ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Kempegowda Jayanthi: ಬೆಂಗಳೂರಿನಲ್ಲಿ 60 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನೂತನ ಸ್ಟೇಡಿಯಂ ನಿರ್ಮಾಣಕ್ಕೆ 50 ಎಕರೆ ಜಾಗ ಗುರುತು: ಡಿ.ಕೆ.ಶಿವಕುಮಾರ್‌

ಬೆಂಗಳೂರಿನಲ್ಲಿ 60 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನೂತನ ಸ್ಟೇಡಿಯಂ ನಿರ್ಮಾಣ

Kempegowda Jayanthi: ಬೆಂಗಳೂರಿನಲ್ಲಿ 60 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಂತಹ ನೂತನ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 50 ಎಕರೆ ಜಾಗ ಗುರುತಿಸಲಾಗಿದೆ ಎಂದು ತಿಳಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸುಮಾರು 1 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Nandini Milk Booth: ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲಿನ ಮಳಿಗೆ ತೆರೆಯಲು ಮಂಜೂರಾತಿ ನೀಡಿ; ಬಿಎಂಆರ್‌ಸಿಎಲ್‌ಗೆ ಡಿ.ಕೆ.ಸುರೇಶ್‌ ಮನವಿ

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲಿನ ಮಳಿಗೆ ತೆರೆಯಲು ಮಂಜೂರಾತಿ ನೀಡಿ

DK Suresh: ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲ ವಿಸ್ತರಿಸಲು ಸಹಕಾರ ನೀಡುವಂತೆ ಕೋರಿದ್ದೇನೆ ಎಂದು ಬಮುಲ್‌ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ತಿಳಿಸಿದ್ದಾರೆ.

Electric shock: ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್‌ ತಗುಲಿ ದಂಪತಿ ದಾರುಣ ಸಾವು

ಸೊರಬದಲ್ಲಿ ವಿದ್ಯುತ್‌ ತಗುಲಿ ದಂಪತಿ ದುರ್ಮರಣ

Shivamogga News: ಶಿವಮೊಗ್ಗ ಜಿಲ್ಲೆಯ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಅವಘಡ ನಡೆದಿದೆ. ದಂಪತಿಗೆ ವಿದ್ಯುತ್ ತಗುಲಿದ್ದನ್ನು ಗಮನಿಸಿದ ಪಕ್ಕದ ಮನೆ ವ್ಯಕ್ತಿ ರಕ್ಷಿಸಲು ಮುಂದಾದಾಗ ಅವರಿಗೂ ವಿದ್ಯುತ್ ಶಾಕ್ ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದಂಪತಿ ಕೊನೆಯುಸಿರೆಳೆದಿದ್ದಾರೆ.

Police Recruitment: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಶೇ.15.64 ಹುದ್ದೆಗಳು ಶೀಘ್ರದಲ್ಲೇ ಭರ್ತಿ: ಸಿಎಂ ಸಿದ್ದರಾಮಯ್ಯ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಶೇ.15.64 ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ

Police Recruitment: ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಮಾರುವವರ ಅಂಗಡಿ, ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವ ಅಗತ್ಯ ಬಿದ್ದರೆ ಮಾಡಿ. ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah: ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ ಎಂದ ಸಿಎಂ

ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಕ್ಕೆ ನನಗೂ ಬೇಸರ ಇದೆ ಎಂದ ಸಿಎಂ

CM Siddaramaiah: ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3:50 ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ? ನಾನು 1983 ರಿಂದ ಶಾಸಕನಾಗಿ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದು ಏಕೆ ? ಎಂದು ಪೊಲೀಸ್‌ ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

2025ರ ಪರಿಸರ ಮಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

‘ಸುಸ್ಥಿರ ಸಂಪನ್ಮೂಲ ನಿರ್ವಹಣಾ ಅಭಿಯಾನ’

