ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

MLA K.H.Puttaswamy Gowda: ನನ್ನನ್ನು ನಂಬಿ ಬರುವವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಪುಟ್ಟಸ್ವಾಮಿಗೌಡ ಹೇಳಿಕೆ

ನನ್ನನ್ನು ನಂಬಿ ಬರುವವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ

ತಾಲೂಕಿನಲ್ಲಿ ಯುವಕರಿಗೆ ರಾಜಕೀಯ ಶಕ್ತಿ ಮತ್ತು ವಿದ್ಯಾವಂತ ಯುವಕರಿಗೆ  ಹಲವಾರು ಉದ್ಯೋಗದ  ಅವಕಾಶಗಳನ್ನು ಸರ್ಕಾರ ಮತ್ತು ನನ್ನ ಸಂಸ್ಥೆಯ ಮೂಲಕ ಕಲ್ಪಿಸಿ ಕೊಡ ಲಾಗುತ್ತಿದೆ. ಆದ್ದರಿಂದ ಪಕ್ಷಾತೀತವಾಗಿ ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಕ್ರಿಯಾಶೀಲ ಯುವಕರ ಸೇರ್ಪಡೆಯಿಂದಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ

MLA S.R.Srinivas: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಭೂಮಿ ಪೂಜೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ

ತಾಲೂಕಿನ ನಾನಾ ಭಾಗಗಳಾದ ವಡ್ಡರಹಟ್ಟಿ, ಕಾಳೇನಹಳ್ಳಿ, ಕೆಜಿ ಟೆಂಪಲ್, ದೊಡ್ಡ ಕಟ್ಟಿ ಗೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 2.95 ಕೋಟಿ ವೆಚ್ಚದ ಸಿ.ಸಿ. ರಸ್ತೆ ಅಭಿವೃದ್ಧಿ ಹಾಗೂ ಉಪ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಮುಗಿದಿದ್ದು ಈಗ ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ದರವನ್ನು ಹೆಚ್ಚಿಗೆ ಮಾಡುತ್ತದೆ.

ಆರ್ಥಿಕ ತಜ್ಞರಾಗಿ ರಾಜ್ಯವನ್ನು ಸಿದ್ದರಾಮಯ್ಯ ಅಧೋಗತಿಗೆ ತಳ್ಳಿದ್ದಾರೆ: ಜೋಶಿ ಕಿಡಿ

ಆರ್ಥಿಕ ತಜ್ಞರಾಗಿ ರಾಜ್ಯವನ್ನು ಸಿದ್ದರಾಮಯ್ಯ ಅಧೋಗತಿಗೆ ತಳ್ಳಿದ್ದಾರೆ

Pralhad Joshi: "ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಸುಳ್ಳು ಮತ್ತು ದ್ವೇಷದಿಂದ ಕೂಡಿದೆ" ಎಂದ ಸಿಎಂಗೆ ಖಾರವಾಗಿಯೇ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಮುನ್ನ ಸಿದ್ದರಾಮಯ್ಯ ತಮ್ಮ ಸರ್ಕಾರದ ಅಡಳಿತ ವೈಫಲ್ಯ, ಅಧಿಕಾರಕ್ಕಾಗಿ ಕಿತ್ತಾಟ ಬಗ್ಗೆ ಉತ್ತರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

Transport Workers Salary Hike: ರಾಜ್ಯ ಸಾರಿಗೆ ನೌಕರರಿಗೆ ಸಿಹಿ ಸುದ್ದಿ; ಶೇ.12.5 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ

ರಾಜ್ಯ ಸಾರಿಗೆ ನೌಕರರ ಮೂಲ ವೇತನ ಶೇ.12.5 ಹೆಚ್ಚಿಸಿ ಸರ್ಕಾರ ಆದೇಶ

ಕಳೆದ ಕೆಲವು ವರ್ಷಗಳಿಂದ ಸಾರಿಗೆ ನೌಕರರು ವೇತನ ಹೆಚ್ಚಳಕ್ಕಾಗಿ ನಿರಂತರವಾಗಿ ಒತ್ತಾಯ ಮಾಡುತ್ತಿದ್ದರು. ಪರಿಷ್ಕೃತ ವೇತನವು 2026 ಜುಲೈ 1ರ ವೇತನದಲ್ಲಿ ಅನುಷ್ಠಾನಗೊಳಿಸಿ ಪಾವತಿಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಶೇ. 25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸಾರಿಗೆ ಪಟ್ಟು ಹಿಡಿದಿದ್ದಾರೆ.

