ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಲವ್‌ ಜಿಹಾದ್‌; ಬೆಂಗಳೂರಿನಲ್ಲಿ ಹಿಂದೂ ಯುವತಿ ಕೈಗೆ ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ!

ಲವ್‌ ಜಿಹಾದ್‌; ಹಿಂದೂ ಯುವತಿ ಕೈಗೆ ಮಗು ಕೊಟ್ಟು ಮುಸ್ಲಿಂ ಯುವಕ ಪರಾರಿ

Bengaluru Love Jihad Case: ಬೆಂಗಳೂರಿನ ಬಿಟಿಎಂ ನಿವಾಸಿ ಸೈಯದ್ ಇಮ್ತಿಯಾಜ್ ಎಂಬಾತನ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿ ಬಂದಿದೆ. ಈತ ಕೋಲ್ಕತಾ ಯುವತಿಯನ್ನು ವಿವಾಹವಾಗಿ, ಮಗುವಾದ ಬಳಿಕ ವಂಚಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದೀಗ ಯುವತಿ ನ್ಯಾಯಕ್ಕಾಗಿ ವಕೀಲರ ಮೊರೆ ಹೋಗಿದ್ದಾಳೆ.

ಐರನ್ ಮ್ಯಾನ್ 70.3 ಪೂರ್ಣಗೊಳಿಸಿ ಸಾಧನೆ ಮಾಡಿದ ಬೀಹೈವ್ ಸ್ಥಾಪಕ, ಸಿಇಓ ಶೇಷ್ ರಾವ್ ಪಾಪ್ಲಿಕರ್

ಐರನ್ ಮ್ಯಾನ್ 70.3 ಪೂರ್ಣಗೊಳಿಸಿ ಸಾಧನೆ ಮಾಡಿದ ಪಾಪ್ಲಿಕರ್

ವಿಶ್ವದ ಅತ್ಯಂತ ಕಠಿಣ ಸಹಿಷ್ಣುತಾ ರೇಸ್‌ ಗಳಲ್ಲಿ ಒಂದಾಗಿರುವ ಐರನ್ ಮ್ಯಾನ್ 70.3 ಸ್ಪರ್ಧೆ ಯಲ್ಲಿ ಒಟ್ಟು 113 ಕಿಮೀ (70.3 ಮೈಲಿಗಳು) ದೂರವನ್ನು ಕ್ರಮಿಸಬೇಕಿರುತ್ತದೆ. ಇದರಲ್ಲಿ 1.9 ಕಿಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟದ ಸ್ಪರ್ಧೆ ಇರುತ್ತದೆ. ಶೇಷ್ ಅವರು ಈ ರೇಸ್ ಅನ್ನು 7 ಗಂಟೆ 51 ನಿಮಿಷ 54 ಸೆಕೆಂಡ್‌ಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈಜು 47:22 ನಿಮಿಷಗಳು, ಸೈಕ್ಲಿಂಗ್ 3:21:42 ಗಂಟೆಗಳು ಮತ್ತು ಓಟ 3:09:41 ಗಂಟೆಗಳನ್ನು ಅವರು ತೆಗೆದು ಕೊಂಡರು.

KIA: ಗ್ರಾಹಕರ ಹಿತಕ್ಕೆ ಪ್ರಥಮ ಆದ್ಯತೆ' ನೀಡುವ ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲು ಮ್ಯೂ ಸಿಗ್ಮಾ ಜೊತೆ ಸಹಭಾಗಿತ್ವ

'ಗ್ರಾಹಕರ ಹಿತಕ್ಕೆ ಪ್ರಥಮ ಆದ್ಯತೆ': ಮ್ಯೂ ಸಿಗ್ಮಾ ಜೊತೆ KIA ಸಹಭಾಗಿತ್ವ

ದತ್ತಾಂಶ ಆಧಾರಿತ ನಿರ್ಧಾರಗಳನ್ನು ಬಳಸಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರನ್ನು ಸಾಟಿಯಿಲ್ಲದ ಗ್ರಾಹಕ ಅನುಭವ ನೀಡುವ 'ಆಲ್ಗಾರಿದಮಿಕ್ ವಿಮಾನ ನಿಲ್ದಾಣ'ವನ್ನಾಗಿ ಮರುರೂಪಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ. ಇಲ್ಲಿ ಪ್ರತಿಯೊಂದು ಸಂವಹನವು ನೈಜ-ಸಮಯದ ಒಳನೋಟಗಳಿಂದ ರೂಪುಗೊಳ್ಳಲಿದ್ದು, ಪ್ರತಿ ಪ್ರಯಾಣಿಕರ ಅಗತ್ಯತೆ ಗಳ ಸುತ್ತ ವಿನ್ಯಾಸಗೊಳಿಸಲಾಗುತ್ತದೆ.

