ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Banu Mushtaq: ಪ್ರಶಸ್ತಿಯನ್ನು ವ್ಯಕ್ತಿಯಾಗಿ ಅಲ್ಲ, ಒಗ್ಗಟ್ಟಿನ ಧ್ವನಿಯಾಗಿ ಸ್ವೀಕರಿಸುತ್ತೇನೆ: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್

ಯಾವ ಕಥೆಯೂ ಸಣ್ಣದಲ್ಲ: ಭಾನು ಮುಷ್ತಾಕ್

ಕರ್ನಾಟಕದ ಲೇಖಕಿ ಬಾನು ಮುಷ್ತಾಕ್ ತಮ್ಮ ಕೃತಿ ‘ಹಾರ್ಟ್ ಲ್ಯಾಂಪ್’ಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಕನ್ನಡದ ಮೊದಲ ಲೇಖಕಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಕೃತಿಯನ್ನು ಲೇಖಕಿ, ಅನುವಾದಕಿ ಮತ್ತು ಸಂಶೋಧಕಿ ದೀಪಾ ಭಾಸ್ತಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಬಾನು ಮುಷ್ತಾಕ್, ಈ ಗೌರವವನ್ನು ವೈಯಕ್ತಿಕ ಸಾಧನೆಯಾಗಿ ಒಪ್ಪಿಕೊಳ್ಳದೆ, ಇತರರೊಂದಿಗೆ ಒಗ್ಗೂಡಿದ ಧ್ವನಿಯಾಗಿ ಸ್ವೀಕರಿಸುವುದಾಗಿ ತಿಳಿಸಿದರು.

Pralhad Joshi: ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಠಿಣ ಕ್ರಮ: ಪ್ರಲ್ಹಾದ್‌ ಜೋಶಿ ಎಚ್ಚರಿಕೆ

ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಠಿಣ: ಜೋಶಿ

Pralhad Joshi: ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್‌ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್‌ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Tumkur News: ಕಾರ್ಖಾನೆ ಸಂಪ್‌ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಕಾರ್ಮಿಕರ ಸಾವು, ಮತ್ತಿಬ್ಬರು ಅಸ್ವಸ್ಥ

ಕಾರ್ಖಾನೆ ಸಂಪ್‌ ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕರಿಬ್ಬರ ಸಾವು

Tumkur News: ಕಾರ್ಖಾನೆಯ ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಜರುಗಿದೆ. ಮಧುಗಿರಿ ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್ (23), ಶಿರಾ ತಾಲೂಕಿನ ತರೂರು ಗ್ರಾಮದ ವೆಂಕಟೇಶ್ (32) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್‌ ಸ್ಮಾರ್ಟ್ ಫೋನ್ ಗೆ ಪ್ರೀ- ಆರ್ಡರ್ ಪ್ರಾರಂಭ; ಆರಂಭಿಕ ಬೆಲೆ ರೂ.109,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್‌ : ಪ್ರೀಆರ್ಡರ್ ಪ್ರಾರಂಭ

ಸ್ಟೈಲ್ ಮತ್ತು ಪವರ್ ಅನ್ನು ಗಮನ ದಲ್ಲಿಟ್ಟುಕೊಂಡು ರಚಿಸಲಾದ ಗ್ಯಾಲಕ್ಸಿ ಎಸ್25 ಎಡ್ಜ್, ಗಟ್ಟಿ ಮುಟ್ಟಾದ ಟೈಟಾನಿಯಂ ದೇಹವನ್ನು ಹೊಂದಿದ್ದು, ಪ್ರೀಮಿಯಂ, ಉನ್ನತ-ಮಟ್ಟದ ಕಾರ್ಯ ಕ್ಷಮತೆಯನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್25 ಎಡ್ಜ್, ಎಸ್ ಸರಣಿಯ ಅದ್ಭುತ ಗ್ಯಾಲಕ್ಸಿ ಎಐ ಆಧರಿತ ಕ್ಯಾಮೆರಾವನ್ನು ಹೊಂದಿದ್ದು, ಸೃಜನಶೀಲತೆಗೆ ಹೊಸ ವ್ಯವಸ್ಥೆ ಕಲ್ಪಿಸಿಕೊಡುತ್ತದೆ

