ಕುಡಗೋಲು ಕಣ ರೋಗದ ವಿರುದ್ಧ ಭಾರತದ ಹೋರಾಟ
ಇದಕ್ಕೆ ಪೂರಕವಾಗಿ ಸುಮಾರು 20 ಮಿಲಿಯನ್ ಭಾರತೀಯರು ಸ್ವತಃ ರೋಗಲಕ್ಷಣಗಳಿಂದ ಮುಕ್ತವಾಗಿ ದ್ದರೂ ಸಿಕಲ್ ಸೆಲ್ ಅಂಶವನ್ನು ಹೊಂದಿದ್ದು ಅವರು ಸಿಕಲ್ ಸೆಲ್ ವಂಶವಾಹಿಯನ್ನು ತಮ್ಮ ಮಗುವಿಗೆ ವರ್ಗಾಯಿಸುತ್ತಾರೆ. ಈ ವರ್ಗಾವಣೆಯ ಪ್ರಮಾಣ ಶೇ.2ರಿಂದ ಶೇ.40ರಷ್ಟು ಇದ್ದು ಇದು ಆದಿವಾಸಿ ಸಮುದಾಯಗಳಲ್ಲಿ ಅಳತೆ ಮೀರಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ.


ಡಾ.ಥೆನ್ರಲ್ ಎಸ್. ಗೀತ, ಪ್ರಿನ್ಸಿಪಲ್ ಸೈಂಟಿಸ್ಟ್, ಮೆಡ್ ಜಿನೋಮ್, ಮತ್ತು ಡಾ. ಶ್ವೇತಾ ಪಾಠಕ್, ಪೀಡಿಯಾಟ್ರಿಕ್ ಹೆಮಟೊ ಆಂಕಾಲಜಿಸ್ಟ್ ಮತ್ತು ಬಿಎಂಟಿ ಫಿಜಿಷಿಯನ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜ್, ಎಂ.ಪಿ.
ಸಿಕಲ್ ಸೆಲ್ ಡಿಸೀಸ್ (ಎಸ್.ಸಿ.ಡಿ.-ಕುಡಗೋಲು ಕಣ ರೋಗ) ಅನುವಂಶಿಕ ರಕ್ತದ ರೋಗವಾಗಿದ್ದು ಕೆಂಪು ರಕ್ತ ಕಣಗಳು ಗಟ್ಟಿ ಮತ್ತು ಕುಡುಗೋಲಿನ ಆಕಾರ ಹೊಂದುತ್ತವೆ, ಇದರಿಂದ ರಕ್ತದ ಹರಿವಿನಲ್ಲಿ ನೋವಿನಿಂದ ಕೂಡಿದ ಅಡೆತಡೆ ಉಂಟಾಗುತ್ತದೆ ಮತ್ತು ಗಂಭೀರ ಆರೋಗ್ಯದ ಸಂಕೀರ್ಣತೆಗಳು ಉಂಟಾಗುತ್ತವೆ. ಭಾರತವು ಎಸ್.ಸಿ.ಡಿ.ಯ ದ್ವಿತೀಯ ಅತ್ಯಂತ ಹೆಚ್ಚಿನ ಜಾಗತಿಕ ಸಮಸ್ಯೆಗೆ ಕೊಡುಗೆ ನೀಡುತ್ತಿದ್ದು ಸುಮಾರು 1.4 ಮಿಲಿಯನ್ ವ್ಯಕ್ತಿಗಳು ಮುಖ್ಯವಾಗಿ ಆದಿವಾಸಿ ಸಮುದಾಯಗಳು ಬಾಧಿತರಾಗಿದ್ದಾರೆ. ದೇಶದಲ್ಲಿ 44,000 ಮಕ್ಕಳು ವಾರ್ಷಿಕ ಎಸ್.ಸಿ.ಡಿ.ಯಿಂದ ಜನಿಸುತ್ತಿದ್ದು ಸುಮಾರು ಶೇ.20ರಷ್ಟು ಮಂದಿ ಎರಡನೇ ವಯಸ್ಸಿಗಿಂತ ಮುಂಚೆಯೇ ಮರಣಿಸು ತ್ತಿದ್ದಾರೆ ಮತ್ತು ಶೇ.30ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ 20ರ ವಯಸ್ಸಿನ ನಂತರ ಉಳಿಯುತ್ತಿಲ್ಲ.