Sourabha 2026: ಬೆಂಗಳೂರಿನಲ್ಲಿ ಫೆ.11ರಿಂದ 28ರವರೆಗೆ ಸೌರಭ-ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆ-2026

ಫೆ.11ರಿಂದ 28ರವರೆಗೆ ಸೌರಭ-ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆ

Sourabha State Level Theatre Competition: ರಂಗಸೌರಭ ವತಿಯಿಂದ ಆಯೋಜಿರುವ ಸೌರಭ 2026 ಕಾರ್ಯಕ್ರಮವು, ರಂಗಾಸಕ್ತ ಯುವ ಮನಸ್ಸುಗಳನ್ನು ಒಂದೇ ಸೂರಿನಡಿಯಲ್ಲಿ ಕಲೆಯುವಿಕೆಯ ಅತ್ಯದ್ಭುತ ಪರಿಕಲ್ಪನೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಈಗಾಗಲೇ ನೂರಾರು ವಿದ್ಯಾರ್ಥಿಗಳು ಹಾಗೂ ಕಾಲೇಜು ಕಲಾತಂಡಗಳು ನೋಂದಾಯಿಸಿಕೊಂಡಿದೆ.

ಬಿಕ್ಲು ಶಿವ ಕೊಲೆ ಕೇಸ್‌; ಶಾಸಕ ಬೈರತಿ ಬಸವರಾಜ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

ಬಿಕ್ಲು ಶಿವ ಕೊಲೆ ಕೇಸ್‌; ಶಾಸಕ ಬೈರತಿ ಬಸವರಾಜ್‌ ಜಾಮೀನು ಅರ್ಜಿ ವಜಾ

MLA Byrathi Basavaraj: ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್​​ ವಜಾ‌ಗೊಳಿಸಿದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿದೆ. ಅವರ ಬಂಧನಕ್ಕಾಗಿ ಸಿಐಡಿ ಪೊಲೀಸರು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.

DK Shivakumar: ನಾನು- ಸಿಎಂ ಏನು ಮಾತಾಡಿಕೊಂಡಿದ್ದೇವೆ ಎಂಬುದು ಗೊತ್ತಿದೆ: ಡಿಕೆ ಶಿವಕುಮಾರ್

ನಾನು- ಸಿಎಂ ಏನು ಮಾತಾಡಿಕೊಂಡಿದ್ದೇವೆ ಎಂಬುದು ಗೊತ್ತಿದೆ: ಡಿಕೆ ಶಿವಕುಮಾರ್

ನಾವು, ನಮ್ಮ ವರಿಷ್ಠರು ಮಾತಾಡಿಕೊಂಡಿದ್ದೇವೆ. ಬೇರೆಯವರು ಟೆನ್ಶನ್ ತೆಗೆದುಕೊಳ್ಳುವುದಾಗಲಿ, ಹೇಳಿಕೆ ಕೊಡೋದರಿಂದಾಗಲಿ ಯಾರಿಗೂ ಇದರಿಂದ ಪ್ರಯೋಜನ ಇಲ್ಲ. ನನ್ನ ಪರ, ವಿರುದ್ಧ ಶಾಸಕರು, ಸಚಿವರು ಹೇಳಿಕ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತ ಖರ್ಗೆಯವರು ಹೇಳಿದ್ದಾರೆ. ಅದನ್ನು ನಾವು ಪಾಲಿಸಿಕೊಂಡು ಹೋಗಬೇಕು ಎಂದು ಡಿಕೆಶಿ ಹೇಳಿದರು.

