ಭಾರತ ಟೆಸ್ಟ್ ತಂಡದ ನಾಯಕತ್ವ ಎಂದರೇನೆಂದು ಶುಭಮನ್ ಗಿಲ್ಗೆ ಅರಿವಿಲ್ಲ: ದಿನೇಶ್ ಕಾರ್ತಿಕ್!
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 20 ರಂದು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಟ ನಡಸಲಿವೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.

ಶುಭಮನ್ ಗಿಲ್ಗೆ ಎಚ್ಚರಿಕೆ ನೀಡಿದ ದಿನೇಶ್ ಕಾರ್ತಿಕ್.

ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಶುಭಮನ್ ಗಿಲ್ ( Shubman Gill) ಇನ್ನೂ ಅರ್ಥವಾಗಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೋಪರ್ ದಿನೇಶ್ ಕಾರ್ತಿಕ್ (Dinesh Karthik) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಶುಭಮನ್ ಗಿಲ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನನ್ನಾಗಿ ನೇಮಿಸಲಾಗಿತ್ತು. ಜೂನ್ 20 ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯು ನಾಯಕನಾಗಿ ಶುಭಮನ್ ಗಿಲ್ಗೆ ಮೊದಲ ಜವಾಬ್ದಾರಿಯಾಗಿದೆ. ಈ ಸರಣಿಯಲ್ಲಿ ನಾಯಕನಾಗಿ ಗಿಲ್ಗೆ ಕಠಿಣ ಸವಾಲು ಎದುರಾಗಲಿದೆ.
ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, "ಭಾರತದ ಟೆಸ್ಟ್ ನಾಯಕನಾಗುವುದರ ಅಗಾಧತೆಯನ್ನು ಅವರು ಇನ್ನೂ ಅರಿತುಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಸಿಂಹದ ಗುಹೆಯೊಳಗೆ ನಡೆಯುತ್ತಿದ್ದಾರೆ. ಕ್ರಿಕೆಟ್ ರಾಷ್ಟ್ರವಾಗಿ ಇಂಗ್ಲೆಂಡ್ಗೆ ಬರುವುದು ಸುಲಭವಲ್ಲ. ಸೂಪರ್ಸ್ಟಾರ್ಗಳನ್ನು ಹೊಂದಿರುವ ಅನೇಕ ತಂಡಗಳು ಬಂದಿವೆ ಮತ್ತು ಅವರು ಅದನ್ನು ನಿಜವಾಗಿಯೂ ಕಷ್ಟಕರವೆಂದು ಅರಿತುಕೊಂಡಿದ್ದರು," ಎಂದು ಹೇಳಿದ್ದಾರೆ.
IND vs ENG: ಭಾರತೀಯ ಕ್ರಿಕೆಟ್ನ ದೊಡ್ಡ ಸೂಪರ್ ಸ್ಟಾರ್ ಆಟಗಾರನನ್ನು ಹೆಸರಿಸಿದ ಜೋಸ್ ಬಟ್ಲರ್!
"ಅದೃಷ್ಟವಶಾತ್ ಶುಭಮನ್ ಗಿಲ್ಗೆ, ಇಂಗ್ಲೆಂಡ್ ಬೌಲಿಂಗ್ ದಾಳಿ ತುಂಬಾ ದುರ್ಬಲವಾಗಿದೆ. ನಾನು ನೋಡುವ ಏಕೈಕ ಸಕಾರಾತ್ಮಕ ಅಂಶವೆಂದರೆ ಇದಾಗಿದೆ, ಅವರು ಬ್ಯಾಟಿಂಗ್ನಲ್ಲಿ ಒತ್ತಡವನ್ನು ಹಾಕಲಿದ್ದಾರೆ. ನಾನು ಬ್ಯಾಟಿಂಗ್ ಎಂದು ಹೇಳಿದಾಗ, ಇಂಗ್ಲೆಂಡ್ ಬ್ಯಾಟಿಂಗ್ ಖಂಡಿತವಾಗಿಯೂ ಭಾರತ ತಂಡವನ್ನು ಒತ್ತಡಕ್ಕೆ ಒಳಪಡಿಸುತ್ತದೆ ಎಂದರ್ಥ, ಆದರೆ ಬೌಲಿಂಗ್ ಇಂಗ್ಲೆಂಡ್ಗೆ ಇನ್ನೂ ಪ್ರಗತಿಯಲ್ಲಿರುವ ಒಂದು ಕ್ಷೇತ್ರವಾಗಿದೆ ಮತ್ತು ಅದು ಭಾರತದ ಕೈಗೆ ಚೆನ್ನಾಗಿ ಹೊಂದಿಕೊಳ್ಳಬಹುದು," ಎಂದು ಅವರು ತಿಳಿಸಿದ್ದಾರೆ.
ಇಂಗ್ಲೆಂಡ್ಗೆ ಗಾಯಾಳುಗಳ ಸಮಸ್ಯೆ
ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ವೇಗದ ಬೌಲರ್ ಮಾರ್ಕ್ ವುಡ್ ಅವರು ಗಾಯದ ಸಮಸ್ಯೆಯಿಂದ ಆರಂಭಿಕ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಜೋಫ್ರಾ ಆರ್ಚರ್ ಕೂಡ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇನ್ನು ಗಸ್ ಅಟ್ಕಿನ್ಸನ್ ಅವರು ಕೂಡ ಹ್ಯಾಮ್ಸ್ಟ್ರಿಂಗ್ ಗಾಯದಿಂದ ಇನ್ನೂ ಗುಣಮುಖರಾಗುತ್ತಿದ್ದಾರೆ.
IND vs ENG Test: ಇಂದು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಲಿರುವ ಕೋಚ್ ಗಂಭೀರ್
ಗಾಯದ ಸಮಸ್ಯೆಯ ಹೊರತಾಗಿಯೂ ಶುಭಮನ್ ಗಿಲ್ ನಾಯಕತ್ವದ ಭಾರತ ಯುವ ತಂಡವನ್ನು ಇಂಗ್ಲೆಂಡ್ ಬೌಲರ್ಗಳು ಹೇಗೆ ಎದುರಿಸಲಿದ್ದಾರೆಂದು ಕಾದು ನೋಡಬೇಕಾಗಿದೆ. ಸೀಮ್ ಬೌಲಿಂಗ್ ಕಂಡೀಷನ್ಸ್ನಲ್ಲಿ ಗಿಲ್ ತಮ್ಮ ಭಾರತ ತಂಡವನ್ನು ಹೇಗೆ ಮುನ್ನಡೆಸಲಿದದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.