ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mann Ki Baat: ತುರ್ತು ಪರಿಸ್ಥಿತಿಯಿಂದ ಪ್ರಜಾಪ್ರಭುತ್ವದ ಹತ್ಯೆ ಮಾತ್ರವಲ್ಲ... ಮನ್‌ ಕೀ ಬಾತ್‌ನಲ್ಲಿ ಗುಡುಗಿದ ಮೋದಿ

ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್‌ ಕೀ ಬಾತ್‌(Mann Ki Baat) ಕಾರ್ಯಕ್ರಮದ 123 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಯೋಗ ದಿನ, ತುರ್ತು ಪರಿಸ್ಥಿತಿಗೆ 50ವರ್ಷ ಪೂರ್ತಿಯಾಗಿರುವ ಬಗ್ಗೆ ಮಾತನಾಡಿದೆ.

ಮನ್‌ ಕೀ ಬಾತ್‌: ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್‌ ಇಲ್ಲಿವೆ‌

Profile Rakshita Karkera Jun 29, 2025 12:34 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರ ಮನ್‌ ಕೀ ಬಾತ್‌(Mann Ki Baat) ಕಾರ್ಯಕ್ರಮದ 123 ನೇ ಸಂಚಿಕೆ ಇಂದು ಪ್ರಸಾರವಾಗಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಯೋಗ ದಿನ, ತುರ್ತು ಪರಿಸ್ಥಿತಿಗೆ 50ವರ್ಷ ಪೂರ್ತಿಯಾಗಿರುವ ಬಗ್ಗೆ ಮಾತನಾಡಿದೆ.

ಯೋಗ ದಿನಾಚರಣೆ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಜೂ.21 ರಂದು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮ 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಕಳೆದ 10 ವರ್ಷಗಳಲ್ಲಿ, ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ದೇಶಾದ್ಯಂತದ ಆಚರಣೆಗಳ ಬಗ್ಗೆ ಮಾತನಾಡುತ್ತಾ, ಅವರು ತೆಲಂಗಾಣ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳು ಮತ್ತು ಸಶಸ್ತ್ರ ಪಡೆಗಳು, ಬುಡಕಟ್ಟು ವಿದ್ಯಾರ್ಥಿಗಳು ಮತ್ತು ದಿವ್ಯಾಂಗ ಜನರು ಸೇರಿದಂತೆ ಜನರು ಉತ್ಸಾಹದಿಂದ ಭಾಗವಹಿಸಿದ ಇತರ ರಾಜ್ಯಗಳನ್ನು ಉಲ್ಲೇಖಿಸಿದರು.



ಈ ಸುದ್ದಿಯನ್ನೂ ಓದಿ: Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು

  • ಜಮ್ಮು ಮತ್ತು ಕಾಶ್ಮೀರದಲ್ಲಿರುವ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯಲ್ಲಿ, ಹಿಮದಿಂದ ಆವೃತವಾದ ಶಿಖರಗಳಲ್ಲಿಯೂ ಯೋಗ ಪ್ರದರ್ಶನ ನಡೆದಿದೆ
  • ಗುಜರಾತ್‌ನ ವಡ್ನಗರದಲ್ಲಿ 2,121 ಜನರು ಒಟ್ಟಾಗಿ ಭುಜಂಗಾಸನಗಳನ್ನು ಪ್ರದರ್ಶಿಸಿ ಹೊಸ ದಾಖಲೆ ಬರೆದಿದ್ದಾರೆ.
  • ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್ ಹೀಗೆ ಪ್ರಪಂಚ ಮೂಲೆ ಮೂಲೆಯಲ್ಲೂ ಯೋಗ ದಿನಾಚರಣೆ ನಡೆದಿದೆ.
  • "ಒಂದು ಭೂಮಿಗಾಗಿ, ಆರೋಗ್ಯಕ್ಕಾಗಿ ಯೋಗ"- ಇದು ಕೇವಲ ಘೋಷಣೆಯಲ್ಲ, ಬದಲಾಗಿ ವಸುಧೈವ ಕುಟುಂಬಕಂ" ಎಂಬ ಭಾವನೆಯನ್ನು ಪ್ರತಿಧ್ವನಿಸುತ್ತದೆ ಎಂದು ಅವರು ಹೇಳಿದರು.
  • ಕೈಲಾಸ-ಮಾನಸ ಸರೋವರ ಯಾತ್ರೆ ಬಹಳ ಸಮಯದ ನಂತರ ಪುನರಾರಂಭಗೊಂಡಿದ್ದು, ಭಕ್ತರಿಗೆ ಮಹತ್ವದ ಕ್ಷಣವಾಗಿದೆ.ಜುಲೈ 3 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಯಾತ್ರಿಕರು ಮತ್ತೊಮ್ಮೆ ಈ ಪವಿತ್ರ ಪ್ರಯಾಣವನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ತೀರ್ಥಯಾತ್ರೆಗಳನ್ನು ಕೈಗೊಳ್ಳಲಿರುವವರಿಗೆ ನನ್ನ ಶುಭಾಶಯಗಳು.
  • WHO ಭಾರತವನ್ನು ಕಣ್ಣಿನ ಕಾಯಿಲೆಯಾದ ಟ್ರಾಕೋಮಾ ಮುಕ್ತ ದೇಶವೆಂದು ಘೋಷಿಸಿದೆ. ಭಾರತದ ಹಲವು ಭಾಗಗಳಲ್ಲಿ ಟ್ರಾಕೋಮಾ ಸಾಮಾನ್ಯವಾಗಿದ್ದ ಕಾಲವಿತ್ತು. ನಾವು ಟ್ರಾಕೋಮಾವನ್ನು ತೊಡೆದುಹಾಕಲು ನಿರ್ಧರಿಸಿದ್ದೇವೆ. WHO ಭಾರತವನ್ನು ಟ್ರಾಕೋಮಾ ಮುಕ್ತ ಎಂದು ಘೋಷಿಸಿದೆ.
  • 95 ಕೋಟಿಗೂ ಹೆಚ್ಚು ಭಾರತೀಯರು ಈಗ ಕೆಲವು ಸಾಮಾಜಿಕ ಭದ್ರತಾ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ, 2015 ರಲ್ಲಿ ಸರ್ಕಾರಿ ಯೋಜನೆಗಳು 25 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಿವೆ ಎಂದು ಹೇಳಿದರು.
  • 1975ರ ತುರ್ತು ಪರಿಸ್ಥಿತಿಗೆ 50ವರ್ಷ ಪೂರ್ಣಗೊಂಡಿದೆ. ಅಂದು ಸಂವಿಧಾನ ಹತ್ಯಾ ದಿವಸ್' ಆಚರಿಸಿದ್ದೇವೆ. ತುರ್ತು ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಿದವರನ್ನು ನಾವು ಸ್ಮರಿಸಬೇಕು. ಇದು ನಮ್ಮ ಸಂವಿಧಾನವನ್ನು ರಕ್ಷಿಸಲು ಜಾಗರೂಕರಾಗಿರಲು ನಮಗೆ ಸ್ಫೂರ್ತಿ ನೀಡುತ್ತದೆ.