ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

G Parameshwara: ಗೃಹ ಸಚಿವರಿಗೆ ಅವಹೇಳನ, ಚಿಕ್ಕಮಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಗೃಹ ಸಚಿವರಿಗೆ ಅವಹೇಳನ, ಚಿಕ್ಕಮಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಬಂಧನದ ವೇಳೆ ಚಿಕ್ಕಮಗಳೂರು (Chikkamagaluru News) ನಗರದಲ್ಲಿರುವ ಮಾರ್ಕೆಟ್ ರಸ್ತೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಕಂಡಿತು. ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸ್ ಜೀಪ್‌ಗೆ ಕರೆದೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಬಂದಿದ್ದು, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಸಂತೋಷ್ ಬಂಧನ ಖಂಡಿಸಿ ನಗರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಠಾಣೆ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Karnataka Weather: ಇಂದಿನ ಹವಾಮಾನ; ಮೈಸೂರು ಸೇರಿ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಇಂದಿನ ಹವಾಮಾನ; ಮೈಸೂರು ಸೇರಿ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಇರಲಿದೆ.

CM Siddaramaiah: ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ ಬಂದಿತ್ತು: ಸಿಎಂ ಸಿದ್ದರಾಮಯ್ಯ

ಕುಖ್ಯಾತ ರೌಡಿಯಿಂದ ನನಗೆ ಜೀವ ಬೆದರಿಕೆ ಬಂದಿತ್ತು: ಸಿಎಂ ಸಿದ್ದರಾಮಯ್ಯ

ಕುರುಬರ ಸಂಘ ಮತ್ತು ಕುರುಬ ಸಮಾಜದ ಪೀಠವನ್ನು ಉಳಿಸಿದ್ದು ನಾನು. ರಾಜ್ಯ ಸುತ್ತಿ ಸಮಾಜದ ಸಂಘಟಿಸಿದ್ದು ನಾನು, ಮುಕುಡಪ್ಪ, ಮಾಸ್ತಿ ಮತ್ತು ಇತರರು. ಆಮೇಲೆ ವಿಶ್ವನಾಥ್ ಅವರನ್ನು ಪೀಠದ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ವಿಶ್ವನಾಥ್ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಆದ್ದರಿಂದ ಇಡೀ ಸಮಾಜ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

Anekal News: ಸ್ಕ್ಯಾನಿಂಗ್‌ಗೆ ಬಂದ ಮಹಿಳೆಯ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿದ ಕಾಮುಕ ರೇಡಿಯಾಲಜಿಸ್ಟ್; ಕೇಸ್‌ ದಾಖಲು

ಸ್ಕ್ಯಾನಿಂಗ್‌ಗೆ ಬಂದ ಮಹಿಳೆಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ

Physical abuse on women in Anekal: ಮಹಿಳೆಯೊಬ್ಬರು ಹೊಟ್ಟೆ ನೋವು ಎಂದು ಪತಿಯೊಂದಿಗೆ ಸ್ಕ್ಯಾನಿಂಗ್‌ ಸೆಂಟರ್‌ಗೆ ತೆರಳಿದ್ದರು. ಆರೋಪಿ ಸ್ಕ್ಯಾನಿಂಗ್‌ ಮಾಡುವಾಗ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿ, ಈ ವಿಚಾರ ಹೊರಗೆ ಬಾಯ್ಬಿಡದಂತೆ ಧಮ್ಕಿ ಹಾಕಿದ್ದಾನೆ.

ಭಾರತಿ ದರ್ಶ್ ಫೌಂಡೇಶನ್ ನಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ಭಾರತಿ ದರ್ಶ್ ಫೌಂಡೇಶನ್ ನಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಚಿಕಿತ್ಸೆ ಮಾಡಿಸುವ ವೆಚ್ಚ ದುಬಾರಿಯಾಗಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಭಾರತಿದರ್ಶ್ ಫೌಂಡೇಶನ್ (ರಿ) ಆಯೋಜಿಸುವ ವೈದ್ಯಕೀಯ ಚಿಕಿತ್ಸೆ ಶಿಬಿರದಲ್ಲಿ ಎಲ್ಲಾ ರೀತಿಯ ಉಚಿತ ಶಸ್ತ್ರ ಚಿಕಿತ್ಸೆಯ ಲಾಭವನ್ನು ಪಡೆಯಬೇಕೆಂದು ಹೇಳಿದರು

‘ಹರ್‍ರೀ-ಪುರ ‘(Hurrypur) ನೂತನ ಅಭಿಯಾನ ಆರಂಭಿಸಿದ ನವಿ ಯುಪಿಐ!