Bengaluru Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

BESCOM News: ಕೆಪಿಟಿಸಿಎಲ್ ವತಿಯಿಂದ ಹೆಬ್ಬಾಳ ವಿಭಾಗದ 66/11 ಕೆವಿಎ ಸಹಕಾರ ನಗರ ಕೇಂದ್ರದ ಸಬ್‌ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಫೆ.11ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಮದುವೆಯಲ್ಲಿ ಗನ್ ಹಿಡಿದು ‘ಧುರಂಧರ್’ ಹಾಡಿಗೆ ಡ್ಯಾನ್ಸ್ ಮಾಡಿದ ಶಾಸಕ ಎಂ.ವೈ. ಪಾಟೀಲ್ ಆಪ್ತ; ವಿಡಿಯೊ ವೈರಲ್‌

ಮದುವೆಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿದ ಕಾಂಗ್ರೆಸ್‌ ಶಾಸಕನ ಆಪ್ತ

ಕಲಬುರಗಿ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ ಮುಖಂಡ ಕೈಯಲ್ಲಿ ಗನ್ ಹಿಡಿದು ‘ಧುರಂಧರ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ವೇದಿಕೆಯ ಮೇಲೆ ಕುಣಿದು ಬಿಲ್ಡಪ್ ನೀಡಿದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Bengaluru Crime News: ಭೀಕರ ಕೃತ್ಯ, ನವಜಾತ ಶಿಶುವನ್ನು ಕಸದ ತೊಟ್ಟಿಗೆಸೆದು ಕೊಲೆ

ಭೀಕರ ಕೃತ್ಯ, ನವಜಾತ ಶಿಶುವನ್ನು ಕಸದ ತೊಟ್ಟಿಗೆಸೆದು ಕೊಲೆ

ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯ ಬದಿಯ ಕಸದ ತೊಟ್ಟಿಯಲ್ಲಿ ನವಜಾತ (newborn child) ಗಂಡು ಶಿಶುವಿನ ಶವ ಪತ್ತೆಯಾಗಿದೆ. ಮಗುವಿನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ವಿಡಿಯೋಗಳನ್ನು ಕಲೆಹಾಕಿ ಆರೋಪಿಗಳ ಜಾಡು ಸಂಗ್ರಹಿಸಲಾಗುತ್ತಿದೆ.

Gold theft: ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, ನಗದು ಕಳವು!

ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, ನಗದು ಕಳವು!

ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಆ ವೇಳೆ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ನಗದು ಇದ್ದ ಕೈಚೀಲವನ್ನು ತಂದಿದ್ದು, ತೆರಳುವಾಗ ಅದನ್ನು ಕಚೇರಿಯಲ್ಲೇ ಮರೆತು ಹೊರಟಿದ್ದರು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

Chinnu Pappu: 2 ಲಕ್ಷ ಫಾಲೋವರ್ಸ್‌ ಹೊಂದಿದ್ದ ಇನ್‌ಫ್ಲುಯೆನ್ಸರ್‌ ರೇಶ್ಮಾ ಆತ್ಮಹತ್ಯೆ

2 ಲಕ್ಷ ಫಾಲೋವರ್ಸ್‌ ಹೊಂದಿದ್ದ ಇನ್‌ಫ್ಲುಯೆನ್ಸರ್‌ ರೇಶ್ಮಾ ಆತ್ಮಹತ್ಯೆ

ಮೃತ ಮಹಿಳೆಯ ನಿಜವಾದ ಹೆಸರು ಕೆ.ರೇಶ್ಮಾ. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ಚಿನ್ನು ಪಾಪು ಎನ್ನುವ ಹೆಸರಿನಿಂದಲೇ ಅವರು ಫೇಮಸ್‌ ಆಗಿದ್ದರು. ಮೂಲತಃ ಅವರು ಕೇರಳದ ಆಡೂರಿನವರಾಗಿದ್ದರೂ, ಕರ್ನಾಟಕದ ಗಡಿ ಭಾಗಕ್ಕೆ ಹೊಂದಿರುವ ಕನ್ನಡಿಗರೇ ಹೆಚ್ಚಿರುವ ಕೇರಳದ ಕಾಸರಗೋಡಿನ ಬಳಿಯ ಉಳಿಯತ್ತಡ್ಕದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

'ಜಾಗತಿಕ ದೃಷ್ಟಿಕೋನ’ ಕುರಿತ ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ದೇಶದ ಅಭಿವೃದ್ಧಿ ಹಳ್ಳಿಗಳಿಂದ ಪ್ರಾರಂಭವಾಗಬೇಕು: ಡಾ. ಸತೀಶ್ಚಂದ್ರ ಎಸ್.

“ಪ್ರಾಕೃತಿಕವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಕೇವಲ ನಾವು ಮಾತ್ರ ಉಪಯೋಗಿಸುವುದಲ್ಲದೇ ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಗೆ ಹಲವಾರು ತೊಂದರೆಗಳಾಗುತ್ತಿದೆ. ಇದರಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕಳೆದ ಎರಡು ವರ್ಷಗಳನ್ನು ನೋಡುವುದಾದರೆ ಶೇ.68ರಷ್ಟಿದ್ದ ಗ್ರಾಮ್ಯ ಪ್ರದೇಶಗಳು ಇಂದು ಶೇ.63 ಕ್ಕೆಇಳಿದಿವೆ.

ವಿಶ್ವಾದ್ಯಂತ 560 ಕ್ಕೂ ಹೆಚ್ಚು ಪ್ರೀಮಿಯಂ ಮತ್ತು ಐಷಾರಾಮಿ ಹೋಟೆಲ್‌ನೊಂದಿಗೆ ಮೇಕ್‌ ಮೈ ಟ್ರಿಪ್‌ ಪಾಲುದಾರಿಕೆ ಘೋಷಣೆ

ಮೇಕ್‌ ಮೈ ಟ್ರಿಪ್‌ ಪಾಲುದಾರಿಕೆ ಘೋಷಣೆ

ಯುರೋಪ್, ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿನ ನಗರದ ಹೋಟೆಲ್‌ಗಳು ಮತ್ತು ರೆಸಾರ್ಟ್ ತಾಣ ಗಳಲ್ಲಿ ಭಾರತೀಯ ಪ್ರಯಾಣಿಕರಿಗೆ ಅಂತರರಾಷ್ಟ್ರೀಯ ವಾಸ್ತವ್ಯದ ಆಯ್ಕೆಗಳನ್ನು ವಿಸ್ತರಿಸುತ್ತದೆ. ಪ್ರಮುಖ ಜಾಗತಿಕ ಪ್ರಯಾಣ ಕೇಂದ್ರಗಳು ಮತ್ತು ಉದಯೋನ್ಮುಖ ತಾಣಗಳಲ್ಲಿ ಬಲವಾದ ಉಪಸ್ಥಿತಿ ಯೊಂದಿಗೆ, ಮೈನರ್ ಹೋಟೆಲ್ಸ್ ಪೋರ್ಟ್‌ಫೋಲಿಯೊ ವ್ಯಾಪಾರ ಮತ್ತು ಸಣ್ಣ ನಗರ ವಿರಾಮಗಳಿಂದ ಹಿಡಿದು ವಿರಾಮ ಮತ್ತು ದೀರ್ಘಾವಧಿಯ ರಜಾದಿನಗಳವರೆಗೆ ವಿವಿಧ ಪ್ರಯಾಣದ ಅಗತ್ಯಗಳನ್ನು ಪೂರೈಸುತ್ತದೆ.

Kempegowda Airport: ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಬೃಹತ್‌ ಬಲೂನು ಹಾರಾಟ, ಆತಂಕ

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಬೃಹತ್‌ ಬಲೂನು ಹಾರಾಟ, ಆತಂಕ

ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್‌ ಕುಮಾರ್‌ ಬಸವಕಲ್ಯಾಣ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಅತ್ತೆ ಅರುಣಾಬಾಯಿ ಸೊಸೆಗೆ ವೇಶ್ಯಾವಾಟಿಕೆ ಮಾಡುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವಿಜಯ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೋತೀಲಾಲ್ ಓಸ್ವಾಲ್ ಪ್ರೈವೇಟ್ ವೆಲ್ತ್ 2026ರಲ್ಲಿ ಪ್ರಮುಖ ಹಂಚಿಕೆಯಾಗಿ ಫ್ಲೆಕ್ಸಿ-ಕ್ಯಾಪ್ ಇಕ್ವಿಟಿ ಮತ್ತು ಕ್ರೆಡಿಟ್ ಶಿಫಾರಸು

