ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಆದಾಯವಿಲ್ಲ. ಆಹಾರವಿಲ್ಲ, ಭವಿಷ್ಯವಿಲ್ಲ: ವಿವಿಧ ಸ್ಥಳಗಳಿಂದ ಸರ್ಕಾರದ ಬೆಂಬಲಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಬೈಕ್ ಟ್ಯಾಕ್ಸಿ ರೈಡರ್‌ಗಳು

ಆದಾಯವಿಲ್ಲ. ಆಹಾರವಿಲ್ಲ, ಭವಿಷ್ಯವಿಲ್ಲ...!

ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ತುಮಕೂರು, ರಾಮನಗರ, ಶಿವಮೊಗ್ಗ ಮತ್ತು ಕನಕಪುರ ದಂತಹ ನಗರಗಳಿಂದ 5,000ಕ್ಕೂ ಹೆಚ್ಚು ರೈಡರ್ ಗಳು ಬೆಂಗಳೂರಿನ ವಿಧಾನಸೌಧಕ್ಕೆ ಪ್ರಯಾಣಿಸು ತ್ತಿದ್ದು ಸರ್ಕಾರವನ್ನು ಬೈಕ್ ಟ್ಯಾಕ್ಸಿಗಳ ನಿಷೇಧಕ್ಕೆ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಲಿದ್ದಾರೆ. ಅವರಿಗೆ ಇದು ಬರೀ ಕೆಲಸದ ಕುರಿತಾಗಿ ಅಲ್ಲ-ಅವರ ಅಳಿವು ಉಳಿವಿನ ಪ್ರಶ್ನೆಯಾಗಿದೆ.

Chikkanayakanahalli (Tumkur) news: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಸಕರ ನಿರಂತರ ಪ್ರಯತ್ನ

ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಸಕರ ನಿರಂತರ ಪ್ರಯತ್ನ

ಹೇಮಾವತಿ ಮುಖ್ಯ ನಾಲೆ ಯಿಂದ ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸುವ ಚಾನಲ್‌ನಲ್ಲಿ ದೀರ್ಘಕಾಲ ದಿಂದ ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿಯದೆ ರೈತರಿಗೆ ತೊಂದರೆ ಯಾಗಿತ್ತು. ಈ ಸಮಸ್ಯೆಯನ್ನು ಮನಗಂಡ ಶಾಸಕರು, 28 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಸುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಂಡಿದ್ದಾರೆ.

ಜೂ.24 ರಂದು ವಿದ್ಯುತ್ ವ್ಯತ್ಯಯ

ಜೂ.24 ರಂದು ವಿದ್ಯುತ್ ವ್ಯತ್ಯಯ

ತಾಲ್ಲೂಕಿನ ದಸೂಡಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವ ಕಾರಣ ಜೂ.24 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಈ ಕೇಂದ್ರದಿಂದ ಪೂರೈಕೆಯಾಗುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಅಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಸರಬರಾಜು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಗವಿರಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಬೆಂಗಳೂರಿನಲ್ಲಿ ಬಿಯು4 ಎಲೆಕ್ಟ್ರಿಕ್ ಸ್ಕೂಟರ್ಗಳ ಫ್ಲ್ಯಾಗ್ಶಿಪ್ ಶೋರೂಮ್ ಆರಂಭ

ಬಿಯು4 ಎಲೆಕ್ಟ್ರಿಕ್ ಸ್ಕೂಟರ್ಗಳ ಫ್ಲ್ಯಾಗ್ಶಿಪ್ ಶೋರೂಮ್ ಆರಂಭ

ಶ್ರೀಮತಿ ಬಿಂದಿ ಶಾ ಮಾತನಾಡಿ, “ವಿದ್ಯುತ್ ಚಲನ ಶೀಲತೆಯೇ ಭವಿಷ್ಯ ಎಂದು ನಾವು ನಂಬುತ್ತೇವೆ - ಮತ್ತು ಭವಿಷ್ಯವು ಇಂದಿನಿಂದ ಪ್ರಾರಂಭ ವಾಗುತ್ತದೆ. ಸ್ವಚ್ಛ ಸಾರಿಗೆಯನ್ನು ಉತ್ತೇಜಿಸುವುದು ಮಾತ್ರ ವಲ್ಲದೆ ಸುರಕ್ಷಿತ, ಸೊಗಸಾದ ಮತ್ತು ಸ್ಮಾರ್ಟ್ ಸವಾರಿ ಅನುಭವವನ್ನು ನೀಡುವುದು ನಮ್ಮ ಧ್ಯೇಯ ವಾಗಿದೆ” ಎಂದು ಹೇಳಿದರು

