ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wrong India Map: ತಪ್ಪಾದ ಭಾರತದ ನಕ್ಷೆ ಪೋಸ್ಟ್‌ ಮಾಡಿ ಸೋ ಸಾರಿ.. ಎಂದ ಇಸ್ರೇಲ್‌! ನೆಟ್ಟಿಗರಿಂದ ಆಕ್ರೋಶ

ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿರುವ ನಕ್ಷೆಯನ್ನು ಇಸ್ರೇಲ್‌ ಸೇನೆ(Israeli Military) ಪೋಸ್ಟ್‌ ಮಾಡಿತ್ತು. ಎಕ್ಸ್‌ನಲ್ಲಿ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಭಾರತೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ರಕ್ಷಣಾ ಪಡೆ(IDF) ಭಾರತದ ಕ್ಷಮೆಯಾಚಿಸಿದೆ.

ಭಾರತಕ್ಕೆ So sorry ಅಂತಾ ಇಸ್ರೇಲ್‌ ಅಂದಿದ್ದೇಕೆ?

Profile Rakshita Karkera Jun 14, 2025 10:42 AM

ಟೆಲ್‌ಅವಿವ್‌: ಭಾರತ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿದ ಇಸ್ರೇಲ್‌ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸಿರುವ ನಕ್ಷೆಯನ್ನು ಇಸ್ರೇಲ್‌ ಸೇನೆ(Israeli Military) ಪೋಸ್ಟ್‌ ಮಾಡಿತ್ತು. ಎಕ್ಸ್‌ನಲ್ಲಿ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಭಾರತೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್‌ ರಕ್ಷಣಾ ಪಡೆ(IDF) ಭಾರತದ ಕ್ಷಮೆಯಾಚಿಸಿದೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಐಡಿಎಫ್ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿತು.

ಭಾರತೀಯ ಬಳಕೆದಾರರು ಮಾಡಿದ ಟ್ವೀಟ್‌ಗಳನ್ನು ಅನುಸರಿಸಿ ಐಡಿಎಫ್‌ನ ಪೋಸ್ಟ್ ಬಂದಿತು, ಹಲವರು ತೀವ್ರವಾಗಿ ಕೋಪಗೊಂಡು, ದೋಷವನ್ನು ಎತ್ತಿ ತೋರಿಸಿ ಇಸ್ರೇಲಿ ಮಿಲಿಟರಿ ಪೋಸ್ಟ್ ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕೆಲವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಟ್ಯಾಗ್ ಮಾಡಿದ್ದಾರೆ. ಇಂಡಿಯನ್ ರೈಟ್ ವಿಂಗ್ ಕಮ್ಯುನಿಟಿ ಎಂಬ ಎಕ್ಸ್ ಹ್ಯಾಂಡಲ್‌ನ ಅಂತಹ ಒಂದು ಟ್ವೀಟ್‌ಗೆ ನೇರವಾಗಿ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆಗಳು, "ಈ ಪೋಸ್ಟ್ ಪ್ರದೇಶದ ಚಿತ್ರಣವಾಗಿದೆ. ಈ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ. ಈ ಅಚಾತುರ್ಯಕ್ಕೆ ನಾವು ಕ್ಷಮೆಯಾಚಿಸುತ್ತೇವೆ" ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಾನು ಪೋಸ್ಟ್‌ ಮಾಡಿದ ಸುಮಾರು 90 ನಿಮಿಷಗಳ ನಂತರ ಇಸ್ರೇಲ್‌ ಸೇನೆ ಈ ಸ್ಪಷ್ಟನೆ ನೀಡಿದೆ.



ಇಸ್ರೇಲ್‌ನ ಪೋಸ್ಟ್‌ ಅನ್ನು ನೋಡಿರುವ ನೆಟ್ಟಿಗರೊಬ್ಬರು, "ಭಾರತ ಏಕೆ ತಟಸ್ಥವಾಗಿದೆ ಎಂದು ಈಗ ನಮಗೆ ಅರ್ಥವಾಗಿದೆ. ರಾಜತಾಂತ್ರಿಕತೆಯಲ್ಲಿ, ಯಾರೂ ನಿಜವಾಗಿಯೂ ನಿಮ್ಮ ಸ್ನೇಹಿತರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಭಾರತದ ಪ್ರತಿಕ್ರಿಯೆ ಏನು?

ಇನ್ನು ಐಡಿಎಫ್‌ನ ತಪ್ಪು ನಕ್ಷೆಗೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ದಶಕಗಳಿಂದ ಪಾಕಿಸ್ತಾನ ಮತ್ತು ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳು ದೇಶದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಇರುತ್ತದೆ ಎಂದು ಭಾರತ ಸದಾ ಸ್ಪಷ್ಟನೆ ನೀಡುತ್ತಲೇ ಇರುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಪುನರುಚ್ಛರಿಸಿದ್ದರು.

ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಇಸ್ರೇಲ್ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿವೆ; ವಾಸ್ತವವಾಗಿ, 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರು ಹೌದು. ಇಸ್ರೇಲ್‌ ಭಾರತದಲ್ಲಿ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಮತ್ತು ಮಿಲಿಟರಿ ಉಪಕರಣಗಳ ಮಾರಾಟಕ್ಕಾಗಿ ಭಾರತ ಇಸ್ರೇಲ್‌ನ ಅತಿದೊಡ್ಡ ಕ್ಲೈಂಟ್‌ಗಳಲ್ಲಿ ಒಂದಾಗಿದೆ. ಹೀಗಿರುವಾಗ ಇಸ್ರೇಲ್‌ನ ಈ ರೀತಿ ಭಾರತದ ನಕ್ಷೆಯ ಬಗ್ಗೆ ಬೇಜವಾಬ್ದಾರಿಯುತ ನಡೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.