ಹಸಿರು ಸಾರಿಗೆ ವ್ಯವಸ್ಥೆಗೆ ಪರಿವರ್ತನೆ ಹೊಂದುವುದು, ಸಂಪನ್ಮೂಲ ಪ್ರಧಾನ ವಿಧಾನವನ್ನು ಅಳವಡಿಸಿಕೊಳ್ಳುವುದು, ಪಾಲುದಾರರಲ್ಲಿ ಪರಿಸರ ಜಾಗೃತಿಯನ್ನು ಉಂಟು ಮಾಡುವುದು, ಈ ಮೂಲಕ ಸುಸ್ಥಿರ ಜೀವನ ಪಾಲಿಸುವಂತೆ ಮಾಡುವುದು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲು ನಿರ್ಧಾರ

Karnataka Rains: ಯೆಲ್ಲೋ ಅಲರ್ಟ್‌ ಮುಂದುವರಿಕೆ; ನಾಳೆಯೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ

ನಾಳೆಯೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ

Weather Report: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 21°C ಇರುವ ಸಾಧ್ಯತೆ ಇದೆ.

ಅಪೊಲೊ ಕ್ಯಾನ್ಸರ್ ಸೆಂಟರ್ಸ್‌ ನಿಂದ 'ಕ್ಯಾನ್ವಿನ್' ಆರಂಭ ಕ್ಯಾನ್ಸರ್ ಪ್ರಯಾಣದಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಒಂದು ಬೆಂಬಲ ಗುಂಪು

ಅಪೊಲೊ ಕ್ಯಾನ್ಸರ್ ಸೆಂಟರ್ಸ್‌ ನಿಂದ 'ಕ್ಯಾನ್ವಿನ್' ಆರಂಭ

``ಅಪೊಲೊ ಕ್ಯಾನ್ಸರ್ ಕೇಂದ್ರಗಳಲ್ಲಿ, ಗುಣಪಡಿಸುವುದು ಚಿಕಿತ್ಸೆಯನ್ನು ಮೀರಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ. 'ಕ್ಯಾನ್ವಿನ್' ನೊಂದಿಗೆ, ಧೈರ್ಯವನ್ನು ಹಂಚಿಕೊಳ್ಳುವ, ಧ್ವನಿಗಳನ್ನು ಕೇಳುವ ಮತ್ತು ಸಕಾರಾತ್ಮಕ ಕಥೆಗಳು ಔಷಧಕ್ಕೆ ಬೆಂಬಲವಾಗುವ ಸಮುದಾಯವನ್ನು ನಾವು ರಚಿಸು ತ್ತಿದ್ದೇವೆ. ಇದು ಬ್ರ್ಯಾಂಡ್ ಅಜ್ಞೇಯತಾವಾದಿ ವೇದಿಕೆಯಾಗಿದೆ, ಅಂದರೆ ಇದು ಎಲ್ಲಾ ಕ್ಯಾನ್ಸರ್ ರೋಗಿ ಗಳು, ಆರೈಕೆದಾರರು, ಆಂಕೊಲಾಜಿಸ್ಟ್ಗಳು ಮತ್ತು ಪ್ರೇಕ್ಷಕರಿಗೆ ಮುಕ್ತವಾಗಿದೆ"