Dr. MA Saleem: ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ಡಾ. ಎಂ.ಎ. ಸಲೀಂ ಅಧಿಕಾರ ಸ್ವೀಕಾರ

ರಾಜ್ಯದ ನೂತನ ಡಿಜಿ-ಐಜಿಪಿಯಾಗಿ ಡಾ. ಎಂ.ಎ. ಸಲೀಂ ಅಧಿಕಾರ ಸ್ವೀಕಾರ

Dr. MA Saleem: ರಾಜ್ಯ ಡಿಜಿ-ಐಜಿಪಿಯಾಗಿದ್ದ ಡಾ. ಅಲೋಕ್ ಮೋಹನ್ ಅವರು ಇಂದು (ಮೇ 21) ಸೇವೆಯಿಂದ ನಿವೃತ್ತರಾಗಿದ್ದಾರೆ. ಹೀಗಾಗಿ 1993ನೇ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ ಹಾಗೂ ಹಾಲಿ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Dead Body Found: ಬೆಂಗಳೂರಿನಲ್ಲಿ ಸೂಟ್​ಕೇಸ್​ನಲ್ಲಿ ಯುವತಿಯ ಶವ ಪತ್ತೆ!

ಬೆಂಗಳೂರಿನಲ್ಲಿ ಸೂಟ್​ಕೇಸ್​ನಲ್ಲಿ ಯುವತಿಯ ಶವ ಪತ್ತೆ!

Dead Body Found: ಬೆಂಗಳೂರು ಹೊರವಲಯದ ಚಂದಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈಲ್ವೆ ಬ್ರಿಡ್ಜ್ ಸಮೀಪ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಬೇರೆಲ್ಲೋ ಕೊಲೆಗೈದು ರೈಲಿನಲ್ಲಿ ಸಾಗುವ ವೇಳೆ ಮೃತದೇಹವನ್ನು ಹೊರಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Bengaluru Rains: ಬೇಸ್‌ಮೆಂಟ್‌ ಪಾರ್ಕಿಂಗ್ ನಿರ್ಮಾಣಕ್ಕೆ ಅನುಮತಿ ನೀಡದಂತೆ ಸಿಎಂ ಸೂಚನೆ

ಬೇಸ್‌ಮೆಂಟ್‌ ಪಾರ್ಕಿಂಗ್ ನಿರ್ಮಾಣಕ್ಕೆ ಅನುಮತಿ ನೀಡದಂತೆ ಸಿಎಂ ಸೂಚನೆ

Bengaluru Rains: ಬೆಂಗಳೂರಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬೆಂಗಳೂರಿನಲ್ಲಿ ನೆರೆ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ರಾಜಕಾಲುವೆ ಅಭಿವೃದ್ಧಿಯಂತಹ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಭಾರತೀಯ ಪಾಲುದಾರರೊಂದಿಗೆ ವಿಶ್ವ-ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ:  ಲಂಡನ್ ಇಂಪೀರಿಯಲ್ ಕಾಲೇಜು ಮುಂದು