ಇದಕ್ಕೆ ಪೂರಕವಾಗಿ ಸುಮಾರು 20 ಮಿಲಿಯನ್ ಭಾರತೀಯರು ಸ್ವತಃ ರೋಗಲಕ್ಷಣಗಳಿಂದ ಮುಕ್ತವಾಗಿದ್ದರೂ ಸಿಕಲ್ ಸೆಲ್ ಅಂಶವನ್ನು ಹೊಂದಿದ್ದು ಅವರು ಸಿಕಲ್ ಸೆಲ್ ವಂಶವಾಹಿ ಯನ್ನು ತಮ್ಮ ಮಗುವಿಗೆ ವರ್ಗಾಯಿಸುತ್ತಾರೆ. ಈ ವರ್ಗಾವಣೆಯ ಪ್ರಮಾಣ ಶೇ.2ರಿಂದ ಶೇ.40ರಷ್ಟು ಇದ್ದು ಇದು ಆದಿವಾಸಿ ಸಮುದಾಯಗಳಲ್ಲಿ ಅಳತೆ ಮೀರಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಎಸ್.ಸಿ.ಡಿ. ಹೊಂದಿದ ಜನರು ಆಗಾಗ್ಗೆ ಗಂಭೀರ ನೋವುಗಳನ್ನು ಅನುಭವಿಸುತ್ತಾರೆ, ತೀವ್ರ ಆಯಾಸ, ಊತ, ಸೋಂಕುಗಳು ಮತ್ತು ಸಂಭವನೀಯ ಅಂಗ ಹಾನಿ ಅನುಭವಿಸುವ ಮೂಲಕ ಹಲವಾರು ಮಾನಸಿಕ ಸಾಮಾಜಿಕ ಸವಾಲುಗಳಿಗೆ ಒಡ್ಡಿಕೊಳ್ಳುತ್ತಾರೆ.
ಇದನ್ನೂ ಓದಿ: Health Tips: ಆಹಾರದಲ್ಲಿ ಕೊಬ್ಬು ಇರುವುದು ಅಗತ್ಯವೆ?
ಇಂದು ಹಲವು ಪ್ರಕರಣಗಳು ತಡವಾಗಿ ರೋಗಪರೀಕ್ಷೆ ಮಾಡುವುದು, ಅರಿವಿನ ಕೊರತೆ, ಸಾಮಾಜಿಕ ಕಳಂಕ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ಆರೋಗ್ಯಸೇವಾ ಲಭ್ಯತೆಯಿಂದ ಗೊತ್ತೇ ಆಗದಂತೆ ಇರುತ್ತವೆ. ಇದರಿಂದ ದೀರ್ಘಾವಧಿ ಹಾನಿ ತಪ್ಪಿಸುವಲ್ಲಿ ಪ್ರಾರಂಭಿಕ ರೋಗ ಪರೀಕ್ಷೆ ಮತ್ತು ಸಕಾಲಿಕ ಮಧ್ಯಪ್ರವೇಶ ಮುಖ್ಯವಾಗಿವೆ, ಇದರಿಂದ ರೋಗಿಗಳಿಗೆ ಜೀವನದ ನಿರೀಕ್ಷೆ ಮತ್ತು ಜೀವನದ ಗುಣಮಟ್ಟ ಹೆಚ್ಚಿಸಬಹುದು.