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 11 ತಿಂಗಳಿಂದ ನಡೆದ ನಿರ್ದಾಕ್ಷಿಣ್ಯ ಕಾರ್ಯಾಚರಣೆ ಹಾಗೂ ಬೃಹತ್ ಜಾಗೃತಿ ಅಭಿಯಾನ ಗಳು ಡ್ರಗ್ ಮಾಫಿಯಾಕ್ಕೆ ಒಂದು ಲೆಕ್ಕದಲ್ಲಿ ಮರಣಶಾಸನ ಭೀತಿ ಮೂಡಿಸಿದೆ. ಕೇವಲ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗದ ಈ ಸಮರ, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಸಾಮಾಜಿಕ ಚಳವಳಿಯಾಗಿ ರೂಪಾಂತರಗೊಂಡಿದೆ.

1 ಕೋಟಿ ಮೌಲ್ಯದ 2 ತಲೆ ಹಾವು ಮಾರಾಟಕ್ಕೆ ಯತ್ನ; ಚಿಕ್ಕಮಗಳೂರಿನಲ್ಲಿ ಐವರ ಬಂಧನ

1 ಕೋಟಿ ಮೌಲ್ಯದ 2 ತಲೆ ಹಾವು ಮಾರಾಟಕ್ಕೆ ಯತ್ನ; ಐವರು ಅರೆ‌ಸ್ಟ್‌

ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಡಾವಣೆಯಲ್ಲಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ತಲೆಯ ಹಾವು, 1 ಸ್ವಿಫ್ಟ್ ಕಾರು, 1 ವ್ಯಾಗನರ್ ಕಾರು ಹಾಗೂ 5 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಭಾರತದ ಟೆಕ್ ಉದ್ಯೋಗಿಗಳ ವೇತನದಲ್ಲಿ ಹೆಚ್ಚುತ್ತಿದೆ ಅಂತರ: ಕೃತಕ ಬುದ್ಧಿಮತ್ತೆ (AI) ಕೌಶಲ್ಯಗಳು ಪ್ರಮುಖ ಕಾರಣ

ಭಾರತದ ಟೆಕ್ ಉದ್ಯೋಗಿಗಳ ವೇತನದಲ್ಲಿ ಹೆಚ್ಚುತ್ತಿದೆ ಅಂತರ

ಪ್ರಮುಖ ಐಐಎಂ ಗಳು ಮತ್ತು ಭಾರತದ ಉನ್ನತ ಬಿಸಿನೆಸ್ ಹಾಗೂ ಟೆಕ್ನಾಲಜಿ ಸಂಸ್ಥೆಗಳ ಪ್ಲೇಸ್‌ಮೆಂಟ್ ಮೌಲ್ಯಮಾಪನಗಳನ್ನು ನಡೆಸುವ ಸ್ವತಂತ್ರ ಸಂಶೋಧನಾ ಸಂಸ್ಥೆ 'ಬಿ2ಕೆ ಅನಾಲಿಟಿಕ್ಸ್' ನಡೆಸಿದ ತೃತೀಯ-ಪಕ್ಷದ ಮೌಲ್ಯಮಾಪನವು ಒಂದು ಸ್ಪಷ್ಟ ಫಲಿತಾಂಶವನ್ನು ನೀಡಿದೆ.

ಮೂತ್ರ ವಿಸರ್ಜನೆ ತಡೆಗೆ ಬಳಸಿದ ಕನ್ನಡಿ ಅಸ್ತ್ರವೂ ವಿಫಲ; ಮೈಸೂರಲ್ಲಿ ಅಳವಡಿಸಿದ ಕನ್ನಡಿ ಎದುರೇ ಮೂತ್ರ: ಇಂತ ಜನಗಳು ಎಲ್ಲಿ ಸಿಗ್ತಾರೆ ಎಂದು ಕಾಲೆಳೆದ ನೆಟ್ಟಿಗರು

