ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Jamun Fruit: ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಕರ್ನಾಟಕದ ನೇರಳೆ ಹಣ್ಣು; ಲಂಡನ್‌ಗೆ ರಫ್ತು

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಕರ್ನಾಟಕದ ನೇರಳೆ ಹಣ್ಣು!

Jamun Fruit: ನೇರಳೆ ಹಣ್ಣು ರಫ್ತು ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ಮೊದಲ ಬಾರಿಗೆ ರಾಜ್ಯದ ನೇರಳೆ ಹಣ್ಣುಗಳು ಲಂಡನ್‌ಗೆ ರಫ್ತಾಗುತ್ತಿವೆ. ಇದು ರಾಜ್ಯದ ರೈತರಿಗೆ ಹೆಮ್ಮೆಯ ಮೈಲುಗಲ್ಲಾಗಿದ್ದು, ರೈತರ ಆದಾಯ ದ್ವಿಗುಣಗೊಳ್ಳಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

KR Puram railway station: ರೈಲಿನಡಿ ಬೀಳುತ್ತಿದ್ದ ಪ್ರಯಾಣಿಕನನ್ನು ದೇವರಂತೆ ಬಂದು ರಕ್ಷಿಸಿದ ರೈಲ್ವೆ ಸಿಬ್ಬಂದಿ, ಮಾಜಿ ಸೈನಿಕ!; ವಿಡಿಯೋ ವೈರಲ್‌

ರೈಲಿನಡಿ ಬೀಳುತ್ತಿದ್ದ ವ್ಯಕ್ತಿಯನ್ನು ದೇವರಂತೆ ಬಂದು ರಕ್ಷಿಸಿದ ಸಿಬ್ಬಂದಿ!

KR Puram railway station: ಬೆಂಗಳೂರಿನ ಕೆ.ಆರ.ಪುರಂ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ 2 ರಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ. ರೈಲಿನಡಿ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಮಾಜಿ ಸೈನಿಕ ಮತ್ತು ರೈಲ್ವೆ ಇಲಾಖೆಯ ಸಿಬ್ಬಂದಿಯೊಬ್ಬರು ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್‌ನತ್ತ ಎಳೆದು ರಕ್ಷಣೆ ಮಾಡಿದ್ದಾರೆ.

Denta Water Groups: ಡೆಂಟಾ ವಾಟರ್‌ ಸಿಎಸ್ಆರ್ ಫಂಡ್‌ನಿಂದ ನಿರ್ಮಿತ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಚಲುವರಾಯಸ್ವಾಮಿ

ಮಂಡ್ಯದಲ್ಲಿ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಚಲುವರಾಯಸ್ವಾಮಿ

ತಾಲೂಕಿನ ಸಂತೆಬಾಚಹಳ್ಳಿ ಗ್ರಾಮದಲ್ಲಿ ಡೆಂಟಾ ವಾಟರ್ ಇನ್ಫ್ರಾ ಸೆಲ್ಯೂಷನ್ ಲಿಮಿಟೆಡ್ ಕಂಪನಿಯು ತನ್ನ ಸಿಎಸ್ ಆರ್ ಫಂಡ್ ಮೂಲಕ 1.13 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ವನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಉದ್ಘಾಟಿಸಿದರು.

Rupesh Rajanna: ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ವಿರುದ್ಧ ಬ್ಲ್ಯಾಕ್‌ ಮೇಲ್‌ ಆರೋಪ; ಸಚಿವರ ನಿವಾಸಕ್ಕೆ ಮುತ್ತಿಗೆ ವೇಳೆ ವಶಕ್ಕೆ

ಸಚಿವ ಜಮೀರ್‌ ಅಹ್ಮದ್‌ ನಿವಾಸಕ್ಕೆ ಮುತ್ತಿಗೆ; ರೂಪೇಶ್ ರಾಜಣ್ಣ ವಶಕ್ಕೆ

Rupesh Rajanna: ಬೆಂಗಳೂರಿನ ಗಾಲ್ಫ್ ಕೋರ್ಸ್ ರಸ್ತೆಯ ಸಚಿವ ಜಮೀರ್‌ ಅಹ್ಮದ್‌ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಬೆಂಬಲಿಗರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

Chit Fund Scam: ಚೀಟಿ ಹೆಸರಲ್ಲಿ ಬರೋಬ್ಬರಿ 10 ಕೋಟಿ ವಂಚಿಸಿದ ಮಹಿಳೆ; ಕೇಸ್‌ ಬೆನ್ನಲ್ಲೇ ಪರಾರಿ

ಚೀಟಿ ಹೆಸರಲ್ಲಿ ಬರೋಬ್ಬರಿ 10 ಕೋಟಿ ವಂಚಿಸಿದ ಮಹಿಳೆ!