ದಸ್ ಸ್ಪೋಕ್ ಇಂಡಿಯಾ ಇಂಕ್ 2025' ವರದಿ ಬಿಡುಗಡೆ ಮಾಡಿದ ಗಿವ್ ಗ್ರ್ಯಾಂಟ್ಸ್‌

ಗಿವ್ ಗ್ರ್ಯಾಂಟ್ಸ್‌ ನಿಂದ ದಸ್ ಸ್ಪೋಕ್ ಇಂಡಿಯಾ ಇಂಕ್ 2025' ವರದಿ ಬಿಡುಗಡೆ

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ʼಸಿಎಸ್‌ಆರ್” ಪ್ರಮುಖರು ಒಟ್ಟಾಗಿ ವಾರ್ಷಿಕವಾಗಿ ₹ 6,800 ಕೋಟಿಗೂ ಹೆಚ್ಚಿನ ಮೊತ್ತದ ʼಸಿಎಸ್‌ಆರ್‌ʼ ನಿಧಿಗಳನ್ನು ನಿರ್ವಹಿಸುತ್ತಾರೆ. ಈ ʼಸಿಎಸ್‌ಆರ್‌ʼ ನಿರ್ವಹಿಸುವವರ ಒಳ ನೋಟಗಳನ್ನು ಸೂಕ್ಷ್ಮ ದತ್ತಾಂಶದೊಂದಿಗೆ ಸಂಯೋಜಿಸುವ ಮೂಲಕ, ʼದಸ್ ಸ್ಪೋಕ್ ಇಂಡಿಯಾ ಇಂಕ್ 2025ʼ ವರದಿಯು ʼ ಸಿಎಸ್‌ಆರ್ʼ ಪಾಲಿಸಬೇಕಾದ ನಿಯಮ ದಿಂದ ವ್ಯವಸ್ಥಿತ ಬದಲಾವಣೆ ಕಂಡಿದೆ

Prajwal Revanna Case: ಅತ್ಯಾಚಾರ ಪ್ರಕರಣ; ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜು.2ಕ್ಕೆ ಮುಂದೂಡಿಕೆ

ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜು.2ಕ್ಕೆ ಮುಂದೂಡಿದ ಹೈಕೋರ್ಟ್‌

Prajwal Revanna Case: ಕೈದಿಗಳು ಮೊದಲು ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಬೇಕು. ಆದರೆ, ಪ್ರಜ್ವಲ್ ರೇವಣ್ಣ ನೇರವಾಗಿ ಹೈಕೋರ್ಟ್‌ಗೆ ಬಂದಿದ್ದಾರೆ. ಇಂತಹ ಅರ್ಜಿ ಪರಿಗಣಿಸಬಾರದು ಎಂದು ಎಸ್‌ಪಿಪಿ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ಕೋರ್ಟ್‌, ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

Nadaprabhu Kempegowda International Award: ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿಮೆ ಮುಡಿಗೇರಿಸಿಕೊಂಡ ಬೆಂಗಳೂರು ವಿಮಾನ ನಿಲ್ದಾಣ

ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿಮೆ ಮುಡಿಗೇರಿಸಿಕೊಂಡ KIA

ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ರಾಜ್ಯದ ದೃಷ್ಟಿಕೋನದಲ್ಲಿ ಆಳವಾಗಿ ಬೇರೂರಿರುವ ಸಂಸ್ಥೆ ಯಾಗಿ, ಜನರನ್ನು ಸಂಪರ್ಕಿಸುವ, ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಮತ್ತು ನಮ್ಮ ರೋಮಾಂಚಕ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ದ್ವಾರವನ್ನು ನಿರ್ಮಿಸುವ ಮೂಲಕ ಕರ್ನಾಟಕದ ಆಕಾಂಕ್ಷೆಗಳಿಗೆ ಕೊಡುಗೆ ನೀಡುವಲ್ಲಿ ನಾವು ಬಹಳ ಹೆಮ್ಮೆಪಡುತ್ತೇವೆ.

Yadgir News: ನೀರು ಕುಡಿಯಲು ಹೋಗಿ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು!

ನೀರು ಕುಡಿಯಲು ಹೋಗಿ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಇಬ್ಬರು ಯುವಕರು

Yadgir News: ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮಾಚನೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ಜಾನುವಾರು ಮೇಯಿಸುವ ವೇಳೆ ನದಿಯಲ್ಲಿ ನೀರು ಕುಡಿಯಲು ಯುವಕರು ಹೋಗಿದ್ದಾಗ ಅವಘಡ ನಡೆದಿದೆ. ಸ್ಥಳದಲ್ಲಿ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Dyson: ಶೇ.75ರಷ್ಟು ಜನ ಸ್ವಚ್ಛತೆಗೆ 1 ಗಂಟೆಗೂ ಹೆಚ್ಚು ಸಮಯ ನೀಡುತ್ತಿದ್ದಾರೆ: ಡೈಸನ್ ಗ್ಲೋಬಲ್ ವೆಟ್ ಕ್ಲೀನಿಂಗ್ ಅಧ್ಯಯನ

