Hari Paraak Column: ತಂಡದ ಕ್ಯಾಪ್ಟನ್ ಬುದ್ಧಿವಂತ ಆಗಿದ್ರೆ ಅವನು - ವೈಸ್ ಕ್ಯಾಪ್ಟನ್
ಇನ್ನು ಸಿನಿಮಾದ ವಿಚಾರಕ್ಕೆ ಬಂದ್ರೆ, ಭೂಮಿಯಲ್ಲಿ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತ ನಿರ್ಧಾರ ಮಾಡಿಕೊಂಡಂತೆ, ಆತ್ಮವೊಂದು ತನ್ನ ಭಾವಿ ಅಪ್ಪ ಅಮ್ಮನನ್ನು ಹುಡುಕಿಕೊಂಡು ಬರೋ ಫ್ಯಾಂಟಸಿ ಕಥೆ ಇದು. ಕಥೆಯ ಎಳೆ ವಿಚಿತ್ರ ಅನ್ನಿಸಿದರೂ ಚಿತ್ರದ ತುಂಬಾ ಸತ್ಯ ಅವರ ಎಂದಿನ ಟ್ರೇಡ್ ಮಾರ್ಕ್ ಸೀಲ್ ಇದೆ. ಅವರ ರಾಮಾ ರಾಮಾ ರೇ ಚಿತ್ರದ ಪ್ಲೇವರ್ ಕೂಡಾ ಇಲ್ಲಿದೆ.


ತುಂಟರಗಾಳಿ
ಸಿನಿಗನ್ನಡ
ರಾಮಾ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಎಕ್ಸ್ ಅಂಡ್ ವೈ ಅನ್ನೋ ಹೊಸ ಸಿನಿಮಾವನ್ನ ತೆರೆಗೆ ತಂದಿದ್ದಾರೆ. ಹೇಳಿ ಕೇಳಿ ಸತ್ಯ ಅವರ ಎಕ್ಸ್ ಫ್ಯಾಕ್ಟರ್ ಅಂದ್ರೆ ನಿರ್ದೇಶನ. ಆದ್ರೆ ಈಗ ಅವರು ಅದರ ಜೊತೆ ನಟನೆ ಅನ್ನೋ ವೈ ಫ್ಯಾಕ್ಟರ್ ಅನ್ನೂ ಸೇರಿಸಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ನಟರಾಗೋದು ಹೊಸ ಮಾತಲ್ಲ. ಹಾಗಾಗಿ ಸತ್ಯ ಅವರನ್ನು ವೈ ಅಂತ ಕೇಳಂಗಿಲ್ಲ. ಆದರೆ ಅವರ ನಟನೆಯ ಬಗ್ಗೆ ಹೇಳೋದಾದ್ರೆ, ಅವರು ಯಾವ ಪಾತ್ರ ಬೇಕಾದ್ರೂ ನಿರ್ವಹಣೆ ಮಾಡಬಲ್ಲರು ಅಂತ ಹೇಳೋಕೆ ಸಮಯ ಇನ್ನೂ ಕೂಡಿಬರದಿದ್ದರೂ ಈ ಚಿತ್ರದ ಪಾತ್ರಕ್ಕೆ ಮಾತ್ರ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಅಂತ ಖಡಾಖಂಡಿತವಾಗಿ ಹೇಳಬಹುದು.
ಇನ್ನು ಸಿನಿಮಾದ ವಿಚಾರಕ್ಕೆ ಬಂದ್ರೆ, ಭೂಮಿಯಲ್ಲಿ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಅಂತ ನಿರ್ಧಾರ ಮಾಡಿಕೊಂಡಂತೆ, ಆತ್ಮವೊಂದು ತನ್ನ ಭಾವಿ ಅಪ್ಪ ಅಮ್ಮನನ್ನು ಹುಡುಕಿಕೊಂಡು ಬರೋ ಫ್ಯಾಂಟಸಿ ಕಥೆ ಇದು. ಕಥೆಯ ಎಳೆ ವಿಚಿತ್ರ ಅನ್ನಿಸಿದರೂ ಚಿತ್ರದ ತುಂಬಾ ಸತ್ಯ ಅವರ ಎಂದಿನ ಟ್ರೇಡ್ ಮಾರ್ಕ್ ಸೀಲ್ ಇದೆ. ಅವರ ರಾಮಾ ರಾಮಾ ರೇ ಚಿತ್ರದ ಪ್ಲೇವರ್ ಕೂಡಾ ಇಲ್ಲಿದೆ.