Chit Fund Scam: ವಂಚನೆ ಸಂಬಂಧ ಬೆಂಗಳೂರಿನ ಜೆ.ಪಿ.ನಗರದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಕೋರಲಾಗಿದೆ.

Bomb Threats: ಸಹೋದ್ಯೋಗಿ ಮದುವೆಯಾಗಲು ನಿರಾಕರಿಸಿದ್ದಕ್ಕೆ 11 ರಾಜ್ಯಗಳ ಶಾಲೆ, ಆಸ್ಪತ್ರೆ, ಏರ್‌ಪೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ; ಯುವತಿ ಅರೆಸ್ಟ್!

ಶಾಲೆ, ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಯುವತಿ ಬಂಧನ

Bomb Threats: ಆರೋಪಿ ಯುವತಿ ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್​ಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಿದ್ದಳು. ಹೀಗಾಗಿ ತನಿಖೆಗಾಗಿ ಆರೋಪಿಯನ್ನು ಅಹಮದಾಬಾದ್ ಪೊಲೀಸರಿಂದ ಉಡುಪಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Chikkaballapur News: ರಾಶ್ಚೇರುವು ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆ

ಅಧ್ಯಕ್ಷರ ವಿರುದ್ದ ಸಲ್ಲಿಸಲಾಗಿದ್ದ ಅವಿಶ್ವಾಸ  ಗೊತ್ತುವಳಿ ಮಂಡನೆ ಸಭೆ

ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ಎಂಎಲ್‌ಸಿ ಅನಿಲ್ ಕುಮಾರ್, ಶಾಸಕ ಎಸ್.ಎನ್.ಸುಬ್ಬಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಗ್ರಾ.ಪಂ. ಅಧ್ಯಕ್ಷೆ ಸ್ಥಾನವನ್ನು ಗಿಟ್ಟಿಸಿ ಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ಅದ್ಯಕ್ಷೆ ರೇವತಿ ಶ್ರೀನಿವಾಸ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರ ಒಂದು ಬಣ ಹಾಗೂ ಎನ್‌ಡಿಎ ಬೆಂಬಲಿತ ಸದಸ್ಯರ ಬಣ ಸೇರಿ ೧೦ ಸದಸ್ಯರು ಹಾಲಿ ಅದ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ,

Chikkaballapur News: ಉಪ್ಪಾರ ಸಮುದಾಯ ಶೈಕ್ಷಣಿವಾಗಿ ಮುಂದೆ ಬರಬೇಕಿದೆ: ತಾಲೂಕು ಉಪ್ಪಾರರ ಸಂಘದ ಅಧ್ಯಕ್ಷ ಸಜ್ಜಗಂಟರಾಯಪ್ಪ

ಉಪ್ಪಾರ ಸಮುದಾಯ ಶೈಕ್ಷಣಿವಾಗಿ ಮುಂದೆ ಬರಬೇಕಿದೆ

ಸಮುದಾಯದ ಮುಖಂಡರು ನಮ್ಮ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು, ಶೈಕ್ಷಣಿಕವಾಗಿ ವಂಚಿತರಾದವರಿಗೆ ಸಂಘದ ಕಡೆಯಿಂದ ಸಹಾಯ ಹಸ್ತ ನೀಡಬೇಕು ಮುಂದಿನ ದಿನಗಳಲ್ಲಿ ನಮ್ಮ ಸಮುದಾಯವು ಮುಂಚೂಣಿಗೆ ಬರಲು ಶಿಕ್ಷಣ ಕಡ್ಡಾಯ ಶಿಕ್ಷಣ ಹೊಂದಿದ್ದರೆ ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಸಹಕಾರಿಯಾಗುತ್ತೆ ಎಂದರು.

Chikkaballapur News: ವಿಧವೆಯರನ್ನು ಇತರೆ ಮಹಿಳೆಯರಂತೆ ಗೌರವಿಸಿ : ಸಂಪಂಗಿ ಶ್ರೀನಿವಾಸ್

ವಿಧವೆಯರನ್ನು ಇತರೆ ಮಹಿಳೆಯರಂತೆ ಗೌರವಿಸಿ

ವಿಧವೆಯರು ಎದುರಾಗಿ ಬಂದರೆ ಅಪಶಕುನವೆಂದು, ಮುಂಜಾನೆ ಎದ್ದು ವಿಧವೆಯರನ್ನು ನೋಡ ಬಾರದೆಂಬ ಮೂಢ ನಂಬಿಕೆಗಳನ್ನು ಬಿಟ್ಟು, ವಿಧವೆಯರನ್ನು ಸಹಾ ಮಹಿಳೆಯರಾಗಿ ಗೌರವಿಸಿ ಎಂದು ಕರೆ ನೀಡಿದರು.ಈ ತಾಲೂಕಿನಲ್ಲಿ ಸುಮಾರು ಇಪ್ಪತೆಂಟು ಸಾವಿರ ವಿಧವೆಯರಿದ್ದಾರೆ. ರಾಜ್ಯದಲ್ಲಿ ವಿಧವೆಯರಿಗೆ ಕೇವಲ ಎಂಟು ನೂರು ರೂಪಾಯಿಗಳ ಪೆನ್‌ಷನ್ ನೀಡುತ್ತಿದ್ದಾರೆ.

CM Siddaramaiah: ನಟ ಆಮೀರ್‌ ಖಾನ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ

ನಟ ಆಮೀರ್‌ ಖಾನ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ

ರಾಷ್ಟ್ರಪತಿ ಭವನದಲ್ಲಿ ಇಂದು ಬಾಲಿವುಡ್‌ ನಟ ಆಮೀರ್‌ ಖಾನ್‌ (Actor Aamir Khan) ಅವರನ್ನು ಸಿಎಂ ಸಿದ್ದರಾಮಯ್ಯ (cm siddaramaiah) ಭೇಟಿಯಾದರು. ಸಿಎಂ ಈ ಸಂದರ್ಭದಲ್ಲಿ ಆಮೀರ್‌ ಖಾನ್‌ ಅವರ ನೂತನ ಸಿನಿಮಾ ʼಸಿತಾರೇ ಜಮೀನ್‌ ಪರ್‌ʼ ಕುರಿತು ವಿಚಾರಿಸಿಕೊಂಡು, ಅದಕ್ಕೆ ಶುಭ ಹಾರೈಸಿದರು.

Chikkaballapur Crime: ಅನಧಿಕೃತವಾಗಿ ಬಳಸುತ್ತಿದ್ದ ಸಿಲಿಂಡರ್ ಗಳ ವಶಕ್ಕೆ ಪಡೆದ ಆಹಾರ ಇಲಾಖೆ

ಅನಧಿಕೃತವಾಗಿ ಬಳಸುತ್ತಿದ್ದ ಸಿಲಿಂಡರ್ ಗಳ ವಶಕ್ಕೆ ಪಡೆದ ಆಹಾರ ಇಲಾಖೆ

ಆಹಾರ ಶಿರಸ್ತೆದಾರರಾದ ಎ ಎನ್ ನಟರಾಜ ರೆಡ್ಡಿ ಹಾಗೂ ಆಹಾರ ನಿರೀಕ್ಷಕರು ದಾಳಿ ನಡೆಸಿ ಚಿಂತಾ ಮಣಿ ತಾಲ್ಲೂಕಿನ ಬುರುಡಗುಂಟೆ. ಏನಿಗದೆಲೆ, ಮಿಂಚಿಲಹಳ್ಳಿ ಕ್ರಾಸ್ ಕೆಂಚಾರಹಳ್ಳಿ ಗ್ರಾಮಗಳ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 15 ಸಿಲೆಂಡರ್ ಗಳನ್ನು ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿದ್ದಾರೆ.