ಮೂತ್ರ ವಿಸರ್ಜನೆ ತಡೆಗೆ 'ಕನ್ನಡಿ' ಅಸ್ತ್ರ ಬಳಸಿದರೂ ಹಾವಳಿ ನಿಂತಿಲ್ಲ

Viral Video: ಸ್ವಚ್ಛ ನಗರ ಮೈಸೂರಿನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮೈಸೂರು ಮಹಾನಗರ ಪಾಲಿಕೆ ವಿಶಿಷ್ಟ ಪ್ರಯೋಗ ಜಾರಿ ಮಾಡಿದೆ. ಸಾರ್ವಜನಿಕ ಮೂತ್ರ ವಿಸರ್ಜನೆಯನ್ನು ತಡೆಯಲು 9.5 ಲಕ್ಷ ರುಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆಗೆ ಸ್ಟೇನ್‌ಲೆಸ್ ಸ್ಟೀಲ್ ಕನ್ನಡಿ ಫಲಕ ಅಳವಡಿಸಿದೆ. ಆದರೆ ಈ ಕ್ರಮ ಜಾರಿಗೆ ಬಂದ ಕೆಲವು ದಿನಗಳಲ್ಲೇ ಕನ್ನಡಿಯ ಮುಂದೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜಿಸುತ್ತಿರುವುದು ಕಂಡು ಬಂದಿದೆ.

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ: 90 ಸಾವಿರ ಸಿಬ್ಬಂದಿಗೆ ಉತ್ಕೃಷ್ಟ ಆರೋಗ್ಯ ವಿಮೆ ಸೌಲಭ್ಯ

ಅಮೆಜಾನ್ ಡೆಲಿವರಿ ಸಿಬ್ಬಂದಿಗಳಿಗೆ ಭರ್ಜರಿ ಕೊಡುಗೆ

ಅಮೆಜಾನ್ ಇಂಡಿಯಾವು ಥರ್ಡ್ ಪಾರ್ಟಿ ವಿಮಾ ಸಂಸ್ಥೆಯ ಸಹಯೋಗದೊಂದಿಗೆ ದೇಶಾ ದ್ಯಂತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು, ಹತ್ತಾರು ಸಾವಿರ ವಿತರಣಾ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯವನ್ನು ಒದಗಿಸಿದೆ. ಈ ವೈದ್ಯಕೀಯ ಶಿಬಿರಗಳು ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಬಿಎಂಐ ಮೌಲ್ಯಮಾಪನ ಮತ್ತು ವೈದ್ಯರ ಸಮಾಲೋಚನೆಯಂತಹ ಅತ್ಯಗತ್ಯ ಆರೋಗ್ಯ ಸೇವೆಗಳನ್ನು ನೀಡುತ್ತವೆ.

ಮಾರುಕಟ್ಟೆ ಏರಿಳಿತದ ನಡುವೆಯೂ ಭರ್ಜರಿ ಲಾಭ ದಾಖಲಿಸಿದ 'ನುವಾಮಾ', ₹14 ಲಾಭಾಂಶ ಘೋಷಣೆ

ಮಾರುಕಟ್ಟೆ ಏರಿಳಿತದ ನಡುವೆಯೂ ಭರ್ಜರಿ ಲಾಭ ದಾಖಲಿಸಿದ 'ನುವಾಮಾ'

ವೆಲ್ತ್ ಮ್ಯಾನೇಜ್‌ಮೆಂಟ್ ವಿಭಾಗದ ಆದಾಯವು 2026ನೇ ಆರ್ಥಿಕ ವರ್ಷದಲ್ಲಿ ಶೇ. 20 ರಷ್ಟು ಹೆಚ್ಚಾಗಿ 1,718 ಕೋಟಿ ರೂ. ತಲುಪಿದೆ. ಇದು ಕಂಪನಿಯ ಅತಿ ದೊಡ್ಡ ವಿಭಾಗ ವಾಗಿದ್ದು, ಇದರಲ್ಲಿ 'ನುವಾಮಾ ವೆಲ್ತ್' ಮತ್ತು 'ನುವಾಮಾ ಪ್ರೈವೇಟ್' ಎಂಬ ಎರಡು ಉಪ-ವಿಭಾಗ ಗಳಿವೆ. ಎರಡೂ ವಿಭಾಗಗಳೂ ಉತ್ತಮ ಆದಾಯ ತಂದಿದ್ದು, ಗ್ರಾಹಕರ ಆಸ್ತಿ ಮೌಲ್ಯವು 3,13,787 ಕೋಟಿ ರೂ.ಗೆ ಏರಿಕೆ ಕಂಡಿದೆ.

