ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Emergency 1975: ತುರ್ತು ಪರಿಸ್ಥಿತಿ ಕಾಲದಲ್ಲಿ ನಡೆದ ಬೆಳವಣಿಗೆಗಳು ಏನೇನು?

1975ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶಾದ್ಯಂತ ಜೂನ್‌ 25ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಘಟನೆ ನಡೆದು ಇಂದಿಗೆ 50 ವರ್ಷಗಳಾಗಿವೆ. 1975ರಿಂದ 1977ರವರೆಗೆ ಅಂದರೆ ಸರಿಸುಮಾರು 21 ತಿಂಗಳ ಕಾಲ ಇದ್ದ ತುರ್ತು ಪರಿಸ್ಥಿತಿಗೆ ಕಾರಣವಾಗಿದ್ದಾದರೂ ಏನು? ಆ ಕಾಲದಲ್ಲಿ ಆದ ಮಹತ್ವದ ಬೆಳವಣಿಗೆಗಳು ಏನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ತುರ್ತು ಪರಿಸ್ಥಿತಿ ವೇಳೆ ಯಾವಾಗ ಏನಾಗಿತ್ತು?

ನವದೆಹಲಿ: 1975ರ ಜೂನ್ 25ರ ಮಧ್ಯ ರಾತ್ರಿ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು (Emergency 1975) ಘೋಷಿಸಿದರು. ಇಂದಿರಾ ಗಾಂಧಿ (PM Indira Gandhi) ಅವರ ಆದೇಶದ ಮೇರೆಗೆ ರಾಷ್ಟ್ರಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ (President Fakhruddin Ali Ahmed) ಈ ಘೋಷಣೆಯನ್ನು ಹೊರಡಿಸಿದರು. ಇದನ್ನು ಬಳಿಕ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಅವಧಿ ಎಂದು ಪರಿಗಣಿಸಲಾದ ಈ 21 ತಿಂಗಳುಗಳ ಕಾಲ ನಡೆದ ತುರ್ತು ಪರಿಸ್ಥಿತಿಯ ಕೆಲವು ದಿನಗಳ ಮೊದಲು ಯಾವಾಗ, ಏನು ಆಗಿತ್ತು ಗೊತ್ತೇ?

  1. 1966ರ ಜನವರಿಯಲ್ಲಿ ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿ ಆಯ್ಕೆಯಾದರು.
  2. 1969ರ ನವೆಂಬರ್‌ನಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್‌ನಿಂದ ಹೊರ ಹಾಕಲಾಯಿತು. ಇದರಿಂದ ಕಾಂಗ್ರೆಸ್ ವಿಭಜನೆಯಾಯಿತು.
  3. 1971ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಇಂದಿರಾ ಗಾಂಧಿ ವಿರುದ್ಧ ಸೋತ ವಿರೋಧ ಪಕ್ಷದ ನಾಯಕ ರಾಜ್ ನಾರಾಯಣ್ ಚುನಾವಣೆಯಲ್ಲಿ ಅಕ್ರಮ ನಡೆಸಿರುವುದಾಗಿ ದೂರು ದಾಖಲಿಸಿದರು.
  4. 1973- 75ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ವಿರುದ್ಧ ರಾಜಕೀಯ ಅಶಾಂತಿ ಮತ್ತು ಪ್ರತಿಭಟನೆಗಳು ಹೆಚ್ಚಾಗತೊಡಗಿತು.
  5. 1971ರಲ್ಲಿ ನಡೆದ ಭಾರತ ಪಾಕಿಸ್ತಾನದ ಯುದ್ಧದ ಬಳಿಕ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡವು.
  6. 1975ರ ಜೂನ್ 12ರಂದು ಚುನಾವಣಾ ಪ್ರಚಾರದಲ್ಲಾದ ವ್ಯತ್ಯಾಸಕ್ಕೆ ಇಂದಿರಾ ಗಾಂಧಿ ಅವರನ್ನು ದೋಷಿ ಎಂದು ತೀರ್ಮಾನಿಸಿದ ಅಲಹಾಬಾದ್ ಹೈಕೋರ್ಟ್ ಅವರ ಗೆಲುವನ್ನು ಅನೂರ್ಜಿತಗೊಳಿಸಿತು.
  7. 1975ರ ಜೂನ್ 24ರಂದು ಸುಪ್ರೀಂ ಕೋರ್ಟ್ ಇಂದಿರಾ ಗಾಂಧಿ ಅವರಿಂದ ಸಂಸದೀಯ ಸವಲತ್ತುಗಳನ್ನು ಕಸಿದುಕೊಂಡು ಅವರಿಗೆ ಮತದಾನದಲ್ಲಿ ಪಾಲ್ಗೊಳ್ಳಲು ನಿಷೇಧ ಹೇರಿತು. ಆದರೆ ಅವರು ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ನೀಡಿತು.
  8. 1975ರ ಜೂನ್ 25ರಂದು ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅವರ ಸಲಹೆ ಮೇರೆಗೆ ರಾಷ್ಟ್ರಧ್ಯಕ್ಷರಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ತುರ್ತು ಪರಿಸ್ಥಿತಿ ಘೋಷಿಸಿದರು.
  9. 1975ರ ಜೂನ್ 26ರಂದು ಇಂದಿರಾ ಗಾಂಧಿ ಆಲ್ ಇಂಡಿಯಾ ರೇಡಿಯೋದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ತುರ್ತು ಪರಿಸ್ಥಿತಿ ಹೇರಲು ಕಾರಣಗಳನ್ನು ವಿವರಿಸಿದರು.
  10. 1976ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ಸಂಜಯ್ ಗಾಂಧಿ ಸಾಮೂಹಿಕ ಬಲವಂತದ ಸಂತಾನಹರಣ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದರಿಂದ ಸಾವಿರಾರು ಪುರುಷರು ತಮ್ಮ ಇಚ್ಛೆಗೆ ವಿರುದ್ಧವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
  11. 1977ರ ಜನವರಿ 18ರಂದು ಇಂದಿರಾ ಗಾಂಧಿ ಹೊಸ ಚುನಾವಣೆಗಳಿಗೆ ಕರೆ ನೀಡಿದರು ಮತ್ತು ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದರು.
  12. 1977ರ ಜನವರಿ 20ರಂದು 5 ವರ್ಷ ಮತ್ತು 10 ತಿಂಗಳ ಅನಂತರ ಲೋಕಸಭೆಯನ್ನು ವಿಸರ್ಜನೆ ಮಾಡಲಾಯಿತು.
  13. 1977ರ ಫೆಬ್ರವರಿ 11ರಂದು ರಾಷ್ಟ್ರಾಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅಧಿಕಾರದಲ್ಲಿದ್ದಾಗಲೇ ನಿಧನರಾದರು.
  14. 1977ರ ಮಾರ್ಚ್ 16ರಂದು ಇಂದಿರಾ ಗಾಂಧಿ ಮತ್ತು ಅವರ ಮಗ ಸಂಜಯ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು.
  15. 1977ರ ಮಾರ್ಚ್ 21ರಂದು ತುರ್ತು ಪರಿಸ್ಥಿತಿ ಅಧಿಕೃತವಾಗಿ ಕೊನೆಗೊಂಡಿತು.
  16. 1977ರ ಮಾರ್ಚ್ 24ರಂದು ಜನತಾ ಪಕ್ಷ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: Emergency 1975: ಎಮರ್ಜೆನ್ಸಿಗೆ 50 ವರ್ಷ, ಭಾರತೀಯರು ಎಂದಿಗೂ ಕ್ಷಮಿಸಲ್ಲ ಎಂದ ಮೋದಿ