ಶೇ.75ರಷ್ಟು ಜನ ಸ್ವಚ್ಛತೆಗೆ 1 ಗಂಟೆಗೂ ಹೆಚ್ಚು ಸಮಯ ನೀಡುತ್ತಿದ್ದಾರೆ

Dyson: ಡೈಸನ್ ಒದ್ದೆ ನೆಲವನ್ನು ಸ್ವಚ್ಛಗೊಳಿಸುವ ಸ್ವಚ್ಛತೆಯ ಮೊದಲ ಡೈಸನ್ ವಾಷ್ ಜಿ1 ಬಿಡುಗಡೆ ಮಾಡಿದೆ. ಒದ್ದೆ ಹಾಗೂ ಒಣ ಕಸವನ್ನು ಒಂದೇ ಸಲಕ್ಕೆ ಹೀರಿಕೊಳ್ಳುವಂತೆ ರೂಪಿಸಿರುವ ಡೈಸನ್ ವಾಷ್ ಜಿ1 ಕಠಿಣ ಕಲೆಗಳು ಮತ್ತು ಕೂದಲು ಕೂಡ ಸಂಗ್ರಹಿಸುವಂತೆ ಹೈಡ್ರೇಷನ್ ಹೀರಿಕೊಳ್ಳುವಿಕೆ ಮತ್ತು ಹೊರತೆಗೆಯುವ ತಂತ್ರಜ್ಞಾನಗಳನ್ನು ಹೊಂದಿದೆ.

Just Married Movie: ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಕರುಣಾಕರ’ ಪಾತ್ರದಲ್ಲಿ ಖ್ಯಾತ ನಟ ಅಚ್ಯುತ್ ಕುಮಾರ್

‘ಜಸ್ಟ್ ಮ್ಯಾರೀಡ್’ ಚಿತ್ರದ ‘ಕರುಣಾಕರ’ ಪಾತ್ರದಲ್ಲಿ ನಟ ಅಚ್ಯುತ್ ಕುಮಾರ್

Just Married Movie: ಸಿ.ಆರ್.ಬಾಬಿ ಅವರೇ ಮೊದಲ ಬಾರಿಗೆ ನಿರ್ದೇಶಿಸಿರುವ, ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ʼಜಸ್ಟ್ ಮ್ಯಾರೀಡ್ʼ ಚಿತ್ರದ ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರು ಅಭಿನಯಿಸಿದ್ದಾರೆ. ಇವರ ಪಾತ್ರ ಪರಿಚಯದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Killer Movie: ದಶಕದ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾದ ತಮಿಳು ನಟ ಎಸ್‌.ಜೆ.ಸೂರ್ಯ; ಪ್ಯಾನ್‌ ಇಂಡಿಯಾ ಸಿನಿಮಾ ಘೋಷಣೆ

ದಶಕದ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾದ ತಮಿಳು ನಟ ಎಸ್‌.ಜೆ.ಸೂರ್ಯ

Killer Movie: ತಮಿಳಿನ ಹೆಸರಾಂತ ನಿರ್ದೇಶಕ ಹಾಗೂ ನಟ ಎಸ್.ಜೆ. ಸೂರ್ಯ ಮತ್ತೆ ಡೈರೆಕ್ಟರ್‌ ಟೋಪಿ ತೊಟ್ಟು ಬಹುಮುಖ್ಯವಾದ ಹೊಸ ಸಿನಿಮಾದ ಮೂಲಕ ವಾಪಸ್ಸಾಗುತ್ತಿದ್ದಾರೆ. ಚಿತ್ರಕ್ಕೆ ‘ಕಿಲ್ಲರ್ʼ ಎಂದು ಶೀರ್ಷಿಕೆ ಇಡಲಾಗಿದೆ. ʼಕಿಲ್ಲರ್ʼ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

Bandi Devara Utsava: 2ನೇ ದಿನವೂ ವಿಜೃಂಭಣೆಯಿಂದ ನಡೆದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ

