ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Gubbi News: ಕೆ.ಎನ್.ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

ರಾಜಣ್ಣ ಪರ ಬ್ಯಾಟಿಂಗ್ ಮಾಡಿದ ಗುಬ್ಬಿ ವಾಲ್ಮೀಕಿ ಮುಖಂಡರು

ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ದಲಿತರಿಗೆ ಶಿಕ್ಷೆ ನೀಡಿದೆ. ದಲಿತರು ಸತ್ಯ ಹೇಳುವಂತಿಲ್ಲವೇ, ಸದಾಕಾಲ ದೀನ ದಲಿತರ ಪರ ನಿಲ್ಲುವ ರಾಜಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿದಿದೆ. ನೇರವಾದಿ ಮತಪಟ್ಟಿಯ ಚಿತ್ರಣ ಸಿದ್ಧವಾದಾಗ ನಮ್ಮದೇ ಸರ್ಕಾರ ಇತ್ತು. ಅಂದು ಎಲ್ಲವನ್ನೂ ಗಮನಿಸಬೇಕಿತ್ತು ಎಂದು ನೇರವಾಗಿ ಸತ್ಯ ಹೇಳಿದ್ದಕ್ಕೆ ವಜಾ ಶಿಕ್ಷೆ ನೀಡಿದ್ದು ಸರಿಯಲ್ಲ. ವಾಲ್ಮೀಕಿ ಸಮಾಜವನ್ನು ಕಡೆಗಣಿಸಿದ್ದಾರೆ. ನಮ್ಮ ಜನಾಂಗದ ಬೆಳವಣಿಗೆ ಸಹಿಸದ ಕೆಲವರ ಕುತಂತ್ರಕ್ಕೆ ನಾಗೇಂದ್ರ ಅವರು ಮೊದಲ ಬಲಿ

Self Harming: ಮೈಸೂರಿನಲ್ಲಿ ಘೋರ ಘಟನೆ; ಮಗನಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ, ಮಗಳು ಪಾರು

ಮೈಸೂರಿನಲ್ಲಿ ಘೋರ ಘಟನೆ; ಮಗನಿಗೆ ನೇಣು ಹಾಕಿ, ತಾಯಿಯೂ ಆತ್ಮಹತ್ಯೆ

Self Harming: ಮೈಸೂರಿನ ಮುರುಡನಹಳ್ಳಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಾರಣಕ್ಕೆ ಬೇಸರಗೊಂಡು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದ್ದು, ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರು ವರ್ಷದ ಮಗಳಿಗೂ ನೇಣು ಬಿಗಿಯಲು ತಾಯಿ ಯತ್ನಿಸಿದ್ದಾಳೆ. ಆದರೆ ಮಗಳು ಸಾವಿನಿಂದ ಪಾರಾಗಿದ್ದಾಳೆ.

ಐಸ್ ಮೇಕ್ ರೆಫ್ರಿಜರೇಷನ್ 2025ರ 1ನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಸದೃಢ ಪ್ರಗತಿ; ಕಾರ್ಯತಂತ್ರೀಯ ಹೂಡಿಕೆಗಳಿಂದ ದೀರ್ಘಾವಧಿ ವಿಸ್ತರಣೆ

ಐಸ್ ಮೇಕ್ ರೆಫ್ರಿಜರೇಷನ್: 1ನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಸದೃಢ ಪ್ರಗತಿ

ತ್ರೈಮಾಸಿಕದಲ್ಲಿ ಕಂಪನಿಯು ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯ ₹111.50 ಕೋಟಿ ವರದಿ ಮಾಡಿದ್ದು ಕ್ಯೂ1 ಎಫ್.ವೈ.25ರಲ್ಲಿ ₹85.23 ಕೋಟಿಗೆ ಹೋಲಿಸಿದರೆ ಶೇ.30ರಷ್ಟು ಪ್ರಗತಿ ವರ್ಷದಿಂದ ವರ್ಷಕ್ಕೆ ದಾಖಲಿಸಿದೆ. ಈ ಸಾಧನೆಯು ಕೋಲ್ಡ್ ರೂಮ್ಸ್, ಇಂಡಸ್ಟ್ರಿಯಲ್ ರೆಫ್ರಿಜರೇಷನ್ ಮತ್ತು ಸಾರಿಗೆ ರೆಫ್ರಿಜಿರೇಷನ್ ವಲಯಗಳಲ್ಲಿ ಸತತ ಬೇಡಿಕೆಯನ್ನು ಬಿಂಬಿಸುತ್ತಿದ್ದು ಅದು ಸದೃಢವಾದ ಆರ್ಡರ್ ಪೂರೈಕೆ ಮತ್ತು ಮಾರುಕಟ್ಟೆ ವ್ಯಾಪ್ತಿ ಹೆಚ್ಚಳದ ಬೆಂಬಲ ಪಡೆದಿದೆ

