4 ಕೋಟಿ ವೆಚ್ಚದ ವಿದ್ಯುತ್ ಚಿತಾಗಾರಕ್ಕೆ ಭೂಮಿ ಪೂಜೆ
ನಗರದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂತ್ಯಕ್ರಿಯೆಗೆ ಪೂರಕವಾದ ಆಧುನಿಕ ವ್ಯವಸ್ಥೆ ಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಜನರು ವಿದ್ಯುತ್ ಚಿತಾಗಾರಕ್ಕಾಗಿ ಬಹಳ ವರ್ಷಗಳಿಂದ ಮನವಿ ಮಾಡುತ್ತಿದ್ದರು. ಜನರ ಈ ಬೇಡಿಕೆಯನ್ನು ಸಂಬಂಧಪಟ್ಟ ಸಚಿವರಾದ ರಹೀಂ ಖಾನ್ ಅವರಲ್ಲಿ ವಿಶೇಷ ಮನವಿ ಮಾಡ ಲಾಗಿತ್ತು.