ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

BY Vijayendra: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಣ: ಬಿ.ವೈ. ವಿಜಯೇಂದ್ರ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಣ: ಬಿ.ವೈ. ವಿಜಯೇಂದ್ರ

BY Vijayendra: ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳನ್ನು ಇವತ್ತು ಕೂಡ ಭೇಟಿ ಮಾಡಿದ್ದೇವೆ. ಅವರ ವಿಚಾರಗಳನ್ನು ತಿಳಿದುಕೊಂಡಿದ್ದೇವೆ. ಇವತ್ತು ಬಂದಿರುವ ಉದ್ದೇಶವೇ ಅದು. ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲಿದ್ದೇವೆ ಎಂದು ಬಿ.ವೈ. ವಿಜಯೇಂದ್ರ ಭರವಸೆ ನೀಡಿದ್ದಾರೆ.

8 ಕೋಟಿ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸುವ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ

8 ಕೋಟಿ ಮಕ್ಕಳಿಗೆ ರಾಗಿ ಮಾಲ್ಟ್ ವಿತರಿಸುವ ಗುರಿ

Sadhguru Shri Madhusudan Sai: ಮುಂದಿನ ದಿನಗಳಲ್ಲಿ ಆರರಿಂದ ಎಂಟು ಕೋಟಿ ಮಕ್ಕಳಿಗೆ ವಿತರಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರತಿಯೊಬ್ಬ ತಂದೆ ತಾಯಂದಿರು ಮಕ್ಕಳಿಗೆ ವಿಷಮುಕ್ತ ಆಹಾರವನ್ನು ನೀಡಲು ಪ್ರತಿಜ್ಞೆ ಮಾಡೋಣ ಎಂದು ಶ್ರೀ ಸತ್ಯಸಾಯಿ ಆಶ್ರಮದ ಸದ್ಗುರು ಶ್ರೀ ಮಧುಸೂದನ ಸಾಯಿ ಸ್ವಾಮೀಜಿ ತಿಳಿಸಿದ್ದಾರೆ.

Karnataka Budget 2026: ನಾಳೆ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ; ಏನೆಲ್ಲಾ ನಿರೀಕ್ಷೆಗಳಿವೆ?

ನಾಳೆ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

ರಾಜ್ಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ. ಜತೆಗೆ, ದೀರ್ಘ ಕಾಲದ ಜನಪರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ, ಸಹಕಾರ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಜೆಟ್‌ ಬಗ್ಗೆ ಭಾರೀ ನಿರೀಕ್ಷೆಗಳಿವೆ.

Chikkaballapur News: ಮಾ.24 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

ಮಾ.24 ರಿಂದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ

ಹವಾಮಾನ ಬದಲಾವಣೆ ಮತ್ತು ನೀರಿನ ಭದ್ರತೆಯ ಹಿನ್ನೆಲೆಯಲ್ಲಿ ಸರೋವರ ಮತ್ತು ಜಲಾಶಯಗಳ ಸಂರಕ್ಷಣೆಗೆ ಸುಸ್ಥಿರ ಹಾಗೂ ಮಾಹಿತಿ-ಆಧಾರಿತ ಪರಿಹಾರಗಳನ್ನು ಚರ್ಚಿಸಲು ಈ ಸಮ್ಮೇಳನವು ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಾಪಕರು, ನೀತಿ ನಿರೂಪಕರು ಮತ್ತು ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.

ನನ್ನ ಮಗನ ಮೇಲೆ ಆತನ ಕಣ್ಣು ಏಕೆ ಬಿತ್ತೋ ಅರ್ಥವಾಗಿಲ್ಲ: ತ್ರಿಶಾಲ್‌ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌

ಮಗನ ಆತ್ಮಹತ್ಯೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಭಾವುಕ ಪೋಸ್ಟ್‌

ಡೆತ್‌ನೋಟ್‌ನಲ್ಲಿ "ನನ್ನನ್ನು ಕ್ಷಮಿಸು ಅಮ್ಮ ನಾನು ಸಾಯ್ತಾ ಇದ್ದೀನಿ, ನನಗೆ ತುಂಬಾ ಚಿತ್ರಹಿಂಸೆ ಮಾಡಿದ್ದಾರೆ, ನನ್ನ ಕನಸುಗಳೆಲ್ಲ ನುಚ್ಚುನೂರಾಗಿವೆ, ಆ ಇಬ್ಬರೇ ನನ್ನ ಸಾವಿಗೆ ಕಾರಣ. ಅವರನ್ನು ಬಿಡಬೇಡ ಜೈಲಿಗೆ ಹಾಕಿಸು ಎಂದು ತಮ್ಮ ಮಗ ತ್ರಿಶಾಲ್‌ ಡೆತ್‌ನೋಟ್‌ನಲ್ಲಿ ಬರೆದಿದ್ದ ಎಂದು ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ತಿಳಿಸಿದ್ದಾರೆ.

Hindu Samavesha: ಮಾ.6ರಂದು ಇಂಡಿಯಲ್ಲಿ ವಿರಾಟ ಹಿಂದು ಸಮಾವೇಶ

ಮಾ.6ರಂದು ಇಂಡಿಯಲ್ಲಿ ವಿರಾಟ ಹಿಂದು ಸಮಾವೇಶ

ಬೃಹತ್ ಹಿಂದು ಸಮಾವೇಶಕ್ಕೆ ಜಮಖಂಡಿ ತಾಲೂಕು ಮೈಗೂರಿನ ಪೂಜ್ಯ ಗುರುಪ್ರಸಾದ ಶ್ರೀಗಳು ಸಾನಿದ್ಯ, ಜೇವರ್ಗಿ ಅಂದೂಲ ಶ್ರೀ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರರು ಸಾನಿದ್ಯ, ಹಿರೇಮಣೂರದ ಶ್ರೀ ವೇದೇಶ ತೀರ್ಥ ವಿದ್ಯಾಪೀಠದ ಉಪಕುಲಪತಿ ಪಂಡಿತ ಶ್ರೀ ಸರ್ವೇಶಚಾರ್ಯ ಮತ್ತು ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ಶ್ರೀ ರಾಘವೇಂದ್ರ ಕಾಗವಾಡ ವಕ್ತಾರರಾಗಿ ಆಗಮಿಸುವರು

Karnataka Budget: ಕೇಂದ್ರ ಹಣ ಕೊಡದಿದ್ದರೆ ಕೊರತೆ ಬಜೆಟ್

ಕೇಂದ್ರ ಹಣ ಕೊಡದಿದ್ದರೆ ಕೊರತೆ ಬಜೆಟ್

ಒಂದು ವೇಳೆ ಕೇಂದ್ರದಿಂದ ಸೂಕ್ತ ಅನುದಾನ ಹಂಚಿಕೆಯಾಗದಿದ್ದರೆ, ರಾಜ್ಯ ಸರಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರಕಾರ ಕೈಗೊಂಡಿ ರುವ ಜಿಎಸ್‌ಟಿ ಇಳಿಕೆಯಿಂದ ಸರಕಾರಕ್ಕೆ ಬರಬೇಕಿದ್ದ ಅನುದಾನದಲ್ಲಿ ಸುಮಾರು 9000 ಕೋಟಿ ರು. ಖೋತಾ ಆಗಲಿದೆ.

Gubbi News: ವಿಜೃಂಭಣೆಯಿಂದ ಜರುಗಿದ ಗುಬ್ಬಿಯಪ್ಪನ ಬೆಳ್ಳಿ ಪಲ್ಲಕ್ಕಿ ಉತ್ಸವ

ವಿಜೃಂಭಣೆಯಿಂದ ಜರುಗಿದ ಗುಬ್ಬಿಯಪ್ಪನ ಬೆಳ್ಳಿ ಪಲ್ಲಕ್ಕಿ ಉತ್ಸವ

ದೇವಾಲಯ ಸೇರಿದಂತೆ ಸುತ್ತಲಿನ ಆವರಣ ದೀಪಾಲಂಕಾರ ಎಲ್ಲರನ್ನೂ ಸೆಳೆದಿತ್ತು. ಮಕ್ಕಳ ಆಟಿಕೆ, ವಿವಿಧ ತಿಂಡಿ ತಿನಿಸು, ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಜೊತೆಗೆ ಯಳವಯ್ಯ ತೋಟದ ಯುವಕರು ಆಯೋಜಿಸಿದ್ದ ಗುಬ್ಬಿ ಉತ್ಸವ ಕಾರ್ಯಕ್ರಮ ಅದ್ದೂರಿ ಯಾಗಿ ನಡೆಯಿತು

