ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Coconut Price Rise: ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

ನಿತ್ಯದ ವೆಜ್-ನಾನ್‌ವೆಜ್ ಹೋಟೆಲ್ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯವಾಗಿರುವ ತೆಂಗಿ ನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆ ಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ

ತೆಂಗಿನಕಾಯಿ ಬೆಲೆ ಕಿಲೋಗೆ ರು.70ಕ್ಕೆ ಏರಿಕೆ

Profile Ashok Nayak Feb 19, 2025 1:07 PM

ಹೂವಪ್ಪ. ಐ. ಹೆಚ್ ಬೆಂಗಳೂರು

ಬೆಳೆ ವಿಸ್ತೀರ್ಣ 1.17 ಲಕ್ಷ ಹೆಕ್ಟೇರ್ ಇಳಿಕೆ

ಶೇ.40 ಇಳುವರಿ ಕೊರತೆ

ಮಾರುಕಟ್ಟೆಗೆ ಶೇ.60 ಪೂರೈಕೆ ಕಡಿತ

ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಮದುವೆ ಸೀಜನ್ ಮೊದಲೇ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ, ಆದರೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ನಿತ್ಯದ ವೆಜ್-ನಾನ್‌ವೆಜ್ ಹೋಟೆಲ್ ಅಡುಗೆಗೆ ಹಾಗೂ ಬೇಕರಿಗೆ ಅವಶ್ಯ ವಾಗಿರುವ ತೆಂಗಿ ನಕಾಯಿಯ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರು ಖರೀದಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಒಣ ಕೊಬ್ಬರಿಗಿಂತ ಹಸಿ ತೆಂಗಿನಕಾಯಿಗೆ ಮತ್ತು ಕೊಬ್ಬರಿ ಎಣ್ಣೆ ಮತ್ತು ಕೊಬ್ಬರಿ ಪೌಡರ್‌ಗೆ ಬೆಲೆ ಹೆಚ್ಚಾಗಿದೆ. ಕೊಬ್ಬರಿ ಎಣ್ಣೆ ಲೀ. ಗೆ 280-320 ರು. ಆಗಿದೆ. ಕೊಬ್ಬರಿ ಪೌಡರ್ 230 ಆಗಿದೆ.

ರೈತರು ಈಗ ಹೆಚ್ಚಾಗಿ ಕೆ.ಜಿ ಲೆಕ್ಕದಲ್ಲಿ ಚಿಕ್ಕದು ದೊಡ್ಡ ತೆಂಗಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ಗೆ ಸಗಟು ಬೆಲೆ 65000-70000 ರು. ಗೆ ಮಾರಾಟವಾಗುತ್ತಿದೆ. ಇದರಲ್ಲಿ ವಿಂಗಡಿಸಿದ ದಪ್ಪ ಗಾತ್ರದ ಒಂದು ಕಾಯಿಗೆ 65 ರು. ಮಧ್ಯಮ ದಪ್ಪ 45 ರು. ಹಾಗೂ ಸಣ್ಣ ಕಾಯಿ 30 ರೂ.ಗೆ ಮಾರಾಟವಾಗುತ್ತಿದೆ. ಇದು ಸಗಟು ಬೆಲೆಯಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ದಪ್ಪ 70 ರು. ಮಧ್ಯಮ 50 ರು. ಮತ್ತು ಸಣ್ಣ ತೆಂಗಿನಕಾಯಿಗಳು ರು.35ಕ್ಕೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತೆಂಗಿನಕಾಯಿ ದರ ಮೂರು ಪಟ್ಟು ಏರಿಕೆಯಾಗಿದೆ.

ಇದನ್ನೂ ಓದಿ: Tender Coconut Water: ಚಳಿಗಾಲವೆಂದು ಎಳನೀರು ಮರೆತು ಬಿಡಬೇಡಿ!

ಎಳನೀರು ರವಾನೆ: ಎಳನೀರು ಹಾಗೂ ಕೊಬ್ಬರಿಗೆ ದೂರದ ದಿಲ್ಲಿ , ಗೋವಾ, ಮುಂಬೈ ಮತ್ತು ಪೂನಾ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಕರ್ನಾಟಕದ ಎಳನೀರಿಗೆ ಭಾರಿ ಬೇಡಿಕೆ ಇದೆ. ಅಂದಾಜು ಪ್ರತಿದಿನ 80000ಕ್ಕಿಂತ ಹೆಚ್ಚು ಎಳನೀರಿನ ಕಾಯಿಗಳನ್ನು ರಫ್ತು ಮಾಡುತ್ತಾರೆ. ರೈತರಿಂದ ಸಾವಿರ ಎಳನೀರನ್ನು ರು.30000-35000ಕ್ಕೆ ಖರೀದಿಸಿ ರವಾನಿಸು ತ್ತಾರೆ, ಈ ಹಿನ್ನೆಲೆಯಲ್ಲಿ ಮರಗಳಲ್ಲಿ ಬಲಿತ ಕಾಯಿಗಳೇ ಸಿಗುತ್ತಿಲ್ಲ. ಹೀಗಾಗಿ ಪೂರೈಕೆ ಕಡಿಮೆಯಾಗಿರುವುದರಿಂದ ಸಹಜವಾಗಿ ತೆಂಗಿನಕಾಯಿ ದರ ಏರಿಕೆಯಾಗಿದೆ ಎನ್ನುತ್ತಾರೆ ತೆಂಗಿನಕಾಯಿ ಸಗಟು ವ್ಯಾಪಾರಿ ಅಶ್ರಫ್ ಖಾನ್.

ಒಣ ಕೊಬ್ಬರಿ ರವಾನೆ: ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಬಿಹಾರ, ಉತ್ತರಾಂಚಲ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಅರಸೀಕೆರೆಯ ಮಾರುಕಟ್ಟೆ‌ ಯಿಂದ ನೇರ ರವಾನೆಯಾಗುತ್ತದೆ. ಅಲ್ಲಿ ಉಂಡೆ ಕೊಬ್ಬರಿಗೆ ಬೇಡಿಕೆ ಇದೆ. ಹೀಗಾಗಿ ತೆಂಗಿನಕಾಯಿ ಬದಲಿಗೆ ಒಣ ಕೊಬ್ಬರಿಗೆ ದಾಸ್ತಾನು ಮಾಡುತ್ತಾರೆ, ಇದು ಕೂಡಾ ತೆಂಗಿ ನಕಾಯಿ ಕೊರತೆಗೆ ಕಾರಣವಾಗಿದೆ ಎನ್ನುತ್ತಾರೆ ಮತ್ತೊಬ್ಬ ತೆಂಗಿನಕಾಯಿ ವ್ಯಾಪಾರಿ ಯಾಗಿರುವ ರಾಜಣ್ಣ.

ತೆಂಗಿಗೆ ಕಾಡುವ ರೋಗಬಾಧೆ: ಅಡಿಕೆ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತರಹೇವಾರಿ ರೋಗ, ಕೀಟಗಳು ತೆಂಗಿನಕಾಯಿ ಮರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು, ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಇತ್ತೀಚೆಗೆ ತೆಂಗಿನಮರಗಳಿಗೆ ರೋಗ ಬಾಧಿಸುತ್ತಿರುವುದರಿಂದ ಇಳುವರಿ ಕಡಿಮೆಯಾಗಿದ್ದು, ತೆಂಗಿನಕಾಯಿ ಬೆಲೆ ದುಬಾರಿಯಾಗಿದೆ. ಹಳೆ ತೆಂಗಿನ ತೋಟಗಳಲ್ಲಿ ಸಾಮಾನ್ಯವಾಗಿ ಇಳುವರಿ ಬರುವುದಿಲ್ಲ, ಅದಕ್ಕೆ ಮುಖ್ಯ ಕಾರಣ ತೆಂಗಿನ ಮರಗಳಿಗೆ ಕಾಡುತ್ತಿರುವ ಕೀಟಬಾಧೆ. ಈ ನುಸಿಗಳು ತೆಂಗಿನಮರದಲ್ಲಿರುವ ರಸ ಹೀರುವುದರಿಂದ ಇಳುವರಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.

ಕಡಿಮೆ ಇಳುವರಿ ಪರಿಣಾಮ: ತೆಂಗಿನತೋಟ ನಾಶ ಮಾಡಿ ಆ ಜಮೀನುಗಳನ್ನು ನಿವೇಶನಗಳಾಗಿ ಪರಿವರ್ತನೆ ಮಾಡುತ್ತಿರುವುದು, ವಾಣಿಜ್ಯ ಬೆಳೆಯಾದ ಅಡಕೆಗೆ ಹೆಚ್ಚು ಒತ್ತು ನೀಡಿದ ಕಾರಣ ರಾಜ್ಯಾದ್ಯಂತ ತೆಂಗಿನ ಇಳುವರಿ ಕಡಿಮೆಯಾಗಿ ದರ ಏರಿಕೆಗೆ ಕಾರಣವಾಗಿದೆ.

ಬೆಲೆ ಹೆಚ್ಚಳಕ್ಕೆ ಕಾರಣ: ತೆಂಗಿನಕಾಯಿ ಇಳುವರಿ ಈ ಸಲ ಕಡಿಮೆಯಾಗಿದೆ. ಈ ಹಿಂದೆ ಇದ್ದ ತೆಂಗಿನ ತೋಟಗಳಲ್ಲಿ ಶೇ 30ರಿಂದ 40ರಷ್ಟು ತೆಂಗಿನ ಮರಗಳು ಹಾಳಾಗಿವೆ. ಶೇ.20ರಿಂದ 30 ಮರಗಳು ಸಂಪೂರ್ಣ ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಶೇ.40 ರಷ್ಟು ಇಳುವರಿ ಕೊರತೆಯಾಗಿದೆ. ಈ ಸಲ ಹೆಚ್ಚು ಮಳೆ ಬಂದಿದ್ದರೂ ಇಳುವರಿ ಕಡಿಮೆ ಯಾಗಿದೆ, ಮಳೆ ಕಡಿಮೆಯಾದರೂ ಇಳುವರಿ ಕಡಿಮೆಯಾಗುತ್ತದೆ.

2016ರಲ್ಲಿ ಬರ ಕಾಣಿಸಿಕೊಂಡ ಬಳಿಕ ತೆಂಗಿನಕಾಯಿ ಇಳುವರಿಯೇ ಕಡಿಮೆಯಾಗುತ್ತಾ ಬಂದಿದೆ. ಒಂದು ತೆಂಗಿನಕಾಯಿ ಗಿಡದಲ್ಲಿ ಕನಿಷ್ಠ 50-60 ಕಾಯಿಗಳು ಬರಬೇಕು, ಆದರೆ ಈಗ 10-15 ಕಾಯಿ ಬಂದರೆ ಹೆಚ್ಚು ಎಂದು ತೆಂಗಿನಕಾಯಿ ಬೆಳೆಗಾರರು ಹೇಳುತ್ತಾರೆ. ನುಸಿಪೀಡೆಯಿಂದ ತೆಂಗಿನಕಾಯಿಯ ಗುಣಮಟ್ಟ ಕಡಿಮೆಯಾಗಿ ಉಂಡೆ ಕೊಬ್ಬರಿ ಕಾಯಿ ಯೂ ಕುಂಠಿತವಾಗಿದೆ. ತೆಂಗಿನ ಕಾಯಿ ಇಳುವರಿ ಕುಂಠಿತವಾಗಲು ಮತ್ತೊಂದು ಕಾರಣ ವೆಂದರೆ ತೆಂಗಿನ ಮರಗಳಿಗೆ ಪೋಷಕಾಂಶದ ಕೊರತೆ. ತೆಂಗಿನಮರಗಳಿಗೆ ಸರಿಯಾದ ಪೋಷಕಾಂಶದ ಅಗತ್ಯವಿದೆ. ನೀರು ಕೂಡ ಹೆಚ್ಚಾಗಿ ಬೇಕಾಗುತ್ತದೆ. ರೈತರು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದ ಕಾರಣ ತೆಂಗಿನಕಾಯಿ ಇಳುವರಿ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ತೆಂಗಿನ ಗಿಡಕ್ಕೆ ಕಾಡುವ ರೋಗ

ಕಾಂಡ ಸೋರುವ ರೋಗ, ಗರಿ ರೋಗ, ಕಪ್ಪು ತಲೆ ಹುಳು ಹೀಗೆ ಅನೇಕ ತೊಡಕುಗಳು ಕಾಣಿಸಿಕೊಳ್ಳುತ್ತಿವೆ. ನೀರಿಲ್ಲದೆ ಬಳಲಿ ಬೆಂಡಾಗಿರುವ ಮರಗಳಿಗೆ ರೋಗ, ಕೀಟ ಅಂಟಿ ಕೊಳ್ಳುತ್ತಿರುವುದು ರೈತರಿಗೆ ತಲೆನೋವಾಗಿದೆ. ಒಂದೊಂದು ತೋಟದಲ್ಲಿ ಕನಿಷ್ಠ 5-6 ಮರಗಳು ರೋಗಕ್ಕೆ ಬಲಿಯಾಗುತ್ತಿವೆ. ರಾಜ್ಯದಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ.

ಆದರೆ ಇತ್ತೀಚೆಗೆ ತೆಂಗುಬೆಳೆ ಪ್ರದೇಶ ಭಾರೀ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಂದಾಜು ಪ್ರಕಾರ, ರಾಜ್ಯದಲ್ಲಿ 6,93,514 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ತೆಂಗು ಪ್ರದೇಶ 2023-24ನೇ ವರ್ಷದಲ್ಲಿ 5,76,249 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಕರ್ನಾಟಕ ಅಷ್ಟೇ ಅಲ್ಲದೇ, ತೆಂಗು ಬೆಳೆಯುವ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಬೆಳೆ ಪ್ರದೇಶ ಕಡಿಮೆ ಆಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 11,114 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಿತ್ತು. 2023-24ನೇ ಸಾಲಿಗೆ 6134 ಹೆಕ್ಟೇರ್‌ಗೆ ಕುಸಿದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 63,087 ಹೆಕ್ಟೇರ್‌ನಿಂದ 60,874 ಹೇಕ್ಟೇರ್ ಗಳಿಗೆ ಇಳಿದಿದೆ.