Vishweshwar Bhat Column: ಯಾವುದೋ ರೂಪದಲ್ಲಿ ದೇವರು ಬಂದೇ ಬರುತ್ತಾನೆ !
ಆ ಸೇನಾ ತುಕಡಿಯಲ್ಲಿ ಹದಿನೈದು ಮಂದಿ ಯೋಧರಿದ್ದರು. ಅವರಿಗೆ ನಾಯಕನಾಗಿ ಒಬ್ಬ ಮೇಜರ್ ಇದ್ದ. ಆತ ಎರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಎರಡು ಬಾರಿಯೂ ಗೆಲುವಿನ ಸವಿ ಕಂಡಿದ್ದ ಅನುಭವಿ. ಅವನ ಮುಂದಾಳತ್ವದ ತಂಡವನ್ನು ಹಿಮಾ ಲಯದ ತಪ್ಪಲಿನಲ್ಲಿ ಸೇವೆಗೆ ನಿಯೋಜಿಸ ಲಾಗಿತ್ತು. ಮೂರು ತಿಂಗಳ ಸುದೀರ್ಘ ಅವಧಿಯವರೆಗೂ ಆ ಗಡಿ ಪ್ರದೇಶದಲ್ಲಿ ತುಂಬ ಎಚ್ಚರದಿಂದ ಪಹರೆ ಕಾಯುವ ಕೆಲಸ ಈ ಸೇನಾ ತುಕಡಿಯ ಯೋಧರದ್ದಾಗಿತ್ತು.


ನೂರೆಂಟು ವಿಶ್ವ
vbhat@me.com
ತುಂಬ ಕಷ್ಟದ ಸಮಯ ಎದುರಿಗಿದ್ದಾಗ, ತೀರಾ ಆಕಸ್ಮಿಕವಾಗಿ ಯಾರೋ ಒಬ್ಬರು ನೆರವಿಗೆ ಬರುತ್ತಾರೆ. ಅದನ್ನು ನೆನಪಿಸಿಕೊಂಡು ನಾವೆಲ್ಲ- ‘ದೇವರ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿ ಬಿಟ್ಟಿರಿ’ ಎಂದು ಉದ್ಗರಿಸಿರುತ್ತೇವೆ. ವಾಸ್ತವ ಏನೆಂದರೆ, ಬೇರೊಬ್ಬರ ಪಾಲಿಗೆ ದೇವರ ರೂಪದಲ್ಲಿ ನೆರವಾಗುವಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ.
ಈ ಮಾತಿಗೆ ಸಾಕ್ಷಿಯಾಗುವಂಥ ಪ್ರಸಂಗವೊಂದನ್ನು ಕೆಲ ವರ್ಷದ ಹಿಂದೆ ಓದುಗ ಸ್ನೇಹಿತರಾದ ಎಚ್.ಎಸ್.ಜಿ. ರಾವ್ ಹೇಳಿದರು. ಅದನ್ನು ನಿಮಗೆ ಹೇಳಲೇಬೇಕು ಎನಿಸುತ್ತಿದೆ. ಖಂಡಿತವಾಗಿಯೂ ಇದು ನಿಮಗೆ ಇಷ್ಟವಾಗುತ್ತದೆ. ಆ ಸೇನಾ ತುಕಡಿಯಲ್ಲಿ ಹದಿನೈದು ಮಂದಿ ಯೋಧರಿದ್ದರು. ಅವರಿಗೆ ನಾಯಕನಾಗಿ ಒಬ್ಬ ಮೇಜರ್ ಇದ್ದ. ಆತ ಎರಡು ಯುದ್ಧಗಳಲ್ಲಿ ಪಾಲ್ಗೊಂಡಿದ್ದ, ಎರಡು ಬಾರಿಯೂ ಗೆಲುವಿನ ಸವಿ ಕಂಡಿದ್ದ ಅನುಭವಿ. ಅವನ ಮುಂದಾಳತ್ವದ ತಂಡವನ್ನು ಹಿಮಾ ಲಯದ ತಪ್ಪಲಿನಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಮೂರು ತಿಂಗಳ ಸುದೀರ್ಘ ಅವಧಿಯವರೆಗೂ ಆ ಗಡಿ ಪ್ರದೇಶದಲ್ಲಿ ತುಂಬ ಎಚ್ಚರದಿಂದ ಪಹರೆ ಕಾಯುವ ಕೆಲಸ ಈ ಸೇನಾ ತುಕಡಿಯ ಯೋಧರದ್ದಾಗಿತ್ತು.
