ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಐ ಅಳವಡಿಕೆಯಲ್ಲಿ ಭಾರತವು ಇತರ ದೇಶಗಳಿಗಿಂತ ಹಿಂದೆ ಉಳಿದಿದೆ: ಬಿಸಿಐಸಿ

ಕೇವಲ ಶೇ.15ರಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉತ್ಪಾದನಾ ವಿಭಾಗದಲ್ಲಿ ಎಐ ಅನ್ನು ಅಳವಡಿಸಿಕೊಂಡಿವೆ. ಸಮಾವೇಶದಲ್ಲಿ ಬಿಸಿಐಸಿ ಮತ್ತು ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ “ಉತ್ಪಾದನೆಯಲ್ಲಿ ಎಐ” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಎಐ ಅಳವಡಿಕೆಯಲ್ಲಿ ಭಾರತವು ಇತರ ದೇಶಗಳಿಗಿಂತ ಹಿಂದೆ ಉಳಿದಿದೆ

Profile Ashok Nayak Jun 5, 2025 8:49 PM

ಬೆಂಗಳೂರು: ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಆಂಡ್ ಕಾಮರ್ಸ್ (ಬಿಸಿಐಸಿ) ಇಂದು ಬೆಂಗಳೂರಿನಲ್ಲಿ "ಉತ್ಪಾದನಾ ವಲಯದ ಬದಲಾವಣೆಗೆ ಎಐ: ಉತ್ಪಾದಕತೆ ಮತ್ತು ದಕ್ಷತೆ ಹೆಚ್ಚಿಸಲು ಎಐ ಬಳಸುವ ಮೂಲಕ ಕೈಗಾರಿಕೆಗಳ ರೂಪಾಂತರ" ಎಂಬ ಸಮಾವೇಶ ಆಯೋಜಿ ಸಿತ್ತು. ಇದೇ ಸಮಾವೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಎಕ್ಸಲೆನ್ಸ್ ಅವಾರ್ಡ್ಸ್ 2025 ಕಾರ್ಯಕ್ರಮ ವನ್ನು ಕೂಡ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಸಿಐಸಿ ಮತ್ತು ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ “ಉತ್ಪಾದನೆಯಲ್ಲಿ ಎಐ” ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಮಿತ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈ. ಲಿಮಿಟೆಡ್ ನ ಸಿ ಎ ಸಿ ಸಿಸ್ಟಮ್ಸ್ ಮುಖ್ಯಸ್ಥ ಕೆಂಜಿ ಅಂಜಾಯ್ ಅವರು, "ಕೃತಕ ಬುದ್ಧಿಮತ್ತೆ (ಎಐ) ಕೇವಲ ತಾಂತ್ರಿಕ ಪ್ರಗತಿಯಷ್ಟೇ ಅಲ್ಲ, ಇದು ಉತ್ಪಾದನಾ ವಲಯದ ಭವಿಷ್ಯಕ್ಕೆ ಭದ್ರ ಆಧಾರವಾಗಿದೆ. ಮಾನವ- ಯಂತ್ರ ಸಹಯೋಗ ಎಲ್ಲಾ ಕಾಲಕ್ಕೂ ಮುಖ್ಯವಾಗಿದೆ. ಸಾಧನಗಳು ಬಳಕೆದಾರರ ಆದೇಶಗಳನ್ನು ಅರ್ಥಮಾಡಿಕೊಂಡು ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸುವುದು ಇದರಿಂದ ಸಾಧ್ಯವಾಗುತ್ತದೆ. ಡಿಜಿಟಲ್ ಜಗತ್ತು ವಿಸ್ತಾರಗೊಳ್ಳುತ್ತಿದ್ದಂತೆ ಡೇಟಾ, ನೆಟ್ ವರ್ಕ್ ಮತ್ತು ವ್ಯವಸ್ಥೆಗಳನ್ನು ರಕ್ಷಿಸಲು ಮತ್ತು ಸುರಕ್ಷಿತ ಮತ್ತು ಸ್ಥಿರ ಕಾರ್ಯಾಚರಣೆ ನಡೆಸಲು ಸೈಬರ್‌ ಸೆಕ್ಯುರಿಟಿ ಉತ್ಪನ್ನಗಳು ಮುಖ್ಯವಾಗಿವೆ" ಎಂದು ಹೇಳಿದರು.

ಇದನ್ನೂ ಓದಿ: Bangalore Stampede: ‘ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಕಾಲ್ತುಳಿತ- ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೂರು

ಏಸ್‌ಮೈಕ್ರೊಮ್ಯಾಟಿಕ್‌ ಎಂಐಟಿಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಭಾರತಿ ಮಾತನಾಡಿ, "ಕೃತಕ ಬುದ್ಧಿಮತ್ತೆ ಬಹಳ ವೇಗವಾಗಿ ಬದಲಾಗುತ್ತಿದೆ. ಪ್ರಸ್ತುತ ಯಾವುದೇ ಉತ್ಪಾದನಾ ಕಂಪನಿ ಯ ಕಾರ್ಯವಿಧಾನದಲ್ಲಿ ಎಐ ಹಾಸುಹೊಕ್ಕಾಗಿರಬೇಕಾಗಿರುವುದು ಅವಶ್ಯವಾಗಿದೆ. ಯಾಕೆಂದರೆ ಎಐ ಜನರನ್ನು ಹೆಚ್ಚು ಸವಾಲಿನ ಕೆಲಸಗಳನ್ನು ಸುಲಭವಾಗಿ ಮಾಡುವಂತೆ ಮಾಡುತ್ತದೆ ಮತ್ತು ಹೊಸ ಸಾಧ್ಯತೆಗಳನ್ನು ಎದುರುಗೊಳ್ಳಲು ನೆರವಾಗುತ್ತದೆ. ಡೇಟಾ ನಿರ್ವಹಿಸಲು, ಸಂದರ್ಭದ ಅರಿವನ್ನು ಹೆಚ್ಚಿಸಲು ಮತ್ತು ಸಮಸ್ಯೆಗಳನ್ನು ಮೊದಲೇ ಊಹಿಸಲು ಉತ್ಪಾದನಾ ಕಾರ್ಖಾನೆ ಗಳಿಂದ ಆಡಳಿತದ ನಿರ್ಧಾರಗಳವರೆಗೆ ಎಐ ವ್ಯವಸ್ಥೆಗಳನ್ನು ಬಳಸಬೇಕು. ಹೊಸ ಕಾಲದ ಕೈಗಾರಿಕಾ ಜಗತ್ತಿಗೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಯಾಂತ್ರೀಕರಣ ಅವಶ್ಯವಷ್ಟೇ ಅಲ್ಲ, ಮಾನವ ಸೃಜನಶೀಲತೆ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಜೊತೆಯಾಗಿ ಬಳಸಬೇಕಿದೆ" ಎಂದು ಹೇಳಿದರು.

ಬಿಸಿಐಸಿ ಚೇರ್ಮನ್ ಮತ್ತು ಬಿಸಿಐಸಿ ಮ್ಯಾನುಫ್ಯಾಕ್ಚರಿಂಗ್ ಎಕ್ಸ್‌ ಪರ್ಟ್ ಕಮಿಟಿಯ ಜಿ ಪ್ರಕಾಶ್ ಅವರು, "ಭಾರತವು ವಿಸ್ತಾರವಾದ ಉತ್ಪಾದನಾ ಕ್ಷೇತ್ರವನ್ನು ಹೊಂದಿದೆ. ನಮ್ಮ ಶೇ 90ರಷ್ಟು ಕೈಗಾರಿಕಾ ಘಟಕಗಳು ಎಂಎಸ್ಎಂಇ ವರ್ಗಕ್ಕೆ ಸೇರಿವೆ. ಈ ಉದ್ಯಮಗಳು ಭಾರತದ ಜಿಡಿಪಿಯ ಶೇ.30ರಷ್ಟು ಕೊಡುಗೆ ನೀಡುತ್ತವೆ. 110 ಮಿಲಿಯನ್ ಜನರಿಗೆ ಉದ್ಯೋಗ ನೀಡಿದೆ ಮತ್ತು ಭಾರತದ ರಫ್ತಿನ ಶೇ.48ರಷ್ಟು ಒಳಗೊಂಡಿವೆ.

ಆದರೆ ಬಹಳಷ್ಟು ಎಂಎಸ್ಎಂಇಗಳು ಇನ್ನೂ ಎಐ ಅಳವಡಿಸಿಕೊಂಡಿಲ್ಲ. ಯಾಕೆಂದರೆ ಈ ಕೈಗಾರಿಕೆಗಳು ಈ ತಂತ್ರಜ್ಞಾನಗಳನ್ನು ದುಬಾರಿ ಮತ್ತು ಸಂಕೀರ್ಣ ಎಂದು ಭಾವಿಸುತ್ತವೆ. ಎಐ ಐಷಾರಾಮಿಯಲ್ಲ; ಅದು ಅವಶ್ಯಕತೆಯಾಗಿದೆ. ಕೈಗೆಟುಕುವ ದರದ ಕ್ಲೌಡ್ ಆಧಾರಿತ ಮತ್ತು ಪ್ಲಗ್ ಆಂಡ್ ಪ್ಲೇ ಮಾದರಿಗಳ ಮೂಲಕ ಲಭ್ಯವಿರುವ ಎಐ ಆಧರಿತ ಉತ್ಪನ್ನಗಳು ಶೇ.15 ರಿಂದ ಶೇ.30ರವರೆಗೆ ಉತ್ಪಾದಕತೆಯ ಲಾಭವನ್ನು ಒದಗಿಸುತ್ತವೆ.