ವಿಜೃಂಭಣೆಯಿಂದ ನಡೆದ ಬೆಂಗಳೂರಿನ ಐತಿಹಾಸಿಕ ಬಂಡಿದೇವರ ಉತ್ಸವ

Bandi Devara Utsava: ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಐತಿಹಾಸಿಕ ʼಬೆಂಗಳೂರು ಬಂಡಿದೇವರ ಉತ್ಸವʼ ವನ್ನು ನಗರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನ ಸುತ್ತಮುತ್ತಲಿನಿಂದ ಸುಮಾರು 20ಕ್ಕೂ ಹೆಚ್ಚು ಅಲಂಕೃತವಾದ ಎತ್ತಿನಬಂಡಿಗಳು ಕಂಡುಬಂದವು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಇತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Kempegowda Jayanthi: ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಕೆಂಪೇಗೌಡರ 516ನೇ ಜಯಂತಿ ಆಚರಣೆ; ಸಿಎಂ, ಡಿಸಿಎಂ ಭಾಗಿ

ಬೆಂಗಳೂರಲ್ಲಿ ಅದ್ಧೂರಿಯಾಗಿ ಕೆಂಪೇಗೌಡರ 516ನೇ ಜಯಂತಿ ಆಚರಣೆ

Kempegowda Jayanthi: ಬೆಂಗಳೂರಿನ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುಮನಹಳ್ಳಿಯ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಆಚರಣೆ ಜರುಗಿತು.

Murder Case: 3ನೇ ಹೆಂಡ್ತಿಯನ್ನು ಕೊಂದು ಶವವನ್ನು ಲಗೇಜ್‌ ಎಂದು ಬಸ್‌ನಲ್ಲಿ ಹಾಕಿದ್ದ ಭೂಪ; 23 ವರ್ಷಗಳ ಬಳಿಕ ಅರೆಸ್ಟ್‌!

3ನೇ ಪತ್ನಿಯನ್ನು ಕೊಂದಿದ್ದ ಪತಿ 23 ವರ್ಷಗಳ ಬಳಿಕ ಅರೆಸ್ಟ್‌!

Koppal News: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ವ್ಯಕ್ತಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. 2002 ರಲ್ಲಿ ವೈಯಕ್ತಿಕ ಜಗಳಕ್ಕೆ ಪತ್ನಿಯನ್ನು ಕೊಚ್ಚಿ ಕೊಂದಿದ್ದ. ಬಳಿಕ ಗೋಣಿ ಚೀಲದಲ್ಲಿ ಶವ ತುಂಬಿ, ಲಗೇಜ್‌ ಎಂದು ನಂಬಿಸಿ, ಸರ್ಕಾರಿ ಬಸ್‌ನಲ್ಲಿ ಕಳುಹಿಸಿದ್ದ. ತಲೆಮರೆಸಿಕೊಂಡಿದ್ದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.

Phoenix Movie: ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

Phoenix Movie: ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರ ʼಫೀನಿಕ್ಸ್’. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ ʼಫೀನಿಕ್ಸ್ʼ ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ಬ್ಯುಸಿಯಾಗಿದೆ.

Moral Policing: ಕಲಬುರಗಿಯಲ್ಲಿ ನೈತಿಕ ಪೊಲೀಸ್‌ ಗಿರಿ; ಮುಸ್ಲಿಂ ಯುವತಿಗೆ ಬೈಕ್‌ನಲ್ಲಿ ಲಿಫ್ಟ್‌ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಮುಸ್ಲಿಂ ಯುವತಿಗೆ ಲಿಫ್ಟ್‌ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ!

Moral Policing: ಕಲಬುರಗಿ ನಗರದ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್‌ ಆಗಿದ್ದ ಮುಸ್ಲಿಂ ಯುವತಿಯನ್ನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಡ್ರಾಪ್ ಕೊಡಲು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಆತನ ಮೇಲೆ ಮುಸ್ಲಿಂ ಯುವಕ ಗುಂಪು ಹಲ್ಲೆ ನಡೆಸಿದೆ.