‘ಹರ್‍ರೀ-ಪುರ ‘(Hurrypur) ನೂತನ ಅಭಿಯಾನ ಆರಂಭಿಸಿದ ನವಿ ಯುಪಿಐ!

ಯಾವಾಗ ಉತ್ಪನ್ನ ಮತ್ತು ಕಲ್ಪನೆ ಪರಸ್ಪರ ಪೂರಕವಾಗಿದ್ದಾಗ ಅದು ಪರಿಪೂರ್ಣ ಸಂಯೋಜನೆ ಆಗುತ್ತದೆ. ಆರಂಭದಿಂದಲೇ ನವಿ ಯುಪಿಐ ನ ವಿಶೇಷತೆ ಅದರ ವೇಗ ಎಂಬುದು ನಮಗೆ ತಿಳಿದಿತ್ತು. ಅದೇ ಆಧಾರವಾಗಿ ನಾವು ಹರ್‍ರೀ-ಪುರ (Hurrypur) ಮತ್ತು ಅದರ ಸಂಪೂರ್ಣ ಲೋಕ ವನ್ನು ವಿವರವಾಗಿ ನಿರ್ಮಿಸಲು ಸಾಧ್ಯವಾಯಿತು.

"ಡಿಜಿಟಲ್ ಇನ್ಸುರರ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಗೆದ್ದ ಇಂಡಿಯಾ ಇನ್ಶೂರೆನ್ಸ್ ಕಂಪನಿ ಡಿಜಿಟ್ ಇನ್ಶೂರೆನ್ಸ್

ಪ್ರಶಸ್ತಿ ಗೆದ್ದ ಇಂಡಿಯಾ ಇನ್ಶೂರೆನ್ಸ್ ಕಂಪನಿ ಡಿಜಿಟ್ ಇನ್ಶೂರೆನ್ಸ್

ಇಂಡಿಯಾ ಇನ್ಶೂರೆನ್ಸ್ ಕಂಪನಿ ಡಿಜಿಟ್ ಇನ್ಶೂರೆನ್ಸ್ ಮೂರನೇ ಬಾರಿ ಏಷ್ಯಾದ ಪ್ರತಿಷ್ಠಿತ AIIA ಅವಾರ್ಡ್ಸ್ 2025ರಲ್ಲಿ "ಡಿಜಿಟಲ್ ಇನ್ಸುರರ್ ಆಫ್ ದಿ ಇಯರ್" ಪ್ರಶಸ್ತಿಯನ್ನು ಗೆದ್ದಿದೆ; MD ಮತ್ತು CEO ಜಸ್ಲೀನ್ ಕೌಲಿ ಅವರು "ವಿಮೆನ್ ಲೀಡರ್ ಆಫ್ ದಿ ಇಯರ್" ಪ್ರಶಸ್ತಿ ಗೆದ್ದ ಮೊದಲ ಭಾರತೀಯರು.

ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ರೂ. 25 ಕೋಟಿ ಮೋಟಾರ್ ಅಪಘಾತ ಇನ್ಶೂರೆನ್ಸ್ ವಂಚನೆ ಬಯಲು; ಎಫ್ಐಆರ್ ದಾಖಲು

ಬಜಾಜ್ ಜನರಲ್ ಇನ್ಶೂರೆನ್ಸ್: ರೂ. 25 ಕೋಟಿ ಇನ್ಶೂರೆನ್ಸ್ ವಂಚನೆ ಬಯಲು

ಕಂಪನಿಯು ಎಫ್‌ಐಆರ್ ಮತ್ತು ಪೂರಕ ದಾಖಲೆಗಳನ್ನು ಅನುಮಾನಾಸ್ಪದ ಮತ್ತು ಪೂರ್ವ ಯೋಜಿತ ವಂಚನೆಯ ಪ್ರಯತ್ನ ಎಂದು ಪತ್ತೆ ಮಾಡಿತು. ನ್ಯಾಯಾಂಗ ಹಸ್ತ ಕ್ಷೇಪದ ಅಗತ್ಯವನ್ನು ಗುರುತಿಸಿ, ಬಜಾಜ್ ಜನರಲ್ ಇನ್ಶೂರೆನ್ಸ್ ಗೌರವಾನ್ವಿತ ಗುಜರಾತ್ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು.

