ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ಯಾಮ್‌ಸಂಗ್ ನ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರಿನ ವಿದ್ಯಾರ್ಥಿಗಳು

ಬೆಂಗಳೂರಿನಲ್ಲಿ ಈ ತಿಂಗಳು ಐದು ಪ್ರಮುಖ ಶಾಲೆಗಳು ಮತ್ತು ಕಾಲೇಜುಗಳ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತದ ಭವಿಷ್ಯವನ್ನು ಮರುಕಲ್ಪಿಸಿಕೊಳ್ಳಲು ಮುಂದಾದರು. ಕಾರ್ಯಕ್ರಮದ ಭಾಗವಾಗಿ ರೋಡ್‌ಶೋಗಳು ಮತ್ತು ಓಪನ್ ಹೌಸ್‌ಗಳು ನಡೆಯಿತು.

ರಾಷ್ಟ್ರೀಯ ಸಂಶೋಧನಾ ಸ್ಪರ್ಧೆಯ ಭಾಗವಾದ ಬೆಂಗಳೂರಿನ ವಿದ್ಯಾರ್ಥಿಗಳು

Profile Ashok Nayak Jun 23, 2025 12:18 PM

ಬೆಂಗಳೂರು: ಸ್ಯಾಮ್‌ಸಂಗ್ ಸಂಸ್ಥೆಯು 14–22 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗಾಗಿ ಸಾಲ್ವ್ ಫಾರ್ ಟುಮಾರೋ ಎಂಬ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಯ ಭಾಗವಾಗಿ ಬೆಂಗಳೂರಿನ ಶಾಲಾ, ಕಾಲೇಜುಗಳ ಕ್ಯಾಂಪಸ್‌ ಗಳಲ್ಲಿ ಸಾಲ್ವ್ ಫಾರ್ ಟುಮಾರೋ ಕಾರ್ಯಾಗಾರಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಭಿನ್ನ ಐಡಿಯಾ ರೂಪಿಸಲು ಸ್ಫೂರ್ತಿ ಪಡೆದಿದ್ದಾರೆ.

ಏಪ್ರಿಲ್ 29 ರಂದು ಪ್ರಾರಂಭವಾಗಿರುವ ಈ ಸಂಶೋಧನಾ ಸ್ಪರ್ಧೆಯ ಈ ವರ್ಷದ ಯೋಜನೆ ಯನ್ನು ಸ್ಯಾಮ್ ಸಂಗ್ ಸಂಸ್ಥೆಯು ಡಿಸೈನ್ ಥಿಂಕಿಂಗ್ ಕಾರ್ಯಾಗಾರಗಳು ಮತ್ತು ಓಪನ್ ಹೌಸ್‌ ಗಳ ಸರಣಿಯ ಮೂಲಕ ಭಾರತದಾದ್ಯಂತ ನಡೆಸುತ್ತಿದೆ. ಕೆಲವು ಪ್ರಮುಖ ಮಹಾನಗರಗಳಲ್ಲಿ ಮಾತ್ರವಲ್ಲದೆ ಈಶಾನ್ಯ ಪ್ರದೇಶಗಳಲ್ಲಿಯೂ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ತಮ್ಮ ಸಮುದಾಯದಲ್ಲಿರುವ ನೈಜ ಪ್ರಪಂಚದ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಅರ್ಥಪೂರ್ಣ ತಂತ್ರಜ್ಞಾನ ಆಧರಿತ ಪರಿಹಾರೋತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Kiran Upadhyay Column: ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಈ ವರ್ಷ ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ವಿಜೇತ ತಂಡಗಳಿಗೆ 1 ಕೋಟಿ ರೂಪಾಯಿ ಗಳನ್ನು ನೀಡಲಾಗುತ್ತಿದ್ದು, ಜೊತೆಗೆ ಅವರಿಗೆ ಪ್ರೊಟೊಟೈಪಿಂಗ್ ಮಾರ್ಗದರ್ಶನ, ಸ್ಯಾಮ್‌ಸಂಗ್ ನಾಯಕರು ಮತ್ತು ದೆಹಲಿ ಐಐಟಿಯ ತಜ್ಞ ಉಪನ್ಯಾಸಕರ ಮಾರ್ಗದರ್ಶನ ಮತ್ತು ಮೌಲ್ಯಯುತ ಇನ್ವೆಸ್ಟರ್ ಸಂಪರ್ಕ ಹೊಂದುವ ಅವಕಾಶಗಳನ್ನು ನೀಡಲಾಗುತ್ತದೆ. ವಿಶೇಷವಾಗಿ ತಮ್ಮ ಆಲೋಚನೆಗಳನ್ನು ಅಭಿವೃದ್ಧಿಗೊಳಿಸಲು ಯುವ ಮನಸ್ಸುಗಳಿಗೆ ಅಗತ್ಯವಾದ ನೆರವನ್ನು ಒದಗಿಸುತ್ತದೆ.

