ಕಾಟನ್ ಕ್ಯಾಂಡಿಯಿಂದ ಕಲುಷಿತ ಚಹಾದವರೆಗೆ: ಆರೋಗ್ಯ ಸಚಿವರಿಂದ ಕರ್ನಾಟಕದ ಆಹಾರ ಸುರಕ್ಷತಾ ಅಭಿಯಾನದ ನಕ್ಷೆಗಳು
‘ಗುಡ್ ಫುಡ್ ಟಾಕ್ಸ್’ ಆಹಾರ ಮತ್ತು ಸ್ವಾಸ್ಥ್ಯದ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ಚಿಂತಕರು, ಉದ್ಯಮ ತಜ್ಞರು ಮತ್ತು ಆರೋಗ್ಯ ಜಾಗೃತ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸ ಬಹುದಾದ ಪಾಡ್ಕ್ಯಾಸ್ಟ್ ಸರಣಿಯಾಗಿದೆ. ಪ್ರತಿ ಸಂಚಿಕೆಯು ಪ್ರೇಕ್ಷಕರನ್ನು ಎಚ್ಚರಿಕೆಯಿಂದ ಆಹಾರ ಸೇವಿಸುವುದು, ಸ್ಥಳೀಯ ಉತ್ಪನ್ನಗಳು ಮತ್ತು ಪಾರದರ್ಶಕ ಆಹಾರ ವ್ಯವಸ್ಥೆಗಳು ಹಾಗು ಆರೋಗ್ಯಕರ ಭವಿಷ್ಯವನ್ನು ಹೇಗೆ ರೂಪಿಸಬಹುದು ಎಂಬುದನ್ನು ಅರ್ಥಮಾಡಿಸಿಕೊಳ್ಳುತ್ತದೆ.


ಬೆಂಗಳೂರು: ಭಾರತದ ಮೊದಲ ಪ್ರಮಾಣೀಕೃತ ಸಾವಯವ ಡೈರಿ ಬ್ರ್ಯಾಂಡ್ ಅಕ್ಷಯಕಲ್ಪ ಆರ್ಗಾನಿಕ್, ತನ್ನ ವೀಡಿಯೊ ಪಾಡ್ಕ್ಯಾಸ್ಟ್ ಸರಣಿ ಗುಡ್ ಫುಡ್ ಟಾಕ್ಸ್ನ ಹೊಸ ಮತ್ತು ಪರಿಣಾಮ ಕಾರಿ ಸಂಚಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ಸಾರ್ವಜನಿಕ ಆರೋಗ್ಯ ವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ರಾಜ್ಯದ ಇತ್ತೀಚಿನ ಉಪಕ್ರಮಗಳ ಕುರಿತು ಕರ್ನಾಟಕ ಸರ್ಕಾರದ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಆಳವಾದ ಸಂವಾದದಲ್ಲಿ ಭಾಗವಹಿಸಿದರು.
ಚರ್ಚೆಯ ಸಂದರ್ಭದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು, ರಕ್ತಹೀನತೆ ಯನ್ನು ಸಕ್ರಿಯವಾಗಿ ಎದುರಿಸಲು ಮತ್ತು ಆಹಾರ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವಲ್ಲಿ ಸಮುದಾಯಗಳು ಹೆಚ್ಚು ಪರಿಣಾಮಕಾರಿ ಪಾತ್ರವನ್ನು ವಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಇದನ್ನೂ ಓದಿ: Dinesh Gundu Rao: ಜ್ವರ, ಶೀತ ಬಂದರೆ ಶಾಲಾ ಮಕ್ಕಳಿಗೆ ರಜೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
‘ಗುಡ್ ಫುಡ್ ಟಾಕ್ಸ್’ ಆಹಾರ ಮತ್ತು ಸ್ವಾಸ್ಥ್ಯದ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ಚಿಂತಕರು, ಉದ್ಯಮ ತಜ್ಞರು ಮತ್ತು ಆರೋಗ್ಯ ಜಾಗೃತ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸ ಬಹುದಾದ ಪಾಡ್ಕ್ಯಾಸ್ಟ್ ಸರಣಿಯಾಗಿದೆ. ಪ್ರತಿ ಸಂಚಿಕೆಯು ಪ್ರೇಕ್ಷಕರನ್ನು ಎಚ್ಚರಿಕೆಯಿಂದ ಆಹಾರ ಸೇವಿಸುವುದು, ಸ್ಥಳೀಯ ಉತ್ಪನ್ನಗಳು ಮತ್ತು ಪಾರದರ್ಶಕ ಆಹಾರ ವ್ಯವಸ್ಥೆಗಳು ಹಾಗು ಆರೋಗ್ಯಕರ ಭವಿಷ್ಯವನ್ನು ಹೇಗೆ ರೂಪಿಸಬಹುದು ಎಂಬುದನ್ನು ಅರ್ಥಮಾಡಿಸಿಕೊಳ್ಳುತ್ತದೆ.