ಶ್ರೀ ಸತ್ಯ ಸಾಯಿ ಬಾಬಾ ಅವರ 100ನೇ ಜನ್ಮೋತ್ಸವದ ಸ್ಮರಣಾರ್ಥ 160 ಕಿ.ಮೀ ವಿಶಿಷ್ಟ ಸೈಕ್ಲಿಂಗ್ ಯಾತ್ರೆ

ಶ್ರೀ ಸತ್ಯ ಸಾಯಿ ಬಾಬಾರ 100ನೇ ಜನ್ಮೋತ್ಸವದ ಸ್ಮರಣಾರ್ಥ ಸೈಕ್ಲಿಂಗ್ ಯಾತ್ರೆ

ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ (ಎಸ್ಎಸ್ಐ ಎಚ್ಎಲ್) ಸುಸ್ಥಿರತೆ (ಎಸ್), ಜಾಗೃತಿ (ಎ) ಮತ್ತು ಒಳಗೊಳ್ಳುವಿಕೆ (ಐ) ಅನ್ನು ಉತ್ತೇಜಿ ಸುವ ಉಪಕ್ರಮಗಳ ಭಾಗವಾಗಿ ಮತ್ತು ಅದರ ಪೂಜ್ಯ ಸಂಸ್ಥಾಪಕ ಕುಲಪತಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ 100 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ವಿಶಿಷ್ಟ ಸೈಕ್ಲಿಂಗ್ ಯಾತ್ರೆಯನ್ನು ಪ್ರಾರಂಭಿಸಿದೆ.

ಕೊರಟಗೆರೆ ಬಳಿ ಎರಡು ಚಿರತೆಗಳ ಕಾದಾಟ; ಗಂಭೀರವಾಗಿ ಗಾಯಗೊಂಡು 2 ವರ್ಷದ ಗಂಡು ಚಿರತೆ ಸಾವು

ಎರಡು ಚಿರತೆಗಳ ಕಾದಾಟ; ಗಂಭೀರವಾಗಿ ಗಾಯಗೊಂಡು ಗಂಡು ಚಿರತೆ ಸಾವು

Koratagere News: ಬಾಯಿಯ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಚಿರತೆಯನ್ನು ಕಂಡು ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಚಿರತೆಯ ಚಲನವಲನವನ್ನು ಪರೀಕ್ಷಿಸಿದಾಗ ಚಿರತೆ ಮೃತಪಟ್ಟಿರುವುದು ದೃಢವಾಗಿದೆ.

ಲಾವಾಶಾರ್ಕ್‌ 2 4G ಮೊಬೈಲ್‌ ಬಿಡುಗಡೆ ಮಾಡಿದ ಲಾವಾ ಮೊಬೈಲ್‌ನ ವೈಶಿಷ್ಯತೆ ಏನು? ಇಲ್ಲಿದೆ ಮಾಹಿತಿ

4G ಮೊಬೈಲ್‌ ಬಿಡುಗಡೆ ಮಾಡಿದ ಲಾವಾ ಮೊಬೈಲ್‌ನ ವೈಶಿಷ್ಯತೆ ಏನು?

50MP AI ಕ್ಯಾಮೆರಾ, ಆಕ್ಟಾ-ಕೋರ್ UNISOC T7250 ಪ್ರೊಸೆಸರ್, 64GB ROM ಜೊತೆಗೆ 4GB+4GB* RAM, ಮತ್ತು 120Hz ರಿಫ್ರೆಶ್ ದರದೊಂದಿಗೆ ರೋಮಾಂಚಕ 17.13 cm (6.75”) HD+ ನಾಚ್ ಡಿಸ್ಪ್ಲೇ ಹೊಂದಿರುವ ಈ ಸಾಧನವು ಮನರಂಜನೆ, ಅಧ್ಯಯನ ಮತ್ತು ಗೇಮಿಂಗ್ ಅಗತ್ಯಗಳನ್ನು ಸರಾಗವಾಗಿ ಸಮತೋಲನಗೊಳಿಸುತ್ತದೆ.

Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ‌

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ‌

BESCOM: 66/11 ಕೆ.ವಿ. ಬಾಣಸವಾಡಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ನ.13ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇಂಡಿಕ್ಯೂಬ್ ಬೆಳವಣಿಗೆ ವೇಗ: 2026 ರ ಎರಡನೇ ತ್ರೈಮಾಸಿಕದಲ್ಲಿ ₹28 ಕೋಟಿ ಲಾಭ, ವರ್ಷಕ್ಕೆ ₹354 ಕೋಟಿ ಆದಾಯ 38% ಹೆಚ್ಚಳ

ಇಂಡಿಕ್ಯೂಬ್ ಬೆಳವಣಿಗೆ ವೇಗ: 2026 ರ ಎರಡನೇ ತ್ರೈಮಾಸಿಕದಲ್ಲಿ ₹28 ಕೋಟಿ ಲಾಭ

2026 ರ ಎರಡನೇ ತ್ರೈಮಾಸಿಕದಲ್ಲಿ 21% ನಷ್ಟು ಆರೋಗ್ಯಕರ EBITDA ಮಾರ್ಜಿನ್‌ ನೊಂದಿಗೆ, ನಮ್ಮ ಮಾರ್ಜಿನ್‌ಗಳಲ್ಲಿ ನಿರಂತರ ಸುಧಾರಣೆಯನ್ನು ನಾವು ನೋಡುತ್ತೇವೆ ಮತ್ತು 2026 ರ ಎರಡನೇ ತ್ರೈಮಾಸಿಕದಲ್ಲಿ ಹಣಕಾಸು ವರ್ಷಕ್ಕೆ ಬಲವಾದ ಮುಕ್ತಾಯ ವನ್ನು ಎದುರು ನೋಡುತ್ತಿದ್ದೇವೆ"

ITC ಸನ್‌ಫೀಸ್ಟ್ ಫ್ಯಾಂಟಾಸ್ಟಿಕ್ ವತಿಯಿಂದ  “ಚೊಕೊ ಮೆಲ್ಟ್ಜ್” ಬಿಡುಗಡೆ

ITC ಸನ್‌ಫೀಸ್ಟ್ ಫ್ಯಾಂಟಾಸ್ಟಿಕ್ ವತಿಯಿಂದ “ಚೊಕೊ ಮೆಲ್ಟ್ಜ್” ಬಿಡುಗಡೆ

ಇದು ಚಾಕೊ ಲೇಟ್ ಅನ್ನು ಬಾರ್ ಅಥವಾ ಬೈಟ್ ಆಗಿ ಮಾತ್ರವಲ್ಲದೆ ಹಲವು ರೀತಿಯಲ್ಲಿ ಅನುಭವ ನೀಡಲು ಮುಂದಾಗಿದೆ. ಪ್ಯಾಕ್‌ನಿಂದ ನೇರವಾಗಿ ಹೀರಿದರೂ, ಬ್ರೌನಿಗಳ ಮೇಲೆ ಚಿಮುಕಿಸಿ ದರೂ, ಪರಾಠ ಮತ್ತು ಟೋಸ್ಟ್ ಮೇಲೆ ಹರಡಿದರೂ, ಅಥವಾ ಐಸ್ ಕ್ರೀಮ್‌ ಮತ್ತು ಹಣ್ಣುಗಳ ಮೇಲೆ ಸುರಿದರೂ, ಚೋಕೊ ಮೆಲ್ಟ್ಜ್ ಆ ಕ್ಷಣಗಳನ್ನು ಆನಂದಕರ ಹಾಗೂ ರುಚಿಕರ ಕ್ಷಣಗಳಾಗಿ ಪರಿವರ್ತಿಸುತ್ತದೆ.