ಬಂಜೆತನ ಎದುರಿಸುತ್ತಿರುವವರಿಗೆ ಫಲವತ್ತತೆ ಕುರಿತು ಮಾರ್ಗದರ್ಶನ ನೀಡಲು ಉಚಿತ ಟೋಲ್-ಫ್ರೀ ಸಂಖ್ಯೆ ಆರಂಭ

ಬಂಜೆತನ ಸಮಸ್ಯೆ: ಮಾರ್ಗದರ್ಶನಕ್ಕೆ ಉಚಿತ ಟೋಲ್-ಫ್ರೀ ಸಂಖ್ಯೆ ಆರಂಭ

ಒತ್ತಡದ ಬದುಕಿನಿಂದಾಗಿ ಸಾಕಷ್ಟು ಜನರು ಇಂದು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಫಲವತ್ತತೆ ಹೊಂದದೇ ಇರಲು ಕಾರಣವೇನು ಎಂಬುದರ ಬಗ್ಗೆಯೂ ಸಾಕಷ್ಟು ಜನರಿಗೆ ಸ್ಪಷ್ಟತೆ ಇರುವುದಿಲ್ಲ ಅಷ್ಟೇ ಅಲ್ಲದೆ, ಸಾಕಷ್ಟು ಗೊಂದಲ ಹಾಗೂ ಹತಾಶೆ ಹೊಂದಿರುತ್ತಾರೆ. ಮುಂದೆ ಏನು ಮಾಡಬೇಕು ಎಂಬ ಅರಿವಿನ ಕೊರತೆಯಲ್ಲೂ ಇರುತ್ತಾರೆ.

Harassment: ಯುವತಿಗೆ ಕಿರಿಕ್‌ ಮಾಡಿದ ಗಾಂಜಾ ಗ್ಯಾಂಗ್:‌ ಐವರ ಬಂಧನ

ಯುವತಿಗೆ ಕಿರಿಕ್‌ ಮಾಡಿದ ಗಾಂಜಾ ಗ್ಯಾಂಗ್:‌ ಐವರ ಬಂಧನ

Harassment: ಹಾಡಹಗಲೇ ಗಾಂಜಾದ ನಶೆ ಏರಿಸಿಕೊಂಡು ತೂರಾಡುತ್ತಿದ್ದ ಯುವಕರು ನಡುಬೀದಿಯಲ್ಲಿ ಅಟ್ಟಹಾಸ ಮೆರೆದಿದ್ದರು. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಕೃತ್ಯ ನಡೆದಿತ್ತು.

Gold Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 24th June 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 75 ರೂ. ಇಳಿಕೆಯಾಗಿ 9,155 ರೂ.ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 82 ರೂ. ಕಡಿಮೆಯಾಗಿದ್ದು, 9,987 ರೂ.ಗೆ ಬಂದು ನಿಂತಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 73,240 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 91,550 ರೂ. ಮತ್ತು 100 ಗ್ರಾಂಗೆ 9,15,500 ರೂ. ನೀಡಬೇಕಾಗುತ್ತದೆ.

Mangaluru Airport: ಇರಾನ್‌ ದಾಳಿ: ಮಂಗಳೂರು- ಗಲ್ಫ್‌ ದೇಶಗಳ ವಿಮಾನ ಹಾರಾಟದಲ್ಲಿ ವ್ಯತ್ಯಾಸ

ಇರಾನ್‌ ದಾಳಿ: ಮಂಗಳೂರು- ಗಲ್ಫ್‌ ದೇಶಗಳ ವಿಮಾನ ಹಾರಾಟದಲ್ಲಿ ವ್ಯತ್ಯಾಸ

ಇರಾನ್ ಕ್ಷಿಪಣಿ ದಾಳಿ ಮಾಡಿದ ಕಾರಣ ಮಧ್ಯಪ್ರಾಚ್ಯದ ದೇಶಗಳು ವಾಯುಮಾರ್ಗಗಳನ್ನು ಬಂದ್ ಮಾಡಿವೆ. ಅಲ್ಲಿನ ವಿಮಾನಯಾನ ವಲಯ ಮುಚ್ಚಲ್ಪಟ್ಟ ಕಾರಣ ವಿಮಾನಗಳು ಮಂಗಳೂರಿಗೆ (Mangaluru Airport) ವಾಪಸಾಗಿವೆ. ಮಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವ ಬಗ್ಗೆ ಏರ್​ಪೋರ್ಟ್ ಆಡಳಿತ ಮಾಹಿತಿ ನೀಡಿದೆ.