ಭಾರತದಲ್ಲಿ ಸಿಕಲ್ ಸೆಲ್ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳುವುದು
ಎಸ್.ಸಿ.ಡಿ.ಯು ಅನುವಂಶಿಕವಾಗಿ ಹಿಮೋಗ್ಲೋಬಿನ್ ನ ಪ್ರಮುಖ ಅಂಶವಾದ ಎಚ್.ಬಿ.ಬಿ. ವಂಶವಾಹಿಯ ಸಿಕಲ್ β – ಗ್ಲೋಬಿನ್ ಮಾದರಿಯ ಎರಡು ಪ್ರತಿಗಳನ್ನು ಅನುವಂಶಿಕವಾಗಿ ಪಡೆಯುವುದರಿಂದ ಉಂಟಾಗುತ್ತದೆ. ಪರ್ಯಾಯವಾಗಿ ಇದು ಎಚ್.ಬಿ.ಎಸ್. ಅಲ್ಲೆಲೆ ಮತ್ತಿತರೆ ಪೆಥೋಜೆನಿಕ್ ಎಚ್.ಬಿ.ಬಿ. ವೇರಿಯೆಂಟ್ ಅನುವಂಶಿಕವಾಗಿ ಪಡೆಯುವುದರಿಂದಲೂ ಉಂಟಾ ಗಬಹುದು, ಇದರಿಂದ ಅಸಹಜ ಪ್ರೊಟೀನ್ ಮತ್ತು ನಿರ್ದಿಷ್ಟ ವಂಶವಾಹಿಗೆ ಅನುಗುಣವಾಗಿ ವ್ಯತ್ಯಾಸಗೊಳ್ಳುವ ರೋಗ ಉಂಟಾಗುತ್ತದೆ. ಫೌಂಡರ್ ಪರಿಣಾಮಗಳು ಭಾರತದ ವಿಸ್ತಾರ ಆದಿವಾಸಿ ಜನಸಂಖ್ಯೆಗಳಲ್ಲಿ ಅಲ್ಲೆಲೆ ಹೆಚ್ಚಾಗುವಂತೆ ಮಾಡಿದೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರೀಸರ್ಚ್ ನಲ್ಲಿ 2021ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನದ ಪ್ರಕಾರ ಭಾಗವಹಿಸಿದ ಶೇ.32.1ರಷ್ಟು ಆದಿವಾಸಿಗಳಿಗೆ ಮಾತ್ರ ಎಸ್.ಸಿ.ಡಿ. ಬಗ್ಗೆ ಅರಿವಿದ್ದು ಅವರಲ್ಲಿ ಕೇವಲ ಶೇ.7.9ರಷ್ಟು ಮಂದಿಗೆ ಅದು ಅನುವಂಶಿಕ ಎಂದು ತಿಳಿದಿದೆ. ಇದು ಎಸ್.ಸಿ.ಡಿ.ಯ ಅನುವಂಶಿಕ ಸ್ವರೂಪದ ಕುರಿತು ವಿಸ್ತಾರ ತಪ್ಪು ತಿಳಿವಳಿಕೆಯಿಂದ ಬಂದಿದೆ ಮತ್ತು ಆರೋಗ್ಯ ಶಿಕ್ಷಣಕ್ಕೆ ಸೀಮಿತ ಲಭ್ಯತೆ ಮತ್ತು ಅಸಮರ್ಪಕ ಆರೋಗ್ಯಸೇವಾ ಮೂಲಸೌಕರ್ಯದಿಂದ ಇದು ಮತ್ತಷ್ಟು ಹೆಚ್ಚಾಗಿದೆ.
ಕಳಂಕ, ತಪ್ಪು ಮಾಹಿತಿ ಮತ್ತು ಅಸಮರ್ಪಕ ಆರೋಗ್ಯಸೇವಾ ಬೆಂಬಲವು ರೋಗಿಗಳಿಗೆ ಕಠಿಣ ತೆಯ ಆವರ್ತ ಸೃಷ್ಟಿಸಿದ್ದು ಅವರನ್ನು ತಮಗೆ ಬಯಸಿದ ಪೂರ್ಣ ಆರೈಕೆ ಪಡೆಯುವು ದರಿಂದ ತಡೆಯುತ್ತದೆ.