ಇತ್ತೀಚಿನ ಸಂಚಿಕೆಯಲ್ಲಿ, ಸಚಿವ ದಿನೇಶ್ ಗುಂಡೂರಾವ್ ಕರ್ನಾಟಕವು ಜಾಗೃತಿ ಮೂಡಿರುವು ದರಿಂದ ಈ ದಿಸೆಯಲ್ಲಿ ನಿರ್ಣಾಯಕವಾದ ಪ್ರಗತಿ ಆಗುತ್ತಿದೆ ಎಂದು ಒತ್ತಿ ಹೇಳಿದರು.
ಕಲಬೆರಕೆ ಆಹಾರ, ಹಾನಿಕಾರಕ ರಾಸಾಯನಿಕಗಳ ಬಳಕೆ ಮತ್ತು ಸ್ಥಳೀಯ ಮಟ್ಟದ ಆಹಾರ ಪರೀಕ್ಷೆಯ ಅಗತ್ಯತೆಯ ವಿರುದ್ಧ ರಾಜ್ಯದ ಕ್ರಮದ ಬಗ್ಗೆ ಗುಂಡೂರಾವ್ ಮಾತನಾಡಿದರು.
ರೋಡಮೈನ್-ಬಿ ನಂತಹ ಅಪಾಯಕಾರಿ ಆಹಾರ ಬಣ್ಣಗಳ ಮೇಲೆ ಸರ್ಕಾರವು ಇತ್ತೀಚಿಗೆ ವಿಧಿಸಿರುವ ನಿಷೇಧದ ಕುರಿತು ಅವರು ವಿವರಿಸಿದರು. ಟಾರ್ಟ್ರಾಜಿನ್, ಕಾರ್ಮೊಯಿಸಿನ್ ಮತ್ತು ಸನ್ಸೆಟ್ ಯೆಲ್ಲೋ ಕಾಟನ್ ಕ್ಯಾಂಡಿ, ಕಬಾಬ್, ಗೋಬಿ ಮಂಚೂರಿಯನ್ ಮತ್ತು ಕೇಕ್ ಗಳಂತಹ ವಸ್ತುಗಳಲ್ಲಿ, ಬೀದಿಬದಿಯ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಸಾಮಾನ್ಯವಾಗಿ ಕಾಣುವ ರಾಸಾಯನಿಕಗಳು. ಕರ್ನಾಟಕದ ಮಾಲುಗಳಲ್ಲಿ ಉಚಿತ ಆಹಾರ ಪರೀಕ್ಷಾ ಮಳಿಗೆಗಳನ್ನು ಸ್ಥಾಪಿಸುವ ರಾಜ್ಯದ ಉಪಕ್ರಮದ ಬಗ್ಗೆಯೂ ಅವರು ಮಾತನಾಡಿದರು.
