ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aashirvad Smart India: ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ ಕಾರ್ಯಕ್ರಮದ ಮೂಲಕ ಅಯೋಡಿನ್‌ ಕೊರತೆ ಬಗ್ಗೆ ಜಾಗೃತಿ

ಕೇವಲ ಏಳು ತಿಂಗಳುಗಳಲ್ಲಿ, ಕಾರ್ಯಕ್ರಮವು ತನ್ನ ಆರಂಭಿಕ ಗುರಿಯನ್ನೂ ತಲುಪಿದ್ದು, 7.5 ಲಕ್ಷ ವ್ಯಕ್ತಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಪ್ರಮುಖವಾಗಿ ಗರ್ಭಿಣಿಯರು, ಹಾಲೂಡಿಸುವ ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳೂ ಸೇರಿದ್ದಾರೆ. ಇದಕ್ಕಾಗಿ ನಾವು ನವೀನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು.

ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾದಲ್ಲಿ ಅಯೋಡಿನ್‌ ಕೊರತೆ ಬಗ್ಗೆ ಜಾಗೃತಿ

Profile Ashok Nayak Jun 4, 2025 12:34 PM

ಬೆಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್‌ ಸಹಭಾಗಿತ್ವದಲ್ಲಿ ಐಟಿಸಿ ಯಶಸ್ವಿಯಾಗಿ ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಪ್ರೋಗ್ರಾಮ್ ಅನ್ನು ಮುಕ್ತಾಯಗೊಳಿಸಿದೆ.

ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ ಈ ಯೋಜನೆಯು ಅಯೋಡಿನ್ ಕೊರತೆ ಅಸ್ವಸ್ಥತೆಗಳ (ಐಡಿಡಿ) ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿನ 30 ಜಿಲ್ಲೆಗಳಲ್ಲಿ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳನ್ನು ಪ್ರೋತ್ಸಾಹಿಸು ತ್ತಿದೆ.
ಇದನ್ನೂ ಓದಿ: IPL 2025: ʼಈ ಸಲ ಕಪ್‌ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ

ಕೇವಲ ಏಳು ತಿಂಗಳುಗಳಲ್ಲಿ, ಕಾರ್ಯಕ್ರಮವು ತನ್ನ ಆರಂಭಿಕ ಗುರಿಯನ್ನೂ ತಲುಪಿದ್ದು, 7.5 ಲಕ್ಷ ವ್ಯಕ್ತಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಪ್ರಮುಖವಾಗಿ ಗರ್ಭಿಣಿಯರು, ಹಾಲೂಡಿಸುವ ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳೂ ಸೇರಿದ್ದಾರೆ. ಇದಕ್ಕಾಗಿ ನಾವು ನವೀನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೆವು. ಅಯೋಡಿನ್ ಕೊರತೆ ಅಸ್ವಸ್ಥತೆ ಗಳು, ಅಯೋಡಿನ್‌ನ ಪ್ರಯೋಜನ, ಇತರ ಪ್ರಮುಖ ಸೂಕ್ಷ್ಮಪೋಷಕಾಂಶಗಳು, ಸಮಗ್ರ ಪೌಷ್ಠಿ ಕಾಂಶ ಹಾಗೂ ಆರೋಗ್ಯಕರ ಆಹಾರ ಸೇವನೆ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿ ಯನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ.

ಇದನ್ನು ಜಾರಿಗೆ ತರಲು, ಸುಸ್ಥಿರ ಮತ್ತು ಬಹುಕೋನೀಯ ಕಾರ್ಯವಿಧಾನವನ್ನು ಅಳವಡಿಸಿ ಕೊಳ್ಳಲಾಗಿದ್ದು, ಸಮುದಾಯ ಶಿಕ್ಷಣ, ಸಾಂಸ್ಕೃತಿಕ ಇಂಟಿಗ್ರೇಶನ್‌, ತಾಂತ್ರಿಕ ಅನ್ವೇಷಣೆ ಮತ್ತು ಸಾಮರ್ಥ್ಯ ನಿರ್ಮಾಣವನ್ನೂ ಇದರಲ್ಲಿ ಸೇರಿಸಲಾಗಿದೆ. ಈ ಮೂಲಕ ವರ್ತನೆಯಲ್ಲಿ ದೀರ್ಘ ಕಾಲೀನ ಬದಲಾವಣೆ ಮತ್ತು ಆರೋಗ್ಯ ಫಲಿತಾಂಶಗಳ ಸಮುದಾಯ ಮಾಲೀಕತ್ವವನ್ನು ತೆಗೆದು ಕೊಳ್ಳಲು ಇದು ಸಹಾಯ ಮಾಡಲಾಗುತ್ತದೆ ಎಂದು ಐಟಿಸಿ ಲಿಮಿಟೆಡ್‌ನ ನ್ಯೂಟ್ರಿಶನ್ ಸೈನ್ಸಸ್‌ ವಿಭಾಗದ ಮುಖ್ಯಸ್ಥೆ ಡಾ. ಅಗಾಥಾ ಬೆಟ್ಸಿ ಹೇಳಿದರು.