ಬೆಂಗಳೂರಿನಲ್ಲಿ ಈ ತಿಂಗಳು ಐದು ಪ್ರಮುಖ ಶಾಲೆಗಳು ಮತ್ತು ಕಾಲೇಜುಗಳ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತದ ಭವಿಷ್ಯವನ್ನು ಮರುಕಲ್ಪಿಸಿಕೊಳ್ಳಲು ಮುಂದಾದರು. ಕಾರ್ಯಕ್ರಮದ ಭಾಗವಾಗಿ ರೋಡ್‌ಶೋಗಳು ಮತ್ತು ಓಪನ್ ಹೌಸ್‌ಗಳು ನಡೆಯಿತು.

ಈ ಮೂಲಕ ಹೈಸ್ಕೂಲ್‌ಗಳಿಂದ ಹಿಡಿದು ಮೆಡಿಕಲ್ ಕಾಲೇಜುಗಳವರೆಗಿನ ವಿದ್ಯಾರ್ಥಿಗಳು ನೈಜ-ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧರಿರುವುದಾಗಿ ಸ್ಪಷ್ಟ ಪಡಿಸಿದರು. ಸಹಾನುಭೂತಿ ಯಿಂದ ತಂತ್ರಜ್ಞಾನ ಬಳಸಿಕೊಂಡು ಅರ್ಥಪೂರ್ಣ ಬದಲಾವಣೆ ಉಂಟುಮಾಡುವ ಉತ್ಸಾಹ ತೋರಿದರು. ಡಾ. ಚಂದ್ರಮ್ಮ ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್‌ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿಶೇಷ ಅನುಭವಕ್ಕೆ ಪಾತ್ರರಾದರು.

ಈ ಕುರಿತು ಮಾತನಾಡಿರುವ ವಿದ್ಯಾರ್ಥಿನಿ ರಿತ್ವಿಕಾ ಅವರು, “ಇಲ್ಲಿ ನಡೆದ ಕಾರ್ಯಾಗಾರವು ನನಗೆ ನಿಜವಾಗಿಯೂ ಭಿನ್ನವಾಗಿ ಯೋಚಿಸುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಕೇವಲ ಐಡಿಯಾಗಳ ಬಗ್ಗೆ ಮಾತ್ರವಲ್ಲ, ಅವುಗಳನ್ನು ಯೋಜಿಸಿ ರೂಪಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿ ದೊರೆಯಿತು. ನಮ್ಮ ಸುತ್ತಲಿನ ತ್ಯಾಜ್ಯ ನಿರ್ವಹಣೆ ಕುರಿತು ನಾನು ಯಾವಾಗಲೂ ಆಲೋಚಿಸುತ್ತಿದ್ದೆ. ಈಗ, ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಮೂಲಕ ನಾನು ತ್ಯಾಜ್ಯ ವಿಂಗಡಣಾ ವ್ಯವಸ್ಥೆಯನ್ನು ರೂಪಿಸಲು ಕೆಲಸ ಮಾಡಲು ಬಯಸುತ್ತೇನೆ. ಒಟ್ಟಾರೆಯಾಗಿ ಈ ಯೋಜನೆ ನಾವು ಕೇವಲ ವಿದ್ಯಾರ್ಥಿಗಳಲ್ಲ, ಸಮಸ್ಯೆ ಪರಿಹಾರ ಮಾಡುವವ ರಾಗಿ ರೂಪುಗೊಳ್ಳಬಹುದು ಎಂದು ತಿಳಿಸಿತು” ಎಂದರು.

ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ ನಲ್ಲಿ ಸಹ ಇದೇ ಉತ್ಸಾಹ ಕಂಡು ಬಂದಿದ್ದು, ಅಲ್ಲಿನ ವಿದ್ಯಾರ್ಥಿ ರುದ್ರ ಅವರು ಮಾತನಾಡಿ, “ಡಿಸೈನ್ ಥಿಂಕಿಂಗ್ ಎಂದರೆ ಏನು ಎಂದು ನನಗೆ ಈ ಕಾರ್ಯಗಾರದಲ್ಲಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು. ಡಿಸೈನ್ ಥಿಂಕಿಂಗ್ ಅನ್ನುವುವು ಪ್ರಕ್ರಿಯೆಯಲ್ಲ, ಇದೊಂದು ಮನಸ್ಥಿತಿ. ನಾನು ವಿದ್ಯುತ್ ಸಂರಕ್ಷಣೆ ಕುರಿತ ಐಡಿಯಾದ ಮೇಲೆ ಕೆಲಸ ಮಾಡಲು ಬಯಸುತ್ತೇನೆ. ಆ ಮೂಲಕ ಸಮಾಜಕ್ಕೆ ಸಹಾಯ ಮಾಡುವ ಇಚ್ಛೆ ಇದೆ. ಈ ಕಾರ್ಯಕ್ರಮವು ನನಗೆ ಈ ನಿಟ್ಟಿನಲ್ಲಿ ಸಾಗಲು ಬೇಕಾದ ಸ್ಪಷ್ಟತೆಯನ್ನು ನೀಡಿದೆ” ಎಂದು ಹೇಳಿದರು.