ಭಾರತೀಯ ಪಾಲುದಾರರೊಂದಿಗೆ ಸಂಶೋಧನೆ: ಲಂಡನ್ ಇಂಪೀರಿಯಲ್ ಕಾಲೇಜು ಮುಂದು

ಕೇಂದ್ರ, ಇಂಪೀರಿಯಲ್ ಗ್ಲೋಬಲ್ ಇಂಡಿಯಾ*, ಭಾರತದ ಸಾಮ್ರಾಜ್ಯಶಾಹಿ ಮತ್ತು ಪ್ರಮುಖ ವಿಶ್ವ ವಿದ್ಯಾಲಯಗಳು ಮತ್ತು ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಬಲಪಡಿಸುತ್ತದೆ, ಉದ್ಯಮ ಮತ್ತು ನೀತಿ ನಿರೂಪಕರೊಂದಿಗೆ ನಿಕಟ ಸಂಬಂಧವನ್ನು ರೂಪಿಸಲು ಸಂವಹನ ಮಾರ್ಗವಾಗಿ ಈ ಒಂದು ಯೋಚನೆ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತ ಮತ್ತು ಯುಕೆ ನಡುವಿನ ವಿಜ್ಞಾನ ಮತ್ತು ತಂತ್ರ ಜ್ಞಾನ ನಾವೀನ್ಯತೆಯಲ್ಲಿ ಹೆಚ್ಚಿನ ಸಹಯೋಗಕ್ಕೆ ಒಂದು ವೇದಿಕೆಯನ್ನು ಒದಗಿಸು ತ್ತದೆ.

ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಲು ಎಐ ಆಧರಿತ ಉದ್ಯೋಗ ಹುಡುಕಾಟದ ಫೀಚರ್ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್

ಎಐ ಆಧರಿತ ಉದ್ಯೋಗ ಹುಡುಕಾಟದ ಫೀಚರ್ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್

ತಾವು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದೇವೆ, ಆದರೆ ಯಾವ ಹುದ್ದೆಗಳು ಅಥವಾ ಯಾವ ಉದ್ಯಮಗಳನ್ನು ಹುಡುಕಬೇಕೆಂದು ತಿಳಿಯುವುದಿಲ್ಲ ಎಂದು ಬೆಂಗಳೂರಿ ನಲ್ಲಿರುವ ಮೂರನೇ ಎರಡರಷ್ಟು (ಶೇ.61) ವೃತ್ತಿಪರರು ಹೇಳಿಕೊಳ್ಳುತ್ತಾರೆ ಎಂದು ವಿಶ್ವದ ಅತಿ ದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್‌ನ ಹೊಸ ಸಂಶೋಧನೆ ಬಹಿರಂಗ ಪಡಿಸಿದೆ

ಎಚ್‌ಡಿಎಫ್‌ಸಿ ಎರ್ಗೊ ಜನರಲ್ ಇನ್ಶುರೆನ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪಾರ್ಥನಿಲ್ ಘೋಷ್ ನೇಮಕ

ಪಾರ್ಥನಿಲ್ ಘೋಷ್ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ

ಸೆಕ್ಯೂರಿಟೀಸ್ ಎಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಎಸ್‌ಇಬಿಐ - ಸೆಬಿ) ಸಂಸ್ಥೆಯ (ಪಟ್ಟಿಯಲ್ಲಿ ಸೇರಿಸುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವ ಅಗತ್ಯಗಳು) ಅಡಿಯಲ್ಲಿ ತಿಳಿಸಿದಂತೆ, ಎಚ್‌ಡಿಎಫ್‌ಸಿ ಎರ್ಗೊ ನಿರ್ದೇಶಕರ ಮಂಡಳಿಯು ಪಾರ್ಥನಿಲ್ ಘೋಷ್ ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸುವುದಕ್ಕೆ ಅನುಮೋದನೆ ನೀಡಿದೆ

Athani Movie: ಸಮರ್ಥ್ ಎಂ ನಟಿಸಿ, ನಿರ್ದೇಶಿಸಿರುವ ʼಅಥಣಿʼ ಚಿತ್ರದ ಟ್ರೈಲರ್ ರಿಲೀಸ್‌

ಸಮರ್ಥ್ ಎಂ ನಟಿಸಿ, ನಿರ್ದೇಶಿಸಿರುವ ʼಅಥಣಿʼ ಚಿತ್ರದ ಟ್ರೈಲರ್ ರಿಲೀಸ್‌

Athani Movie: ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ ʼಅಥಣಿʼ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಚಿತ್ರದ ಟ್ರೈಲರ್ ಅನಾವರಣ ಮಾಡಿದರು. ಈ ಕುರಿತ ವಿವರ ಇಲ್ಲಿದೆ.