ಇದನ್ನೂ ಓದಿ: Hari Paraak Column: ಧಾರಾವಾಹಿ ನಿರ್ಮಿಸುವ ಪ್ರೊಡಕ್ಷನ್ ಹೌಸ್: ಸೋಪ್ ಫ್ಯಾಕ್ಟರಿ
ಭೂಮಿಯ ಮೇಲೆ ಇರೋ ಮನುಷ್ಯರ ಬಗ್ಗೆ ಮಾತಾಡ್ತಾ, ಅಪ್ಪ ಅಮ್ಮಂದಿರನ್ನು ಬಿಟ್ಟ ಮಕ್ಕಳು, ಮಕ್ಕಳನ್ನು ಬಿಟ್ಟ ಅಪ್ಪ ಅಮ್ಮ ಹೀಗೆ ಅಂದು ತುದಿ ಇಂದು ತುದಿ ಅಂತ ಎರಡೂ ತುದಿಗಳನ್ನು ಟಚ್ ಮಾಡಿರುವ ಸತ್ಯ ಪ್ರೇಕ್ಷಕರ ಮನಸ್ಸನ್ನೂ ಟಚ್ ಮಾಡುತ್ತಾರೆ. ಅಪ್ಪ, ಅಮ್ಮ ಅಂತ ಮುzಗಿ ತಡವರಿಸುವ ಪಾತ್ರದಲ್ಲಿ ಅಥರ್ವ ಪ್ರಕಾಶ್ ಅಭಿನಯ ಕೊಂಚ ಏಕತಾನತೆ ಅಂತ ಅನ್ನಿಸಿದರೂ, ಪಾತ್ರದಲ್ಲಿ ಜೀವ ಇಲ್ಲದೆಯೂ ಚಿತ್ರಕ್ಕೆ ಜೀವ ತುಂಬಿದೆ. ಒಟ್ಟಾರೆ ಸತ್ಯ ಅವರು ಈ ಚಿತ್ರದಲ್ಲಿ ಜೀವನದ ಅನೇಕ ಸತ್ಯಗಳನ್ನು ಹೇಳಿದ್ದಾರೆ. ಆದರೆ ಇಂಥ ಎಕ್ಸ ಪೆರಿಮೆಂಟಲ್ ಚಿತ್ರಗಳನ್ನುನಮ್ಮ ಕನ್ನಡಿಗರು ನೋಡುತ್ತಾರಾ ಅನ್ನೋ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಲೂಸ್ ಟಾಕ್- ಕಟ್ಟರ್ ಹಿಂದೂ ಸ್ವಾಮೀಜಿ
ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಣೆ ಮಾಡದೇ ಇದ್ರೆ ಅಕ್ಟೋಬರ್ 2ಕ್ಕೆ ಜಲಸಮಾಧಿ ಆಗ್ತೀನಿ ಅಂತ ಹೇಳಿದ್ದೀರಲ್ಲ?
- ಹೌದು, ಯಾಕಂದ್ರೆ ಅಕ್ಟೋಬರ್ 2 ಡ್ರೈ ಡೇ.
ಏನ್ ಸ್ವಾಮೀಜಿ, ಕೊಟ್ಟ ಮಾತಿಗೆ ತಪ್ಪೋಕೆ ಹಿಂಗೆ ನೆಪ ಹೇಳ್ತಾ ಇದ್ದೀರಾ?
- ನಾವು ಜಪ, ತಪ ಮಾಡೋರು ಕಣ್ರೀ, ಹಂಗೆ ನೆಪ ಹೇಳಲ್ಲ
ಓಹೋ, ಏನ್ ಸ್ಮಾಮೀಜಿಗಳು ಕವಿಗಳ ಥರ ಪ್ರಾಸ ಮಾತಾಡ್ತಾ ಇದ್ದಾರೆ?
- ನಮ್ದೇನಿದ್ರೂ ಕಾವಿ ಜನಾಂಗ, ಕವಿ ಜನಾಂಗ ಅಲ್ಲ.
ಯಾಕೆ ಕವಿಗಳು ರೊಮ್ಯಾಂಟಿಕ್ ಆಗಿ ಬರೀತಾರೆ, ಆದ್ರೆ, ನೀವು ಎಲ್ಲವನ್ನೂ ತ್ಯಜಿಸಿದ ಸನ್ಯಾಸಿಗಳು ಅಂತನಾ?
ಹೌದು. ನಾವು ಅಷ್ಟು ರೊಮ್ಯಾಂಟಿಕ್ ಅಲ್ಲ, ಏನೋ ಕೂದ್ಲು ಉದ್ದ ಬಿಟ್ಟಿರ್ತೀವಿ ಅಂತ ‘ರೋಮ್ಯಾಂಟಿಕ್’ ಅನ್ನಬಹುದು ಅಷ್ಟೇ.
