ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲಿ ಅಗೆದರೂ ಯಾವುದೇ ಕುರುಹು ಇಲ್ಲ
ತಲೆ ಬುರುಡೆ ಇರಲಿ, ಒಂದೇ ಒಂದು ಮೂಳೆಯೂ ಪತ್ತೆಯಾಗಿಲ್ಲ. ಧರ್ಮಸ್ಥಳದ ಸ್ನಾನಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದರು. ಆತ ಗುರುತಿಸಿದ ಮೊದಲನೇ ಜಾಗವನ್ನು ಬರೋಬ್ಬರಿ 15 ಅಡಿ ಆಳ, 8 ಅಡಿ ಅಗಲ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.