CM Siddaramaiah: ಪಕ್ಷದಲ್ಲಿ ಆಂತರಿಕ ಜಗಳವಿಲ್ಲ, ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ: ಸಿಎಂ ಸಿದ್ದರಾಮಯ್ಯ

ಪಕ್ಷದಲ್ಲಿ ಜಗಳವಿಲ್ಲ, ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ: ಸಿಎಂ ಸಿದ್ದರಾಮಯ್ಯ

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು. ನಾಡಪ್ರಭು ಕೆಂಪೇಗೌಡ 516ನೇ ಜಯಂತಿಯ ಅಂಗವಾಗಿ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

Triple Murder Case: ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ

ಕೊಲೆಯಾದ ರೌಡಿಶೀಟರ್‌ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಮಂದಿ ಸೆರೆ

Triple Murder Case: ಕಳೆದ ವರ್ಷ ನವೆಂಬರ್ 12ರಂದು ರೌಡಿಶೀಟರ್ ಸೋಮನ ಕೊಲೆಯಾಗಿತ್ತು. ಮೊನ್ನೆ ಕೊಲೆಯಾದ ಸಿದ್ದಾರೂಢ ಹಾಗೂ ಕುಟುಂಬಸ್ಥರು ಸೋಮನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಸೋಮು ಕೊಲೆ ಬಳಿಕ ಆತನ ಪತ್ನಿ ಭಾಗ್ಯಶ್ರೀ, ತನ್ನ ಗಂಡನ ಶವದ ಮುಂದೆ, ಗಂಡನ ಕೊಲೆಗೆ ಪ್ರತೀಕಾರ ತೀರುವ ತನಕ ತನ್ನ ಕೊರಳಿನಲ್ಲಿನ ಮಾಂಗಲ್ಯ ಸೂತ್ರ ತೆಗೆಯುವುದಿಲ್ಲ ಎಂದು ಶಪಥ ಮಾಡಿದ್ದಳು.

Robbery Case: ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ

ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ

Robbery Case: ತಮ್ಮ ಹೊಸ ಕಂಪನಿಗೆ ಯಂತ್ರ ಖರೀದಿಗೆಂದು ಭಾರಿ ಮೊತ್ತದ ಹಣವನ್ನು ವಿದೇಶಕ್ಕೆ ಕಳಿಸಲು ಡಾಲರ್‌ಗೆ ಕನ್‌ವರ್ಟ್‌ ಮಾಡಲು ಬಂದಿದ್ದಾಗ ಖದೀಮರು ಚಾಕು ತೋರಿಸಿ ನಗದನ್ನು ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎಂಬವರು ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ.

Triathlon: ಟ್ರಯಾಥ್ಲಾನ್​ನಲ್ಲಿ ಕರ್ನಾಟಕದ ಶ್ರೀನಿವಾಸ್​ ಪ್ರಭು ಸಾಧನೆ

ಟ್ರಯಾಥ್ಲಾನ್​ನಲ್ಲಿ ಕರ್ನಾಟಕದ ಶ್ರೀನಿವಾಸ್​ ಪ್ರಭು ಸಾಧನೆ

ಟ್ರಯಥ್ಲಾನ್ ಎನ್ನುವುದು ಈಜು, ಸೈಕ್ಲಿಂಗ್ ಮತ್ತು ಓಟವನ್ನು ಒಳಗೊಂಡ ಕ್ರೀಡೆಯಾಗಿದೆ. ಈ ಮೂರು ವಿಭಾಗಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದವರನ್ನು "ಐರನ್‌ ಮ್ಯಾನ್‌" ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಆಯೋಜಿಸುವ ಟ್ರಯಥ್ಲಾನ್‌ ಸ್ಪರ್ಧೆಗಳಲ್ಲಿ 20 ಕಿ.ಮೀ. ಸೈಕ್ಲಿಂಗ್‌, 5 ಕಿ.ಮೀ. ಓಟ, 750 ಮೀಟರ್‌ ಈಜಬೇಕಾಗುತ್ತದೆ.