ಪಹರೆ ಕಾಯಬೇಕಿದ್ದ ಜಾಗಕ್ಕೆ ವಾಹನ ಸೌಲಭ್ಯವಿರಲಿಲ್ಲ. ಸೇನೆಯ ವಾಹನ ಇಳಿದ ನಂತರ 18 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಬೇಕಿತ್ತು. ಈ ಹೊಸದೊಂದು ತುಕಡಿ ಕರ್ತವ್ಯ ನಿರ್ವಹಿಸಲು ಬರುತ್ತಿದೆ ಎಂಬ ಸುದ್ದಿ ತಿಳಿದು ಈಗಾಗಲೇ ಹಿಮಾಲಯದ ತಪ್ಪಲಿನಲ್ಲಿ ಕಾವಲಿಗೆ ನಿಂತಿದ್ದ ಯೋಧರು ಖುಷಿಯಾಗಿದ್ದರು.
ಹೊಸ ತಂಡ ಅಲ್ಲಿಗೆ ತಲುಪಿದ ಮರುದಿನದಿಂದಲೇ ಈಗಾಗಲೇ ಕಾವಲಿಗೆ ನಿಂತಿದ್ದ ತುಕಡಿಯ ಯೋಧರಿಗೆ ರಜೆ ಮಂಜೂರಾಗುತ್ತಿತ್ತು. ರಜೆಯ ನೆಪದಲ್ಲಿ ಹುಟ್ಟಿದೂರಿಗೆ ತೆರಳುವ, ಹೆಂಡತಿ-ಮಕ್ಕಳೊಂದಿಗೆ ನಲಿದಾಡುವ, ಪೋಷಕರೊಂದಿಗೆ ಬೆರೆಯುವ ಸವಿಗನಸುಗಳೊಂದಿಗೆ ಹಳೆಯ ಯೋಧರ ತಂಡ ಉಳಿದಿತ್ತು.
ಇದನ್ನೂ ಓದಿ: Vishweshwar Bhat Column: ಈ ದೇಶದಲ್ಲಿ ಚಪ್ಪಲಿಗಳಿಗೂ ಒಂದು ವಸ್ತುಸಂಗ್ರಹಾಲಯವಿದೆ ಗೊತ್ತಾ ?!
ತನ್ನನ್ನು ಹಿಂಬಾಲಿಸುತ್ತಿದ್ದ ಸೈನಿಕರಿಗೆ ಮೇಜರ್, ಒಂದೊಂದೇ ಹಳೆಯ ಸಾಹಸವನ್ನು ನೆನಪಿಸಿ ಕೊಂಡು ಹೇಳುತ್ತಿದ್ದ. ಅವರು ಸಾಗುತ್ತಿದ್ದ ಹಾದಿ ಹಿಮಾಲಯದ ಕೊರಕಲುಗಳಿಂದ ಕೂಡಿತ್ತು. ಮಿಗಿಲಾಗಿ ಗಡಿ ಪ್ರದೇಶ ಬೇರೆ. ಹಾಗಾಗಿ, ಅವರು ತುಂಬ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದರು.
ಉಗ್ರರು, ಶತ್ರುಗಳು ಎದುರಾಗುವ ಆತಂಕ ಎಲ್ಲರಿಗೂ ಇದ್ದೇ ಇತ್ತು. ಹಾಗಾಗಿ ಎಷ್ಟೇ ಬಿರುಸಾಗಿ ನಡೆದರೂ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಸ್ಥಳವನ್ನು ತಲುಪಲು ಸಾಧ್ಯವಾಗಲಿಲ್ಲ. ಕತ್ತಲು ಆವರಿಸತೊಡಗಿದಂತೆ ಎಲ್ಲ ಯೋಧರನ್ನೂ ಒಂದೆಡೆ ಕೂರಿಸಿದ ಮೇಜರ್ ‘ಈಗ ಊಟ ಮುಗಿಸಿ ಬಿಡಿ. ಕತ್ತಲಾದ ನಂತರ ಏನೂ ಕಾಣಿಸದೆ ತೊಂದರೆಯಾಗಬಹುದು’ ಎಂದರು. ನಂತರದ ಅರ್ಧಗಂಟೆಯಲ್ಲಿ ಎಲ್ಲರೂ ಊಟ ಮುಗಿಸಿದರು.