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕರಣ​: ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​​ ಮತ್ತು ಬಿ.ಆರ್.​ ನಾಯ್ಡು ವಿರುದ್ಧ ಎಫ್​ಐಆರ್​​ ದಾಖಲಾಗಿತ್ತು. ಅರ್ಜಿ ಪರಿಶೀಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ತನಿಖೆಗೆ ಆದೇಶಿಸಿತ್ತು. ಈ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Iran-Israel War: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್‌

ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್‌

ದುಬೈ ಪ್ರವಾಸಕ್ಕೆ ತೆರಳಿ ಅಲ್ಲಿನ ಮುನುಕುಲ್ ನಗರದಲ್ಲಿ ವಿಮಾನಯಾನ ಸೇವೆ ರದ್ದಾಗಿ ಬಳ್ಳಾರಿ ಜಿಲ್ಲೆಯ 32 ಜನ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಬಳ್ಳಾರಿ ಪ್ರವಾಸಿಗರು ಸೇರಿ 50 ಮಂದಿ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕನ್ನಡಿಗರನ್ನು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹಾಗೂ ಜಗಳೂರು ಶಾಸಕ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಸ್ವಾಗತಿಸಿದ್ದಾರೆ.

Murder Case: ರುಂಡವಿಲ್ಲದ ಮಹಿಳೆಯ ಶವದ ರಹಸ್ಯ ಬಯಲು: ಬಂಗಾರದ ಆಸೆಗಾಗಿ ಕೊಂದ ಪಾಪಿ!

ರುಂಡವಿಲ್ಲದ ಮಹಿಳೆಯ ಶವದ ರಹಸ್ಯ ಬಯಲು: ಬಂಗಾರದ ಆಸೆಗಾಗಿ ಕೊಂದ ಪಾಪಿ!

ಮುಂಡಗೋಡು ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಅರಣ್ಯದಲ್ಲಿ ಕಂಡುಬಂದ ರುಂಡ ಇಲ್ಲದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆಯಾದವರು ಗೂಡಂಗಡಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ 75 ವರ್ಷದ ವೃದ್ಧೆ ಶಿವಕ್ಕ ಪಾಟೀಲ್‌.

ಭಾರತದ ದೇಶೀಯ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗೆ 'ಮಾಹೆ' ಕ್ವಾಂಟಮ್ ಹಬ್ ಸ್ಥಾಪನೆ

ಭಾರತದ ಕ್ವಾಂಟಮ್‌ ಪ್ರಗತಿಗೆ ಮಾಹೆ ಕೊಡುಗೆ: ಕ್ವಾಂಟಮ್-ಹಬ್@ಮಾಹೆ ಸ್ಥಾಪನೆ

ವಿನ್ಯಾಸದಿಂದ ಅನುಷ್ಠಾನದ ತನಕ ಎಲ್ಲವನ್ನೂ ಒಳಗೊಂಡ ವೇದಿಕೆಯಾಗಿರುವ ಕ್ಯು-ಹಬ್@ಮಾಹೆ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇಂಕ್ಯು ಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷಾ ಮೂಲಸೌಕರ್ಯ, ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆಯಡಿ ಸಂಶೋಧನೆಗಳನ್ನು ಒಳಗೊಂಡಿದೆ. ಈ ಕ್ರಮ ಭಾರತದ ಕ್ವಾಂಟಮ್ ತಂತ್ರಜ್ಞಾನ ಮೌಲ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.