Belagavi News: ಅಕ್ರಮ ಸಂಬಂಧ ಆರೋಪ; ಅಡವಿಸಿದ್ಧೇಶ್ವರ ಮಠದಿಂದ ಸ್ವಾಮೀಜಿ ಉಚ್ಚಾಟನೆ

ಅಕ್ರಮ ಸಂಬಂಧ ಆರೋಪ; ಅಡವಿಸಿದ್ಧೇಶ್ವರ ಮಠದಿಂದ ಸ್ವಾಮೀಜಿ ಉಚ್ಚಾಟನೆ

Belagavi News: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರದಲ್ಲಿ ಘಟನೆ ನಡೆದಿದೆ. ಮಠದಲ್ಲಿ ಸ್ವಾಮೀಜಿ ಜತೆ ಮಹಿಳೆ ಇದ್ದ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

Couple leaves Bangalore: ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ; ಉದ್ಯಮಿ ದಂಪತಿ ರಾಜಧಾನಿ ಬಿಡಲು ಕಾರಣವೇನು? ಇಲ್ಲಿದೆ ವಿಡಿಯೋ

ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ; ಈ ದಂಪತಿ ರಾಜಧಾನಿ ಬಿಡಲು ಕಾರಣವೇನು?

Couple leaves Bangalore: ತಾವು ಯಾಕೆ ಬೆಂಗಳೂರು ಬಿಡುತ್ತಿದ್ದೇವೆ ಎಂದು 2 ದಿನಗಳ ಹಿಂದೆ ಈ ಜೋಡಿ ಇನ್‌ಸ್ಟಾಗ್ರಾಂ ಪೋಸ್ಟ್‌ ಹಂಚಿಕೊಂಡಿದೆ. ಉದ್ಯಮ ದಂಪತಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಬ್ಯುಸಿನೆಸ್‌ ಕೂಡ ಇದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಇವರು ಇದೀಗ ನಗರ ತೊರೆಯಲು ಕಾರಣವೇನು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

Karnataka Rains: ಯೆಲ್ಲೋ ಅಲರ್ಟ್; ಮುಂದಿನ ಮೂರು ದಿನ ರಾಜ್ಯದಲ್ಲಿ ಭರ್ಜರಿ ಮಳೆ ಸಾಧ್ಯತೆ

ಯೆಲ್ಲೋ ಅಲರ್ಟ್; ಮುಂದಿನ ಮೂರು ದಿನ ರಾಜ್ಯದಲ್ಲಿ ಭರ್ಜರಿ ಮಳೆ ಸಾಧ್ಯತೆ

Karnataka Rains: ಜೂನ್‌ 23ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮುಂದಿನ ದಿನಗಳ ಕಾಲ ರಾಜ್ಯದ ಹವಾಮಾನ ಹೇಗಿರಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

Power outage: ಜೂನ್‌ 23, 24ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಜೂನ್‌ 23, 24ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

Power outage: ಬೆಂಗಳೂರಿನ ಎಲಿಟಾ ಪ್ರೊಮೆನೇಡ್ ಮತ್ತು ಅರೆಹಳ್ಳಿ ಉಪಕೇಂದ್ರ ನಿರ್ವಹಣಾ ಕಾಮಗಾರಿ ನಿಮಿತ್ತ ಜೂನ್ 23 ಮತ್ತು ‘66/11ಕೆ.ವಿ ಎಚ್.ಬಿ.ಆರ್’ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ 24ರಂದು ಹಲವೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

DVG Award: ಇತರೆಲ್ಲಾ ಭಾಷೆಗಳು ಸೊಸೆಯಾಗಲಿ, ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ಸಾಹಿತಿ ತನಾಶಿ

ಕನ್ನಡವೇ ಸದಾ ತಾಯಿಯ ಸ್ಥಾನದಲ್ಲಿರಲಿ: ಸಾಹಿತಿ ತನಾಶಿ

DVG Award: ಮೈಸೂರು ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಅವರಿಗೆ 'ಡಿವಿಜಿ ಪ್ರಶಸ್ತಿ 2025' ಪ್ರದಾನ ಮಾಡಲಾಗಿದೆ.