ಹೇಗಿದ್ದರೂ ಬೆಳದಿಂಗಳಿದೆ. ರಾತ್ರಿ 12 ಗಂಟೆ ಯವರೆಗೂ ನಡೆದು ಬಿಡೋಣ. ಆನಂತರ ಸೂಕ್ತ ಜಾಗದಲ್ಲಿ ನಿದ್ರಿಸಿ ಬೆಳಗ್ಗೆ ಪ್ರಯಾಣ ಮುಂದುವರಿಸೋಣ ಎಂದರು ಮೇಜರ್. ಎಲ್ಲ ಯೋಧರೂ ಈ ಮಾತಿಗೆ ಒಪ್ಪಿಕೊಂಡರು. ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಅವರೆಲ್ಲ ಒಂದು ಸಮತಟ್ಟಾದ ಪ್ರದೇಶಕ್ಕೆ ಬಂದರು. ಅಲ್ಲಿ ತುಂಬ ಹಳೆಯದೆಂದು ತಕ್ಷಣಕ್ಕೆ ಗೊತ್ತಾಗುವಂತಿದ್ದ ಪೆಟ್ಟಿಗೆ ಅಂಗಡಿ ಯೊಂದಿತ್ತು. ಅದಕ್ಕೆ ಬೀಗ ಹಾಕಲಾಗಿತ್ತು. ಆ ನಡುರಾತ್ರಿಯಲ್ಲಿ (ಅದೂ ಹಿಮಾಲಯದ ಪ್ರದೇಶ ಬೇರೆ) ಗಡಗಡ ನಡುಗಿಸುವಂಥ ಚಳಿಯಿತ್ತು.
ಇಂಥ ಸಂದರ್ಭದಲ್ಲಿ ಹೇಗಾದರೂ ಅರ್ಧ ಕಪ್ ಟೀ ಸಕ್ಕರೆ ಸಾಕು ಎಂದು ಎಲ್ಲ ಸೈನಿಕರೂ ಅಂದುಕೊಂಡರು. ಆದರೆ, ಯಾರೂ ಬಾಯಿ ಬಿಟ್ಟು ಹೇಳಲಿಲ್ಲ. ನಡೆದೂ ನಡೆದೂ ಆಯಾಸ ವಾಗಿದ್ದ ಕಾರಣದಿಂದ ಮೇಜರ್ಗೂ ಈ ಸಂದರ್ಭದಲ್ಲಿ ಅರ್ಧ ಕಪ್ ಚಹಾ ಕುಡಿದಿದ್ದರೆ ರಿಲೀಫ್ ಸಿಗುತ್ತಿತ್ತು ಅನ್ನಿಸಿತು. ಆತ ಮನದ ಮಾತನ್ನು ಯೋಧರೊಂದಿಗೆ ಹೇಳಿಕೊಂಡ.
ಆದರೆ ಅವರ ಬಳಿ ಟೀ ಮಾಡಲು ಅಗತ್ಯವಿರುವ ಪಾತ್ರೆ, ಹಾಲು, ನೀರು, ಸಕ್ಕರೆ, ಟೀ ಪುಡಿ, ಸ್ಟವ್ ಈ ಯಾವುದೂ ಇರಲಿಲ್ಲ. ಇದನ್ನು ಎಲ್ಲರಿಗಿಂತ ಮೊದಲೇ ಅರ್ಥ ಮಾಡಿಕೊಂಡ ಮೇಜರ್ ಹೇಳಿದ ‘ಮೈ ಬಾಯ್ಸ್! ಇವತ್ತು ನಿಮ್ಮ ಪಾಲಿಗೆ ದುರಾದೃಷ್ಟ ಅಂದುಕೊಳ್ಳಿ. ಈಗಾಗಲೇ ನಡುರಾತ್ರಿ ಯಾಗಿದೆ. ಸಮೀಪದಲ್ಲಿ ಯಾವುದಾದರೂ ಹಳ್ಳಿ ಇರಬಹುದೇನೋ.
ಆದರೆ ಅಪರಾತ್ರಿಯಲ್ಲಿ ಹೋಗಿ ಬಾಗಿಲು ಬಡಿಯುವುದರಿಂದ ಜನ ಹೆದರಬಹುದು. ನಡುರಾತ್ರಿ ಯಲ್ಲಿ ಊರುಗಳಿಗೆ ಹೋಗುವುದು ಸೇನಾ ನೀತಿಯಲ್ಲ. ಹಾಗಾಗಿ ನಾವ್ಯಾರೂ ಇಲ್ಲಿಂದ ಕದಲುವುದು ಬೇಡ. ಈ ರಾತ್ರಿಯನ್ನು ಹೇಗಾದರೂ ಕಳೆಯೋಣ. ನಾಳೆ ಬೆಳಗ್ಗೆ ಬೇಗ ಪ್ರಯಾಣ ಆರಂಭಿಸೋಣ’ ಎಂದರು.
