Honeymoon Murder case: ಹನಿಮೂನ್ ಮರ್ಡರ್ ಕೇಸ್ನಲ್ಲಿ ಕೇಳಿ ಬಂತು ಮತ್ತೊಂದು ಹೆಸರು; ಯಾರು ಈ ಜಿತೇಂದ್ರ ರಘುವಂಶಿ?
ಪತ್ನಿಯೊಂದಿಗೆ ಹನಿಮೂನ್ ಗೆ ಮೇಘಾಲಯಕ್ಕೆ ತೆರಳಿ ಕೊಲೆಯಾದ (Honeymoon Murder case) ರಾಜಾ ರಘುವಂಶಿ ಪ್ರಕರಣದಲ್ಲಿ ಆತನ ಪತ್ನಿಯೇ ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದಾಳೆ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೆಸರೊಂದು ಬೆಳಕಿಗೆ ಬಂದಿದೆ. ಸೋನಮ್ ಬಾಡಿಗೆ ಹಂತಕರಿಗೆ ಹಣ ಪಾವತಿಸಲು ಜಿತೇಂದ್ರ ರಘುವಂಶಿ ಹೆಸರಿನಲ್ಲಿದ್ದ ಯುಪಿಐ ಖಾತೆಯನ್ನು ಬಳಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.


ಇಂದೋರ್: ಮೇಘಾಲಯದಲ್ಲಿ (Meghalaya) ನಡೆದ ರಾಜಾ ರಘುವಂಶಿ (Raja Raghuvanshi murder case) ಹತ್ಯೆ ಪ್ರಕರಣದಲ್ಲಿ (Honeymoon Murder case ) ಈಗ ಹೊಸ ಹೆಸರೊಂದು ಬೆಳಕಿಗೆ ಬಂದಿದೆ. ಇದು ಈಗ ಇನ್ನೊಂದು ದಿಕ್ಕಿನಲ್ಲೂ ತನಿಖೆ ನಡೆಸಲು ಪೊಲೀಸರನ್ನು ಪ್ರೇರೇಪಿಸಿದೆ. ರಾಜಾ ರಘುವಂಶಿ ಹತ್ಯೆಗೆ ಸಂಬಂಧಿಸಿ ಸೋನಮ್ (sonam) ನಡೆಸಿರುವ ಹಣಕಾಸಿನ ವ್ಯವಹಾರಗಳು ಜಿತೇಂದ್ರ ರಘುವಂಶಿ ಹೆಸರಿನಲ್ಲಿದೆ. ಜಿತೇಂದ್ರ ತಮ್ಮ ಸೋದರ ಸಂಬಂಧಿ ಎಂದು ಸೋನಮ್ ಅವರ ಸಹೋದರ ಗೋವಿಂದ್ ಹೇಳಿದ್ದಾರೆ. ಜಿತೇಂದ್ರ ರಘುವಂಶಿ ಹೆಸರಿನಲ್ಲಿದ್ದ ಯುಪಿಐ ಖಾತೆಯನ್ನು ಬಳಸಿ ಸೋನಮ್ ಹಣಕಾಸಿನ ವ್ಯವಹಾರವನ್ನು ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪತ್ನಿಯೊಂದಿಗೆ ಹನಿಮೂನ್ಗೆಂದು ಮೇಘಾಲಯಕ್ಕೆ ತೆರಳಿ ಕೊಲೆಯಾದ ರಾಜಾ ರಘುವಂಶಿ ಪ್ರಕರಣದಲ್ಲಿ ಆತನ ಪತ್ನಿಯೇ ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದಾಳೆ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೆಸರೊಂದು ಬೆಳಕಿಗೆ ಬಂದಿದೆ. ಸೋನಮ್ ಸುಪಾರಿ ಕಿಲ್ಲರ್ಸ್ಗೆ ಹಣ ಪಾವತಿಸಲು ಜಿತೇಂದ್ರ ರಘುವಂಶಿ ಹೆಸರಿನಲ್ಲಿದ್ದ ಯುಪಿಐ ಖಾತೆಯನ್ನು ಬಳಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಸೋನಮ್ ಸಹೋದರಿ ಗೋವಿಂದ್ ಈ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು, ಜಿತೇಂದ್ರ ತಮ್ಮ ಸೋದರಸಂಬಂಧಿಯಾಗಿದ್ದಾರೆ ಎಂದು ಹೇಳಿದ್ದಾರೆ. ಜಿತೇಂದ್ರ ಹೆಸರಿನಲ್ಲಿ ಸೋನಮ್ ಯುಪಿಐ ಖಾತೆಯನ್ನು ತೆರೆದು ವಹಿವಾಟು ನಡೆಸಿದ್ದು, ಇದರ ಹಿಂದಿನ ಕಾರಣವನ್ನು ಆಕೆ ಹೇಳಿಲ್ಲ. ಇದು ಈಗ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ. ಇದರಿಂದ ಸೋನಮ್ ಕುಟುಂಬದ ವ್ಯವಹಾರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಾಜಾ ರಘುವಂಶಿಯ ಬಾಡಿಗೆ ಹಂತಕರಿಗೆ ಹಣ ಪಾವತಿಸಲು ಸೋನಮ್ ಮೇ 23ರಂದು ಜಿತೇಂದ್ರ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡಿದ್ದಾಳೆ.
ಇದನ್ನೂ ಓದಿ: Honeymoon Murder case: ರಾಜಾ ರಘುವಂಶಿ ಹತ್ಯೆ- ಪೊಲೀಸರಿಗೆ ಸುಳಿವು ಕೊಟ್ಟಿದ್ದು ಮಂಗಳಸೂತ್ರ
ಇದು ಈಗ ಹವಾಲಾ ವಹಿವಾಟು ಮತ್ತು ಕುಟುಂಬದ ವ್ಯವಹಾರಗಳ ನಡುವೆ ಸಂಬಂಧ ಕಲ್ಪಿಸುವಂತೆ ಮಾಡಿದೆ. ಆದರೆ ಇದನ್ನು ಗೋವಿಂದ್ ನಿರಾಕರಿಸಿದ್ದಾರೆ. ಕುಟುಂಬ ಉದ್ಯಮ ವ್ಯವಹಾರದಲ್ಲಿ ಜಿತೇಂದ್ರ ಕೇವಲ ಕಿರಿಯ ಉದ್ಯೋಗಿಯಾಗಿದ್ದಾನೆ. ಆತನ ಖಾತೆಯಲ್ಲಿ ಕುಟುಂಬದ ಹಣವಿದ್ದು, ಅದನ್ನು ನಿಯಮಿತ ವ್ಯವಹಾರ ವಹಿವಾಟುಗಳಿಗೆ ಬಳಸಲಾಗುತ್ತಿದೆ ಎಂದು ಗೋವಿಂದ್ ತಿಳಿಸಿದ್ದಾರೆ.
ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೇಘಾಲಯ ಪೊಲೀಸರು ಈವರೆಗೆ ಐದು ಜನರನ್ನು ಬಂಧಿಸಿದ್ದಾರೆ. ಸೋನಮ್, ಆಕೆಯ ಪ್ರಿಯಕರ ರಾಜ್ ಕುಶ್ವಾಹ, ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ. ಇವರನ್ನು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.