ಅಲ್ಲಿ ಸಾಮಾನ್ಯ ಗ್ರಾಹಕರು ತಮ್ಮ ಆಹಾರ ಮಾದರಿಗಳನ್ನು ತಂದು ಗುಣಮಟ್ಟ ಮತ್ತು ಕಲಬೆರಕೆಗಾಗಿ ಪರೀಕ್ಷಿಸಬಹುದು. ಕರ್ನಾಟಕದಲ್ಲಿ ಕಳಪೆ ಗುಣಮಟ್ಟದ ಚಹಾ ಪುಡಿಗಳ ಬಗ್ಗೆಯೂ ಸಚಿವರು ಮಾತನಾಡಿದರು. ಅವುಗಳಲ್ಲಿ ಹಲವು ಇತ್ತೀಚಿನ ಮಾದರಿ ಪರೀಕ್ಷೆಗಳಲ್ಲಿ ಗುಣಮಟ್ಟ ವಿಫಲವಾಗಿವೆ. ಎಚ್ಚರಿಕೆಗಳನ್ನು ನೀಡುವಲ್ಲಿ ಮತ್ತು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರದ ತ್ವರಿತ ಕ್ರಮವು, ಗ್ರಾಹಕರನ್ನು ಕೆಳದರ್ಜೆಯ ಮತ್ತು ಅಸುರಕ್ಷಿತ ಉತ್ಪನ್ನಗಳಿಂದ ರಕ್ಷಿಸುವಲ್ಲಿ ಅದರ ಗಂಭೀರತೆಯನ್ನು ತೋರಿಸಿದೆ.
ರಕ್ತಹೀನತೆ ರಾಜ್ಯವು ಹೋರಾಡುತ್ತಿರುವ ಮತ್ತೊಂದು ನಿರ್ಣಾಯಕ ಸಮಸ್ಯೆಯಾಗಿದೆ ಮತ್ತು ಅದರ ಬಗ್ಗೆ ಮಾತನಾಡುತ್ತಾ, ಗುಂಡೂರಾವ್ ಅವರು, ಶಾಲೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾಳಜಿಗಳನ್ನು ಗುರುತಿಸಲು ಮಾತ್ರವಲ್ಲದೆ ಪೌಷ್ಠಿಕಾಂಶದ ಸಮತೋಲನ ಮತ್ತು ಆಹಾರದ ಬಗ್ಗೆ ಕುಟುಂಬಗಳಿಗೆ ಶಿಕ್ಷಣ ನೀಡಲು ರಾಜ್ಯ ಸರ್ಕಾರದ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆಗಳ ಬದಲಿಗೆ ಶುದ್ಧ ಹತ್ತಿ ಬಟ್ಟೆಯನ್ನು ಬಳಸುವಂತಹ ಸಣ್ಣ ಆದರೆ ಪ್ರಬಲ ಉದಾಹರಣೆಗಳನ್ನು ನೀಡಿದರು. ಪಾಡ್ಕ್ಯಾಸ್ಟ್ನಲ್ಲಿ ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕರ್ನಾಟಕ ಸರ್ಕಾರವು , "ನಾಗರಿ ಕರು ತಾವು ಏನು ತಿನ್ನುತ್ತೇವೆ ಎಂಬುದರ ಕುರಿತು ಕಠಿಣ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಾಗ ನಿಜವಾದ ಪರಿವರ್ತನೆ ಪ್ರಾರಂಭವಾಗುತ್ತದೆ ಎಂದರು.
ಅಸುರಕ್ಷಿತ ಆಹಾರ ಸೇವನೆಯನ್ನು ನಿಷೇಧಿಸುವುದಾಗಲಿ ಅಥವಾ ಸ್ಥಳೀಯ ಆಹಾರ ಪ್ರಯೋಗಾ ಲಯಗಳನ್ನು ಸ್ಥಾಪಿಸುವುದಾಗಲಿ, ಆಹಾರ ಸುರಕ್ಷತೆಯು ಪ್ರತಿಯೊಬ್ಬರ ಆದ್ಯತೆಯಾಗುವ ಸಂಸ್ಕೃತಿಯನ್ನು ನಾವು ನಿರ್ಮಿಸಲು ಬಯಸುತ್ತೇವೆ. ಬಲವಾದ ನೀತಿಗಳು ಅಗತ್ಯವಾದರೂ - ಕೊನೆಯಲ್ಲಿ ಜನರ ಜಾಗೃತಿ ಮತ್ತು ಭಾಗವಹಿಸುವಿಕೆಯೇ ಕೊನೆಯಲ್ಲಿ ಬದಲಾವಣೆಗೆ ಕಾರಣ ವಾಗುತ್ತದೆ.”
