ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

virat kohli: ಬೆಂಗಳೂರಿನ ಬಗ್ಗೆ ಭಾವುಕ ಮಾತುಗಳನ್ನಾಡಿದ ಕೊಹ್ಲಿ

ನಾನು ಆರ್‌ಸಿಬಿ ತಂಡಕ್ಕೆ ನಿಷ್ಠೆಯಿಂದ ಆಡಿದ್ದೇನೆ. ಎಲ್ಲರೂ ಇತರ ತಂಡಕ್ಕೆ ಹರಾಜಾಗುತ್ತಿದ್ದರು. ತಂಡ ಟ್ರೋಫಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೊಂದು ತಂಡಕ್ಕೆ ಹೋಗುವ ಆಲೋಚನೆ ಬಂದಿದ್ದು ಸುಳ್ಳಲ್ಲ. ಆದರೆ ದೃಢ ನಿರ್ಧಾರದಿಂದ ಆರ್‌ಸಿಬಿಯಲ್ಲೇ ಉಳಿದೆ. ನನ್ನ ಮನಸ್ಸು, ಹೃದಯ, ಆತ್ಮ ಬೆಂಗಳೂರಿನೊಂದಿಗೆ ಬೆಸದು ಕೊಂಡಿದೆ. ತಂಡ ಕೊನೆಗೂ ಕಪ್‌ ಗೆದ್ದ ಖುಷಿಯಲ್ಲಿ ನಾನು ಮಗುವಿನಂತೆ ನಿದ್ರಿಸುತ್ತೇನೆ ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿದರು.

ಬೆಂಗಳೂರಿನ ಬಗ್ಗೆ ಭಾವುಕ ಮಾತುಗಳನ್ನಾಡಿದ ಕೊಹ್ಲಿ

Profile Abhilash BC Jun 4, 2025 7:10 AM

ಅಹಮದಾಬಾದ್‌: ಕಳೆದ 18 ವರ್ಷಗಳಿಂದ ಟ್ರೋಫಿಗಾಗಿ ಹಾತೊರೆದಿದ್ದ ವಿರಾಟ್‌ ಕೊಹ್ಲಿಯ ಕನಸು ಕೊನೆಗೂ ನನಸಾಗಿದೆ. ಮಂಗಳವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್‌ ವಿರುದ್ಧ 6 ರನ್‌ ಅಂತರದಿಂದ ಗೆದ್ದು ಚೊಚ್ಚಲ ಟ್ರೋಫಿ ಗೆದ್ದಿದೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ಕೊಹ್ಲಿ ಭಾವುಕರಾದದ್ದು ಕಂಡುಬಂತು. ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ಯಾವತ್ತೂ ನನ್ನ ಹೃದಯ ಹಾಗೂ ಆತ್ಮ ಬೆಂಗಳೂರಿನೊಂದಿಗೆ ಬೆಸದುಕೊಂಡಿದೆ. ಎಲ್ಲೀವರಗೆ ನಾನು ಐಪಿಎಲ್ ಆಡುತ್ತೇನೆ, ಅಲ್ಲೀವರೆಗೆ ಆರ್‌ಸಿಬಿಗೆ ಆಡುತ್ತೇನೆ ಎಂದು ಹೇಳಿದ್ದಾರೆ.

'ಇದು ಆರ್‌ಸಿಬಿ ತಂಡದ ಗೆಲುವು ಮಾತ್ರವಲ್ಲ, ಅಭಿಮಾನಿಗಳ ಗೆಲುವು ಕೂಡ. ನಾನು ಈ ತಂಡಕ್ಕಾಗಿ ನನ್ನ ಯವ್ವೌನ, ನಮ್ಮ ಪ್ರೈಮ್ ಹಾಗೂ ನನ್ನ ಅನುಭವವನ್ನು ಧಾರೆ ಎರೆದಿದ್ದೇನೆ. ಇದೊಂದು ರೀತಿ ಅವಿಸ್ಮರಣೀಯ ಅನುಭವ. ತಂಡದ ಈ ಗೆಲುವಿನಲ್ಲಿ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಪಾಲು ಕೂಡ ಇದೆ. ನಾವು ಮೂರು ಜನ ನಮ್ಮ ಪ್ರೈಮ್ ಕ್ರಿಕೆಟ್ ಅನ್ನು ತಂಡಕ್ಕೆ ನೀಡಿದ್ದೇವೆ, ಆದರೆ ಸ್ವಲ್ಪದರಲ್ಲಿ ಎಡವಿದ್ದೆವು. ಈ ಟ್ರೋಫಿ ಎಲ್ಲರಿಗೂ ಸೇರಿದ್ದು. ನಾವು ತಂಡಕ್ಕಾಗಿ ನಮ್ಮ ಹೃದಯ ಹಾಗೂ ಆತ್ಮ ನೀಡಿದ್ದೇವೆ. ಈ ಸಲ ಕಪ್ ನಮ್ದು ಎಂದು ವಿರಾಟ್ ಕೊಹ್ಲಿ ಭಾವುಕ ಮಾತುಗಳನ್ನಾಡಿದರು.

ಮಗುವಿನಂತೆ ನಿದ್ರಿಸುತ್ತೇನೆ

"ನಾನು ಆರ್‌ಸಿಬಿ ತಂಡಕ್ಕೆ ನಿಷ್ಠೆಯಿಂದ ಆಡಿದ್ದೇನೆ. ಎಲ್ಲರೂ ಇತರ ತಂಡಕ್ಕೆ ಹರಾಜಾಗುತ್ತಿದ್ದರು. ತಂಡ ಟ್ರೋಫಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೊಂದು ತಂಡಕ್ಕೆ ಹೋಗುವ ಆಲೋಚನೆ ಬಂದಿದ್ದು ಸುಳ್ಳಲ್ಲ. ಆದರೆ ದೃಢ ನಿರ್ಧಾರದಿಂದ ಆರ್‌ಸಿಬಿಯಲ್ಲೇ ಉಳಿದೆ. ನನ್ನ ಮನಸ್ಸು, ಹೃದಯ, ಆತ್ಮ ಬೆಂಗಳೂರಿನೊಂದಿಗೆ ಬೆಸದು ಕೊಂಡಿದೆ. ತಂಡ ಕೊನೆಗೂ ಕಪ್‌ ಗೆದ್ದ ಖುಷಿಯಲ್ಲಿ ನಾನು ಮಗುವಿನಂತೆ ನಿದ್ರಿಸುತ್ತೇನೆ ಎಂದು ಕೊಹ್ಲಿ ಹೇಳಿದರು.



ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 9 ವಿಕೆಟ್‌ಕೆ 190 ರನ್‌ ಗಳಿಸಿತ್ತು. ಜವಾಬಿತ್ತ ಪಂಜಾಬ್‌ ಕಿಂಗ್ಸ್‌ ಉತ್ತಮ ಆರಂಭದ ಹೊರತಾಗಿಯೂ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.