ಮಧುಗಿರಿಯ ಶ್ರೀ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಎಸಿ ಗೋಟೂರು ಶಿವಪ್ಪ ಚಾಲನೆ

ಮಧುಗಿರಿ ಶ್ರೀ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

Madhugiri News: ಮಧುಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನವರ-2026ನೇ ಸಾಲಿನ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಚಾಲನೆ ನೀಡಿದರು. ಈ ಕುರಿತ ವಿವರ ಇಲ್ಲಿದೆ

Gold Rate Today 5th March 2026: ಮತ್ತೆ ಕಡಿಮೆಯಾಯ್ತು ಚಿನ್ನದ ದರ; ಇಂದು ಇಳಿಕೆಯಾಗಿದ್ದು 900 ರುಪಾಯಿ

ಮತ್ತೆ ಕಡಿಮೆಯಾಯ್ತು ಚಿನ್ನದ ದರ

Gold Price Today: ಕೆಲವು ದಿನಗಳಿಂದ ಇಳಿಕೆಯ ಹಾದಿಯಲ್ಲಿರುವ ಚಿನ್ನದ ದರ ಗುರುವಾರ ಕೆಳಮುಖವಾಗಿ ಸಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 90 ರುಪಾಯಿ ಇಳಿಕೆಯಾಗಿ 14,990 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 98 ರುಪಾಯಿ ಕಡಿಮೆಯಾಗಿದ್ದು, 16,353 ರುಪಾಯಿಗೆ ಕುಸಿದಿದೆ.

Iran- Israel War: ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಹಿಂದೂ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಅವರು ಶಾಸಕ ಎನ್ಎ ಹ್ಯಾರಿಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿ ಹಾಗೂ ಐಜಿಪಿಗೆ ದೂರು ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Hi-tech Cricket Stadium: ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಂತಹ ರಾಜ್ಯ ಗಳಲ್ಲಿ ಐದಾರು ಅಂತಾರಾಷ್ಟ್ರೀಯ ಮೈದಾನಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಕೇವಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದು ರಾಜ್ಯದ ಕ್ರೀಡಾ ಬದ್ಧತೆ ಪ್ರಶ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲಬುರಗಿ ಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವುದು ಸರಕಾರದ ಆದ್ಯತೆಯಾಗಬೇಕಿದೆ.

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

ಪತ್ರಿ ಮನೆಯಲ್ಲೂ ಕಾಮನಿನಗೆ ಹೋಳಿಗೆ ಇಲ್ಲವೆ ಬೆಲ್ಲ ಸಕ್ಕರೆ ನೈವೇದ್ಯ ಕೊಟ್ಟು ಕಾಮನಿನಗೆ ಅಂತಿಮ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಇಲ್ಲಿಯ ಹಳಪೇಟೆ, ಚಿನಗುಂಡಿ ಪ್ಲಾಟ, ಇತರೆಡೆಗಳಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಮದಹನವಾದರೆ ಸಾರ್ವಜನಿಕ ತರಕಾರಿ ಮಾರ್ಕೆಟ್ ಮತ್ತು ಕಿಲ್ಲಾ ಹೊಸಪೇಟೆ ನೆಹರು ನಗರ ಹಾಗೂ ಬಸರಿಗಿಡಪೇಟೆ ಓಣಿ ಮಧ್ಯಾಹ್ನ ದ ವೇಳೆಗೆ ಕಾಮ ದಹನ ಮಾಡಲಾಯಿತು.‌

Gadag News: ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಆರ್ಕೆಸ್ಟ್ರಾ ನೋಡಿ ಮರಳುತ್ತಿದ್ದವರಿಗೆ ಅಪಘಾತ, ಇಬ್ಬರು ಸಾವು

ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ನಿಂಗಪ್ಪ ಯಳವತ್ತಿ (36) ಮತ್ತು ಮುತ್ತಪ್ಪ ಸತ್ತಿಗೇರಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಟಾಟಾ ಎಸಿ ವಾಹನದಲ್ಲಿ ಗ್ರಾಮದ ಮಂದಿಯೊಂದಿಗೆ ಪ್ರಯಾಣಿಸುತ್ತಿದ್ದರು. ಗ್ರಾಮದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ನೋಡಲು ಎಲ್ಲರೂ ಒಟ್ಟಾಗಿ ತೆರಳಿದ್ದರು. ವಾಹನದಲ್ಲಿ ಒಟ್ಟು ಹತ್ತು ಮಂದಿ ಇದ್ದರು ಎಂದು ತಿಳಿದುಬಂದಿದೆ.

ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ-ಟಿ.ಎನ್.ಎಸ್.ಡಿ.ಸಿ ಸಹಯೋಗ: ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರದ ಉದ್ಘಾಟನೆ

ಸೆಂಟರ್ ಆಫ್ ಎಕ್ಸʼಲೆನ್ಸ್ ಕೇಂದ್ರದ ಉದ್ಘಾಟನೆ

ಪ್ರಮುಖ ಉತ್ಪಾದನಾ ಕೇಂದ್ರವಾಗಿ ತಮಿಳುನಾಡಿನ ಸ್ಥಾನವನ್ನು ಬಲಪಡಿಸುವತ್ತ ಒಂದು ಭವಿಷ್ಯದ ಹೆಜ್ಜೆ ಇಡುವುದು ಮತ್ತು ಅದೇ ವೇಳೆ, ಉದ್ಯಮ 4.0 ಅವಶ್ಯಕತೆಗಳಿಗೆ ಅನುಗುಣ ವಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ, ಯಾಂತ್ರೀಕೃತ-ಕೌಶಲ್ಯವುಳ್ಳ ಕಾರ್ಯಪಡೆಯ ಅಭಿವೃದ್ಧಿಗೆ ವೇಗ ತರುವಲ್ಲಿ ಈ ಉಪಕ್ರಮವು ಪ್ರಮುಖ ಪಾತ್ರ ವಹಿಸುವುದು.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಸಿಹಿ ಸುದ್ದಿ: ಪೊಲೀಸ್‌ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ

ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ (Job recruitment) ಮೂಲಕ ಭರ್ತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಒಟ್ಟು ಹುದ್ದೆಗಳಲ್ಲಿ ಶೇ. 6 ರಷ್ಟು ಹುದ್ದೆಗಳನ್ನು (ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4) ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು ಎಂದು ತಿಳಿಸಲಾಗಿದೆ.

Lokayukta Raid: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ವಿವಿಧೆಡೆ ಲೋಕಾಯುಕ್ತ ದಾಳಿ

ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌, ವಿವಿಧೆಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ಆಸ್ತಿ ಪತ್ರಗಳು, ಬ್ಯಾಂಕ್ ಪಾಸ್‌ಬುಕ್ ಮತ್ತು ನಗದು ಹಣದ ಬಗ್ಗೆ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ದಾಳಿಗೆ ಒಳಗಾದ ಅಧಿಕಾರಿಗಳ ಹೆಸರು ಮತ್ತು ವಶಪಡಿಸಿಕೊಳ್ಳಲಾದ ಅಕ್ರಮ ಆಸ್ತಿಯ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

Iran Israel War: ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆ ಬಂದ 2ನೇ ಫ್ಲೈಟ್‌ನಲ್ಲಿ 490 ಜನ, ಹಾಗೇ ಅದೇ ದಿನ ಸಂಜೆ 7 ಗಂಟೆಗೆ ಬಂದ 3ನೇ ಫ್ಲೈಟ್‌ನಲ್ಲಿ 350 ಮಂದಿ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದ ಫ್ಲೈಟ್‌ನಲ್ಲಿ 200 ಜನ, ಉಳಿದಂತೆ ಬುಧವಾರ ಸಂಜೆ 7 ಗಂಟೆಗೆ ಬಂದ ವಿಮಾನದಲ್ಲಿ 246 ಪ್ರಯಾಣಿಕರು ವಾಪಸಾಗಿದ್ದು ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

Bidar news: ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಭಾರಿ ಪ್ರತಿಭಟನೆ, ಠಾಣೆಗೆ ಮುತ್ತಿಗೆ

ಬಸವಕಲ್ಯಾಣದಲ್ಲಿ ಮುಸ್ಲಿಂ ಯುವಕರಿಂದ ಭಾರಿ ಪ್ರತಿಭಟನೆ, ಠಾಣೆಗೆ ಮುತ್ತಿಗೆ

ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ ಸಾವಿರಾರು ಯುವಕರು ಮತ್ತು ಮುಖಂಡರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿ‌ದ್ದಾರೆ. ಠಾಣೆಯ ಮುಂಭಾಗದಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದಾರೆ.

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್‌ ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.

Loading...