ಈ ನಿರ್ಣಾಯಕ ವಿಷಯಗಳ ಬಗ್ಗೆ ಮುಕ್ತವಾಗಿ ಮತ್ತು ರಚನಾತ್ಮಕವಾಗಿ ಮಾತನಾಡಿದ ಸಚಿವರ ಇಚ್ಛೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಅಕ್ಷಯಕಲ್ಪ ಆರ್ಗಾನಿಕ್ನ ಸಹ-ಸಂಸ್ಥಾಪಕ ಮತ್ತು ಸಿ.ಇ.ಒ. ಶಶಿ ಕುಮಾರ್ , "ಆರೋಗ್ಯ, ಆಹಾರ ಮತ್ತು ಸುಸ್ಥಿರತೆ- ಎಲ್ಲವೂ ಆಳವಾಗಿ ಸಂಬಂಧ ಹೊಂದಿರುವ ನಿರ್ಣಾಯಕ ಹಂತದಲ್ಲಿ ಭಾರತ ನಿಂತಿದೆ. ಗುಂಡೂ ರಾವ್ ಅವರ ನಾಯಕತ್ವವು ರಾಜ್ಯ-ಚಾಲಿತ ನೀತಿಗಳು ಮತ್ತು ನಾಗರಿಕ ಜವಾಬ್ದಾರಿ ಹೇಗೆ ಕೈಜೋಡಿಸು ತ್ತದೆ ಎಂಬುದನ್ನು ತೋರಿಸುತ್ತದೆ.
ಅಕ್ಷಯಕಲ್ಪ ಆರ್ಗಾನಿಕ್ನಲ್ಲಿ, ಜನರು ತಮ್ಮ ಆಹಾರದ ಮೂಲವೇನು ಮತ್ತು ಅದರಲ್ಲಿ ಏನು ಹೋಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡ ನಂತರ, ಅವರು ತಮಗಾಗಿ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾವು ನಂಬುತ್ತೇವೆ.” ಎಂದು ವ್ಯಕ್ತಪಡಿಸಿದರು. ಗುಡ್ ಫುಡ್ ಟಾಕ್ಸ್ನ ಇತ್ತೀಚಿನ ಸಂಚಿಕೆಯು, ಆಹಾರ ಮತ್ತು ಆರೋಗ್ಯದ ಬಗ್ಗೆ ಪಾರದರ್ಶಕ, ಸತ್ಯ-ಆಧಾರಿತ ಚರ್ಚೆಗಳನ್ನು ಸಕ್ರಿಯಗೊಳಿಸುವ ಅಕ್ಷಯಕಲ್ಪ ಆರ್ಗಾನಿಕ್ನ ಬದ್ಧತೆ ಯನ್ನು ಬಲಪಡಿಸುತ್ತದೆ.
ಕರ್ನಾಟಕವು ಆಹಾರ ಸುರಕ್ಷತಾ ಸುಧಾರಣೆಯತ್ತ ದಿಟ್ಟ ಮತ್ತು ಸಮುದಾಯ ಆಧಾರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ, ಈ ಪಾಡ್ಕ್ಯಾಸ್ಟ್ ದೇಶಾದ್ಯಂತ ಜಾಗೃತಿ ಮೂಡಿಸಲು ಮತ್ತು ಹೆಚ್ಚು ಜಾಗೃತ ಆಯ್ಕೆಗಳನ್ನು ತೆಗೆದುಕೊಳ್ಳುವುದಕ್ಕೆ ಸಕಾಲಿಕ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.