ನಡುರಸ್ತೆಯಲ್ಲಿ ಅನಾಥವಾದ ಅಂಬೇಡ್ಕರ್ ಫ್ಲೆಕ್ಸ್
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರವೂ ಸೇರಿದಂತೆ ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳು ಆಗಾಗ ದಾಳಿ ನಡೆಸಿ ಅಷ್ಟೋ ಇಷ್ಟೋ ಪ್ಲಾಸ್ಟಿಕ್ ವಶಪಡಿಸಿಕೊಂಡು ಸಣ್ಣಪುಟ್ಟ ದಂಡ ಹಾಕಿದ್ದು ಬಿಟ್ಟರೆ ದೊಡ್ಡ ಮಟ್ಟದ ಸುಧಾರಣೆ ಕಂಡಿಲ್ಲ. ಜಿಲ್ಲೆಯಾದ್ಯಂತ ಈ ಮೂರು ವರ್ಷಗಳಲ್ಲಿ ಎಗ್ಗು ಸಿಗ್ಗಿಲ್ಲದೆ ಫ್ಲೆಕ್ಸ್ ಮತ್ತು ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ಸಾಗಿದೆ. ಹೀಗಾಗಿ ಮುಕ್ತ ಎಂಬ ಈ ಘೋಷಣೆ ಜನಪ್ರತಿನಿಧಿಗಳು, ಅಧಿಕಾರಿಗಳ ಆರಂಭ ಶೂರತ್ವಕ್ಕೆ ಹಿಡಿದ ಕನ್ನಡಿಯಂತಾಗಿದೆ.