ಫ್ಲೆಕ್ಸಿ-ಕ್ಯಾಪ್ ಇಕ್ವಿಟಿ ಮತ್ತು ಕ್ರೆಡಿಟ್ ಪ್ರಮುಖ ಹಂಚಿಕೆಯಾಗಿ ಶಿಫಾರಸು

2026ರಿಗಾಗಿ, ಮೋತೀಲಾಲ್ ಓಸ್ವಾಲ್ ಪ್ರೈವೇಟ್ ವೆಲ್ತ್ ಸಮತೋಲಿತ ಹೂಡಿಕೆ ವಿಧಾನವನ್ನು ಶಿಫಾರಸು ಮಾಡುತ್ತದೆ—ದೊಡ್ಡ ಕ್ಯಾಪ್‌ಗಳು/ಹೈಬ್ರಿಡ್‌ಗಳನ್ನು ಮೂಲ ಪೋರ್ಟ್ಫೋಲಿಯೊ ಹಂಚಿಕೆಯಾಗಿಡಬೇಕು ಹಾಗೂ ಮಧ್ಯಮ ಮತ್ತು ಸಣ್ಣ ಕ್ಯಾಪ್‌ಗಳಿಗೆ ಹಂತ ಹಂತವಾಗಿ, ಆಯ್ಕೆ ಮಾಡಿದ ಹೂಡಿಕೆಯನ್ನು ಪೂರಕವಾಗಿ ನೀಡಬೇಕು—ಇವುಗಳೆಲ್ಲವೂ ಭಾರತದಲ್ಲಿ ಸುಧಾರಿಸು ತ್ತಿರುವ ಮೂಲಭೂತ ಸ್ಥಿತಿಗತಿ ಮತ್ತು ಮ್ಯಾಕ್ರೋ ಪರಿಸ್ಥಿತಿಗಳಲ್ಲಿ ಆಧಾರಿತವಾಗಿವೆ.

Murder culprits: 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರ ಮೂಲದ ಅಪ್ಪ ಮಗ ಬೆಂಗಳೂರಿನಲ್ಲಿ ಬಂಧನ

24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ಅಪ್ಪ ಮಗ ಬೆಂಗಳೂರಿನಲ್ಲಿ ಬಂಧನ

ಈ ಅಪ್ಪ ಮಗ ಒಟ್ಟು 24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣಗಳಿವೆ. ಇದರಲ್ಲಿ 2 ಡಜನ್‌ನಷ್ಟು ಡಬ್ಬಲ್ ಮರ್ಡರ್‌ ಕೇಸ್‌ಗಳಾಗಿದ್ದು, ಕೊಲೆ, ದರೋಡೆ, ಡಕಾಯಿತಿ, ಬೆದರಿಕೆ, ಹಫ್ತಾ ವಸೂಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಉಲ್ಲಂಘಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರು ಪಾಟ್ನಾದ ನಿವಾಸಿಗಳಾಗಿದ್ದು, ಇವರ ವಿರುದ್ಧ ಬಿಹಾರ ಮಾತ್ರವಲ್ಲದೇ ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಕೇಸುಗಳು ದಾಖಲಾಗಿವೆ.

Electricity Bill: ಸದ್ಯದಲ್ಲೇ ಇನ್ನೊಂದು ದರ ಏರಿಕೆ ಶಾಕ್‌, ಎಸ್ಕಾಂಗಳಿಂದ ‌ಕರೆಂಟ್ ಬೆಲೆ ಏರಿಕೆಗೆ ಮನವಿ

ಸದ್ಯದಲ್ಲೇ ಇನ್ನೊಂದು ದರ ಏರಿಕೆ, ಎಸ್ಕಾಂಗಳಿಂದ ಕರೆಂಟ್ ಬೆಲೆ ಏರಿಕೆಗೆ ಮನವಿ

ರಾಜ್ಯದ ಎಲ್ಲಾ ಎಸ್ಕಾಂಗಳಿಂದಲೂ ವಿದ್ಯುತ್ ದರ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಮನವಿ ಮಾಡಿದೆ. ಎಸ್ಕಾಂಗಳ ಖರ್ಚು ವೆಚ್ಚ ಸರಿದೂಗಿಸಲು ದರ ಏರಿಕೆ ಅಗತ್ಯ ಎಂದು ಸಂಸ್ಥೆಗಳು ಹೇಳಿವೆ. ವಿದ್ಯುಚ್ಛಕ್ತಿಗೆ ಯುನಿಟ್‌ಗೆ ಒಂದು ರೂ.ವರೆಗೆ ದರ ಏರಿಕೆಗೆ ಎಸ್ಕಾಂಗಳು ಮನವಿ ಸಲ್ಲಿಸಿವೆ.