ಆರ್ಥಿಕ ಸಂಕರ್ಷದಲ್ಲಿರುವ ಆಟೋ ಚಾಲಕರ ಮಕ್ಕಳ ಶಿಕ್ಷಣದ ಜವಾಬ್ದಾರಿ ಆದಿ ಚುಂಚನಗಿರಿ ಮಠ ಹೊರಲಿದೆ: ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ

ಆಟೋ ಚಾಲಕರ ಮಕ್ಕಳ ಶಿಕ್ಷಣದ ಜವಾಬ್ದಾರಿ ಆದಿ ಚುಂಚನಗಿರಿ ಮಠ ಹೊರಲಿದೆ

ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ, ಜಾಗತಿಕ ಮಟ್ಟದಲ್ಲಿ ಟೆಕ್ನಾಲಜಿ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದು, ಆಟೋ ಚಾಲಕರು ಸಹ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಕನಿಷ್ಠಪಕ್ಷ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ತೆರೆಕಂಡ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ

ತೆರೆಕಂಡ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ

ಕ್ರೀಡಾಂಗಣದ ಸುತ್ತಲಿನ ಶಕ್ತಿಯು ಬದಲಾಯಿತು; ಜನರು ಸ್ವಾಭಾವಿಕವಾಗಿ ಮತ್ತು ಪರಿಚಿತ ವಾಗಿ ಹರ್ಷೋದ್ಗಾರ ಮಾಡಿದರು. ಬಾಲಕರ ವಿಭಾಗ ದಲ್ಲಿ, ಮಧ್ಯಪ್ರದೇಶ ಚಿನ್ನವನ್ನು, ಮಧ್ಯ ಪ್ರದೇಶವೇ ಬೆಳ್ಳಿಯನ್ನು ಮತ್ತು ಒಡಿಶಾ ಕಂಚನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗ ದಲ್ಲಿ, ಮಧ್ಯಪ್ರದೇಶ ಮತ್ತೆ ಚಿನ್ನ ವನ್ನು, ಒಡಿಶಾ ಬೆಳ್ಳಿಯನ್ನು ಮತ್ತು ರಾಜಸ್ಥಾನ ಕಂಚನ್ನು ಪಡೆಯಿತು.

Menstrual Leave Policy: ಮಹಿಳಾ ನೌಕರರಿಗೆ ಗುಡ್‌ ನ್ಯೂಸ್‌; ಮಾಸಿಕ ಒಂದು ಋತುಚಕ್ರ ರಜೆ ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ

ಮಹಿಳಾ ನೌಕರರಿಗೆ ಮಾಸಿಕ ಒಂದು ಋತುಚಕ್ರ ರಜೆ ನೀಡಿ ಸರ್ಕಾರ ಆದೇಶ

Karnataka government: ಮಹಿಳಾ ಉದ್ಯೋಗಿಗಳಿಗೆ ವರ್ಷದಲ್ಲಿ 12 ದಿನ ವೇತನ ಸಹಿತ ರಜೆ ನೀಡಲು ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅ.9ರಂದು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಸಂಬಂಧಿಸಿದ ಉದ್ಯೋಗದಾತರು ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ.