ಅನುವಂಶಿಕತೆ ಪರೀಕ್ಷೆಯ ಅಡೆತಡೆಗಳ ನಿವಾರಣೆ
ಅನುವಂಶಿಕತೆಯ ಪರೀಕ್ಷೆ ಮತ್ತು ವರ್ಗಾವಣೆ ಮಾಡುವವರ ಪರೀಕ್ಷೆಯು ಈ ಆವರ್ತ ಮುರಿ ಯಲು ಅತ್ಯಂತ ಮುಖ್ಯವಾಗಿದೆ, ಅವು ಸಿಕಲ್ ಸೆಲ್ ಟ್ರೈಟ್ ಅಥವಾ ರೋಗದಿಂದ ಬಾಧಿತರನ್ನು ರೋಗಲಕ್ಷಣ ಹೊರಹೊಮ್ಮುವ ಮುನ್ನವೇ ಅಂತಹ ವ್ಯಕ್ತಿಗಳನ್ನು ಮೊದಲೇ ಕಂಡುಹಿಡಿಯುತ್ತದೆ. ಒಂದೊಮ್ಮೆ ಬಾಲ್ಯದಲ್ಲಿಯೇ ಮಾರಣಾಂತಿಕವಾಗಿದ್ದರೂ ಎಸ್.ಸಿ.ಡಿ. ಹೊಂದಿದ ಬಹಳಷ್ಟು ರೋಗಿಗಳು ವಯಸ್ಕರಾಗಿ ಉಳಿದಿದ್ದಾರೆ ಅದಕ್ಕೆ ಕಾರಣ ನವಜಾತ ಶಿಶುಗಳ ಪರೀಕ್ಷೆ, ಶಾಲೆಯ ಆರೋಗ್ಯ ಕಾರ್ಯಕ್ರಮಗಳಿಗೆ ಅನುವಂಶಿಕ ಪರೀಕ್ಷೆಯ ಸೇರ್ಪಡೆ, ಪ್ರಸವಪೂರ್ವ ಆರೈಕೆ ಮತ್ತು ಸಾಮಾಜಿಕ ಕಳಂಕ ನಿವಾರಿಸಲು ಸಮುದಾಯದ ಪ್ರಭಾವದಿಂದಾಗಿ ರೋಗಿಗಳು ಸೂಕ್ತ ಆರೈಕೆ ಪಡೆಯುತ್ತಿದ್ದಾರೆ ಮತ್ತು ಗಮನಾರ್ಹವಾಗಿ ರೋಗದ ಹೊರೆ ಕಡಿಮೆ ಮಾಡುತ್ತಿದ್ದಾರೆ.
* ಸುಧಾರಿತ ಆರೋಗ್ಯಸೇವಾ ಯೋಜನೆ: ಸಕಾಲಿಕ ರೋಗಪರೀಕ್ಷೆಯು ತಕ್ಷಣವೇ ವೈದ್ಯಕೀಯ ಮಧ್ಯಪ್ರವೇಶ ಸಾಧ್ಯವಾಗಿಸುವ ಮೂಲಕ ಪಾರ್ಶ್ವವಾಯು, ಸೋಂಕುಗಳು ಮತ್ತು ಅಂಗಹಾನಿ ಯನ್ನು ತಪ್ಪಿಸುತ್ತದೆ.
