಧಾನಗಳು ಸಹಾಯ ಮಾಡುತ್ತವೆ.

ಯೆಜ್ಡಿ ಮತ್ತು ಬಿಎಸ್‌ಎ ಎರಡು ಹೊಸ ಸ್ಕ್ರ್ಯಾಂಬ್ಲರ್ ಬೈಕ್‌ಗಳ ಬಿಡುಗಡೆ

ಯೆಜ್ಡಿ ಮತ್ತು ಬಿಎಸ್‌ಎ ಎರಡು ಹೊಸ ಸ್ಕ್ರ್ಯಾಂಬ್ಲರ್ ಬೈಕ್‌ಗಳ ಬಿಡುಗಡೆ

ಬಿಎಸ್‌ಎ ಸ್ಕ್ರ್ಯಾಂಬ್ಲರ್ 650 ಭಾರತದಲ್ಲಿ ಈ ವಿಭಾಗದಲ್ಲಿನ ಏಕೈಕ 650ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 45 ಬಿಹೆಚ್‌ಪಿ ಮತ್ತು 55 ಎನ್‌ಎಂ ಟಾರ್ಕ್ ಉತ್ಪಾದಿ ಸುತ್ತದೆ. ಗೋಲ್ಡ್ ಸ್ಟಾರ್ ಕ್ಯಾಟಲಿನಾ ಮತ್ತು ಎ10 ಸ್ಪಿಟ್‌ಫೈರ್ ಮಾದರಿಗಳಿಂದ ಪ್ರೇರಿತ ವಾದ ವಿನ್ಯಾಸವು ಇದಕ್ಕೆ ವಿಶಿಷ್ಟ ಗುರುತನ್ನು ನೀಡುತ್ತದೆ. ಇದರ ಪ್ರಾರಂಭಿಕ ಬೆಲೆ ರೂ. 3,24,950.

Anekal News: ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಮಗಳು ಸಾವು, ಪತಿ ಮೇಲೆ ಸಂಶಯ

ಕೃಷಿ ಹೊಂಡಕ್ಕೆ ಬಿದ್ದು ತಾಯಿ- ಮಗಳು ಸಾವು, ಪತಿ ಮೇಲೆ ಸಂಶಯ

ಲಾವಣ್ಯ ಹಾಗೂ ಮೃತದೇಹ ಕೃಷಿ ಹೊಂಡದಲ್ಲಿ ಸಿಕ್ಕಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಓಡೋಡಿ ಬಂದಿದ್ದಾರೆ. ತಾಯಿ-ಮಗಳ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಇದರ ಹಿಂದೆ ಗಂಡನ ಕೈವಾಡವಿದೆ ಎಂದು ಆರೋಪ ಮಾಡಿದ್ದಾರೆ.

Janivara Row: ಜನಿವಾರ ತೆಗೆಸಿದ ಕಾಲೇಜಿಗೆ ಶಾಕ್‌, ಸರ್ಕಾರಿ ಪರೀಕ್ಷೆಗಳಿಂದ ಬ್ಲ್ಯಾಕ್‌ ಲಿಸ್ಟ್‌ಗೆ

ಜನಿವಾರ ತೆಗೆಸಿದ ಕಾಲೇಜಿಗೆ ಶಾಕ್‌, ಸರ್ಕಾರಿ ಪರೀಕ್ಷೆಗಳಿಂದ ಕಪ್ಪು ಪಟ್ಟಿಗೆ

ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು KEA ಕೂಡ ಆಗ್ರಹಿಸಿತ್ತು.

SSLC ತೃತೀಯ ಭಾಷೆಗೆ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದ ಹೈಕೋರ್ಟ್‌;  ರಾಜ್ಯ ಸರಕಾರಕ್ಕೆ ಹಿನ್ನಡೆ

ತೃತೀಯ ಭಾಷೆಗೆ ಗ್ರೇಡ್‌, ರಾಜ್ಯ ಸರಕಾರಕ್ಕೆ ಹಿನ್ನಡೆ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲಿಯೇ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರು 2026ರ ಮಾರ್ಚ್‌ 27ರಂದು ದಿಢೀರ್ ಘೋಷಣೆಯೊಂದನ್ನು ಮಾಡಿದ್ದರು. ತೃತೀಯ ಭಾಷೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ (ಹಿಂದಿ ಮತ್ತು ಇತರ 8 ಭಾಷೆ) ಅಂಕಗಳ ಬದಲಿಗೆ "ಎʼ ಯಿಂದ ʼಡಿʼ ತನಕ ಗ್ರೇಡ್‌ಗಳನ್ನು ನೀಡಲಾಗುವುದು ಹಾಗೂ ಎಸ್‌ಎಸ್‌ಎಲ್‌ಸಿ ಅಂತಿಮ ಶೇಕಡಾವಾರು ಅಂಕದಲ್ಲಿಈ ಗ್ರೇಡ್‌ ಪರಿಗಣನೆಯಾಗುವುದಿಲ್ಲ ಎಂದು ತಿಳಿಸಿದ್ದರು.