Duniya Vijay: ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದ ಅಭಿನಯ ಕಂಡು ಶಿಶಿರ್‌ ಅವರಿಗೆ ಇಂಡಸ್ಟ್ರಿ ಕಡೆಯಿಂದ ಒಳ್ಳೆ ಅವಕಾಶಗಳೇ ಅರಸಿ ಬಂದಿದೆ. ಡೇರ್‌ ಡೆವಿಲ್‌ ಚಿತ್ರದ ನಂತರ ದುನಿಯಾ ವಿಜಯ್‌ ಅಭಿನಯದ ‘ಲ್ಯಾಂಡ್‌ ಲಾರ್ಡ್‌ʼ ಸಿನಿಮಾದಲ್ಲಿ ಶಿಶಿರ್‌ ಉತ್ತಮ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Suspicious Blast: ಬೆಂಗಳೂರಿನಲ್ಲಿ ನಿಗೂಢ ಸ್ಫೋಟ;  ಘಟನಾ ಸ್ಥಳಕ್ಕೆ ಸಿಎಂ ಭೇಟಿ

ನಿಗೂಢ ಸ್ಫೋಟದ ಸ್ಥಳಕ್ಕೆ ಸಿಎಂ ಭೇಟಿ

ವಿಲ್ಸನ್‌ ಗಾರ್ಡ್‌ನ ಚಿನ್ನಯ್ಯನ ಪಾಳ್ಯದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಬೆಂಗಳೂರು ನಗರ ಆಯುಕ್ತ ಸೀಮಂತ್‌ ಕುಮಾರ್‌ ಅವರೂ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

Kolhar News: ಪಟ್ಟಣ ಪಂಚಾಯಿತಿ ಸದಸ್ಯನ ಮಾದರಿ ಕಾರ್ಯ

ಮಕ್ಕಳಿಗೆ ಸಮವಸ್ತ್ರ ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿಯಿಂದ ಕೊಲ್ಹಾರ ಪಟ್ಟಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಪಟ್ಟಣದ ನನ್ನ ವಾರ್ಡ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಕೂಡ ಸಚಿವ ಶಿವಾನಂದ ಪಾಟೀಲರ ಹಿತಾಸಕ್ತಿ ಯಿಂದ ಸ್ವಂತ ಕಟ್ಟಡ ಹೊಂದಿದ್ದು ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿಯವಾಗಿ ನಿಂತಿದೆ ಎಂದರು.

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ವೈದ್ಯರು

48 ವರ್ಷದ ಎರಡು ಮಕ್ಕಳ ತಾಯಿಯಾದ ಮಹಿಳೆ 8 ತಿಂಗಳಿಂದ ಹೊಟ್ಟೆಯಲ್ಲಿ ಕಾಣಿಸಿಕೊಂಡ ಉಬ್ಬರವನ್ನು ಗ್ಯಾಸ್ಟಿಕ್ ತೊಂದರೆ ಎಂದುಕೊಂಡು ಆಯುರ್ವೇದ ಔಷಧ ಸೇವಿಸುತ್ತಿದ್ದರು. ಕಳೆದ 4-5 ತಿಂಗಳಿಂದ ಹೊಟ್ಟೆ ಉಬ್ಬರ ಅಧಿಕವಾದರೂ ರೋಗಿಯು ಮಾತ್ರೆಯನ್ನೇ ಮುಂದುವರಿಸಿ ದ್ದರು.

Suspected Blast:  ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ; ಬಾಲಕ ಸಾವು, 12 ಜನರ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋಟ; ಬಾಲಕ ಸಾವು

ವಿಲ್ಸನ್‌ ಗಾರ್ಡ್‌ನ (Bengaluru Blast) ಚಿನ್ನಯ್ಯನ ಪಾಳ್ಯದ ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತುವೊಂದು ಭಾರೀ ಸ್ಫೋಟಗೊಂಡಿದ್ದು, ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಮೃತ ಬಾಲಕನ್ನು ಮುಬಾರಕ್ (8) ಎಂದು ಗುರುತಿಸಲಾಗಿದೆ.