ಸರಿ, ಈಗಿನ ಕಾಲದ ಕೆಲವು ಸ್ವಾಮೀಜಿಗಳ ಮೇಲೆ ಜನಕ್ಕೆ ಯಾಕೆ ನಂಬಿಕೆ ಹೋಗ್ತಾ ಇದೆ ಅಂತ ನಿಮ್ಮ ಅಭಿಪ್ರಾಯ?
ವತ್ಸಾ, ಅದು ಅವರವರ ಭಾವಕ್ಕೆ ಬಿಟ್ಟಿದ್ದು. ನೀನು ಕ್ಲಾಸ್ ಆಗಿ ಹೇಳಿದ್ಯಲ್ಲ, ನಾವು ಎಲ್ಲವನ್ನೂ ತ್ಯಜಿಸಿದವರು ಅಂತ. ಅದನ್ನ ಕೆಲವರು ಮಾಸ್ ಆಗಿ, ಮೂರೂ ಬಿಟ್ಟವರು ಅಂತ ಅರ್ಥ ಮಾಡ್ಕೊತಾರೆ. ಅದಕ್ ನಾವೇನ್ ಮಾಡೋಕಾಗುತ್ತೆ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕಾಲೇಜಿಗೆ ಹಳೇ ಬೈಕ್ ತಗೊಂಡು ಹೋಗ್ತಾ ಇದ್ದ ಖೇಮು ಅವತ್ತು ಮನೆಗೆ ಬೆಂಜ್ ಕಾರಲ್ಲಿ ಬಂದ. ಅದನ್ನ ನೋಡಿ ಅವನ ಅಪ್ಪ ಅಮ್ಮ ಗಾಬರಿ ಆದ್ರು. ಖೇಮುನ ಕೇಳಿದ್ರು.
ಯಾರ್ದು ಕಾರು?
ನಂದೇ, ಇವತ್ತು ಕೊಂಡುಕೊಂಡೆ?
ಅಷ್ಟು ದುಡ್ಡು ಎಲ್ಲಿತ್ತು
2000 ರುಪಾಯಿ ಕೊಟ್ಟೆ ಅಷ್ಟೆ
2000 ರುಪಾಯಿಗೆ ನಿಂಗೆ ಬೆಂಜ್ ಕಾರ್ ಯಾರ್ ಕೊಡ್ತಾರೆ. ಏನ್ ತಮಾಷೆ ಮಾಡ್ತೀಯಾ?
ಇಲ್ಲ, ಎದುರುಮನೆ ಆಂಟಿ ನಂಗೆ ಮಾರಿದ್ರು ಖೇಮು ಅಪ್ಪ ಅಮ್ಮ ಈ ಆಂಟಿ ಕಾಲೇಜು ಹುಡುಗ ಸಿಕ್ಕ ಅಂತ ಬುಟ್ಟಿಗೆ ಹಾಕ್ಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾಳೆ ಅನ್ಸುತ್ತ ಅಂತ ಗುಸುಗುಸು ಮಾತಾಡಿ ಕೊಳ್ಳೋಕೆ ಶುರು ಮಾಡಿದ್ರು. ನಂತರ ನಡಿ ಅಂತ ಅವನನ್ನು ಕರ್ಕೊಂಡು ಆಂಟಿ ಮನೆಗೆ ಹೋದ್ರು. ಮೂವರೂ ಎದುರು ಮನೆ ಆಂಟಿ ಮನೆಗೆ ಹೋದಾಗ, ಆಂಟಿ ಆರಾಮಾಗಿ ಹೂವಿನ ಗಿಡಗಳಿಗೆ ನೀರು ಹಾಕ್ತಾ ಇದ್ರು. ಖೇಮು ಅಪ್ಪ ಕೇಳಿದ- ನನ್ನ ಮಗನಿಗೆ ನೀವು 2000 ರುಪಾಯಿಗೆ ಬೆಂಜ್ ಕಾರ್ ಮಾರಿದ್ರಂತೆ. ಯಾಕಂತ ಕೇಳಬಹುದಾ?.
