ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಚಿರತೆ ಮರಿಯನ್ನು ನಾಯಿಯಂತೆ ಎಳೆದೊಯ್ದು ಮೆರವಣಿಗೆ ಮಾಡಿದ ಗ್ರಾಮಸ್ಥರು; ಹೃದಯವಿದ್ರಾವಕ ವಿಡಿಯೊ ವೈರಲ್!

ರಾಜಸ್ಥಾನದ ಬುಂಡಿ ಬಳಿಯ ರಾಮಗಢ ವಿಸ್ಧಾರಿ ಹುಲಿ ಅಭಯಾರಣ್ಯದಲ್ಲಿ ಗ್ರಾಮಸ್ಥರು ಎರಡು ವರ್ಷದ ಅನಾರೋಗ್ಯ ಪೀಡಿತ ಹೆಣ್ಣು ಚಿರತೆಯ ಕುತ್ತಿಗೆಗೆ ಸ್ಕಾರ್ಫ್ ಕಟ್ಟಿ ನಾಯಿಯಂತೆ ಎಳೆದುಕೊಂಡು ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ.

ಚಿರತೆ ಮರಿಯನ್ನು ನಾಯಿಯಂತೆ ಎಳೆದೊಯ್ದ ಗ್ರಾಮಸ್ಥರು- ವಿಡಿಯೊ ನೋಡಿ

Profile pavithra Jun 25, 2025 3:50 PM

ಜೈಪುರ: ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಿದ್ದ ಸಾಕಷ್ಟು ಸುದ್ದಿಗಳು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ರಾಜಸ್ಥಾನದ ಬುಂಡಿ ಬಳಿಯ ರಾಮಗಢ ವಿಸ್ಧಾರಿ ಹುಲಿ ಅಭಯಾರಣ್ಯದಲ್ಲಿ ಗ್ರಾಮಸ್ಥರು ಎರಡು ವರ್ಷದ ಅನಾರೋಗ್ಯ ಪೀಡಿತ ಚಿರತೆಯ(Leopard) ಕುತ್ತಿಗೆಗೆ ಸ್ಕಾರ್ಫ್ ಕಟ್ಟಿ ನಾಯಿಯಂತೆ ಎಳೆದುಕೊಂಡು ಮೆರವಣಿಗೆ ಮಾಡಿದ ಘಟನೆ ನಡೆದಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video)ಆಗಿವೆ.

ವೈರಲ್ ವಿಡಿಯೊದಲ್ಲಿ ಏನಿದೆ?

ವೈರಲ್ ಆದ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಚಿರತೆಯ ಕುತ್ತಿಗೆಗೆ ಸ್ಕಾರ್ಫ್ ಕಟ್ಟಿಕೊಂಡು ಅದನ್ನು ನಾಯಿಯಂತೆ ಹಿಡಿದುಕೊಂಡು ಎಳೆದು ಹೋಗುತ್ತಿರುವುದು ಸೆರೆಯಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಚಿರತೆ ಮರಿಯೊಂದು ನಡೆಯಲು ಆಗದೆ ಮರದ ಬಳಿ ಕುಳಿತಿತ್ತು. ಚಿರತೆಯನ್ನು ಕಂಡ ಗ್ರಾಮಸ್ಥರು ಕೈಯಲ್ಲಿ ಕೋಲುಗಳು ಮತ್ತು ಮೊಬೈಲ್ ಫೋನ್‌ಗಳನ್ನು ಹಿಡಿದು ಚಿರತೆಯ ಸುತ್ತಲೂ ಜಮಾಯಿಸಿ ಅನಾರೋಗ್ಯ ಪೀಡಿತ ಪ್ರಾಣಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಅರಣ್ಯ ಅಧಿಕಾರಿಗಳ ಕ್ರಮ:

ಮಾಹಿತಿ ತಿಳಿದ ನಂತರ ಅರಣ್ಯ ರಕ್ಷಣಾ ತಂಡವು ಶೀಘ್ರದಲ್ಲೇ ಆ ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬುಂಡಿಯಲ್ಲಿ ಕೆಲವು ವೈದ್ಯಕೀಯ ಸಹಾಯದಿಂದ ಅದಕ್ಕೆ ಚಿಕಿತ್ಸೆ ನೀಡಿದ್ದಾರೆ. ಚಿರತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಟಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ವರದಿಗಳ ಪ್ರಕಾರ, ಡಿಸಿಎಫ್ ಅರವಿಂದ್ ಕುಮಾರ್ ಝಾ ಈ ಘಟನೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ.

ರಾಮಗಢ ವಿಶ್ಧಾರಿ ಹುಲಿ ಸಂರಕ್ಷಿತ ಪ್ರದೇಶ

ರಾಮಗಢ ವಿಶ್ಧಾರಿ ಹುಲಿ ಮೀಸಲು ಪ್ರದೇಶವನ್ನು ಇತ್ತೀಚೆಗೆ ರಾಜಸ್ಥಾನದ ನಾಲ್ಕನೇ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲಾಯಿತು. ಇದು ಬುಂಡಿ ಜಿಲ್ಲೆಯಲ್ಲಿದೆ ಮತ್ತು 481.91 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಅಭಯಾರಣ್ಯವು ಹುಲಿಗಳು ಮತ್ತು ಇತರ ವನ್ಯಜೀವಿಗಳಿಗೆ ಪ್ರಮುಖ ಆವಾಸಸ್ಥಾನವಾಗಿದೆ. ಇಲ್ಲಿ 7 ಹುಲಿಗಳಿದ್ದು, ರಣಥಂಬೋರ್‌ನ ಆರೋಹೆಡ್ ಕಂಕಟಿ ಹೆಣ್ಣು ಹುಲಿ ಮರಿಯೂ ಈಗ ಇಲ್ಲಿ ವಾಸವಾಗಿದೆಯಂತೆ.

ಈ ಸುದ್ದಿಯನ್ನೂ ಓದಿ:Viral Video: ʼಚಲ್ಕಾ ಚಲ್ಕಾ ರೇʼ ಹಾಡಿಗೆ ಅದ್ಭುತವಾಗಿ ಭರತನಾಟ್ಯ ಸ್ಟೆಪ್ಸ್‌ ಹಾಕಿದ ವಿದೇಶಿ ನರ್ತಕ; ನೆಟ್ಟಿಗರು ಫಿದಾ

ಕಂಕಟಿ ಹೆಣ್ಣು ಹುಲಿ ಏಪ್ರಿಲ್‌ನಲ್ಲಿ 7 ವರ್ಷದ ಮಗುವನ್ನು ಕೊಂದಿದ್ದಕ್ಕಾಗಿ ಮತ್ತು ಈ ವರ್ಷದ ಮೇ ತಿಂಗಳಲ್ಲಿ ಅರಣ್ಯ ರಕ್ಷಕನನ್ನು ಕೊಂದಿದ್ದಕ್ಕಾಗಿ ರಣಥಂಬೋರ್‌ನಿಂದ ಕಂಕಟಿಯನ್ನು ಇತ್ತೀಚೆಗೆ ರಾಮಗಢ ವಿಶ್ದಾರಿಗೆ ಸ್ಥಳಾಂತರಿಸಲಾಗಿದೆ.