Agriculture college: ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

Agriculture college: ಬೆಂಗಳೂರು ‌ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ‌ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವೊಬ್ಬರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರುಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Bike Taxi Service: ಬೈಕ್ ಟ್ಯಾಕ್ಸಿ ಬೆಂಬಲಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ದೂರು; 10 ಮಂದಿ ವಿರುದ್ಧ ಎಫ್‌ಐಆರ್‌

ಬೈಕ್ ಟ್ಯಾಕ್ಸಿ ಬೆಂಬಲಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ದೂರು

Bike Taxi Service: ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಬೇಕು. ಅದು ಬಹಳಷ್ಟು ಉದ್ಯೋಗಗಳನ್ನು ಒದಗಿಸುತ್ತಿದೆ ಮತ್ತು ನಾಗರಿಕರಿಗಾಗಿ ಬಹಳ ಉಪಯುಕ್ತ ಸೇವೆ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರು ಹೇಳಿದ್ದರು. ಇದಕ್ಕೆ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಕ್ರೋಶ ಹೊರಹಾಕಿದೆ.

Mango Price Drop: ಮಾವು ಬೆಲೆ ಕುಸಿತ; ರೈತರಿಗೆ ನೆರವಾಗುವಂತೆ ಕೇಂದ್ರಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪತ್ರ

ಮಾವು ಬೆಲೆಗಾರರಿಗೆ ನೆರವಾಗುವಂತೆ ಕೇಂದ್ರಕ್ಕೆ ಎಚ್‌.ಡಿ.ದೇವೇಗೌಡ ಪತ್ರ

H.D. Deve Gowda: ರೈತರಿಂದ ನೇರ ಖರೀದಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ಮೂಲಕ ನ್ಯಾಯಯುತ ಬೆಲೆ ನೀಡಿ ಖರೀದಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಮಾಜಿ ಪ್ರಧಾನಿ ಕೋರಿದ್ದಾರೆ.

Shivamogga News: ಶಿವಮೊಗ್ಗದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ದುರ್ಮರಣ

ಶಿವಮೊಗ್ಗದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ದುರ್ಮರಣ

Shivamogga News: ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡವಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದು ಯುವಕರಿಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಅಪಾಯದಿಂದ ಪಾರಾಗಿದ್ದಾನೆ. ಮೃತ ದೇಹಗಳನ್ನು ಹೊರತೆಗೆಯಲಾಗಿದೆ.

Viral Video: ಈ ನೂಡಲ್ಸ್‌ ತಿಂದ್ರೆ ಕ್ಯಾನ್ಸರ್‌ ಬರುತ್ತಾ? ವೈರಲಾಗ್ತಿರೋ ವಿಡಿಯೊದಲ್ಲೇನಿದೆ?

ಈ ನೂಡಲ್ಸ್‌ ತಿಂದ್ರೆ ಕ್ಯಾನ್ಸರ್‌ ಬರುತ್ತಾ? ವೈರಲ್‌ ವಿಡಿಯೊ ನೋಡಿ

ರಾಮೆನ್ ನೂಡಲ್ಸ್ ತ್ವರಿತ ರುಚಿಕರ ಮತ್ತು ತೃಪ್ತಿಕರ ಆಹಾರವಾಗಿ ಜನಪ್ರಿಯವಾಗಿದೆ. ಒಂಟಿಯಾಗಿರುವವರಿಗೆ ಅಥವಾ ಕೆಲಸಕ್ಕೆ ತಯಾರಾಗುವ ಧಾವಂತದಲ್ಲಿ, 10 ನಿಮಿಷದಲ್ಲಿ ತಯಾರಾಗುವ ಈ ಆಹಾರ ಅನುಕೂಲಕರವೆನಿಸುತ್ತದೆ. ಆದರೆ, ಇತ್ತೀಚಿನ ವೈರಲ್ ವಿಡಿಯೊವೊಂದು ಈ ಜನಪ್ರಿಯ ತಿಂಡಿಯ ಬಗ್ಗೆ ಜನರಿಗೆ ಆಘಾತ ಉಂಟುಮಾಡಿದೆ

Hassan Heart attack: ಅಬ್ಬಾ... ಎಂಥಾ ದುರ್ವಿಧಿ! ಊಟ ಮಾಡುತ್ತಿರುವಾಗಲೇ ಹಾರಿಹೋಯ್ತು ಪ್ರಾಣ

ಊಟ ಮಾಡುತ್ತಿರುವಾಗಲೇ ಹಾರಿಹೋಯ್ತು ಪ್ರಾಣ!