Minister D Sudhakar: ಸಚಿವ ಡಿ ಸುಧಾಕರ್‌ ಆರೋಗ್ಯ ಯಥಾಸ್ಥಿತಿ, ಆಸ್ಪತ್ರೆಗೆ ಸಿಎಂ- ಡಿಸಿಎಂ ಭೇಟಿ

ಸಚಿವ ಡಿ ಸುಧಾಕರ್‌ ಆರೋಗ್ಯ ಯಥಾಸ್ಥಿತಿ, ಆಸ್ಪತ್ರೆಗೆ ಸಿಎಂ- ಡಿಸಿಎಂ ಭೇಟಿ

ಕೆಲದಿನಗಳ ಹಿಂದೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಡಿ.ಸುಧಾಕರ್‌ ಅವರಲ್ಲಿ ದಿಢೀರನೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ದೇಹಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಎಲೆಕ್ಟ್ರಾನಿಕ್‌ ಸಿಟಿಯ ಕೃಷ್ಣ ಆರೋಗ್ಯ ವಿಜ್ಞಾನಗಳ ಸಂಸ್ಥೆಗೆ ಸ್ಥಳಾಂತರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Road Accident: ನಾಲ್ವರು ಪ್ರಯಾಣಿಸುತ್ತಿದ್ದ ಬೈಕಿಗೆ ಟಿಪ್ಪರ್‌ ಡಿಕ್ಕಿ, ಇಬ್ಬರು ಸಾವು

ನಾಲ್ವರು ಪ್ರಯಾಣಿಸುತ್ತಿದ್ದ ಬೈಕಿಗೆ ಟಿಪ್ಪರ್‌ ಡಿಕ್ಕಿ, ಇಬ್ಬರು ಸಾವು

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ. ಶಾಖಾಪುರ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ. ಮೃತರನ್ನು ಬೈಕ್ ಓಡಿಸುತ್ತಿದ್ದ 37 ವರ್ಷದ ಅಂಜಿನಯ್ಯ ನಾಯಕ ಹಾಗೂ 10 ವರ್ಷದ ಬಾಲಕಿ ಅರ್ಚನಾ ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ 19 ಶ್ವೇತಾ ಅವರ ಕಾಲು ಕಟ್ ಆಗಿದೆ.

CET exam 2026: ಕೆಇಎಯಿಂದ ಸಿಇಟಿ ಪರೀಕ್ಷೆಯ ಕೀ ಉತ್ತರಗಳು ಪ್ರಕಟ, ಇಲ್ಲಿ ಪರಿಶೀಲಿಸಿ

ಕೆಇಎಯಿಂದ ಸಿಇಟಿ ಪರೀಕ್ಷೆಯ ಕೀ ಉತ್ತರಗಳು ಪ್ರಕಟ, ಇಲ್ಲಿ ಪರಿಶೀಲಿಸಿ

2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET exam)ಯ ಎಲ್ಲ ವಿಷಯಗಳ ಕೀ ಉತ್ತರಗಳನ್ನು (key answers) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆಕ್ಷೇಪಣೆಗಳ ಜತೆಗೆ ಪ್ರಶ್ನೆ ಸಂಖ್ಯೆ, ವರ್ಷನ್ ಕೋಡ್ ಇತ್ಯಾದಿ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು. ಅಪೂರ್ಣ ಮಾಹಿತಿಯ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

Elephant Attack: ಕನಕಪುರ ಬಳಿ ಕಾಡಾನೆ ದಾಳಿಗೆ ರೈತ ಬಲಿ

ಕನಕಪುರ ಬಳಿ ಕಾಡಾನೆ ದಾಳಿಗೆ ರೈತ ಬಲಿ

ಸಂಗಮ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ, ಮುತ್ತತ್ತಿ ಬಳಿ ಕಾವೇರಿ ನೀರಿನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆಯೊಂದು ದಾಳಿ ಮಾಡಿತ್ತು. ಇದೀಗ ಕನಕಪುರ (Kanakapura) ತಾಲೂಕಿನ ಸಂಗಮ ಅರಣ್ಯ ವಲಯ ಪ್ರದೇಶದ ವ್ಯಾಪ್ತಿಯ ಚೀಲಂದವಾಡಿಯಲ್ಲಿ ಈ ಘಟನೆ ನಡೆದಿದೆ.

Kalaburgi Khadak Rotti: ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ಇದು ಕೇವಲ ಆಹಾರ ಪದಾರ್ಥದ ಯಶಸ್ಸಲ್ಲ, ಬದಲಾಗಿ ಬಿಸಿಲು ನಾಡಿನ ಸಾಂಸ್ಕೃತಿಕ ಅಸ್ಮಿತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಹೆಮ್ಮೆಯ ಕ್ಷಣ. ಕಲಬುರಗಿಯ ಮಣ್ಣಿನ ಗುಣವೇ ಹಸಿರು ಸಿರಿಯ ಜೋಳ. ಇಲ್ಲಿನ ಹೊಲಗಳಲ್ಲಿ ಬೆಳೆಯುವ ‘ಮಾಲ್ದಂಡಿ’ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿಗೆ ವಿಶಿಷ್ಟ ಪೌಷ್ಟಿಕಾಂಶವಿದೆ.

Weather report: ಜಾಗತಿಕ 100 ಬಿಸಿ ನಗರಗಳ ಪಟ್ಟಿಯಲ್ಲಿ ದೇಶದ 95, ಕರ್ನಾಟಕದ 3 ನಗರ!

ಜಾಗತಿಕ 100 ಬಿಸಿ ನಗರಗಳ ಪಟ್ಟಿಯಲ್ಲಿ ದೇಶದ 95, ಕರ್ನಾಟಕದ 3 ನಗರ!

ವಿಶ್ವದ ಅತ್ಯಂತ ಬಿಸಿಯಾದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೂರು ಜಿಲ್ಲೆಗಳು ಸ್ಥಾನ ಪಡೆದಿದೆ. ಇದು ರಾಜ್ಯದಲ್ಲಿ ತಾಪಮಾನ ಏರುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಸೂರ್ಯನ ಪ್ರತಾಪ ಅತಿಯಾಗಿದ್ದು, ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

Loading...