Sirsi News: ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ, ಪ್ರಥಮ ದರ್ಜೆ ಲೆಕ್ಕಾಧಿಕಾರಿ ಬಂಧನ

ಬೆಳ್ಳಂಬೆಳಿಗ್ಗೆ ಶಿರಸಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆ

ಕಾರಿನ ಬಾಡಿಗೆ ಸಂಬಂಧ ಸಚಿನ ಕೋಡ್ಕಣಿ ಅವರಿಂದ 20 ಸಾವಿರ ರೂ. ಹಣ ಸ್ವೀಕರಿಸು ತ್ತಿದ್ದ ವೇಳೆ ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಸಂದರ್ಭ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಅವರನ್ನು ವಶಕ್ಕೆ ಪಡೆಯಲಾಯಿತು.

Booker Prize 2025: ಬೂಕರ್‌ ಪ್ರಶಸ್ತಿ ಪುರಸ್ಕೃತೆ ಲೇಖಕಿ ಬಾನು ಮುಷ್ತಾಕ್‌ಗೆ ಕೆ.ವಿ.ಪ್ರಭಾಕರ್ ಅಭಿನಂದನೆ

ಲೇಖಕಿ ಬಾನು ಮುಷ್ತಾಕ್‌ಗೆ ಕೆ.ವಿ.ಪ್ರಭಾಕರ್ ಅಭಿನಂದನೆ

Booker Prize 2025: ಬೂಕರ್ ಪ್ರಶಸ್ತಿ ವೇದಿಕೆಯಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಎತ್ತಿ ಹಿಡಿದ ಲೇಖಕಿ, ಪತ್ರಕರ್ತೆ, ಕತೆಗಾರ್ತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಅವರ ಕತೆಗಳಲ್ಲಿ ಬೆಸೆದಿರುವ ಭಾರತೀಯತೆಯ ಬೆಸುಗೆಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ ಎಫ್.ಐ.ಆರ್‌ ರದ್ದು ಮಾಡಿದ ಹೈ-ಕೋರ್ಟ್

ಇಟಗುಳಿ ಪ್ರಕರಣದಲ್ಲಿ ದಾಖಲಾಗಿದ್ದ FIR ರದ್ದು ಮಾಡಿದ ಹೈ-ಕೋರ್ಟ್

ಶಿರಸಿಯ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ್ ಹೆಗಡೆ ಅವರ ಮನೆಯಲ್ಲಿ ಗ್ರಾಮೀಣ ಪೊಲೀಸರು ಏಪ್ರಿಲ್ 9 ರಂದು ಅಂದರ್ ಬಾಹರ್ ಆಡುತ್ತಿರುವುದಾಗಿ ಆರೋಪಿಸಿ ರೈಡ್ ಮಾಡಿ ಒಟ್ಟು 13 ಜನರ ಮೇಲೆ FIR ದಾಖಲಿಸಿದ್ದರು. ಇದನ್ನು ಹೈ ಕೋರ್ಟ್ನಲ್ಲಿ ಎಲ್ಲಾ ಆರೋಪಿಗಳು ಪ್ರಶ್ನಿಸಿದರು

Kumki Elephants: ಆಂಧ್ರಕ್ಕೆ ರಾಜ್ಯದ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಸಿಎಂ

ಆಂಧ್ರಕ್ಕೆ ರಾಜ್ಯದ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಸಿಎಂ

CM Siddaramaiah: ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾನವ- ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌; ನಟ ದರ್ಶನ್‌ ವಿರುದ್ಧ 132 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

ನಟ ದರ್ಶನ್‌ ವಿರುದ್ಧ 132 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

Actor Darshan: ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ನಡೆದ ವಿಚಾರಣೆಗೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಇತರರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ.

CM's city rounds: ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ; ಮುಲಾಜಿಲ್ಲದೆ ಒತ್ತುವರಿ ತೆರವಿಗೆ ಸೂಚನೆ

ಸಿಟಿ ರೌಂಡ್ಸ್‌; ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

CM's city rounds: ಬೆಂಗಳೂರಿನ ಯಲಹಂಕ, ಎಚ್‌ಬಿಆರ್‌ ಲೇಔಟ್, ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿ, ಸಾಯಿ ಲೇಔಟ್ ಮತ್ತಿತರ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೀಡಿ ಪರಿಶೀಲಿಸಿದರು.

ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸುತ್ತಿರುವ ಗ್ಲಾನ್ಸ್‌: ಮೇ 22ರ ಎಕ್ಸ್ ಕ್ಲೂಸಿವ್ ಕಾರ್ಯಕ್ರಮದಲ್ಲಿ ಟೆಕ್ ದಿಗ್ಗಜರ ಉಪಸ್ಥಿತಿ

ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಳಿಸುತ್ತಿರುವ ಗ್ಲಾನ್ಸ್‌

ಸ್ಮಾರ್ಟ್‌ ಫೋನ್ ಲಾಕ್ ಸ್ಕ್ರೀನ್‌ಗಳನ್ನು ಪರಿವರ್ತಿಸುವ ಗ್ರಾಹಕ ತಂತ್ರಜ್ಞಾನ ಕಂಪನಿ ಆಗಿರುವ ಗ್ಲಾನ್ಸ್‌ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೇ ತಿಂಗಳಾಂತ್ಯಕ್ಕೆ ನಡೆಯಲಿರುವ ಒಂದು ಉನ್ನತ ಮಟ್ಟದ ಎಕ್ಸ್ ಕ್ಲೂಸಿವ್ ಕಾರ್ಯಕ್ರಮದ ಕುರಿತು ಭಾರತದ ಟೆಕ್ ರಾಜಧಾನಿ ಬೆಂಗಳೂರಿನಲ್ಲಿ ಚರ್ಚೆಗಳು ಜೋರಾಗಿವೆ.

Booker Prize 2025: ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌: ಇವರ ಬಗ್ಗೆ ನಿಮಗಿವು ತಿಳಿದಿರಲಿ

ಬೂಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌: ಇವರ ಬಗ್ಗೆ ನಿಮಗಿವು ತಿಳಿದಿರಲಿ

Booker Prize 2025: 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ 'ಹಸೀನಾʼ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧರಿಸಿದ ಈ ಕತೆಗಳು ಇದೀಗ ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ.

SBI Manager: ಕನ್ನಡ ಮಾತಾಡಲ್ಲ ಎಂದಿದ್ದ ಎಸ್‌ಬಿಐ ಮ್ಯಾನೇಜರ್‌ ಕನ್ನಡದಲ್ಲೇ ಕ್ಷಮೆಯಾಚನೆ; ವರ್ಗಾವಣೆ ಕ್ರಮಕ್ಕೆ ಸಿಎಂ ಶ್ಲಾಘನೆ

ಕನ್ನಡ ಮಾತಾಡಲ್ಲ ಎಂದಿದ್ದ ಎಸ್‌ಬಿಐ ಮ್ಯಾನೇಜರ್‌ ಕ್ಷಮೆಯಾಚನೆ

SBI Manager: ಕರ್ನಾಟಕದಲ್ಲಿ ಎಂದಿಗೂ ನಾನು ಕನ್ನಡ ಮಾತನಾಡುವುದೇ ಇಲ್ಲ ಎಂದು ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್‌ ಲೇಡಿ ಮ್ಯಾನೇಜರ್‌ ದರ್ಪ ತೋರಿದ್ದರು. ಇದೀಗ ಅಧಿಕಾರಿ ಕ್ಷಮೆ ಕೇಳಿರುವ ವಿಡಿಯೋ ಕೂಡ ಇದೀಗ ವೈರಲ್‌ ಆಗಿದೆ. ಮತ್ತೊಂದೆಡೆ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

MLA Munirathna: ಮಹಿಳೆಗೆ ಇಂಜೆಕ್ಷನ್‌ ನೀಡಿ ಸಾಮೂಹಿಕ ಅತ್ಯಾಚಾರ ಆರೋಪ; ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್‌

ಅತ್ಯಾಚಾರ ಆರೋಪ; ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್‌

MLA Munirathna: ಶಾಸಕರ ಕಚೇರಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಇಂಜೆಕ್ಷನ್ ತರಿಸಿ ಇಂಜೆಕ್ಟ್ ಮಾಡಿಸಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಕೆಲವರು ನನ್ನ ಕೇಸ್​ ಇತ್ಯರ್ಥ ಮಾಡಿಕೊಡುವುದಾಗಿ ಆಮಿಷವೊಡ್ಡಿ ನನ್ನನ್ನು ಕಚೇರಿಗೆ ಕರೆಸಿ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.