ಆಗ ಯೋಧರೆಲ್ಲ ಒಟ್ಟಾಗಿ ಹೇಳಿದರು-‘ಮೇಜರ್ ಸಾಬ್, ಒಂದು ಟೀ ಕುಡಿಯಲೇಬೇಕು ಎಂಬ ಆಸೆ ಎಲ್ಲರಿಗೂ ಇದೆ. ಎದುರಿಗೆ ಹೇಗಿದ್ದರೂ ಪೆಟ್ಟಿಗೆ ಅಂಗಡಿ ಇದೆ ತಾನೆ? ಅದರ ಬೀಗ ಒಡೆದು ನೋಡೋಣ. ಅಲ್ಲಿ ಟೀ ಮಾಡಲು ಅನುಕೂಲವಾಗುವಂಥ ವಸ್ತುಗಳಿದ್ದರೆ ಸರಿ. ಇಲ್ಲವಾದರೆ ಏನನ್ನೂ ಮುಟ್ಟದೆ ಬಾಗಿಲು ಹಾಕಿಬಿಡೋಣ.
ದೇಶಕ್ಕಾಗಿ ಹೋರಾಡುವವರು ನಾವು. ತೀರಾ ಅನಿವಾರ್ಯ ಅನಿಸಿದ್ದರಿಂದ ಮಾತ್ರ ಇಂಥದೊಂದು ತಪ್ಪು ಮಾಡುತ್ತಿದ್ದೇವೆ. ಇದು ಖಂಡಿತ ಮಹಾಪರಾಧ ಆಗುವುದಿಲ್ಲ’. ಯೋಧರ ಬೇಡಿಕೆಗೆ ಮೇಜರ್, ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಿದರು. ಯೋಧರೆಲ್ಲರ ಅದೃಷ್ಟ ಚೆನ್ನಾಗಿತ್ತು. ಕಾರಣ, ಆ ಪೆಟ್ಟಿಗೆ ಅಂಗಡಿಯಲ್ಲಿ ಹಾಲು, ಟೀ ಪುಡಿ, ಟೀ ತಯಾರಿಸಲು ಪಾತ್ರೆ, ಸಕ್ಕರೆ, ಕುಡಿಯಲು ಬಳಸುವ ಕಪ್ ಗಳು, ಸ್ಟವ್ ಹೀಗೆ ಎಲ್ಲವೂ ಇತ್ತು. ಬಿಸ್ಕತ್ಗಳಿದ್ದವು.
ಎಂಟು ಪ್ಯಾಕ್ ಸಿಗರೇಟ್ಗಳೂ ಇದ್ದವು. ಯೋಧರ ಖುಷಿಗೆ ಪಾರವೇ ಇಲ್ಲ. ಅವರೆಲ್ಲ ತುಂಬ ಸಡಗರದಿಂದ ಟೀ ತಯಾರಿಸಿದರು. ಸಿಗರೇಟುಗಳನ್ನು ಹಂಚಿಕೊಂಡರು. ಆ ನಡುರಾತ್ರಿಯಲ್ಲಿ ಚಪ್ಪರಿಸುತ್ತಾ, ಟೀ ಕುಡಿದು ತಮ್ಮ ಇಷ್ಟದ ಹಾಡು ಹೇಳಿ ಖುಷಿಪಟ್ಟರು. ನಂತರ ಎಲ್ಲರೂ ಒಂದೆರಡು ಗಂಟೆ ಕಾಲ ನಿದ್ರೆ ತೆಗೆದರು. ಬೆಳಕು ಹರಿಯುವ ಮುನ್ನವೇ ಎಲ್ಲರೂ ಎದ್ದು, ಹತ್ತು ನಿಮಿಷದ ವ್ಯಾಯಾಮ ಮಾಡಿ, ತಲುಪಬೇಕಿರುವ ಗಮ್ಯದತ್ತ ಹೊರಡಲು ಎದ್ದು ನಿಂತರು.