ಯು.ಕೆ.ಯ ಪ್ರಮುಖ ಬ್ರಾಂಡ್ ನೆಕ್ಸ್ಟ್ ಅಂತಾರಾಷ್ಟ್ರೀಯ ಫ್ಯಾಷನ್ ಗೆ ಬೆಂಗಳೂರಿನ ಬೇಡಿಕೆಗೆ ಸ್ಪಂದನೆ, ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಹೊಸ ಮಳಿಗೆಗಳ ಪ್ರಾರಂಭ

ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಹೊಸ ಮಳಿಗೆಗಳ ಪ್ರಾರಂಭ

ಯು.ಕೆ. ಪ್ರಮುಖ ಫ್ಯಾಷನ್ ಬ್ರಾಂಡ್ ನೆಕ್ಸ್ಟ್ ಬೆಂಗಳೂರಿನ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಹೊಸ ಮಳಿಗೆಗಳ ಪ್ರಾರಂಭವನ್ನು ಪ್ರಕಟಿಸಿದ್ದು ಇದು ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿದೆ. ಈ ಹೊಸ ಮಳಿಗೆಗಳ ಮೂಲಕ ಬೆಂಗಳೂರಿನಲ್ಲಿ ಗ್ರಾಹಕರು ಈ ಪ್ರಮುಖ ಬ್ರಿಟಿಷ್ ಬ್ರಾಂಡ್ ಅನುಭವ ಪಡೆದುಕೊಳ್ಳುವ ಅವಕಾಶ ಪಡೆಯುತ್ತಾರೆ.

Bowring Hospital tragedy: ಬೌರಿಂಗ್ ಆಸ್ಪತ್ರೆ ದುರಂತ; ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ ಬೆಂಗಳೂರು ಡಿಸಿ

ಬೌರಿಂಗ್ ಆಸ್ಪತ್ರೆ ದುರಂತ; ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ ಡಿಸಿ

ಏಪ್ರಿಲ್‌ 29ರಂದು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಕುಸಿದು ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದರು. ಘಟನೆ ಬಳಿಕ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದೀಗ ಬೆಂಗಳೂರು ನಗರ ಡಿಸಿ ಜಗದೀಶ ಅವರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.

ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: NCRB ವರದಿ ಉಲ್ಲೇಖಿಸಿ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ

ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: ನಿಖಿಲ್

Nikhil Kumaraswamy: ʼಅಹಿಂದʼ ಎಂಬುದು ನಿಜವಾದ ಬದ್ಧತೆಯಲ್ಲ, ಕೇವಲ ಚುನಾವಣಾ ಘೋಷಣೆ ಎಂಬುದು ಈಗ ಸ್ಪಷ್ಟವಾಗಿದೆ. ದಲಿತರ ಮೇಲಿನ ಪ್ರತಿಯೊಂದು ಹಲ್ಲೆಗೂ ಈ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

Kodi Mutt swamiji: ದೇಶದಲ್ಲಿ ಅಕಾಲಿಕ ಮಳೆಯಿಂದ ಜಲ ಕಂಟಕ: ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ!

ಅಕಾಲಿಕ ಮಳೆಯಿಂದ ಜಲ ಕಂಟಕ: ಕೋಡಿಮಠ ಶ್ರೀ ಸ್ಫೋಟಕ ಭವಿಷ್ಯ!

Shivamogga News: ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಮಳೆಯಿಂದಾಗಿ ಜಲಕಂಟಕ ಎದುರಾಗಲಿದೆ. ಮಳೆ, ಗುಡುಗು ಮತ್ತು ಸಿಡಿಲಿನ ಆರ್ಭಟದಿಂದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೋಡಿ ಮಠದ ಸ್ವಾಮೀಜಿ ತಿಳಿಸಿದ್ದಾರೆ.

ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ; ಆರೋಪಿಗೆ ತಮಿಳುನಾಡು ನಂಟಿನ ಶಂಕೆ

ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ; NIA ತನಿಖೆ

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಉಂಟಾಗಿರುವ ಭದ್ರತಾ ಲೋಪವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಕರಣದ ಬೆನ್ನತ್ತಿವೆ.