CT Ravi: ಭಾರತದಲ್ಲಿ ಮತಾಂಧತೆ, ಸಾಮೂಹಿಕ ನರಮೇಧಕ್ಕೆ ಸುದೀರ್ಘ ಇತಿಹಾಸ- ಸಿ.ಟಿ. ರವಿ

ಭಾರತದಲ್ಲಿ ಮತಾಂಧತೆ, ಸಾಮೂಹಿಕ ನರಮೇಧಕ್ಕೆ ಸುದೀರ್ಘ ಇತಿಹಾಸ: ಸಿ.ಟಿ. ರವಿ

ಬಡವರು, ಶಿಕ್ಷಣ ಇಲ್ಲದವರು ಬೇಗನೇ ಭಯೋತ್ಪಾದನಾ ಜಾಲದಲ್ಲಿ ಸಿಲುಕುತ್ತಾರೆ ಎನ್ನುತ್ತಿದ್ದರು. ಬಿನ್ ಲಾಡೆನ್ ಹುಟ್ಟಬೇಕಾದರೆ ಸಾವಿರಾರು ಕೋಟಿ ರೂ. ಒಡೆಯ. ಬೆಳ್ಳಿ ಚಮಚವಲ್ಲ, ವಜ್ರದ ಮಣಿ ಪೋಣಿಸಿದ ಚಿನ್ನದ ಚಮಚದಿಂದ ಚಿನ್ನದ ತಟ್ಟೆಯಲ್ಲಿ ತಿನ್ನುವಷ್ಟು ಸಂಪತ್ತಿತ್ತು. ಆದರೂ ಭಯೋತ್ಪಾದಕನಾದ ಎಂದು ತಿಳಿಸಿದ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಈಗ ಬಂಧನಕ್ಕೆ ಒಳಗಾದ ಶಂಕಿತ ಉಗ್ರರ‍್ಯಾರೂ ಅನಕ್ಷರಸ್ಥರಲ್ಲ, ಅದರಲ್ಲಿ ಬಹುತೇಕ ಜನರು ವೈದ್ಯರು. ಕೆಲವರು ಎಂಜಿನಿಯರ್‌ಗಳು. ಕೆಲವರು ಶ್ರೀಮಂತ ಕುಟುಂಬದ ಹಿನ್ನೆಲೆ ಉಳ್ಳವರು. ಇವರು ಯಾಕೆ ಭಯೋತ್ಪಾದಕರಾದರು? ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್‌ವೇರ್ ಯಾವುದು ಎಂದಿದ್ದಾರೆ.

CM Siddaramaiah: ನಾನು ಮೊದಲಿಂದಲೂ ಆರ್‌ಎಸ್‌ಎಸ್‌ ವಿರೋಧಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ನಾನು ಮೊದಲಿಂದಲೂ ಆರ್‌ಎಸ್‌ಎಸ್‌ ವಿರೋಧಿಸುತ್ತೇನೆ: ಸಿಎಂ ಸಿದ್ದರಾಮಯ್ಯ

CM Siddaramaiah Slams RSS: ಬೆಂಗಳೂರಿನ ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು. ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ ಆರ್‌ಎಸ್‌ಎಸ್‌ ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ ಎಂದು ತಿಳಿಸಿದ್ದಾರೆ.

Karnataka Weather: ನಾಳೆ ಕೊಡಗು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ನಾಳೆ ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಇರಬಹುದು.

Dharmasthala Case: ಧರ್ಮಸ್ಥಳ ಕೇಸ್‌- ಹೈಕೋರ್ಟ್‌ ಮೆಟ್ಟಿಲೇರಿದ್ದ ತಿಮರೋಡಿ ಗ್ಯಾಂಗ್‌ಗೆ ಬಿಗ್‌ ಶಾಕ್‌!

FIR ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಬುರುಡೆ ಗ್ಯಾಂಗ್‌ಗೆ ಹಿನ್ನಡೆ

ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆ ಪ್ರಕರಣದ ತನಿಖೆ ಪುನರಾರಂಭವಾಗಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ.

Dharmasthala case: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವು ಮಾಡಿದ ಹೈಕೋರ್ಟ್

ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

SIT investigation: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ.

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ; ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು 58 ಗ್ರಾಂ ಚಿನ್ನಾಭರಣ ದೋಚಿದ ಯುವತಿ!

ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು ಚಿನ್ನಾಭರಣ ದೋಚಿದ ಯುವತಿ!

Bengaluru Fraud Case: ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಮಿಳುನಾಡಿನ ಯುವಕ ವಂಚನೆಗೊಳಗಾಗಿದ್ದಾನೆ. ಯುವ ನೀಡಿದ ದೂರಿನ ಮೇರೆಗೆ ಆರೋಪಿ ಯುವತಿ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Pratap Simha: ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾಗಿರುವುದು ಅಪಾಯಕಾರಿ: ಪ್ರತಾಪ್‌ ಸಿಂಹ

ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾಗಿರುವುದು ಅಪಾಯಕಾರಿ: ಪ್ರತಾಪ್‌ ಸಿಂಹ

ಮುಸ್ಲಿಮರ ಸಮಸ್ಯೆ ಬಡತನ ಅಲ್ಲ, ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೇ ಇಂತಹ ಘಟನೆಗಳಿಗೆ ಕಾರಣ. ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ನಿಮ್ಮ ನೆರೆಹೊರೆಯಲ್ಲಿರಬಹುದಾದ ಇಂಥ ವಿದ್ಯಾವಂತ ಧರ್ಮಾಂಧರ ಬಗ್ಗೆಯೂ ಹುಷಾರಾಗಿರಿ ಎಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್‌ ಸಿಂಹ (BJP leader Pratap Simha) ಹೇಳಿದ್ದಾರೆ.

Loading...