ಈ ಸಂದರ್ಭದಲ್ಲಿ ಮೇಜರ್ ಯೋಚಿಸಿದ. ನಮ್ಮ ಯೋಧರು ಈ ಅಂಗಡಿಯ ಬೀಗ ಮುರಿದು, ಟೀ ಮಾಡಿಕೊಂಡು ಕುಡಿದಿzರೆ. ಬಿಸ್ಕತ್ ತಿಂದಿದ್ದಾರೆ. ಸಿಗರೇಟು ಹಂಚಿಕೊಂಡಿದ್ದಾರೆ. ಹೀಗೆ ಮಾಡಿರುವು ದರಿಂದ ಅಂಗಡಿಯ ಮಾಲೀಕನಿಗೆ ಖಂಡಿತ ಲಾಸ್ ಆಗಿದೆ. ಅದನ್ನು ತುಂಬಿಕೊಡ ಬೇಕಾದುದು ನನ್ನ ಧರ್ಮ. ಹೀಗೊಂದು ಯೋಚನೆ ಬರುತ್ತಿದ್ದಂತೆಯೇ ಪರ್ಸ್ನಿಂದ ಒಂದು ಸಾವಿರ ರುಪಾಯಿ ಯ ನೋಟು ತೆಗೆದ ಮೇಜರ್, ಅದನ್ನು ಸಕ್ಕರೆ ಡಬ್ಬದ ಕೆಳಗಿಟ್ಟ.
ನಂತರ ಅಂಗಡಿಯ ಬಾಗಿಲು ಮುಚ್ಚಿ, ಬೀಗ ಸಿಕ್ಕಿಸಿದ (ಹದಿನೈದು ಜನ ಟೀ ಕುಡಿದು, ಬಿಸ್ಕತ್ ತಿಂದು, ಸಿಗರೇಟ್ ಸೇದಿದರೆ 1000 ರುಪಾಯಿ ಆಗುವುದಿಲ್ಲ ನಿಜ. ಆದರೆ ಆ ಅಪರಾತ್ರಿಯಲ್ಲಿ ಟೀ ಸಿಕ್ಕಾಗ ದೊರೆತ ಖುಷಿಗೆ ಬೆಲೆ ಕಟ್ಟಲಾಗದು ಎಂದು ಮೇಜರ್ ಲೆಕ್ಕಹಾಕಿದ). ಬೀಗ ಒಡೆದಿ ರುವುದನ್ನು ಕಂಡು ಗಾಬರಿಯಿಂದಲೇ ಬಾಗಿಲು ತೆರೆಯುವ ಮಾಲೀಕನಿಗೆ, ತುಂಬ ಬೇಗನೆ ಸಾವಿರ ರು.ಗಳ ನೋಟು ಕಾಣಿಸುತ್ತದೆ ಎಂಬುದು ಮೇಜರ್ ನಂಬಿಕೆಯಾಗಿತ್ತು.
ಹೊರಟು ನಿಂತಿದ್ದ ಯೋಧರು ತಮ್ಮ ನಾಯಕನನ್ನು ಅಚ್ಚರಿ ಬೆರೆತ ಪ್ರೀತಿಯಿಂದ ನೋಡು ತ್ತಿದ್ದರು. ಅವರೊಂದಿಗೆ ಹೆಜ್ಜೆಯಿಡುತ್ತಾ ಮೇಜರ್ ಹೇಳಿದ-‘ಒಂದು ವೇಳೆ ಬೆಳಗ್ಗೆಯೋ, ಮಧ್ಯಾ ಹ್ನವೋ ನಾವೆ ಅಲ್ಲಿಗೆ ಹೋಗಿದ್ದರೆ, ಅಂಗಡಿಯ ಮಾಲೀಕನಿಗೆ ಹಣ ನೀಡಿಯೇ ಟೀ ಕುಡಿಯು ತ್ತಿದ್ದೆವು. ನಡುರಾತ್ರಿಯಲ್ಲಿ ಅಂಗಡಿಯ ಮಾಲೀಕ ಇದ್ದಿದ್ದರೆ ನೀವೇ ಮುಂದಾಗಿ ಹಣ ನೀಡುತ್ತಿ ದ್ದೀರಿ ಎಂಬುದನ್ನೂ ನಾನು ಬ. ಆದರೆ, ಯಾರೂ ಇಲ್ಲದ ಕಾರಣದಿಂದ ನಾವು ಹಾಗೇ ಹೋಗಬಾರದು.