ಜಾಗತಿಕ ಮಟ್ಟದ ಉತ್ಪಾದನಾ ವಲಯದಲ್ಲಿ ಎಐ ಅಳವಡಿಕೆ ಶೇ.35–40ರಷ್ಟಾಗಿದೆ. ಚೀನಾ, ಜರ್ಮನಿ ಮತ್ತು ಯುಎಸ್ ನಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಭಾರತ ಮಾತ್ರ ಎಐ ಅಳವಡಿಕೆಯಲ್ಲಿ ಹಿಂದೆ ಉಳಿದಿದೆ. ಉತ್ಪಾದನಾ ವಲಯದಲ್ಲಿ ಶೇ.25ಕ್ಕಿಂತ ಕಡಿಮೆ ಅಳವಡಿಸ ಲಾಗಿದೆ ಮತ್ತು ಎಂಎಸ್ಎಂಇಗಳಲ್ಲಿ ಇನ್ನೂ ಕಡಿಮೆ ಅಳವಡಿಕೆ ಮಾಡಲಾಗಿದೆ. ಕರ್ನಾಟಕವು ಡಿಜಿಟಲ್ ಎಕಾನಮಿ ಮಿಷನ್ ಮತ್ತು ಎಐ ಇನ್ನೋವೇಶನ್ ಹಬ್‌ ಗಳಂತಹ ಯೋಜನೆಗಳೊಂದಿಗೆ ಎಂಎಸ್ಎಂಇಗಳಿಗೆ ಸಕ್ರಿಯವಾಗಿ ಬೆಂಬಲ ನೀಡುವ ಮೂಲಕ ಮುಂಚೂಣಿಯಲ್ಲಿದೆ" ಎಂದು ಹೇಳಿದರು.

ಬಿಸಿಐಸಿ ಅಧ್ಯಕ್ಷರಾದ ವಿನೀತ್ ವರ್ಮಾ ಅವರು, "ಉತ್ಪಾದನಾ ವಲಯದಲ್ಲಿ ಎಐ ಕ್ರಾಂತಿ ಎಂದರೆ ಕೆಲಸಗಾರರನ್ನು ಬದಲಿಸುವುದಲ್ಲ, ಬದಲಿಗೆ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು. ಉದ್ಯೋಗ ಭದ್ರತೆಯ ಕುರಿತು ಆತಂಕಗಳಿದ್ದರೂ ಎಐ ಈ ವಲಯವನ್ನು ಸಶಕ್ತಗೊಳಿಸುವ ಸಾಧನವಾಗಿದೆ. ಉದ್ಯೋಗಿಗಳು ಪುನರಾವರ್ತಿತ ಕಾರ್ಯಗಳನ್ನು ಮಾಡುವುದರಿಂದ ಮುಕ್ತಗೊಳಿಸುತ್ತದೆ ಮತ್ತು ಕಾರ್ಯತಂತ್ರದ ಮತ್ತು ಸೃಜನಾತ್ಮಕ ಕೊಡುಗೆಗಳನ್ನು ನೀಡಲು ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಈ ಬದಲಾಗುತ್ತಿರುವ ಸಂದರ್ಭದಲ್ಲಿ ಯಶಸ್ವಿಯಾಗಲು ಕೌಶಲ್ಯ ವೃದ್ಧಿ ಮತ್ತು ಹೊಂದಿಕೊಳ್ಳುವಿಕೆ ಅತ್ಯಗತ್ಯ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯವಹಾರಗಳು ತಮ್ಮ ದಕ್ಷತೆಯನ್ನು ಹೆಚ್ಚಿಸಬಹುದು, ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಒಟ್ಟಾರೆ ಉತ್ಪಾದನಾ ಪ್ರಕ್ರಿಯೆಗಳನ್ನು ಸುಧಾರಿಸಬಹುದು" ಎಂದು ಹೇಳಿದರು.

ಬಿಸಿಐಸಿ ಎಸ್ ವಿ ಪಿ ಶ್ರೀ ಪ್ರಶಾಂತ್ ಗೋಖಲೆ ಅವರು, "ತ್ವರಿತವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ಉತ್ಪಾದನಾ ವಲಯದಲ್ಲಿ ಎಐ ಮತ್ತು ಸುಸ್ಥಿರತೆಯ ಪಾತ್ರ ಬಹಳ ಮಹತ್ವದ್ದಾಗಿದೆ. ಬದಲಾವಣೆಯು ಅನಿವಾರ್ಯವಾಗಿದೆ, ಆದರೆ ಬದಲಾವಣೆಯಲ್ಲಿಯೇ ಅವಕಾಶಗಳು ಅಡಗಿವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಕಡೆಗಿನ ಸೆಳೆತ ಜಾಸ್ತಿಯಾಗುತ್ತಿದೆ. ಆದರೆ ಸ್ಪರ್ಧಾತ್ಮಕವಾಗಿರಲು ನಾವು ಗಾತ್ರ, ಸುಸ್ಥಿರತೆ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸಬೇಕಿದೆ. ಎಐ ಮತ್ತು ಡಿಜಿಟಲ್ ರೂಪಾಂತರವನ್ನು ನಮ್ಮ ಮಿತ್ರರನ್ನಾಗಿ ಮಾಡಿಕೊಂಡು ಭಾರತೀಯ ಉತ್ಪಾದನಾ ವಲಯವು ಜಾಗತಿಕವಾಗಿ ಮುಂಚೂಣಿಯಲ್ಲಿರಬೇಕಾಗಿದೆ" ಎಂದು ಹೇಳಿದರು.