* ಮಾಹಿತಿ ಪೂರ್ಣ ಗರ್ಭಧಾರಣೆ ಯೋಜನೆ: ಈ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮುಂಚೆಯೇ ಮಧ್ಯಪ್ರವೇಶ ಮಾಡಲು ಮತ್ತು ಗರ್ಭಧಾರಣೆ ಯೋಜನೆ ಕುರಿತು ಮಾಹಿತಿಪೂರ್ಣ ನಿರ್ಧಾರವನ್ನು ಕೈಗೊಳ್ಳಲು ನೆರವಾಗುವ ಮೂಲಕ ಕುಟುಂಬ ವನ್ನು ಯೋಜಿಸು ತ್ತಿರುವ ದಂಪತಿಗಳಿಗೆ ವೈದ್ಯಕೀಯ, ಭಾವನಾತ್ಮಕ ಮತ್ತು ಹಣಕಾಸು ಹೊರೆ ಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ ಸಂತಾನೋತ್ಪಾದನೆಯ ಆಯ್ಕೆಗಳ ಸನ್ನಿವೇಶ ದಲ್ಲಿ ಕಳಂಕ ಮತ್ತು ತಾರತಮ್ಯ ನಿವಾರಿಸುತ್ತದೆ, ಇದು ಬಾಧಿತ ವ್ಯಕ್ತಿಗಳಿಗೆ ಹೆಚ್ಚು ಬೆಂಬಲದ ಪರಿಸರ ಸೃಷ್ಟಿಸುವಲ್ಲಿ ಮುಖ್ಯವಾಗಿದೆ.
* ರೋಗದ ಹೊರೆ ಇಳಿಕೆ: ನವಜಾತ ಮತ್ತು ಪ್ರಸವಪೂರ್ವ ಪರೀಕ್ಷೆಯಂತಹ ಸಾಮಾನ್ಯ ಆರೋಗ್ಯ ಸೇವೆಗೆ ಎಸ್.ಸಿ.ಡಿ. ಪರೀಕ್ಷೆಯನ್ನು ಒಳಗೊಳ್ಳುವಂತೆ ಮಾಡುವುದು ವ್ಯಕ್ತಿಗಳು ಮತ್ತು ಸಮುದಾ ಯಗಳ ಮೇಲೆ ದೀರ್ಘಾವಧಿ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
* ಸಮುದಾಯಗಳ ಸಬಲೀಕರಣ: ವೈದ್ಯಕೀಯ ಪ್ರಯೋಜನಗಳ ಆಚೆಗೂ ಜನಸಂಖ್ಯೆ ಹಂತದ ಅನುವಂಶಿಕ ಪರೀಕ್ಷೆ ಕೂಡಾ ಸಾಮಾಜಿಕ ಬದಲಾವಣೆಗೆ ಸಾಧನವಾಗಿ ಕೆಲಸ ಮಾಡುತ್ತಿದ್ದು ತನ್ನ ಅನುವಂಶಿಕತೆಯ ಸ್ವರೂಪ ಕುರಿತು ಸಮುದಾಯಕ್ಕೆ ಶಿಕ್ಷಣ ನೀಡುವ ಅವಕಾಶ ಸೃಷ್ಟಿಸಿ ಭಯ ಮತ್ತು ತಾರತಮ್ಯ ಕಡಿಮೆ ಮಾಡುತ್ತದೆ ಮತ್ತು ಅರ್ಥ ಮಾಡಿಕೊಳ್ಳುವಿಕೆ ಮತ್ತು ಬೆಂಬಲ ನೀಡುತ್ತದೆ.
ಪ್ರಸ್ತುತ ರೋಗಪರೀಕ್ಷೆಯ ಪ್ರಯತ್ನಗಳು
ಭಾರತವು ಎಸ್.ಸಿ.ಡಿ. ವಿರುದ್ಧ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದು 2023ರಲ್ಲಿ ಸಿಕಲ್ ಸೆಲ್ ಅನೀಮಿಯಾ ನಿವಾರಣೆಗೆ ರಾಷ್ಟ್ರೀಯ ಯೋಜನೆ ಪ್ರಾರಂಭಿಸಿದ್ದು ಅದು 2040ರ ವೇಳೆಗೆ 140 ಮಿಲಿಯನ್ ಜನರಿಗೆ ತಲುಪುವ ನಿರೀಕ್ಷೆ ಇದೆ. ಇದು ಈಗಾಗಲೇ 50 ಮಿಲಿಯನ್ ಜನರನ್ನು ಪರೀಕ್ಷಿಸಿದ್ದು ಎಸ್.ಸಿ.ಡಿ. ನಿವಾರಣೆಗೆ ಸರ್ಕಾರದ ಗಮನ ಮತ್ತು ಬದ್ಧತೆಯನ್ನು ತೋರಿದೆ.