Bengaluru Stampede: ಚಿನ್ನಸ್ವಾಮಿ ಕಾಲ್ತುಳಿತ ಕುರಿತು ಕೇಂದ್ರಕ್ಕೆ ರಾಜ್ಯ ವರದಿ; ʼಇದೇ ಕಾರಣʼ ಎಂದ ಸರಕಾರ

ಚಿನ್ನಸ್ವಾಮಿ ಕಾಲ್ತುಳಿತ ಕುರಿತು ಕೇಂದ್ರಕ್ಕೆ ರಾಜ್ಯ ವರದಿ

Bengaluru Stampede: ಮೂವರು ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸರ್ಕಾರ ವರದಿ ನೀಡಿದೆ. ಇದೇ ಕಾರಣಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ಅಮಾನತ್ತು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆಡಳಿತ ಸುಧಾರಣ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದೆ.

Anantkumar Hegde: ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಗನ್‌ಮ್ಯಾನ್, ಚಾಲಕನಿಂದ ಗೂಂಡಾಗಿರಿ: ದೂರು ದಾಖಲು

ಅನಂತ್‌ ಕುಮಾರ್‌ ಹೆಗಡೆ ಗನ್‌ಮ್ಯಾನ್, ಚಾಲಕನಿಂದ ಗೂಂಡಾಗಿರಿ: ದೂರು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಅನಂತ ಕುಮಾರ್ ಹೆಗಡೆ (Anantkumar Hegde), ಅವರ ಕಾರು ಚಾಲಕ ಹಾಗೂ ಗನ್​ಮ್ಯಾನ್ ಮೇಲೆ ಎಫ್​ಐಆರ್ ದಾಖಲಾಗಿದೆ.

Lokayukta Raid: ಬಿಬಿಎಂಪಿ ಇಂಜಿನಿಯರ್‌ಗಳ ಮನೆಗಳಿಗೆ ಲೋಕಾಯುಕ್ತ ದಾಳಿ

ಬಿಬಿಎಂಪಿ ಇಂಜಿನಿಯರ್‌ಗಳ ಮನೆಗಳಿಗೆ ಲೋಕಾಯುಕ್ತ ದಾಳಿ

ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿಬಿಎಂಪಿಯ ಹಲವು ಇಂಜಿನಿಯರ್‌ಗಳ ಮನೆ ಹಾಗೂ ಕಚೇರಿಗಳಿಗೆ ಇಂದು ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸಿದ್ದಾರೆ. ಈ ಅಧಿಕಾರಿಗಳ ಕುರಿತು ಸಾರ್ವಜನಿಕರಿಂದ ಹಲವು ದೂರುಗಳಿದ್ದವು.

Kannadiga reservation: ಖಾಸಗಿ ಕೆಲಸಗಳಲ್ಲಿ ಕನ್ನಡಿಗರಿಗೆ ಮೀಸಲು ವಿಧೇಯಕ ಮಂಡನೆಗೆ ಸಿದ್ಧತೆ

ಖಾಸಗಿ ಕೆಲಸಗಳಲ್ಲಿ ಕನ್ನಡಿಗರಿಗೆ ಮೀಸಲು ವಿಧೇಯಕ ಮಂಡನೆಗೆ ಸಿದ್ಧತೆ

Kannadiga reservation: ಕಳೆದ ವರ್ಷದ ಮಳೆಗಾಲದ ಅಧಿವೇಶನದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ʼಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024′ ಮಂಡಿಸಲು ಮುಂದಾಗಿತ್ತು. ರಾಜ್ಯದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಲು 2024ರ ಜೂನ್ ತಿಂಗಳಲ್ಲಿ ಸಚಿವ ಸಂಪುಟ ಅನುಮೋದನೆ ಪಡೆಯಲಾಗಿತ್ತು.

