Salman Khurshid: ಆರ್ಟಿಕಲ್ 370 ರದ್ದತಿಯನ್ನು ಹಾಡಿ ಹೊಗಳಿದ ಕಾಂಗ್ರೆಸ್ ಮುಖಂಡ
Salman Khurshid on Article 370: 2019 ರಲ್ಲಿ ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲದ ಪ್ರತ್ಯೇಕತಾವಾದದ ಸಮಸ್ಯೆ ಕೊನೆಗೊಂಡಿತು, ಇದರಿಂದಾಗಿ ಈ ಪ್ರದೇಶದಲ್ಲಿ "ಸಮೃದ್ಧಿ" ಕಂಡುಬಂದಿದೆ ಎಂದು ಇಂಡೋನೇಷ್ಯಾಕ್ಕೆ ರಾಜತಾಂತ್ರಿಕ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.


ನವದೆಹಲಿ: ಶಶಿ ತರೂರ್ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರದ ಪರ ಬ್ಯಾಟಿಂಗ್ ಬೀಸಿದ್ದಾರೆ. ಇಂಡೋನೇಷ್ಯಾಕ್ಕೆ ತೆರಳಿರುವ ಸರ್ವಪಕ್ಷ ನಿಗೋಗದಲ್ಲಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್(Salman Khurshid), ಕಾಂಗ್ರೆಸ್ನಿಂದ ಬಹಳ ವಿರೋಧ ವ್ಯಕ್ತವಾಗಿದ್ದ ಆರ್ಟಿಕಲ್ 370 ರದ್ದತಿಯನ್ನು ಹಾಡಿ ಹೋಗಳಿದ್ದಾರೆ. 2019 ರಲ್ಲಿ ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲದ ಪ್ರತ್ಯೇಕತಾವಾದದ ಸಮಸ್ಯೆ ಕೊನೆಗೊಂಡಿತು, ಇದರಿಂದಾಗಿ ಈ ಪ್ರದೇಶದಲ್ಲಿ "ಸಮೃದ್ಧಿ" ಕಂಡುಬಂದಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
🚨 Congress MP Salman Khurshid: "Article 370 gave outsiders the impression J&K was separate from India"
— Megh Updates 🚨™ (@MeghUpdates) May 30, 2025
"Its abrogation, high turnout & elected govt prove it’s integral"
— What Cong top brass never said openly, their MPs are now speaking aloud.
Tharoor, Khurshid..who’s next? pic.twitter.com/yVcrgzMjfi
ಕಾಶ್ಮೀರವು ದೀರ್ಘಕಾಲದವರೆಗೆ ಒಂದು ಪ್ರಮುಖ ಸಮಸ್ಯೆಯನ್ನು ಹೊಂದಿತ್ತು. ಇಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ ಹೀಗೆ ಹತ್ತು ಹಲವು ಸಮಸ್ಯೆಗಳು ಹೊಂದಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿದ ನಂತರ ಅಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿತ್ತು. ಅಲ್ಲದೇ ಪ್ರವಾಸೋದ್ಯಮಕ್ಕೂ ಭಾರೀ ಉತ್ತೇಜನ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: All Party Delegation: ಭಯೋತ್ಪಾದನೆ ವಿರುದ್ಧ ಕೇಂದ್ರದ ರಾಜತಾಂತ್ರಿಕ ನಡೆ; ಸರ್ವಪಕ್ಷ ಸದಸ್ಯರ ನಿಯೋಗಕ್ಕೆ ಶಶಿ ತರೂರ್ ಹೆಸರು ಸೂಚಿಸದ ಕಾಂಗ್ರೆಸ್