ಹಣ ಪಾವತಿಸದೇ ಹೋದರೆ, ಬೀಗ ಒಡೆದವರು ಕಳ್ಳರು ಎಂಬ ಭಾವನೆ ಅಂಗಡಿಯ ಮಾಲೀಕನಿಗೆ ಬರುತ್ತದೆ. ಉಹುಂ, ನಾವ್ಯಾರೂ ಕಳ್ಳರಲ್ಲ. ನಾವು ಭಾರತಾಂಬೆಯ ಹೆಮ್ಮೆಯ ಪುತ್ರರು. ದೇಶಭಕ್ತರು, ಈ ಕಾರಣದಿಂದಲೇ ನಾನು ಹಣ ಇಟ್ಟು ಬಂದೆ.’
ಈ ಮಾತು ಕೇಳಿದ ಯೋಧರ ಕಂಗಳಲ್ಲಿ ಮೆಚ್ಚುಗೆಯಿತ್ತು. ಅವತ್ತೇ ಈ ತುಕಡಿ ಗಡಿ ಕಾಯುವ ಕೆಲಸ ವಹಿಸಿಕೊಂಡಿತು. ಹೀಗೇ ವಾರಗಳು, ತಿಂಗಳುಗಳು ಕಳೆದವು. ಈ ತುಕಡಿಯವರಿಗೆ ರಜೆ ಘೋಷಣೆಯಾಯಿತು. ಈ ಯೋಧರಿದ್ದ ಪ್ರದೇಶಕ್ಕೆ ಹೊಸದೊಂದು ತುಕಡಿ ಬಂತು. ರಜೆ ಸಿಕ್ಕಿತೆಂಬ ಖುಷಿಯಲ್ಲಿ ಮೇಜರ್ ಮತ್ತು ಯೋಧರು ಮಿಲಿಟರಿ ಕ್ಯಾಂಪ್ ಕಡೆಗೆ ಹೆಜ್ಜೆ ಹಾಕಿದರು.
ಕಾಕತಾಳೀಯವೆಂಬಂತೆ ತಿಂಗಳುಗಳ ಹಿಂದೆ ನಡೆದು ಹೋದ ಹಾದಿಯ ಅವರು ಹಿಂತಿರುಗಿದ್ದರು. ಅದೃಷ್ಟಕ್ಕೆ ಅವತ್ತು ಟೀ ಅಂಗಡಿಯಲ್ಲಿ ಮಾಲೀಕನಿದ್ದ. ಅವನಿಗೆ ತುಂಬಾ ವಯಸ್ಸಾಗಿತ್ತು. ಮೇಜರ್ ಮತ್ತು ಯೋಧರೆಲ್ಲ ಟೀ ಕುಡಿದರು. ಬಿಸ್ಕತ್ ತಿಂದರು. ನಂತರ ಮಾಲೀಕನೊಂದಿಗೆ ಮಾತಿಗಿಳಿದ ಮೇಜರ್, ಅವನ ಸುಖ-ದುಃಖ ವಿಚಾರಿಸಿದ. ‘ಜನಸಂಚಾರ ವಿರಳವಾಗಿರುವ ಈ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡು ಬದುಕುವುದು ಕಷ್ಟವಲ್ಲವೆ?’ ಎಂದು ಪ್ರಶ್ನೆ ಹಾಕಿದ.
ನಂತರ- ‘ನೀವು ಏನೇ ಹೇಳಿ, ಈ ಜಗತ್ತಿನಲ್ಲಿ ದೇವರಿಲ್ಲ. ಆತ ನಿಜವಾಗ್ಲೂ ಇದ್ದಿದ್ರೆ ನಿಮಗೆ ಇಷ್ಟೊಂದು ಕಷ್ಟದ ಮಧ್ಯೆ ಬದುಕಬೇಕಾದ ಪರಿಸ್ಥಿತಿ ಬರ್ತಾ ಇರಲಿಲ್ಲ’ ಅಂದ. ಇದಕ್ಕೆ ಮರು ಕ್ಷಣವೇ ಪ್ರತಿಕ್ರಿಯಿಸಿದ ಆ ವೃದ್ಧ, ‘ಸಾಬ್, ದಯವಿಟ್ಟು ಹಾಗೆನ್ನಬೇಡಿ. ದೇವರು ಇದ್ದಾನೆ. ಆತ ಕರೆದಾಗ ನಮ್ಮ ನೆರವಿಗೆ ಯಾವ ರೂಪದದ್ರೂ ಬಂದೇ ಬರ್ತಾನೆ. ಈ ಮಾತಿಗೆ ಕೆಲವೇ ತಿಂಗಳುಗಳ ಹಿಂದೆ, ಈ ಅಂಗಡಿ ಯಲ್ಲಿಯೇ ಸಾಕ್ಷಿ ಸಿಕ್ಕಿದೆ. ನನ್ನ ಅಂಗಡಿಗೆ ಆ ದಯಾಮಯಿ ಭಗವಂತ ಬಂದು ಹೋಗಿದ್ದಾನೆ’ ಎಂದುಬಿಟ್ಟ. ಈ ಮಾತು ಕೇಳುತ್ತಿದ್ದಂತೆಯೇ ಎಲ್ಲ ಯೋಧರ ಕಿವಿಗಳು ನೆಟ್ಟಗಾದವು.
ಅವರೆಲ್ಲ-‘ಹೌದಾ? ಏನಾಯ್ತು?’ ಎಂದು ಕೇಳಿದರು. ಅದಕ್ಕೆ ಉತ್ತರವೆಂಬಂತೆ ವೃದ್ಧ ಹೀಗೆಂದ, ‘ತಿಂಗಳುಗಳ ಹಿಂದೆ ಉಗ್ರಗಾಮಿಗಳ ತಂಡವೊಂದು ಈ ಕಡೆಗೆ ಬಂತು. ಅವರು ನನ್ನ ಒಬ್ಬನೇ ಮಗನನ್ನು ಹಿಡಿದುಕೊಂಡು ಕೆಲವು ಸೂಕ್ಷ್ಮ ಮಾಹಿತಿ ನೀಡುವಂತೆ ಒತ್ತಾಯಿಸಿದರು. ನನ್ನ ಮಗ ಒಪ್ಪಲಿಲ್ಲ. ಅವನನ್ನು ಸಾಯುವಂತೆ ಬಡಿದು ಹೋಗಿಬಿಟ್ಟರು.
ವಿಷಯ ತಿಳಿದಾಕ್ಷಣ ಅಂಗಡಿಗೆ ಬೀಗ ಹಾಕಿ ಓಡಿಹೋದೆ. ಮಗನನ್ನು ಆಸ್ಪತ್ರೆಗೆ ಸೇರಿಸಿದೆ. ಅವತ್ತು ಕೆಲವು ಔಷಧಗಳ ಪಟ್ಟಿ ನೀಡಿದ ವೈದ್ಯರು, ಇವಿಷ್ಟನ್ನು ತಂದರೆ, ನಾಳೆ ಚಿಕಿತ್ಸೆ ಆರಂಭಿಸುತ್ತೇವೆ ಎಂದರು. ಅವತ್ತಿಗೆ ನನ್ನ ಬಳಿ ನಯಾ ಪೈಸೆ ಇರಲಿಲ್ಲ. ನೆರೆಹೊರೆಯವರ ಬಳಿ ಸಾಲ ಕೇಳಿದೆ. ಉಗ್ರಗಾಮಿಗಳ ಮೇಲಿನ ಭಯದಿಂದ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಅವತ್ತು, ನನಗೆ ದಿಕ್ಕೇ ತೋಚಲಿಲ್ಲ. ರಾತ್ರಿ ಒಬ್ಬನೇ ಕೂತು ದೇವರನ್ನು ಪ್ರಾರ್ಥಿಸಿದೆ. ಭಗವಂತಾ, ಹೇಗಾದ್ರೂ ಸಹಾಯ ಮಾಡು ತಂದೇ ಎಂದು ಮತ್ತೆ ಮತ್ತೆ ಬೇಡಿಕೊಂಡೆ.
ಒಂದಿಷ್ಟು ವ್ಯಾಪಾರ ಮಾಡಿಕೊಂಡು ಆಸ್ಪತ್ರೆಗೆ ಹೋಗೋಣ ಎಂದುಕೊಂಡೇ ಬೆಳಗ್ಗೆ ಎದ್ದು ಅಂಗಡಿಗೆ ಬಂದೆ. ಅಂಗಡಿಯ ಬೀಗ ಮುರಿದು ಹೋಗಿತ್ತು. ಓಹ್, ಕಳ್ಳತನವಾಗಿದೆ. ನನ್ನ ಬದುಕು ಬೀದಿಗೆ ಬಿತ್ತು ಎಂದುಕೊಳ್ಳುತ್ತಲೇ ಒಳಗೆ ಬಂದರೆ ಆಶ್ಚರ್ಯ ಕಾದಿತ್ತು. ಸಕ್ಕರೆ ಡಬ್ಬಿಯ ಕೆಳಗೆ 1000 ರುಪಾಯಿಯ ನೋಟಿತ್ತು. ಅವತ್ತು ನನ್ನ ಪಾಲಿಗೆ ಅದು ಲಕ್ಷ ರುಪಾಯಿಗಿಂತಲೂ ಹೆಚ್ಚು ಅನ್ನಿಸಿತು.