ಆಂಟಿ ಹೇಳಿದ್ಳು- ನನ್ನ ಗಂಡ ಒಂದು ವಾರದಿಂದ ಮನೆಯಲ್ಲಿ ಇಲ್ಲ. ಇವತ್ತು ಬೆಳಿಗ್ಗೆ ಕಾಲ್ ಮಾಡಿ, ನಾನು ನನ್ನ ಸೆಕ್ರೆಟರಿ ಜೊತೆ ಹೋಗ್ತಾ ಇದ್ದೀನಿ. ಇನ್ಮೇಲೆ ಮನೆಗೆ ಬರಲ್ಲ. ನಾನು ಅವಳ ಜೊತೆನೇ ಇರ್ತೀನಿ. ನಿನ್ನ ಹೆಸರಿಗೆ ಈಗಾಗಲೇ ಬೇಕಾದಷ್ಟು ದುಡ್ಡು ಇಟ್ಟಿದ್ದೇನೆ. ಮನೆಯಲ್ಲಿ ಇರೋ ಬೆಂಜ್ ಕಾರು ನನ್ನ ಹೆಸರಲ್ಲಿದೆ. ಅದನ್ನ ಮಾರಿ ಆ ದುಡ್ಡನ್ನ ನನ್ನ ಅಕೌಂಟಿಗೆ ಹಾಕು ಅಂದ. ಅದಕ್ಕೇ ಮಾರಿದೆ.
ಲೈನ್ ಮ್ಯಾನ್
ವರ್ಷಾ ಅನ್ನೋ ಇಬ್ಬರು ಗರ್ಲ್ ಫ್ರೆಂಡ್ಸ್ ಇದ್ರೆ ಹೊಸಬಳ ನಂಬರ್ ಅನ್ನು ಹೇಗೆ ಸೇವ್ ಮಾಡಿಕೊಳ್ಳಬೇಕು
- ನ್ಯೂ ಇಯರ್
ಚೌಚೌ ಮಾರೋ ಅಂಗಡಿಗೆ ಏನಂತ ಹೆಸರಿಡಬಾರದು ?
- ಚೌಚಾಲಯ
ಪುರುಷರ ಎದೆ ಮೇಲೆ ಬೆಳೆಯುವ ಕೂದಲು
- ಎದೆ‘ಗರಿಕೆ’
ಲವ ತನ್ನ ಸಹೋದರನನ್ನು ಭೇಟಿ ಆದಾಗ ಏನು ವಿಚಾರಿಸ್ತಾನೆ?
- ‘ಕುಶ’ಲೋಪರಿ
ನಿಮ್ಮ ಎಲ್ಲಾ ಪಾಪಗಳನ್ನು ಇಲ್ಲಿ ತೊಳೆಯಲಾಗುತ್ತದೆ ಎಂದು ಹೇಳಿ ಜನರ ತಲೆಕೆಡಿಸಿ ಮರುಳು ಮಾಡುವ ಢೋಂಗಿ ಧಾರ್ಮಿಕ ಸ್ಥಳ
-ಬ್ರೈನ್ ವಾಷ್ ಬೇಸಿನ್
ಮಕ್ಕಳಿಗೆ ಅಂತ ಬೇರೆ ಬ್ರ್ಯಾಂಡ್ ಬ್ರ್ಯಾಂಡಿ ಇದೆ. ಹಾಗೇ ಬಿಯರ್ ಕೂಡಾ ಇದ್ದಿದ್ರೆ ಅದು
-‘ಚೈಲ್ಡ್’ ಬಿಯರ್
ಒಬ್ಬ ‘ಸುಳ್ಳು’ ಹೇಳೋದ್ ನೋಡಿ ಅವನ ಜೊತೆಗಿರೋ ಜನರೆಲ್ಲ ಅಂಥವರೇ ಅಂತ ಡಿಸೈಡ್ ಮಾಡೋದು
- ಜನ‘ರ’ಲೈಸ್’
ಮೊನ್ನೆ ಐಟಿ ರೈಡ್ ಮಾಡಿದಾಗ ಯಾರದ್ದೋ ಮನೆಯಲ್ಲಿ ಪೈಪ್ ನ ದುಡ್ಡು ಬಂತಂತೆ. ಅವತ್ತು ಐಟಿ ಆಫೀಸಿಂದ ಫೋನ್ ಮಾಡಿ ರೈಡ್ ಮುಗೀತಾ? ಅಂತ ಕೇಳಿದ್ದಕ್ಕೆ ರೈಡ್ ಮಾಡ್ತಾ ಇದ್ದ ಆಫೀಸರ್ ಹೇಳಿದ್ದು
- ಇಲ್ಲ, ಇಟ್ಸ್ ಸ್ಟಿಲ್ ಇನ್ ದ ಪೈಪ್ ಲೈನ್.
ಚೆಸ್ ಆಡುವವರು
‘64’ ವಿದ್ಯೆಯಲ್ಲಿ ಪಾರಂಗತರು
ತಂಡದ ಕ್ಯಾಪ್ಟನ್ ‘ಬುದ್ಧಿವಂತ’ ಆಗಿದ್ರೆ ಅವನನ್ನ ಏನಂತಾರೆ?
- ‘ವೈಸ್ ’ ಕ್ಯಾಪ್ಟನ್