Gold Price Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold Price Today on 15th Aug 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು 9,280 ರೂ. ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11 ರೂ. ಇಳಿಕೆಯಾಗಿ, 10,124 ರೂ. ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,240 ರೂ. ಬಾಳಿದರೆ, 10 ಗ್ರಾಂಗೆ ನೀವು 92,800 ರೂ. ಹಾಗೂ 100 ಗ್ರಾಂಗೆ 9,28,000ರೂ. ನೀಡಬೇಕಾಗುತ್ತದೆ.

DK Shivakumar: ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ; ಪಂಚ ಪ್ರತಿಜ್ಞೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ

ಪಂಚ ಪ್ರತಿಜ್ಞೆಗೆ ಕರೆ ಕೊಟ್ಟ ಡಿಸಿಎಂ ಶಿವಕುಮಾರ್

ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ, ಚುನಾವಣೆ ವ್ಯವಸ್ಥೆ ರಕ್ಷಿಸಿ, ತೆರಿಗೆ ಅಸಮಾನ ಹಂಚಿಕೆ ವಿರುದ್ಧ ಹೋರಾಡಿ, ಸರ್ವಾಧಿಕಾರ ತೊಲಗಿಸುವ ಪ್ರತಿಜ್ಞೆ ಮಾಡಿ" ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಧ್ವಜಾರೋಹಣ ನಡೆಸಿ ಮಾತನಾಡಿದ್ದಾರೆ.

DK Shivakumar: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ: ಡಿಸಿಎಂ

ಧರ್ಮಸ್ಥಳದ ಪ್ರಕರಣದಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದೇನು?

ರಾಜ್ಯದಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಸಾಕಷ್ಟು ಸಂಚಲನ ಮೂಡಿಸಿದೆ. ಸರ್ಕಾರ ಈ ಕುರಿತು ಎಸ್‌ಐಟಿ ರಚನೆ ಮಾಡಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Dr Sharanabasappa Appa: ಶಿಕ್ಷಣ ಕ್ರಾಂತಿಯ ಹರಿಕಾರನ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ; ಅಂತ್ಯಕ್ರಿಯೆ ಯಾವಾಗ?

ಶಿಕ್ಷಣ ಕ್ರಾಂತಿಯ ಹರಿಕಾರನ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

ಕಲಬುರಗಿಯ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಲಿಂಗೈಕ್ಯರಾಗಿದ್ದಾರೆ. ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೇಯ 8ನೇ ಪಿಠಾಧಿಪತಿ ಆಗಿದ್ದರು. ಅಂತಿಮ ವಿಧಿವಿಧಾನದ ಬಳಿಕ 9ನೇ ಪೀಠಾಧಿಪತಿಗೆ ಅಧಿಕಾರ ಹಸ್ತಾಂತರವಾಗಲಿದೆ.

Krishna Janmastami 2025: ಸೀಸನ್ ಟ್ರೆಂಡ್‌ಗೆ ಸೇರಿದ ಕೃಷ್ಣ ಜನ್ಮಾಷ್ಟಮಿ ಥೀಮ್ ಫೋಟೊಶೂಟ್‌

ಸೀಸನ್ ಟ್ರೆಂಡ್‌ಗೆ ಸೇರಿದ ಕೃಷ್ಣ ಜನ್ಮಾಷ್ಟಮಿ ಥೀಮ್ ಫೋಟೊಶೂಟ್‌

Krishna Janmastami: ಕೃಷ್ಣ ಜನ್ಮಾಷ್ಟಮಿ 2025 ಪ್ರಯುಕ್ತ ಈಗಾಗಲೇ ಫೆಸ್ಟೀವ್ ಥೀಮ್ ಫೋಟೋಶೂಟ್‌ ಹೆಚ್ಚಾಗಿದೆ. ಹೆಣ್ಣು ಮಕ್ಕಳು ರಾಧೆಯಂತೆ ಕಂಗೊಳಿಸಿದರೆ, ಗಂಡು ಮಕ್ಕಳು ಮುದ್ದು ಕೃಷ್ಣನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