ಆ ಹಣದಿಂದಲೇ ಮಗನಿಗೆ ಚಿಕಿತ್ಸೆ ಕೊಡಿಸಿದೆ. ಈಗ ಹೇಳಿ ಸಾಹೇಬ್, ಅವತ್ತು ನನ್ನ ಅಂಗಡಿಗೆ ದೇವರಲ್ಲದೆ ಬೇರೆ ಯಾರಾದರೂ ಬಂದಿರಲು ಸಾಧ್ಯವೇ? ಒಂದಂತೂ ಸತ್ಯ. ನಾವು-ನೀವೆಲ್ಲ ಆಗಿಂದಾಗ್ಗೆ ದೇವರಿಲ್ಲ ಎಂದು ವಾದಿಸುತ್ತಲೇ ಇರುತ್ತೇವೆ. ಆದರೆ ಆತ ಯಾವುದೋ ರೂಪದಲ್ಲಿ ಕಾಣಿಸಿಕೊಂಡು ತನ್ನ ಲೀಲೆ ತೋರಿಸಿರುತ್ತಾನೆ. ತಿಂಗಳುಗಳ ಹಿಂದೆ ಈ ಟೀ ಶಾಪ್ಗೆ ಬಂದು ಹಣವಿಟ್ಟು ಹೋದನಲ್ಲ ಹಾಗೆ ದೇವರಲ್ಲದೆ ಬೇರೆ ಯಾರೂ ಹಾಗೆ ಮಾಡು ಸಾಧ್ಯವೇ ಇಲ್ಲ’.
ವೃದ್ಧ ಮಾತು ಮುಗಿಸಿದ ತಕ್ಷಣವೇ ಯೋಧನೊಬ್ಬ ಏನೋ ಹೇಳಲು ಮುಂದಾದ. ಅವನನ್ನು ಕಣ್ಸನ್ನೆಯಿಂದಲೇ ಎಚ್ಚರಿಸಿದ ಮೇಜರ್, ಏನೊಂದೂ ಮಾತನಾಡದಿರುವಂತೆ ಸೂಚಿಸಿದ. ಮಾತಾಡಲು ಬಿಟ್ಟರೆ, ಆ ಯೋಧ ಮೂರು ತಿಂಗಳ ಹಿಂದೆ ಈ ಅಂಗಡಿಯಲ್ಲಿ 1000 ರುಪಾಯಿ ನೋಟು ಇಟ್ಟು ಹೋಗಿದ್ದು ಮೇಜರ್ ಸಾಹೇಬರೇ ಹೊರತು ದೇವರಲ್ಲ ಎಂದು ಬಿಡುತ್ತಾನೆ ಎಂಬುದು ಆ ಸೇನಾಧಿಕಾರಿಗೆ ಅರ್ಥವಾಗಿ ಹೋಗಿತ್ತು.
ಆತ ಟೀ ಅಂಗಡಿಯ ಮಾಲೀಕನಾಗಿದ್ದ ವೃದ್ಧನ ಹೆಗಲು ತಟ್ಟುತ್ತಾ- ‘ಹೌದು ಅಜ್ಜಾ, ನಿಮ್ಮ ಮಾತು ನಿಜ. ದೇವರು ಎಲ್ಲೂ ಇದ್ದಾನೆ. ಅವನಿಗೆ ಬೇಕು ಅನ್ನಿಸಿದಾಗ ತನಗೆ ಇಷ್ಟವಾದ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ’ ಎಂದ. ಈ ಮಾತು ಹೇಳುವಾಗ ಮೇಜರ್ನ ಕಂಗಳಲ್ಲಿ ವಿಚಿತ್ರ ಕಾಂತಿಯಿತ್ತು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಹದಿನೈದು ಯೋಧರೂ ಭಾವಪರವಶರಾಗಿ, ಮಾತು ಹೊರಡದೆ ನಿಂತು ಬಿಟ್ಟಿದ್ದರು.