ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishi Sunak: ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದು 17ನೇ ಓವರ್‌ನಲ್ಲಿ ಅಪಾಯಕಾರಿ ಮಾರ್ಕಸ್‌ ಸ್ಟೋಯಿನಿಸ್‌ ಅವರ ವಿಕೆಟ್‌ ಕಿತ್ತದ್ದು. ಅವರು ಕ್ರೀಸ್‌ಗೆ ಬಂದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಆರ್‌ಸಿಬಿಗೆ ಕಂಟಕವಾಗುವ ಸೂಚನೆ ನೀಡಿದರು. ಆದರೆ ಮುಂದಿನ ಎಸೆತದಲ್ಲಿ ಅವರ ವಿಕೆಟ್‌ ಪತನಗೊಂಡಿತು. ಈ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ಗೆಲುವು ಕೂಡ ಖಚಿತವಾಯಿತು.

ಆರ್‌ಸಿಬಿ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಬ್ರಿಟನ್‌ ಮಾಜಿ ಪ್ರಧಾನಿ

Profile Abhilash BC Jun 4, 2025 7:48 AM

ಅಹಮದಾಬಾದ್‌: ಐಪಿಎಲ್‌ ಆರಂಭವಾದಾಗಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಟ್ರೋಫಿ ಎತ್ತಿಹಿಡಿಯಲಿ ಎಂದು ಹಂಬಲಿಸುತ್ತಿದ್ದ, ‘ಈ ಸಲ ಕಪ್‌ ನಮ್ಮದೇ’ ಎಂದು ಹುರಿದುಂಬಿಸುತ್ತಲೇ ಇದ್ದ ಆರ್‌ಸಿಬಿ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದೆ. ಮಂಗಳವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್‌ ವಿರುದ್ಧ 6 ರನ್‌ ಅಂತರದಿಂದ ಗೆದ್ದು ಚೊಚ್ಚಲ ಟ್ರೋಫಿ ಮುಡಿಸಿಗೇರಿಸಿಕೊಂಡಿದೆ. ಆರ್‌ಸಿಬಿ ಫೈನಲ್‌ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಈ ಮಧ್ಯೆ ದೂರದ ಲಂಡನ್‌ನಿಂದ ಆರ್‌ಸಿಬಿಗೆ ಬೆಂಬಲಿಸಲು ಆಗಮಿಸಿದ್ದ ಇಂಗ್ಲೆಂಡ್‌ ಮಾಜಿ ಪ್ರಧಾನಿ ರಿಷಿ ಸುನಕ್ ಆರ್‌ಸಿಬಿ ಗೆಲ್ಲುತ್ತಿದ್ದಂತೆ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ ವಿಡಿಯೊ ಮತ್ತು ಫೋಟೊಗಳು ವೈರಲ್‌ ಆಗಿದೆ.

ಆರ್‌ಸಿಬಿ ಮತ್ತು ವಿರಾಟ್‌ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ರಿಷಿ ಸುನಕ್ ಫೈನಲ್‌ ಪಂದ್ಯಕ್ಕೆ ಹಾಜಾರಾಗಿದ್ದರು. ಆರ್‌ಸಿಬಿ ಆಟಗಾರರು ಮೈದಾನದಲ್ಲಿ ಸಿಕ್ಸರ್‌, ಬೌಂಡರಿ ಮತ್ತು ಎದುರಾಳಿ ತಂಡದ ವಿಕೆಟ್‌ ಕೀಳಿತ್ತಿದ್ದ ವೇಳೆ ಜೋಶ್‌ನಲ್ಲಿ ಸಂಭ್ರಮಿಸುತ್ತಿದ್ದ ಅವರು. ಪಂದ್ಯ ಗೆದ್ದಾಗ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಮಾತನಾಡಿದ್ದ ಅವರು, ‘ನಾನು ಬೆಂಗಳೂರಿನ ಕುಟುಂಬದ ಹುಡುಗಿಯನ್ನು(ಇನ್ಫೊಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರ ಮಗಳು) ಮದುವೆಯಾಗಿದ್ದೇನೆ. ಆದ್ದರಿಂದ ಬೆಂಗಳೂರಿನ ನಂಟು ನನಗೂ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ವಿರಾಟ್‌ ಕೊಹ್ಲಿಗೆ ಅಭಿನಂದನೆಗಳುʼ ಎಂದರು. ಕನ್ನಡದ ಬಗ್ಗೆಯೂ ಮಾತನಾಡಿದ ಅವರು, ‘16 ವರ್ಷಗಳ ಹಿಂದೆ ಅಕ್ಷತಾಗೆ ಕನ್ನಡದಲ್ಲಿಯೇ ಮದುವೆ ಪ್ರಸ್ತಾವ ಮಾಡಿದ್ದೆ. ಆಗಿನಿಂದ ಇಲ್ಲಿಯವರೆಗೂ ನನ್ನ ಕನ್ನಡ ಉತ್ತಮವಾಗುತ್ತಿದೆʼ ಎಂದರು.



ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು. ಕೊನೆಯವರೆಗೂ ಹೋರಾಡಿದ ಶಶಾಂಕ್‌ ಸಿಂಗ್ ಅಜೇಯ 61 ರನ್ ಗಳಿಸಿದರು.

ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದು 17ನೇ ಓವರ್‌ನಲ್ಲಿ ಅಪಾಯಕಾರಿ ಮಾರ್ಕಸ್‌ ಸ್ಟೋಯಿನಿಸ್‌ ಅವರ ವಿಕೆಟ್‌ ಕಿತ್ತದ್ದು. ಅವರು ಕ್ರೀಸ್‌ಗೆ ಬಂದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟಿ ಆರ್‌ಸಿಬಿಗೆ ಕಂಟಕವಾಗುವ ಸೂಚನೆ ನೀಡಿದರು. ಆದರೆ ಮುಂದಿನ ಎಸೆತದಲ್ಲಿ ಅವರ ವಿಕೆಟ್‌ ಪತನಗೊಂಡಿತು. ಈ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ಗೆಲುವು ಕೂಡ ಖಚಿತವಾಯಿತು. ಒಂದೊಮ್ಮೆ ಅವರ ವಿಕೆಟ್‌ ಪತನವಾಗದೇ ಹೋಗಿದ್ದರೆ ಪಂದ್ಯ ಸೋಲುವ ಸಾಧ್ಯತೆ ಅಧಿಕವಾಗಿತ್ತು.