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೆಡಿಯಾಯ್ತು ಪ್ಲಾನ್‌

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೆಡಿಯಾಯ್ತು ಪ್ಲಾನ್‌

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಗುರುತಿಸಿರುವ 2 ಬೃಹತ್ ಜಾಗಗಳ ವಿಲೀನ ಮಾಡಿ ಮಧ್ಯದಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ವಿಮಾನ ನಿಲ್ದಾಣಕ್ಕೆ ಮೊದಲಿಗೆ ಸರ್ಕಾರ ಮೂರು ಜಾಗಗಳನ್ನು ಪಟ್ಟಿ ಮಾಡಿತ್ತು.

ಸ್ಕಿನ್ -ಹೌಸ್ ಆಫ್ ಟೈಟಾನ್‌ ಸಂಸ್ಥೆಯಿಂದ ಅಮಾಲ್ಫಿ ರಿವೇರಿಯಾ ಎಂಬ ಹೊಸ ಯುನಿಸೆಕ್ಸ್ ಸುಗಂಧ ದ್ರವ್ಯದ ಬಿಡುಗಡೆ

ಹೊಸ ಯುನಿಸೆಕ್ಸ್ ಸುಗಂಧ ದ್ರವ್ಯದ ಬಿಡುಗಡೆ

ಎಲ್ಲಾ ಲಿಂಗದವರು ಬಳಸಬಹುದಾದ ಸುಗಂಧ ದ್ರವ್ಯಗಳ ವಿಭಾಗಕ್ಕೆ ಈ ಮೂಲಕ ಬ್ರ್ಯಾಂಡ್‌ ಚೊಚ್ಚಲ ಪ್ರವೇಶವನ್ನು ಮಾಡಿದೆ. ಅಮಾಲ್ಫಿ ರಿವೇರಿಯಾ ಸುಗಂಧ ದ್ರವ್ಯವು ಸೂರ್ಯ ಹೆಚ್ಚು ಧಗಧಗಿಸುವ ಕರಾವಳಿಗಳು, ಸಿಟ್ರಸ್ ಮತ್ತು ಸಮುದ್ರದ ಉಪ್ಪಿನ ರುಚಿಯ ತಂಗಾಳಿ ಹಾಗೂ ಸಾಗರದ ಅಲೆಗಳ ಶಾಂತ ಲಯಗಳ ಸ್ಫೂರ್ತಿಯಿಂದ ರಚಿತಗೊಂಡಿದೆ. ಇದು ಒಂದು ಪರಿಪೂರ್ಣ ಬೇಸಿಗೆ ರಜೆಯ ಅನುಭೂತಿ ನೀಡುತ್ತದೆ.

Land Records: ಭೂದಾಖಲೆಗಳ ನಕಲು ವಿತರಣೆ ಶುಲ್ಕ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಭೂದಾಖಲೆಗಳ ನಕಲು ವಿತರಣೆ ಶುಲ್ಕ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

ಭೂಮಾಪನ ಇಲಾಖೆಯಲ್ಲಿ ನೀಡಲಾಗುವ ದಾಖಲೆಗಳ ನಕಲುಗಳಿಗೆ ಏಕರೂಪದ ನಕಲು ಶುಲ್ಕ ಪಾವತಿ ಮಾಡಿಸಿಕೊಳ್ಳಲು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಇಲಾಖೆಯ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಪರಿಷ್ಕೃತ ದರಗಳಂತೆ ಯಾವ ನಮೂನೆಗೆ ಎಷ್ಟು ದರ ವಸೂಲು ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

CHIMUL: ಕ್ಷೀರ ಸಂಜೀವಿನ ಮೂಲಕ ಹಸು ಖರೀದಿಗೆ 45 ಸಾವಿರ ಬಡ್ಡಿರಹಿತ ಸಾಲ : ಭರಣಿ ವೆಂಕಟೇಶ್

ಕ್ಷೀರ ಸಂಜೀವಿನ ಮೂಲಕ ಹಸು ಖರೀದಿಗೆ 45 ಸಾವಿರ ಬಡ್ಡಿರಹಿತ ಸಾಲ

ಕರ್ನಾಟಕ ಸರಕಾರ ಮತ್ತು ಕೆ.ಎಂ.ಎಫ್ ಜಂಟಿಯಾಗಿ ಅನುಷ್ಠಾನಗೊಳಿಸಿರುವ ಕ್ಷೀರ ಸಂಜೀವಿನಿ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದ ಬಡ ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೊಡಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸುವುದು. ಅವರ ಜೀವನೋಪಾಯವನ್ನು ಸುಧಾರಿಸುವುದೇ ಆಗಿದೆ.