ಈ ಕಾರ್ಯಕ್ರಮ ಕೇವಲ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಸಾಂದೀಪನಿ ಸ್ಕೂಲ್, ಮತ್ತು ಎಇಸಿಎಸ್ ಸ್ಕೂಲ್‌ ಇತ್ಯಾದಿ ಶಾಲೆಗಳಲ್ಲಿಯೂ ಕಾರ್ಯಕ್ರಮಗಳು ನಡೆದುವು.

ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ದೀಕ್ಷಾ, “ಪರಿಸರ ಸಮಸ್ಯೆಗಳನ್ನು ಪರಿಹರಿಸಲು ವರ್ಷ ಗಟ್ಟಲೆ ಸಂಶೋಧನೆ ಮಾಡಬೇಕು ಎಂದು ನಾನು ಭಾವಿಸುತ್ತಿದ್ದೆ. ಆದರೆ ಈ ಕಾರ್ಯಾಗಾರವು ಮೊದಲು ಸಮಸ್ಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಕಲಿಸಿತು. ನಂತರ ಪ್ರಾಯೋಗಿಕ ಪರಿಹಾರಗಳ ಬಗ್ಗೆ ಯೋಚಿಸಲು ಆರಂಭಿಸಲು ತಿಳಿಸಿಕೊಟ್ಟಿತು. ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಮೂಲಕ ನಾನು ಸುಸ್ಥಿರತೆಗಾಗಿ ತಂತ್ರಜ್ಞಾನ-ಆಧಾರಿತ ಪರಿಹಾರೋಪಾಯಗಳನ್ನು ಸೃಷ್ಟಿಸಲು ಬಯಸುತ್ತೇನೆ. ಇಲ್ಲಿ ತುಂಬಾ ಸಾಧ್ಯತೆಗಳಿವೆ ಮತ್ತು ನಾನು ಈ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ನಂಬುತ್ತೇನೆ” ಎಂದರು.

ಮತ್ತೊಬ್ಬ ವಿದ್ಯಾರ್ಥಿ ಅನೀಶ್‌ ಮಾತನಾಡಿ, “ಇದಕ್ಕೂ ಮೊದಲು, ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಆದರೆ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ನನಗೆ ಸಂಸ್ಥಾ ಪಕನಂತೆ ಯೋಚಿಸಲು ದಾರಿಯನ್ನು ತೋರಿತು. ನಾನು ವನ್ಯಜೀವಿ ಸಂರಕ್ಷಣೆಯ ಸಮಸ್ಯೆಗಳ ಮೇಲೆ ಕೆಲಸ ಮಾಡಲು ಬಯಸುತ್ತೇನೆ ಮತ್ತು ಅಂತಿಮವಾಗಿ ಈ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಇಚ್ಛಿಸುತ್ತೇನೆ” ಎಂದರು.

ಈ ಕಾರ್ಯಕ್ರಮಗಳು ಬೆಂಗಳೂರಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯ ಕಿಡಿಯನ್ನು ಹಚ್ಚಿವೆ. ಅವರ ಸಮುದಾಯದಲ್ಲಿರುವ ವಾಸ್ತವ ಪ್ರಪಂಚದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅದನ್ನು ಪರಿಹರಿಸುವ ಐಡಿಯಾ ರೂಪಿಸಲು ಸ್ಫೂರ್ತಿ ನೀಡಿವೆ.

ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮಗಳು ಮುಕ್ತಾಯ ಗೊಂಡಿವೆ. ಆದರೆ ಈ ಕಾರ್ಯಕ್ರಮಗಳು ಯು ಮನಸ್ಸುಗಳಲ್ಲಿ ಯೋಚನೆಯ ಬೀಜ ಬಿತ್ತಿವೆ. ಒಂದೊಂದೇ ಹೊಸ ಪರಿಹಾರೋಪಾಯದ ಮೂಲಕ ಭಾರತವನ್ನು ಬದಲಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ.