ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದ ದ್ವಿತೀಯ ಟಿ20 ವಿಶ್ವಕಪ್‌ ಗೆಲುವಿಗೆ ಮೊದಲ ವರ್ಷದ ಸಂಭ್ರಮ

India win T20 World Cup: ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ಸಮಯೋಚಿತ 76 ರನ್ ನೆರವಿನಿಂದ 176 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಚೊಚ್ಚಲ ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.

ಭಾರತದ ದ್ವಿತೀಯ ಟಿ20 ವಿಶ್ವಕಪ್‌ ಗೆಲುವಿಗೆ ಮೊದಲ ವರ್ಷದ ಸಂಭ್ರಮ

Profile Abhilash BC Jun 29, 2025 4:08 PM

ನವದೆಹಲಿ: 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ–20 ವಿಶ್ವಕಪ್ ಮತ್ತು 11 ವರ್ಷಗಳ ಬಳಿಕ ಐಸಿಸಿ ಟ್ರೋಪಿ ಜಯಿಸಿದ ಸಂಭ್ರಮಕ್ಕೆ(T20 World Cup 2024 final) ಒಂದು ವರ್ಷ ತುಂದಿದೆ. ಹೌದು, 2024, ಜೂನ್‌ 29ರಂದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು(IND vs SA T20 World Cup 2024) ಗೆದ್ದ ಸಾಧನೆ ಮಾಡಿತ್ತು. ಈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಶಗಳಲ್ಲಿ 20ನೇ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ ಸಹ ಒಂದು. ಅಂದು ಕಪ್‌ ಗೆದ್ದ ಬಳಿಕ ಆಟಗಾರರು ಸಂಭ್ರಮಿಸಿದ ಆಟಗಾರರ ಫೋಟೋ ಕೊಲಾಜ್ ಅನ್ನು ಬಿಸಿಸಿಐ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಜತೆಗೆ ಸೂರ್ಯ ಹಿಡಿದ ಕ್ಯಾಚ್‌ನ ವಿಡಿಯೊ ಕೂಡ ಹಂಚಿಕೊಂಡಿದೆ.

ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ಸಮಯೋಚಿತ 76 ರನ್ ನೆರವಿನಿಂದ 176 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಚೊಚ್ಚಲ ಟಿ-20 ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.



ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 16 ಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಅವರ ಎಸೆತವನ್ನು ಬಿರುಸಾಗಿ ಹೊಡೆದ ಡೇವಿಡ್ ಮಿಲ್ಲರ್, ಬೌಂಡರಿ ಗೆರೆ ದಾಟಿಸಿ ಸಿಕ್ಸರ್ ಗಳಿಸುವ ಮೂಲಕ ತಂಡಕ್ಕೆ ಜಯವನ್ನು ಒಲಿಸಿಕೊಡುವ ಹಾದಿಯಲ್ಲಿದ್ದರು. ಆದರೆ, ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯಕುಮಾರ್‌ ಅಸಾಮಾನ್ಯ ಎಂಬಂತೆ ಚೆಂಡನ್ನು ಹಿಡಿದು ಗಾಳಿಗೆ ಎಸೆದು ಬೌಂಡರಿ ಆಚೆಯಿಂದ ಮತ್ತೆ ಹಿಂದಿರುಗಿ ಕ್ಯಾಚ್ ಪಡೆದರು. ಆ ಕ್ಯಾಚ್ ಮಿಸ್ ಆಗಿ ಸಿಕ್ಸರ್ ಆಗಿದ್ದರೆ ದಕ್ಷಿಣ ಆಫ್ರಿಕಾ ಗೆದ್ದು ಟ್ರೋಫಿ ಎತ್ತಿಹಿಡಿಯುವ ಸಾಧ್ಯತೆ ಇತ್ತು.



ಇದನ್ನೂ ಓದಿ IND vs ENG: ಬ್ರಾಡ್ಮನ್, ಲಾರಾ ಒಳಗೊಂಡ ಎಲೈಟ್ ಪಟ್ಟಿಗೆ ಸೇರುವ ಸನಿಹದಲ್ಲಿ ರಿಷಭ್ ಪಂತ್!

ನಂತರದ ಎಸೆತದಲ್ಲಿ ಕಗಿಸೊ ರವಬಾಡ ಬೌಂಡರಿ ಸಿಡಿಸಿದರಾದರೂ ಉಳಿದ 4 ಎಸೆತಗಳ್ಲಲಿ ಕೇವಲ 4 ರನ್ ಕಲೆ ಹಾಕಲು ಮಾತ್ರ ದಕ್ಷಿಣ ಆಫ್ರಿಕಾಕ್ಕೆ ಸಾಧ್ಯವಾಯಿತು. ಈ ಮೂಲಕ 7 ರನ್‌ಗಳಿಂದ ಆಫ್ರಿಕಾ ಸೋಲೊಪ್ಪಿಕೊಂಡಿತು. ಭಾರತ ಗೆಲುವಿನ ಬಳಿಕ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಚಿಸಿದ್ದರು.