ಶಾಸಕ ಟಿ.ಡಿ. ರಾಜೇಗೌಡಗೆ ಶಾಕ್ ಕೊಟ್ಟ ಮರು ಮತ ಎಣಿಕೆ
2023ರಲ್ಲಿ ನಡೆದಿದ್ದ ಚಿಕ್ಕಮಗಳೂರು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಏಣಿಕೆ ವೇಳೆ ಕಾಂಗ್ರೆಸ್ ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಡಬ್ಬಲ್ ಟಿಕ್ ನಿಂದಾಗಿ 255 ಮತಗಳು ತಿರಸ್ಕೃತಗೊಂಡಿದ್ದು, ಶಾಸಕ ಟಿ.ಡಿ. ರಾಜೇಗೌಡ ಅವರು ಶಾಕ್ ಅನುಭವಿಸಿದ್ದಾರೆ. ಮೊದಲ ಬಾರಿಯ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದ ರಾಜೇಗೌಡ ಅವರು ಮರು ಮತ ಎಣಿಕೆ ವೇಳೆ ಭಾರಿ ಹಿನ್ನಡೆ ಅನುಭವಿಸಿದರು.