Karnataka Weather: ಸ್ವಾತಂತ್ರ್ಯೋತ್ಸವಕ್ಕೆ ಜತೆಯಾಗಲಿದೆ ಮಳೆ; ಕರಾವಳಿ, ಬೆಂಗಳೂರಿನಲ್ಲೂ ಇಂದು ಸುರಿಯಲಿದೆ ಭಾರಿ ವರ್ಷಧಾರೆ

ಕರಾವಳಿ, ಬೆಂಗಳೂರಿನಲ್ಲೂ ಇಂದು ಸುರಿಯಲಿದೆ ಭಾರಿ ವರ್ಷಧಾರೆ

Rain Update: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಇಂದು ಕರಾವಳಿ ಜತೆಗೆ ಇಲ್ಲೂ ಧಾರಾಕಾರವಾಗಿ ಸುರಿಯಲಿದೆ. ಮುಂದಿನ 5 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ.

Gubbi News: ರಾಷ್ಟ್ರ ಭಕ್ತಿ ಸಮರ್ಪಣೆಗೆ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ : ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಕರೆ

ರಾಷ್ಟ್ರ ಭಕ್ತಿ ಸಮರ್ಪಣೆಗೆ ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ

ಬಿಜೆಪಿ ಪಕ್ಷದ ಮೂಲಕ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯ ಕರ್ತರು ಪ್ರತಿ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರ ಧ್ವಜವನ್ನು ಎಲ್ಲಾ ಕಾರ್ಯಕರ್ತರಿಗೆ ನೀಡಲಾಗಿದೆ

Dr. Sharanabasappa Appa:  ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ; ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶ್ರದ್ಧಾಂಜಲಿ

ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ; ಸಿಎಂ ಸೇರಿ ಗಣ್ಯರಿಂದ ಶ್ರದ್ಧಾಂಜಲಿ

ಕಲಬುರಗಿಯ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಶರಣಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ.

MP K Sudhakar: ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರನ್ನು ಜನ ನಂಬಲ್ಲ: ಸಂಸದ ಡಾ.ಕೆ.ಸುಧಾಕರ್ ವಾಗ್ದಾಳಿ

ಸ್ಥಳೀಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರನ್ನು ಜನ ನಂಬಲ್ಲ

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಒಂದೇ ಕಟ್ಟಡದಲ್ಲಿದೆ. ಈ ಕಟ್ಟಡದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವಕ, ಕಾರು ಚಾಲಕ ಬಾಬು ಆವರಣದ ಮರದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದು ನನಗೆ ಬಹಳ ದುಃಖ ತಂದಿದೆ.

79th Independence Day: 79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು: ಸರ್.ಎಂ.ವಿ ಜಿಲ್ಲಾಕ್ರೀಡಾಂಗಣದಲ್ಲಿ ತಾಲೀಮು ಜೋರು

79ನೇ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

ರಾಷ್ಟ್ರಭಕ್ತಿಯನ್ನು ಮೆರೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಜಿಲ್ಲಾಡಳಿತ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ನಾಳಿನ ಕಾರ್ಯಕ್ರಮದಲ್ಲಿ ಎಲ್ಲೂ ಕೂಡ ಲೋಪವಾಗದಂತೆ ಧ್ವಜವಂಧನೆ ಮತ್ತು ಕವಾಯತು ನಡೆಯಬೇಕಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

Chikkaballapur News: ತಾಲೂಕು ಆರೋಗ್ಯ ಅಧಿಕಾರಿಗೆ ಸನ್ಮಾನಿಸಿದ ಭೋವಿ ಸಮಾಜ

ತಾಲೂಕು ಆರೋಗ್ಯ ಅಧಿಕಾರಿಗೆ ಸನ್ಮಾನಿಸಿದ ಭೋವಿ ಸಮಾಜ

ಚಿಂತಾಮಣಿ ನಗರದ ಸಾರ್ವಜನಿಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ! ಸಂತೋಷ್ ಕುಮಾರ್ ರವರ ಉತ್ತಮ ಸೇವೆಯನ್ನು ಗುರುತಿಸಿದ ಬೋವಿ ಸಮಾಜದ ಜಿಲ್ಲಾಧ್ಯಕ್ಷ ಎಂ ಗುರ್ರಪ್ಪ ರವರ ತಂಡ ಅವರಿಗೆ ಹೃದಯಸ್ಪರ್ಶಯಾಗಿ ಸನ್ಮಾನಿಸಿ ಗೌರವಿಸಿದರು. ನಂತರ ಮಾತ ನಾಡಿದ ಎಂ ಗುರ್ರಪ್ಪ ಸರ್ಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಜೊತೆಗೆ ಉತ್ತಮವಾದ ಸಂಪರ್ಕ ಇಟ್ಟುಕೊಂಡು ಅವರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿರುವ ಡಾ! ಸಂತೋಷ್ ಕುಮಾರ್ ರವರ ಸೇವೆ ಶ್ಲಾಘನೀಯ ಎಂದು ಹೇಳಿದರು.

