Drugs Smuggling: ಡ್ರಗ್ಸ್ ಕೇಸ್, ಬ್ಲ್ಯಾಕ್ ಮೇಲ್ ಆರೋಪ; ತಮಿಳಿನ ಖ್ಯಾತ ನಟನ ಬಂಧನ
ಮಾದಕವಸ್ತು ಪೂರೈಕೆ, (Drugs Case) ಉದ್ಯೋಗ ಹಗರಣಗಳು, ಬ್ಲ್ಯಾಕ್ಮೇಲ್ ಮತ್ತು ಭೂಕಬಳಿಕೆಯನ್ನು ಒಳಗೊಂಡ ಕ್ರಿಮಿನಲ್ ಪ್ರಕರಣದಲ್ಲಿ ತಮಿಳು ನಟನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಹು ದೊಡ್ಡ ಡ್ರಗ್ಸ್ ಜಾಲವನ್ನು ತಮಿಳುನಾಡಿನ ಪೊಲೀಸರು ಭೇದಿಸಿದ್ದಾರೆ.


ಮಾದಕವಸ್ತು ಪೂರೈಕೆ, ಉದ್ಯೋಗ ಹಗರಣಗಳು, ಬ್ಲ್ಯಾಕ್ಮೇಲ್ ಮತ್ತು (Drugs Smuggling) ಭೂಕಬಳಿಕೆಯನ್ನು ಒಳಗೊಂಡ ಕ್ರಿಮಿನಲ್ ಪ್ರಕರಣದಲ್ಲಿ ತಮಿಳು ನಟನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಹು ದೊಡ್ಡ ಡ್ರಗ್ಸ್ ಜಾಲವನ್ನು ತಮಿಳುನಾಡಿನ ಪೊಲೀಸರು ಭೇದಿಸಿದ್ದಾರೆ. ನಟನನ್ನು ಶ್ರೀಕಾಂತ್ (actor Srikanth) ಎಂದು ಹೇಳಲಾಗಿದೆ. ಶ್ರೀಕಾಂತ್ಗೆ ಕೊಕೇನ್ ಸರಬರಾಜು ಮಾಡಿದ್ದ ಪ್ರಮುಖ ಆರೋಪಿ ಪ್ರಸಾದ್, ಮಾದಕ ದ್ರವ್ಯ ಆಧಾರಿತ ಪಾರ್ಟಿಗಳನ್ನು ಆಯೋಜಿಸಿದ್ದಲ್ಲದೆ, ಅನೇಕ ವ್ಯಕ್ತಿಗಳಿಗೆ ಕೊಕೇನ್ ಮಾರಾಟ ಮಾಡಿರುವುದು ಈಗ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಪ್ರಸಾದ್ ಬೇರೆ ಬೇರೆ ವಂಚನೆ ಜಾಲವನ್ನು ನಡೆಸುತ್ತಿದ್ದ. ಸರ್ಕಾರಿ ಉದ್ಯೋಗದ ಭರವಸೆ ನೀಡಿ 200 ಕ್ಕೂ ಹೆಚ್ಚು ಜನರನ್ನು ವಂಚಿಸುತ್ತಿದ್ದನು. ಚೆನ್ನೈ ಕಾರ್ಪೊರೇಷನ್, ರೈಲ್ವೆ, ಆದಾಯ ತೆರಿಗೆ ಇಲಾಖೆ ಮತ್ತು ತಮಿಳುನಾಡು ಸಾರ್ವಜನಿಕ ಸೇವಾ ಆಯೋಗ (TNPSC) ಗಳಲ್ಲಿ ಉದ್ಯೋಗ ನೀಡುವ ನಕಲಿ ಭರವಸೆಗಳನ್ನು ನೀಡಿ ಉದ್ಯೋಗಾಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಪ್ರಸಾದ್ ಪ್ರತಿಯೊಬ್ಬ ಆಕಾಂಕ್ಷಿಯಿಂದ 2 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಹಣ ಸಂಗ್ರಹಿಸಿದ್ದ ಎಂದು ತಿಳಿದು ಬಂದಿದೆ.
ತನಿಖಾಧಿಕಾರಿಗಳು ಪ್ರಸಾದ್ ಅವರ ಸಹಚರ ಅಜಯ್ ವಂಡೈಯರ್ ಅವರನ್ನೂ ತನಿಖೆ ನಡೆಸುತ್ತಿದ್ದಾರೆ. ಅಜಯ್ ಭೂಮಾಲೀಕರನ್ನು ಬೆದರಿಸುವ ಆರೋಪ ಹೊರಿಸಲಾಗಿದೆ, ವಿಶೇಷವಾಗಿ ಅನಿವಾಸಿ ಭಾರತೀಯರನ್ನು (ಎನ್ಆರ್ಐ) ಗುರಿಯಾಗಿಸಿಕೊಂಡಿದ್ದಾರೆ. ಅಕ್ರಮವಾಗಿ ಆಸ್ತಿಗಳನ್ನು ಕಬಳಿಸಲು ಅವರು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Drug Smuggling: ಚೂಡಿದಾರ್ ಡ್ರೆಸ್ ಪೀಸ್ಗಳಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ!; ಬೆಂಗಳೂರಲ್ಲಿ ನೈಜೀರಿಯಾ ಯುವತಿ ಅರೆಸ್ಟ್
ತನಿಖೆಯಲ್ಲಿ ಪ್ರಸಾದ್ ವ್ಯಕ್ತಿಗಳ ಕರೆ ಮತ್ತು ಸ್ಥಳ ದಾಖಲೆಗಳನ್ನು ಪಡೆಯುವ ಮೂಲಕ ಅವರನ್ನು ಬ್ಲ್ಯಾಕ್ಮೇಲ್ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಇಬ್ಬರು ಸಬ್-ಇನ್ಸ್ಪೆಕ್ಟರ್ಗಳು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸಾದ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಮಧುರೈ ಮೂಲದ ಹೆಡ್ ಕಾನ್ಸ್ಟೆಬಲ್ ಒಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 22 ಜನರನ್ನು ಬಂಧಿಸಲಾಗಿದ್ದು, ಐವರನ್ನು ಕಠಿಣ ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಮಾದಕ ದ್ರವ್ಯ ಸೇವನೆ ಅಥವಾ ಮಾರಾಟದ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.