Ahmedabad Plane Crash: ಗುಜರಾತ್ನಲ್ಲಿ ಏರ್ ಇಂಡಿಯಾ ವಿಮಾನ ಪತನ; 242 ಪ್ರಯಾಣಿಕರ ಪೈಕಿ ಓರ್ವ ಪವಾಡ ಸದೃಶ ಪಾರು
242 ಮಂದಿಯನ್ನು ಹೊತ್ತುಕೊಂಡು ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಈತನನ್ನು ರಮೇಶ್ ವಿಶ್ವಕುಮಾರ್ ಎಂದು ಗುರುತಿಸಲಾಗಿದೆ.


ಗಾಂಧಿನಗರ: 242 ಮಂದಿಯನ್ನು ಹೊತ್ತುಕೊಂಡು ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ (Ahmedabad Plane Crash). ಏರ್ ಇಂಡಿಯಾ ನೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಸುಮಾರು 850 ಅಡಿ ಎತ್ತರದಿಂದ ಕೆಳಗೆ ಜಾರಿದ ವಿಮಾನ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿದ ಹೊತ್ತಿ ಉರಿಯಿತು. ಈ ದುರಂತದಲ್ಲಿ ಎಲ್ಲರೂ ಅಸುನೀಗಿದ್ದರು ಎನ್ನಲಾಗಿತ್ತು. ಇದೀಗ ಬಂದ ಅಧಿಕೃತ ಮಾಹಿತಿ ಪೈಕಿ ಓರ್ವ ಪ್ರಯಾಣಿಕ ಬದುಕುಳಿದಿದ್ದಾನೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸೀಟ್ ನಂ. 11ಎಯಲ್ಲಿದ್ದ ಪ್ರಯಾಣಿಕ, 38 ವರ್ಷದ ರಮೇಶ್ ವಿಶ್ವಕುಮಾರ್ ಬದುಕುಳಿದಿದ್ದಾನೆ. ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿರುವ ರಮೇಶ್ಗೆ ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ʼʼಅಪಘಾತವಾಗುತ್ತಿದ್ದಂತೆ ರಮೇಶ್ ತುರ್ತು ನಿರ್ಗಮನ ದ್ವಾರದಿಂದ ಜಿಗಿದ್ದಾರೆʼʼ ಎಂದು ಅಹಮದಾಬಾದ್ನ ಪೊಲೀಸ್ ಕಮಿಷನರ್ ಜಿ.ಎಸ್.ಮಲಿಕ್ ತಿಳಿಸಿದ್ದಾರೆ. ಗಾಯಗೊಂಡ ರಮೇಶ್ ರಸ್ತೆಯಲ್ಲಿ ನಡೆಯುತ್ತ ಘಟನೆಯ ಬಗ್ಗೆ ವಿವರಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
Miracle amidst tragedy!!!
— Shivangi Thakur (@thakur_shivangi) June 12, 2025
Ramesh Vishwashkumar, seated on 11A, is the sole survivor of the Air India crash in Ahmedabad. He jumped out and walked away injured. He’s currently undergoing treatment at the hospital.#AhmedabadPlaneCrash #Ahmedabad pic.twitter.com/pWIHUD7kG5
ಈ ಸುದ್ದಿಯನ್ನೂ ಓದಿ: Ahmedabad Plane Crash: ವಿಮಾನ ದುರಂತದಲ್ಲಿ ಮಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ ಲಂಡನ್ಗೆ ಹೊರಟಿದ್ದೇಕೆ?
ಇನ್ನು ಹಾಸ್ಟೆಲ್ನಲ್ಲಿ ಊಟ ಮಾಡುತ್ತಿದ್ದ 15 ವಿದ್ಯಾರ್ಥಿಗಳೂ ಅಸುನೀಗಿರುವ ಶಂಕೆ ವ್ಯಕ್ತವಾಗಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ಮೋಹನ್ ನಾಯ್ಡು ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಮಾನ ದುರಂತದಲ್ಲಿ ಮಡಿದ ಗುಜರಾತ್ ಮಾಜಿ ಸಿಎಂ
ಮೃತರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ವಿಜಯ್ ರೂಪಾನಿ ಅವರ ಪತ್ನಿ ಅಂಜಲಿ ರೂಪಾನಿ ಲಂಡನ್ನಲ್ಲಿದ್ದಾರೆ ಮತ್ತು ಅವರನ್ನು ಮರಳಿ ತವರಿಗೆ ಕರೆತರಲು ಮಾಜಿ ಸಿಎಂ ಲಂಡನ್ಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗುತ್ತಿದೆ. ಆದರೆ ದುರದೃಷ್ಟವಶಾತ್ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ಮೃತಪಟ್ಟಿದ್ದಾರೆ.
ಬಿಜೆಪಿಯ ವಿಜಯ್ ರೂಪಾನಿ ಗುಜರಾತ್ನ 16ನೇ ಮುಖ್ಯಮಂತ್ರಿ. 2016ರ ಆಗಸ್ಟ್ 7ರಿಂದ 2021ರ ಸೆಪ್ಟಂಬರ್ 11ರವರೆಗೆ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅವರು ರಾಜ್ಕೋಟ್ನ ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದರು. ಆನಂದಿಬೆನ್ ಪಟೇಲ್ ಅವರ ನಂತರ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರ ಮತ್ತು 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಕೋಟ್ ಪಶ್ಚಿಮದಿಂದ ಮರು ಆಯ್ಕೆಯಾಗಿದ್ದರು.