MP Dr.K.Sudhakar: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಿಜವಾದ "ಗ್ಯಾರೆಂಟಿ" : ಸಂಸದ ಡಾ.ಕೆ.ಸುಧಾಕರ್ ಅಭಿಮತ

ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಿಜವಾದ "ಗ್ಯಾರೆಂಟಿ"

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್‌ಆರ್‌ಎಲ್‌ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ.

Belagavi News: ಜನ್ಮದಿನದಂದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಜನ್ಮದಿನದಂದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಜನ್ಮದಿನದಂದೇ ವಸತಿ ನಿಲಯದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ ಅಜಂ ನಗರದಲ್ಲಿರುವ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸೋಮವಾರ ‌ನಡೆದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲುಗಳ ಆರೋಗ್ಯವೇ ದೇಹಾರೋಗ್ಯದ ಭಾಗ್ಯ : ರಾಮಯ್ಯ ಆಸ್ಪತ್ರೆ ಡೆಂಟಲ್ ವಿಭಾಗದ ಡೀನ್ ಡಾ.ಕವಿತಾ ಪ್ರಸಾದ್

ಹಲ್ಲುಗಳ ಆರೋಗ್ಯವೇ ದೇಹಾರೋಗ್ಯದ ಭಾಗ್ಯ

ಹಲ್ಲುಗಳ ಆರೋಗ್ಯದ ಬಗ್ಗೆ ಬಹಳಷ್ಟು ಬಾರಿ ಕಡೆಗಣಿಸಲಾಗುತ್ತದೆ. ಹಲ್ಲಿನ ಹುಳುಕು, ವಸಡಿನ ರೋಗಗಳು, ಬಾಯಿಯ ಕ್ಯಾನ್ಸರ್ ಮುಂತಾದ ಸಾಮಾನ್ಯ ಬಾಯಿಯ ಕಾಯಿಲೆಗಳು, ಅವುಗಳ ಕಾರಣಗಳು, ಪ್ರಾರಂಭಿಕ ಲಕ್ಷಣಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ಅರಿವು ಇದ್ದರೆ ಈ ಕಾಯಿಲೆಗಳನ್ನು ಬಹುಪಾಲು ತಡೆಗಟ್ಟಬಹುದಾಗಿದೆ.

MLC Shashil G Namoshi: ಒಡ ಹುಟ್ಟಿದ ಸಹೋದರನಿಗೇ ವಂಚಿಸಿದ್ರಾ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ?

ಒಡ ಹುಟ್ಟಿದ ಸಹೋದರನಿಗೇ ವಂಚಿಸಿದ್ರಾ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ?

ಎಂಎಲ್‌ಸಿ ಶಶೀಲ್ ನಮೋಶಿ ಅವರು ನಮ್ಮ ಮನೆಗೆ ನಮ್ಮನ್ನೇ ಹೋಗಲು ಬಿಡುತ್ತಿಲ್ಲ ಎಂದು ಸಹೋದರ ಅನಿಲ್‌ ನಮೋಶಿ ಕುಟುಂಬ ಆರೋಪಿಸಿದೆ. ಅಲ್ಲದೇ ತಮಗೆ ನ್ಯಾಯ ಸಿಗಬೇಕೆಂದು ಮನೆಯ ಮುಂಭಾಗದಲ್ಲೇ ವಸ್ತುಗಳನ್ನು ಇಟ್ಟುಕೊಂಡು ಅನಿಲ್‌ ನಮೋಶಿ ಕುಟುಂಬ ಧರಣಿ ನಡೆಸಿದೆ.

Pregnant dies due to doctor's negligence: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ಚಿಂತಾಮಣಿಯಲ್ಲಿ ತಡರಾತ್ರಿ ಹೈಡ್ರಾಮಾ!

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ಚಿಂತಾಮಣಿಯಲ್ಲಿ ಹೈಡ್ರಾಮಾ!

ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ಓಬಳೇಶ್ ಎಂಬುವವರ ಪತ್ನಿ ನರ್ಮದಾ (24)ಮೃತಪಟ್ಟ ದುರ್ದೈವಿ. ಎರಡು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರ್ಮದಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ (ಮಕ್ಕಳಾಗದಂತೆ ಆಪರೇಷನ್)ಒಳಗಾಗಿದ್ದ ಅವರು, ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದರು.

Loading...