Road Accident: ಬಸವನ ಬಾಗೇವಾಡಿ ಸಮೀಪ ಭೀಕರ ಅಪಘಾತ, 6 ಮಂದಿ ದುರ್ಮರಣ

ಬಸವನ ಬಾಗೇವಾಡಿ ಸಮೀಪ ಭೀಕರ ಅಪಘಾತ, 6 ಮಂದಿ ದುರ್ಮರಣ

Road Accident: ವಿಜಯಪುರದ ಕಡೆಗೆ ತೆರಳುತ್ತಿದ್ದ ಮಹಿಂದ್ರಾ ಕಾರ್‌ ಡಿವೈಡರ್‌ ಮೇಲೆ ಹಾರಿ ಎದುರಿಗೆ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ನಿಂತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ.

ED Raid: ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ಸಂಸ್ಥೆ ಮೇಲೆ ಇಡಿ ದಾಳಿ

ಗೃಹ ಸಚಿವ ಡಾ. ಜಿ ಪರಮೇಶ್ವರ್ ಒಡೆತನದ ಸಂಸ್ಥೆ ಮೇಲೆ ಇಡಿ ದಾಳಿ

ಸಿದ್ದಾರ್ಥ ಶಿಕ್ಷಣ ಸಂಸ್ಥೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಒಡೆತನಕ್ಕೆ ಸೇರಿದೆ. ತುಮಕೂರಿನಲ್ಲಿರುವ ಎಸ್‌ಎಸ್‌ಐಟಿ ಕಾಲೇಜು ಹಾಗೂ ತುಮಕೂರಿನ ಹೆಗ್ಗೆರೆ ಬಳಿಯಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇಡಿ ಅಧಿಕಾರಿಗಳು (ED Raid) ಪರಿಶೀಲನೆ ನಡೆಸುತ್ತಿದ್ದಾರೆ.

ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದ ಜೊತೆಗೆ ಪಾಲುದಾರಿಕೆ ಘೋಷಿಸಿದ ರಿಯಲ್‌ಮಿ, ಕೋಬ್ರ್ಯಾಂಡೆಡ್ ರಿಯಲ್ ಮಿ ಜಿಟಿ 7 ಡ್ರೀಮ್ ಎಡಿಶನ್ ಬಿಡುಗಡೆ

ಕೋಬ್ರ್ಯಾಂಡೆಡ್ ರಿಯಲ್ ಮಿ ಜಿಟಿ 7 ಡ್ರೀಮ್ ಎಡಿಶನ್ ಬಿಡುಗಡೆ

ಭಾರತೀಯ ಯುವಕರ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ ಮಿ ಇಂದು ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದ ಜೊತೆಗೆ ಅತ್ಯಂತ ಮಹತ್ವದ ಮೂರು ವರ್ಷಗಳ ಪಾಲುದಾರಿಕೆ ಯನ್ನು ಘೋಷಿಸಿದೆ. ಈ ಸಹಭಾಗಿತ್ವದಲ್ಲಿ ಒಂದು ಮೈಲಿಗಲ್ಲಾಗಿ, ಆಕರ್ಷಕ ಕೋ ಬ್ರ್ಯಾಂಡೆಡ್ ಎಡಿಶನ್ ರಿಯಲ್‌ ಮಿ ಜಿಟಿ 7 ಡ್ರೀಮ್ ಎಡಿಶನ್‌ ಅನ್ನು ಉದ್ಘಾಟನೆ ಮಾಡುವುದಕ್ಕೆ ಸಿದ್ಧವಾಗಿದೆ