Social Media: ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಏಕಾಏಕಿ ಕೇಸ್‌ಗೆ ಬ್ರೇಕ್: ಮಾರ್ಗಸೂಚಿ ಪ್ರಕಟ

ಸೋಶಿಯಲ್ ಮೀಡಿಯಾ ಪೋಸ್ಟ್ ವಿರುದ್ಧ ಏಕಾಏಕಿ ಕೇಸ್‌ಗೆ ಬ್ರೇಕ್, ಮಾರ್ಗಸೂಚಿ

ಸುಪ್ರೀಂ ಕೋರ್ಟ್ ನಿಗದಿಪಡಿಸಿದಂತೆ ಪ್ರಾಥಮಿಕ ವಿಚಾರಣೆಗಳನ್ನು ಕೈಗೊಳ್ಳದೆ, ಪೊಲೀಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದ ಪ್ರಕರಣವನ್ನು ಯಾಂತ್ರಿಕವಾಗಿ ದಾಖಲಿಸುತ್ತಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ಉಂಟಾಗುವ ಪ್ರಕರಣಗಳಲ್ಲಿ FIR ಗಳ ನೋಂದಣಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ತೀರ್ಪಿನಲ್ಲಿ ಎತ್ತಿಹಿಡಿದಿದೆ.

Minister Chirag Paswan: "50 ವರ್ಷ್ಸ್, ಒನ್ ನೇಷನ್, ಕೌಂಟ್ಲೆಸ್ MAGGI ‘ಮೊಮೆಂಟ್ಸ್ ಆಫ್ ಟುಗೆದರ್ ನೆಸ್’ – ನೌ ಅಧಿಕ್ಯಲೀಸ್ಟ್ಯಾಂಪ್ಡ್"

ಕೌಂಟ್ಲೆಸ್ MAGGI ‘ಮೊಮೆಂಟ್ಸ್ ಆಫ್ ಟುಗೆದರ್ ನೆಸ್’

ಕಳೆದ ಐದು ದಶಕಗಳಲ್ಲಿಯೂ, MAGGI ವಿವಿಧ ರುಚಿಕರರೂಪಗಳಲ್ಲಿ ಭಾರತೀಯ ಮನೆಗಳಲ್ಲಿ ತನ್ನ ಸ್ಥಳವನ್ನು ಕಂಡುಕೊಂಡಿದೆ– ನೂಡಲ್ಸ್ ಮತ್ತು ಮಸಾಲಾ ಮಿಶ್ರಣಗಳಿಂದ ಶೋಸ್, ಸೂಪ್‌ಗಳುಮತ್ತು ತಯಾರಿಗಾಗಿ ಸಿದ್ಧವಾದ ಸವಿಯಲು ಬಳಸಬಹುದಾದಆಹಾರವರೆಗೂ. ತ್ವರಿತವಾಗಿ ತಯಾರಿಸುವ ಏಕಾಂಗಉಪಾಹಾರದಿಂದ ಕುಟುಂಬವನ್ನು ಒಟ್ಟಿಗೆ ತರಬಹುದಾದ ಊಟವರೆಗೆ, ಹಾಸ್ಟೆಲ್ ಅಡುಗೆ ಮನೆಗಳಿಂದ ದೊಡ್ಡ ಕೂಟದಸಂದರ್ಭಗಳವರೆಗೆ, MAGGI ದೇಶಾದ್ಯಂತ ಅನೇಕ ಆಹಾರದ ಕ್ಷಣಗಳಭಾಗವಾಗಿದೆ

Bagepally News: ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ

ಧರ್ಮಸ್ಥಳ ಸಂಸ್ಥೆಯಿಂದ ಅನಾಥ ವೃದ್ಧರಿಗೆ ವಾತ್ಸಲ್ಯ ಕಿಟ್ ವಿತರಣೆ

ಪೂಜ್ಯ ವೀರೇಂದ್ರಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ನಿರಾಶ್ರಿತರಿಗೆ ನೆರವಾಗ ಬೇಕು ಅವರ ನೋವಿನೋಂದಿಗೆ ನಾವು ಇರಬೇಕು ಎನ್ನುವ ಸದುದ್ದೇದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕವೆ ಹತ್ತಾರು ಜನಪರ ಯೋಜನೆ ಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮಾಸಾಶನ ಮತ್ತು ವಾಸ್ತಲ್ಯ ಕಿಟ್ ವಿತರಣೆಗಳು ಸೇರಿವೆ

Dr. M.C. Sudhakar: 2027ರ ಹೊತ್ತಿಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ : ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್

