ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಬೆಂಗಳೂರಿನಲ್ಲಿ ನವರಸನ್ ನೇತೃತ್ವದ ‘ಉತ್ಸವ್ ಕೆಫೆ’ ಆರಂಭ

Bengaluru News: ನವರಸನ್ ಅವರು ಬೆಂಗಳೂರಿನ ಜಿ.ಟಿ.ಮಾಲ್‌ನಲ್ಲಿ ʼಉತ್ಸವ್ ಕೆಫೆʼ ಎಂಬ ನೂತನ ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸುವುದು ನನ್ನ ಎರಡು ವರ್ಷಗಳ ಕನಸು. ಅದು ಈಗ ಈಡೇರಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನವರಸನ್ ನೇತೃತ್ವದ ‘ಉತ್ಸವ್ ಕೆಫೆ’ ಆರಂಭ

Profile Siddalinga Swamy Jun 13, 2025 4:48 PM

ಬೆಂಗಳೂರು: ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ವಿತರಕನಾಗಿ ಹಾಗೂ ಮೈ ಮೂವೀ ಬಜಾರ್ ಮೂಲಕ ಸಾಕಷ್ಟು ಸಿನಿಮಾ ಇವೆಂಟ್‌ಗಳನ್ನು ನಡೆಸುತ್ತಿರುವ , MMB legacy ಯ ಮುಖ್ಯಸ್ಥರೂ ಆಗಿರುವ ನವರಸನ್ ಬೆಂಗಳೂರಿನ (Bengaluru News) ಜಿ.ಟಿ.ಮಾಲ್‌ನಲ್ಲಿ ʼಉತ್ಸವ್ ಕೆಫೆʼ ಎಂಬ ನೂತನ ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸಿದ್ದಾರೆ. ಇತ್ತೀಚೆಗೆ ನಡೆದ "ಉತ್ಸವ್ ಕೆಫೆ" ಯ ಉದ್ಘಾಟನಾ ಸಮಾರಂಭದಲ್ಲಿ ವಿನೋದ್ ಪ್ರಭಾಕರ್, ಚಂದನ್ ಶೆಟ್ಟಿ, ರಾಜವರ್ಧನ್, ಆರ್ ಚಂದ್ರು, ಸಂಜಯ್ ಗೌಡ, ನಿಶಾ ವಿನೋದ್ ಪ್ರಭಾಕರ್, ಅಪೂರ್ವ, ಸಿಂಧೂ ಲೋಕನಾಥ್, ನವೀನ್ ಶಂಕರ್, ರಾಜೇಶ್, ತಬಲ ನಾಣಿ, ನಿರ್ಮಾಪಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಚೇತನ್ ಗೌಡ, ಶ್ರೀನಿವಾಸ್, ರವಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ, ನವರಸನ್ ಅವರಿಗೆ ಶುಭ ಕೋರಿದರು.

ಶುದ್ಧ ಸಸ್ಯಹಾರಿ ಹೋಟೆಲ್ ಆರಂಭಿಸುವುದು ನನ್ನ ಎರಡು ವರ್ಷಗಳ ಕನಸು. ಅದು ಈಗ ಈಡೇರಿದೆ. ಜಿ.ಟಿ.ಮಾಲ್‌ನ ಮೂರನೇ ಮಹಡಿಯಲ್ಲಿ ʼಉತ್ಸವ್ ಕೆಫೆʼ ಎಂಬ ಪ್ಯೂರ್ ವೆಜ್ ರೆಸ್ಟೋರೆಂಟ್ ಆರಂಭಿಸಿದ್ದೇನೆ. ರುಚಿಕರವಾದ ಇಡ್ಲಿ, ವಡೆ, ಪೂರಿ ಮುಂತಾದ ತಿನಸುಗಳ ಜತೆಗೆ ಚೈನೀಸ್ (ವೆಜ್) ತಿಂಡಿಗಳು ಸಹ ಇಲ್ಲಿ ಲಭ್ಯವಿರುತ್ತದೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನವರಸನ್.

ಈ ಸುದ್ದಿಯನ್ನೂ ಓದಿ | Monsoon Lipsticks 2025: ಮಾನ್ಸೂನ್‌ಗೆ ಕಾಲಿಟ್ಟ ವೈವಿಧ್ಯಮಯ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್