ಅನುವಂಶಿಕ ಕೌನ್ಸೆಲ್ಲಿಂಗ್ ಅಗತ್ಯ
ಪರೀಕ್ಷೆಯ ಪ್ರಕ್ರಿಯೆ ಪರಿಣಾಮಕಾರಿಯಾಗಲು ಜೆನೆಟಿಕ್ ಕೌನ್ಸೆಲ್ಲಿಂಗ್ ಅಗತ್ಯವಾಗಿದೆ. ಜೆನೆಟಿಕ್ ಕೌನ್ಸೆಲ್ಲರ್ ಗಳು ಜೆನೆಟಿಕ್ ಪರೀಕ್ಷೆ, ಪ್ರಕ್ರಿಯೆ ಮತ್ತು ಪರೀಕ್ಷೆಯ ಫಲಿತಾಂಶಗಳ ಅರ್ಥೈಸುವಿಕೆ ಮೂಲಕ ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುವುದೇ ಅಲ್ಲದೆ ಸಂಬಂಧಿಸಿದ ಮಿಥ್ಯೆಗಳನ್ನು ನಿವಾರಿಸಲು ಮತ್ತು ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಪರೀಕ್ಷೆಯ ಪ್ರಕ್ರಿಯೆ ಮೂಲಕ ಸೌಖ್ಯ ಮತ್ತು ಶಕ್ತಿ ನೀಡುತ್ತಾರೆ.
ವಿವಾಹ ಪೂರ್ವ ಕೌನ್ಸೆಲ್ಲಿಂಗ್ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಮಾಹಿತಿಪೂರ್ಣ ಆರೋಗ್ಯದ ನಿರ್ಧಾರಗಳನ್ನು ಕೈಗೊಳ್ಳಲು ಬಹಳ ಮುಖ್ಯವಾಗಿದೆ. ವಿವಾಹವಾಗಲು ಬಯಸುವ ದಂಪತಿಗಳಿಗೆ ಪರೀಕ್ಷೆಗೆ ಒಳಪಡಲು ಮತ್ತು ಕೌನ್ಸೆಲಿಂಗ್ ಮಾಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಇಬ್ಬರೂ ಎಸ್.ಸಿ.ಡಿ. ಹೊಂದಿದ ಮಗುವನ್ನು ಪಡೆಯುವ ಶೇ.25ರಷ್ಟು ಸಾಧ್ಯತೆ ಇರುತ್ತದೆ.