2027ರ ಹೊತ್ತಿಗೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ

2014ರಲ್ಲಿ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ಪ್ರಾರಂಭವಾಗಿದ್ದು ಚಿಕ್ಕಬಳ್ಳಾಪುರದಲ್ಲಿ ತಾನೆ.ಆಗಿನಿಂದ ಈವರೆಗೆ ಎಷ್ಟೆಲ್ಲಾ ಸರಕಾರಗಳು ಬದಲಾಗಿವೆ, ಯರ‍್ಯಾರು ಸಚಿವರಾಗಿದ್ದರು ಎಂಬುದು ಗೊತ್ತಿದೆ. ಆಗಿನಿಂದಲೇ ಕಾಲಮಿತಿಯಲ್ಲಿ ಈ ಯೋಜನೆ ಮುಗಿಸಿದ್ದರೆ ಅನುದಾನದ ಗಾತ್ರ ಹಿಗ್ಗುತ್ತಲೇ ಇರಲಿಲ್ಲ. 12 ವರ್ಷಗಳಲ್ಲ ಸಿಮೆಂಟ್, ಕಲ್ಲು ಕಬ್ಬಿಣ, ಭೂಮಿ ಬೆಲೆ ಹೆಚ್ಚಿದಂತೆ ಪ್ರಾಜೆಕ್ಟ್ ಗಾತ್ರವೂ ಹಿಗ್ಗುವುದು ಸಹಜ.

Bagepally News: ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸಿ: ಆರ್.ಹನುಮಂತ ರೆಡ್ಡಿ ಮನವಿ

ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸಿ

ಸೆಹಗಲ್ ಫೌಂಡೇಷನ್ ಶಾಲಾ ಆವರಣದಲ್ಲಿ ಹೆಣ್ಣುಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಿದೆ. ಹಾಲು ಒಕ್ಕೂಟದ ನಿರ್ದೇಶಕ ವಿ.ಮಂಜುನಾಥರೆಡ್ಡಿ 3 ಕಂಪ್ಯೂಟರ್, ಶಾಸಕ ಎಸ್.ಎನ್. ಸುಬ್ಬಾ ರೆಡ್ಡಿ ನಿರ್ವಹಣಾ ವೆಚ್ಚಕ್ಕೆ ₹2 ಲಕ್ಷ ಅನುದಾನ ನೀಡಿದ್ದು, ಖಾಸಗಿ ಸಂಘ, ಸಂಸ್ಥೆಗಳಿಂದ ಹಾಗೂ ಜನಪ್ರತಿನಿಧಿಗಳು ಶಾಲೆಯ ಪ್ರಗತಿಗೆ ಸಹಕಾರ ನೀಡಿದ್ದಾರೆ

Chikkaballapur News: 70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ, ಇತಿಹಾಸ ಮರುಕಳಿಸಬೇಕಿದೆ : ಬಿ.ವಿ. ಆನಂದ್ ಅಭಿಮತ

70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ: ಇತಿಹಾಸ ಮರುಕಳಿಸಬೇಕಿದೆ

ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯ ನಿರ್ಮಾಣದಲ್ಲಿ ದಸಂಸ ಪಾತ್ರ ದೊಡ್ಡದಿದೆ. 70ರ ದಶಕದಿಂದ ಈತನಕ ಲಕ್ಷಾಂತರ ಮಂದಿ ಕಾರ್ಯಕರ್ತರ ಮುಖಂದರ ತ್ಯಾಗ ಬಲಿದಾನವಿದೆ. ಸಮ ಸಮಾಜದ ಆಶಯವಿದೆ ನಿಷ್ಕಲ್ಮಶ ಹೋರಾಟವಿದೆ. 50 ವರ್ಷಗಳ ಈ ಸುದೀರ್ಘ ಇತಿಹಾಸದಲ್ಲಿ ಒಟ್ಟಾಗಿದ್ದ ದಸಂಸ ಬಣಗಳಾಗಿ ವಿಭಜನೆಯಾಗಿದೆ.

ಬೆಂಗಳೂರಿನಲ್ಲಿ 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯ‌ರ್

3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಎಂಜಿನಿಯ‌ರ್ ಅರೆಸ್ಟ್‌

Lokayukta Raid: ವಿದ್ಯುತ್ ಮೀಟರ್ ಸಂಪರ್ಕ ಮರುಚಾಲನೆ ಮತ್ತು ನೂತನ ಸಂಪರ್ಕ ನೀಡಲು 3 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರಿನ ಇಂದಿರಾನಗರದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯ‌ರ್ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.

Loading...