ನಿನ್ನೆ ತಡರಾತ್ರಿ 35 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತನನ್ನು ಚೇತನ್‌ ಎಂದು ಗುರುತಿಸಲಾಗಿದೆ. ಈತ ಹಾಸನದ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ.ಚೇತನ್ ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ, ಮಗು ಜೊತೆಗೆ ವಾಸವಾಗಿದ್ದರು, ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ.

Gold Price Today: ಚಿನ್ನದ ದರದಲ್ಲಿ ಯಥಾಸ್ಥಿತಿ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 22th June 2025: ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 27 ರೂ. ಏರಿಕೆಯಾಗಿ 9,235ರೂ.ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 27 ರೂ. ಏರಿಕೆಯಾಗಿದ್ದು, 10,075 ರೂ.ಗೆ ಬಂದು ನಿಂತಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 73,880 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 92,350 ರೂ. ಮತ್ತು 100 ಗ್ರಾಂಗೆ 2,93,500 ರೂ. ನೀಡಬೇಕಾಗುತ್ತದೆ.

Physical Assault: ಡ್ರೋನ್‌ ಬಳಸಿ ನರೇಗಾ ಮಹಿಳಾ ಕೂಲಿ ಕಾರ್ಮಿಕರ ಶೌಚ ದೃಶ್ಯ ಸೆರೆ ಹಿಡಿದ ದುಷ್ಕರ್ಮಿಗಳು

ಡ್ರೋನ್‌ನಲ್ಲಿ ಮಹಿಳಾ ಕೂಲಿ ಕಾರ್ಮಿಕರ ದೃಶ್ಯ ಸೆರೆ ಹಿಡಿದ ದುಷ್ಕರ್ಮಿಗಳು!

ರಾಜ್ಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ್ದಾಗ ಡ್ರೋನ್‌ ಬಳಕೆ ಮಾಡಿ ವಿಡಿಯೋ ಸೆರೆ ಹಿಡಿದು ವಿಕೃತಿ ಮೆರೆದಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.

ಸಂತಸದಿಂದಿರುವುದು ಕೂಡ ಯೋಗ: ಯೋಗ ಗುರೂಜಿ ಕೆ. ಎ. ಶಂಕರ್

ಸಂತಸದಿಂದಿರುವುದು ಕೂಡ ಯೋಗ: ಯೋಗ ಗುರೂಜಿ ಕೆ. ಎ. ಶಂಕರ್

ಯೋಗ ಆಸನವಷ್ಟೇ ಅಲ್ಲದೇ ಬದುಕಿನಲ್ಲಿ ಸಂತಸದಿಂದ, ಸಮಾಧಾನದಿಂದ ಇರುವುದು ಕೂಡ ಒಂದು ಬಗೆಯ ಯೋಗ ಎಂದು ಯೋಗ ಗುರುಜಿ ಕೆ. ಎ. ಶಂಕರ್ ಹೇಳಿದ್ದಾರೆ. ಎಪಿಎಸ್ ಶಿಕ್ಷಣ ಸಂಸ್ಥೆಗಳಿಂದ ಸೋಮನಹಳ್ಳಿಯ ಅನಂತ ಜ್ಙಾನ ಗ್ನಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಜೀವನದಲ್ಲಿ ಯೋಗದ ಮಹತ್ವ ಅರಿತು, ಪ್ರತಿನಿತ್ಯ ಯೋಗಾಸನ ಮಾಡಬೇಕು. ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಲಿದೆ ಎಂದರು.

Hit And Run Case: ಧಾರವಾಡದಲ್ಲಿ ಹಿಟ್ ಆ್ಯಂಡ್ ರನ್​ ಕೇಸ್: ASI ಸ್ಥಳದಲ್ಲೇ ಸಾವು

ಹಿಟ್ ಆ್ಯಂಡ್ ರನ್​ ಕೇಸ್: ASI ಸ್ಥಳದಲ್ಲೇ ಸಾವು

ಧಾರವಾಡದಲ್ಲಿ ಹಿಟ್‌ ಆಂಡ್‌ ರನ್‌ ಕೇಸ್‌ ನಡೆದಿದ್ದು, ಪೊಲೀಸ್‌ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಮೃತರ ಅಧಿಕಾರಿಯನ್ನು ASI ಎಲ್ಲಪ್ಪ ಕುಂಬಾರ್‌ ಎಂದು ಗುರುತಿಸಲಾಗಿದೆ. ಮೃತ ASI ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಬೈಕಿನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ.