Chikkaballapur News: ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ

ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಹಾಗೂ ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ರಚನೆ ಮಾಡಿದ್ದು, ಅವುಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ

Sharanabasappa Appa: ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ

ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ

Kalaburagi News: ಕಲಬುರಗಿಯ ಶರಣ ಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಗುರುವಾರ (ಆಗಸ್ಟ್‌ 14) ಲಿಂಗೈಕ್ಯರಾದರು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Darshan Thoogudeepa: ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲೇ ಗತಿ

ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ ಆ್ಯಂಡ್‌ ಗ್ಯಾಂಗ್‌

ಸುಪ್ರೀಂ ಕೋರ್ಟ್‌ ಜಾಮೀನು ರದ್ದುಗೊಳಿಸಿದ ಬೆನ್ನಲ್ಲೇ ನಟ ದರ್ಶನ್‌ ಮತ್ತು ಇತರ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಸದ್ಯ ಎ 1 ಪವಿತ್ರಾ ಗೌಡ, ಎ 2 ದರ್ಶನ್, ಎ 11 ನಾಗರಾಜು, ಎ 12 ಲಕ್ಷ್ಮಣ, ಎ 14 ಪ್ರದೋಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

Gubbi News: ಸ್ವಚ್ಛತೆ ಶುದ್ಧ ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

ಜಲ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ತಾಪಂ ಇಓ ಶಿವಪ್ರಕಾಶ್

ಕರಿಶೆಟ್ಟಿಹಳ್ಳಿ ಗ್ರಾಮದ ಬಳಿಯ ಕಸ ವಿಲೇವಾರಿ ಘಟಕ ಹತ್ತಿರ ಸ್ವಚ್ಛತಾ ಕಾರ್ಯ ನಡೆಸಿದ ಇಓ ಶಿವಪ್ರಕಾಶ್ ಅವರು ಸುದ್ದಿಗಾರರ ಜೊತೆ ಮಾತನಾಡಿ ಜಾಗತೀಕ ಯುಗದಲ್ಲಿ ಪರಿಸರ ಕಲುಷಿತ ಗೊಂಡಿದೆ. ಶುದ್ಧ ನೀರು ಗಾಳಿ ದೊರೆಯುವುದು ಕಷ್ಟಕರವಾಗುತ್ತಿದೆ. ಮುಂದಿನ ಪೀಳಿಗೆ ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಜವಾಬ್ದಾರಿ ಹೊತ್ತ ಸರ್ಕಾರ ಪ್ರತಿ ಹಳ್ಳಿಯಲ್ಲೂ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದೆ

Laxmi Hebbalkar: ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದೆ ಕೇಂದ್ರ ಚುನಾವಣಾ ಆಯೋಗ: ಹೆಬ್ಬಾಳ್ಕರ್

ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದೆ ಚುನಾವಣಾ ಆಯೋಗ: ಹೆಬ್ಬಾಳ್ಕರ್

ವಿರೋಧ ಪಕ್ಷದ ನಾಯಕರ ಮೇಲೆ ಇಡಿ, ಐಟಿ‌‌ ದಾಳಿ ಮಾಡಿಸುವ ಕೇಂದ್ರದ ಬಿಜೆಪಿ ನಾಯಕರು, ಇದೀಗ ಮತಗಳ್ಳತನಕ್ಕೂ ಕೈ‌ ಹಾಕಿದ್ದಾರೆ. ಚುನಾವಣೆ ಆದ ತಕ್ಷಣ‌ ರಾಹುಲ್ ಗಾಂಧಿ ಮತದಾನ ಪಟ್ಟಿ ಕೇಳಿದರೂ ಕೊಡಲಿಲ್ಲ. ನಮ್ಮ ಹೋರಾಟದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

Loading...