Celebrity Monsoon Fashion 2025: ರೆಡ್‌ ಬ್ಲೇಜರ್‌ನಲ್ಲಿ ಕಿರುತೆರೆ ನಟ ರಾಮ್‌ ಪವನ್‌ ಶೇಟ್‌ ಮಾನ್ಸೂನ್‌ ಲುಕ್‌

ರೆಡ್‌ ಬ್ಲೇಜರ್‌ನಲ್ಲಿ ಕಿರುತೆರೆ ನಟ ರಾಮ್‌ ಪವನ್‌ ಶೇಟ್‌ ಮಾನ್ಸೂನ್‌ ಲುಕ್‌

Celebrity Monsoon Fashion 2025: ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಕಿರುತೆರೆ ನಟ ರಾಮ್‌ ಪವನ್‌ ಶೇಟ್‌ ರೆಡ್‌ ಬ್ಲೇಜರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ಅವರು ಹೇಳುವುದೇನು? ಅವರ ಸೀಸನ್‌ ಲುಕ್‌ ಹೇಗಿದೆ? ಖುದ್ದು ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

Karnataka Weather: ಹವಾಮಾನ ವರದಿ; ಇಂದು ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ

ಹವಾಮಾನ ವರದಿ; ಇಂದು ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ

Karnataka Weather: ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ವರುಣ ಅಬ್ಬರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ರಾಜ್ಯದಲ್ಲಿ ಮಂಗಳವಾರ ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.

Chikkaballapur News: ಹೊರ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ: ಬಿ ಸಿ ಎಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು

ಹೊರ ಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ಶಾಲೆಗಳಲ್ಲಿ ಕಳೆದ15-20 ವರ್ಷಗಳಿಂದ ಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ

Siddaganga Sri: ಯಲುವಳ್ಳಿ ಎನ್ ರಮೇಶ್ ಮನೆಗೆ ಸಿದ್ದಗಂಗಾ ಶ್ರೀಗಳ ಭೇಟಿ

ಯಲುವಳ್ಳಿ ಎನ್ ರಮೇಶ್ ಮನೆಗೆ ಸಿದ್ದಗಂಗಾ ಶ್ರೀಗಳ ಭೇಟಿ

ರಮೇಶ್ ಅವರ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಅವರ ಸಾಧನೆ ಹಾಗು ಸುಖಕರ ಜೀವನಕ್ಕೆ ರಮೇಶ್ ದಂಪತಿಯ ಕುಟುಂಬವನ್ನು ಎಷ್ಟು ಒಳ್ಳೆಯ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬುದೆ ಸಾಕ್ಷಿಯಾಗಿದೆ ಅವರ ಸುಪುತ್ರ ಜನಾರ್ದನ್ ತಮ್ಮ ಕೆಲಸಗಳ ನಡುವೆಯೂ ತಂದೆಗೆ ಜೊತೆಗಿದ್ದು ಕೆಲಸಗಳನ್ನು ಮುನ್ನಡೆಸಿ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ

HD Kumaraswamy: ಅಕ್ರಮ ಗಣಿಗಾರಿಕೆ; ಎಚ್.ಕೆ.ಪಾಟೀಲ್‌ ಪತ್ರ ಕಸದ ಬುಟ್ಟಿಗೆ ಹಾಕಿ: ಕುಮಾರಸ್ವಾಮಿ ಗುಡುಗು

ಎಚ್.ಕೆ.ಪಾಟೀಲ್‌ ಪತ್ರವನ್ನು ಕಸದ ಬುಟ್ಟಿಗೆ ಹಾಕಿ ಎಂದ ಎಚ್‌ಡಿಕೆ

ಕಳೆದ ಬಾರಿ ಸಿದ್ದರಾಮಯ್ಯ ಕಾನೂನುಬಾಹಿರವಾಗಿ ಏಳು ಗಣಿ ಕಂಪನಿಗಳಿಗೆ ಅನುಮತಿ ನೀಡಿದ್ದರು. ಅಲ್ಲಿ ಏನೆಲ್ಲಾ ನಡೆದಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಎಚ್.ಕೆ.ಪಾಟೀಲರೇ? ಆ ಬಗ್ಗೆ ಮೌನವೇಕೆ? ಯಾವ ನೈತಿಕತೆ ಇಟ್ಟುಕೊಂಡು ಸಿದ್ದರಾಮಯ್ಯ ಪಕ್ಕದಲ್ಲಿ ಕೂತು ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡುತ್ತಿದ್ದೀರಿ? ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.