ಕೌನ್ಸೆಲ್ಲಿಂಗ್ ಅವರಿಗೆ ತೊಂದರೆಗಳ ಮೌಲ್ಯಮಾಪನ ಮಾಡಲು ಮತ್ತು ಸಂತಾನೋತ್ಪಾದನೆಯ ಆಯ್ಕೆಗಳನ್ನು ಆವಿಷ್ಕರಿಸಲು ನೆರವಾಗುತ್ತದೆ. ಹೆಚ್ಚಿನ ರೋಗಸಾಧ್ಯತೆಯ ಸಮುದಾಯಗಳ ಗರ್ಭಿಣಿ ಮಹಿಳೆಯರು ಸಕಾಲಿಕ ಮಧ್ಯಪ್ರವೇಶ ಮತ್ತು ಸುಧಾರಿತ ಫಲಿತಾಂಶಗಳಿಗೆ ಪ್ರಸವಪೂರ್ವ ಪರೀಕ್ಷೆಯಲ್ಲಿ ಆಪ್ತ ಸಮಾಲೋಚನೆಗೆ ಒಳಪಡಬೇಕು. ಎಸ್.ಸಿ.ಡಿ. ಇತಿಹಾಸ ಹೊಂದಿದ ಕುಟುಂಬ ಗಳು ಆಪ್ತ ಸಮಾಲೋಚನೆಯಿಂದ ಪ್ರಯೋಜನ ಪಡೆಯುತ್ತಾರೆ. ಅವರು ತಮ್ಮ ರೋಗ ವರ್ಗಾಯಿಸುವ ಸ್ಥಿತಿಗತಿ, ಆರೋಗ್ಯದ ಪರಿಣಾಮಗಳು, ಆರೈಕೆಯ ಕಾರ್ಯತಂತ್ರಗಳು ಮತ್ತು ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸು ಭಾವನಾತ್ಮಕ ಸಿದ್ಧತೆ ಮಾಡಿಕೊಳ್ಳಲು ನೆರವಾಗುತ್ತದೆ.
ಮುಂದಿನ ದಾರಿ
ಎಸ್.ಸಿ.ಡಿ.ಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಕಾಲಿಕ ಚಿಕಿತ್ಸೆ ನೀಡಲು ಗ್ರಾಮೀಣ ಆರೋಗ್ಯಸೇವಾ ಮೂಲಸೌಕರ್ಯ ಸದೃಢಗೊಳಿಸುವುದು, ಆದಿವಾಸಿ ಪ್ರದೇಶಗಳಲ್ಲಿ ಹೆಚ್ಚು ಜೆನೆಟಿಕ್ ಕೌನ್ಸೆಲ್ಲರ್ ಗಳು ಮತ್ತು ಮೊದಲ ಸಾಲಿನ ಕೆಲಸಗಾರರ ತರಬೇತಿ; ಸ್ಥಳೀಯ ನಾಯಕ ರೊಂದಿಗೆ ಸಮುದಾಯಗಳೊಂದಿಗೆ ಸಕ್ರಿಯವಾಗಿರುವುದು ಮತ್ತು ಮಿಥ್ಯೆಗಳನ್ನು ನಿವಾರಿಸುವ ಮತ್ತು ಪರೀಕ್ಷೆಯಲ್ಲಿ ಭಾಗವಹಿಸುವುದನ್ನು ಉತ್ತೇಜಿಸುವ ಸಾಂಸ್ಕೃತಿಕತೆ ಬೆಳೆಸುವುದು; ವಿವಾಹ ಪೂರ್ವ, ಗರ್ಭಧಾರಣೆ ಪೂರ್ವ ಮತ್ತು ಗರ್ಭಧಾರಣೆಯಲ್ಲಿನ ಕೌನ್ಸೆಲ್ಲಿಂಗ್ ಅನ್ನು ರಾಷ್ಟ್ರೀಯ ನೀತಿಯಾಗಿಸಿ ಮಾಹಿತಿಪೂರ್ಣ ಸಂತಾನೋತ್ಪಾದನೆಯ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುವುದು ಮತ್ತು ಎನ್.ಜಿ.ಒ.ಗಳಿಗೆ ಸಮುದಾಯಪರೀಕ್ಷೆ ಮತ್ತು ಆರೋಗ್ಯ ಶಿಕ್ಷಣ ಹೆಚ್ಚಿಸು ವುದು. ಆರೋಗ್ಯಸೇವೆಯಲ್ಲಿ ಮುಂದುವರಿದ ಹೂಡಿಕೆಯು ರೋಗದ ಹೊರೆ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯಕರ ಭಾರತ ಸಾಧಿಸುವಲ್ಲಿ ಬಹಳ ಮುಖ್ಯವಾಗಿದೆ.