Dinesh Gundu Rao ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಗ ಮಂದಿರ ಸ್ಥಾಪನೆ; ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಗ ಮಂದಿರ ಸ್ಥಾಪನೆ; ಆರೋಗ್ಯ ಸಚಿವ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಬಳಿಕ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಯೋಗದ ಕುರಿತು ಜಾಗೃತಿ ಮೂಡಿಸಲು ಯೋಗ ಮಂದಿರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಘೋಷಿಸಿದ್ದಾರೆ.

Karnataka Weather: ಇಂದಿನ ಹವಾಮಾನ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ

ಇಂದಿನ ಹವಾಮಾನ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ, ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸುಮಾರು 31 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.

Narayana Yaji Column: ವಾಲಿವಧೆಗೊಂದು ಕಾಲಚೋದಿತ ಕಾರಣ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ

ವಾಲಿವಧೆ: ರಾಜ ಶಾಸ್ತ್ರಾಧೀನ, ಶಾಸ್ತ್ರ ಧರ್ಮಾಧೀನ ಎಂದು ಸಾರಿದ ಪುರುಷೋತ್ತಮ

Narayana Yaji Column: ರಾಮ ದೇವರೆನ್ನುವುದನ್ನು ಮೊದಲು ಮರೆತು ವಾಲಿವಧೆಯನ್ನು ಗಮನಿಸಬೇಕು. ಕಾವ್ಯ ರಚಿಸುವ ಮೊದಲು ವಾಲ್ಮೀಕಿಗಿರುವ ಸಂಶಯವೇ ’ಹದಿನಾರು ಸದ್ಗುಣಗಳಿರುವ ಪರಿಪೂರ್ಣ ಪುರುಷರು ಈ ಲೋಕದಲ್ಲಿ ಇದ್ದಾರಾ?’ ಎನ್ನುವುದು. ಮನುಷ್ಯನಾದವನಿಗೆ ಸಹಜವಾಗಿರುವ ರಾಗ ದ್ವೇಷ ಕ್ರೋಧ ಮೋಹ ಎಲ್ಲವೂ ಇರುತ್ತಲೇ ದೇವರಾಗಬಲ್ಲ ಎನ್ನುವುದು ಕಾವ್ಯದ ತಿರುಳು.

Kabini Dam: ಕಬಿನಿ ಡ್ಯಾಂ ಸುರಕ್ಷತೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ: ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ

ಕಬಿನಿ ಡ್ಯಾಂ ಸುರಕ್ಷತೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ

Kabini Dam: ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಆತಂಕಿತ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಇದರಿಂದ ಕಬಿನಿ ಜಲಾಶಯದ ಸುರಕ್ಷತೆಗೆ ಯಾವುದೇ ರೀತಿಯ ಆತಂಕವಿಲ್ಲ. ಡ್ಯಾಂ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲು ಸರ್ಕಾರದಿಂದ ಎಲ್ಲಾ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.

Internationa Yoga Day: ತ್ರಿಕರಣ ಸಮನ್ವಯವೇ ಯೋಗ : ಡಾ.ಎ ಆರ್ ರಘುಪತಿ

ಸತ್ಯಸಾಯಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯೋಗ ಗುರು ಪತಂಜಲಿಯು ಸೂತ್ರಗಳ ಮೂಲಕ ನೀಡಿದ ಯೋಗವು ಭಾರತದ ಸಂಸ್ಕೃತಿಯ ಆರೋಗ್ಯ ಸಿದ್ಧಿಯ ನಿತ್ಯ ತಪವಾಗಿದೆ. ದಶಕದ ಹಿಂದೆ ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಭಾರತೀಯ ಮೂಲದ ಯೋಗವನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ದಿನಾಚರಣೆಯಾಗಿ ಘೋಷಿಸಿ ಕಾಯ ರೂಪಕ್ಕೆ ತಂದಿತ್ತು