Benjamin Netanyahu: ಇರಾನ್ ಜೊತೆಗಿನ ಯುದ್ಧಕ್ಕಾಗಿ ಮಗನ ಮದ್ವೆ ನಿಲ್ಲಿಸಿದ್ರಾ ನೆತಾನ್ಯಾಹು?
Israeli Prime Minister Benjamin Netanyahu: ಬೀರ್ ಶೆವಾದಲ್ಲಿನ ಕ್ಷಿಪಣಿಯಿಂದ ಹಾನಿಗೊಳಗಾದ ಸೊರೊಕಾ ಆಸ್ಪತ್ರೆಯ ಮುಂದೆ ಗಂಭೀರವಾಗಿ ಮಾತನಾಡಿದ ನೆತನ್ಯಾಹು, ಇಸ್ರೇಲ್ನ ಪ್ರಸ್ತುತ ಬಿಕ್ಕಟ್ಟನ್ನು ಎರಡನೇ ಮಹಾಯುದ್ಧದ ಬಾಂಬ್ ದಾಳಿಗೆ ಹೋಲಿಸಿದರು. ಇದೇ ವೇಳೆ ಅವರು ಯುದ್ಧಕ್ಕಾಗಿ ತಮ್ಮ ಪರಿವಾರ ಎಂತಹ ʻತ್ಯಾಗʼ ಮಾಡುತ್ತಿದೆ ಎಂಬುದನ್ನು ಜನರೆದುರು ಬಿಚ್ಚಡಲು ಮುಂದಾದರು.


ಟೆಲ್ ಅವಿವ್: ಇರಾನ್ ಜೊತೆ ನಡೆತ್ತಿರುವ ಯುದ್ಧದ ಬಗ್ಗೆ ಪ್ರಧಾನಿ ಬೆಂಜಮಿನ್ ನೆತಾನ್ಯಾಹು(Benjamin Netanyahu) ಅಚ್ಚರಿಯ ಹೇಳಿಕೆಯೊಂದನ್ನು ನೀಡುವ ಮೂಲಕ ಇಸ್ರೇಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇರಾನ್ ಜೊತೆಗಿನ ಯುದ್ಧದ ಕಾರಣದಿಂದಾಗಿ ತಮ್ಮ ಮಗನ ಮದುವೆ ವಿಳಂಬ ಆಗುತ್ತಿದೆ. ಯುದ್ಧದ ಪರಿಣಾಮ ವೈಯಕ್ತಿಕ ಬದುಕಿನ ಮೇಲೂ ಆಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈನ್ನು ನೆತಾನ್ಯಾಹು ಹೇಳಿಕೆಗೆ ಇಸ್ರೇಲಿಗರು ಫುಲ್ ಗರಂ ಆಗಿದ್ದಾರೆ.
ಬೀರ್ ಶೆವಾದಲ್ಲಿನ ಕ್ಷಿಪಣಿಯಿಂದ ಹಾನಿಗೊಳಗಾದ ಸೊರೊಕಾ ಆಸ್ಪತ್ರೆಯ ಮುಂದೆ ಗಂಭೀರವಾಗಿ ಮಾತನಾಡಿದ ನೆತನ್ಯಾಹು, ಇಸ್ರೇಲ್ನ ಪ್ರಸ್ತುತ ಬಿಕ್ಕಟ್ಟನ್ನು ಎರಡನೇ ಮಹಾಯುದ್ಧದ ಬಾಂಬ್ ದಾಳಿಗೆ ಹೋಲಿಸಿದರು. ಇದೇ ವೇಳೆ ಅವರು ಯುದ್ಧಕ್ಕಾಗಿ ತಮ್ಮ ಪರಿವಾರ ಎಂತಹ ʻತ್ಯಾಗʼ ಮಾಡುತ್ತಿದೆ ಎಂಬುದನ್ನು ಜನರೆದುರು ಬಿಚ್ಚಡಲು ಮುಂದಾದರು. ಭದ್ರತಾ ಕಾಳಜಿಯಿಂದಾಗಿ ಎರಡನೇ ಬಾರಿಗೆ ತಮ್ಮ ಮಗ ಅವ್ನರ್ ಅವರ ವಿವಾಹವನ್ನು ಮರು ನಿಗದಿಪಡಿಸಿದ್ದನ್ನು ಪ್ರಧಾನಿ ತಮ್ಮ ಕುಟುಂಬವು ಮಾಡಿದ ತ್ಯಾಗಗಳಿಗೆ ಉದಾಹರಣೆಯಾಗಿ ತೋರಿಸಿದರು. ಈ ನಿರ್ಧಾರದಿಂದ ಮಗ ಅವ್ನರ್ ಮತ್ತು ಪತ್ನಿ ಸಾರಾ ನೆತನ್ಯಾಹು ಅವರ ಮೇಲೆಯೂ ತೀವ್ರ ಪರಿಣಾಮ ಬೀರಿದೆ ಎಂದು ತಮ್ಮ ಕುಟುಂಬಸ್ಥರ ಗುಣಗಾನಕ್ಕಿಳಿದಿದ್ದರು.
ಯುದ್ಧದಲ್ಲಿ ತಮ್ಮ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವವರ ಜೊತೆ ನಾವಿದ್ದೇವೆ. ಈ ಯುದ್ಧದಿಂದ ಇಸ್ರೇಲ್ನ ಪ್ರತಿಯೊಬ್ಬ ಪ್ರಜೆಯ ಮೇಲೂ ವೈಯಕ್ತಿಕ ಪರಿಣಾಮ ಬೀರಿದೆ. ಅದಕ್ಕೆ ನಾನೇನು ಹೊರತಾಗಿಲ್ಲ ಎಂದಿದ್ದಾರೆ. ಇರಾನ್ನ ಕ್ಷಿಪಣಿ ಸೊರೊಕಾ ಆಸ್ಪತ್ರೆ ಮೇಲೆ ಬಿದ್ದು ಅಪಾರ ಸಾವು-ನೋವು ಸಂಭವಿಸಿದೆ. ಈ ಪ್ರದೇಶಕ್ಕೆ ಭೇಟಿ ಕೊಟ್ಟ ನೆತಾನ್ಯಾಹು ಪರಿಶೀಲನೆ ನಡೆಸಿದ್ದಾರೆ. ಸಂಘರ್ಷದಲ್ಲಿ ಇಲ್ಲಿಯವರೆಗೆ ತನ್ನ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳುತ್ತದೆ. ಇಸ್ರೇಲ್ನ ಅನಿರೀಕ್ಷಿತ ವೈಮಾನಿಕ ದಾಳಿಯ ನಂತರ ಇರಾನಿನ ನಾಗರಿಕರ ಸಾವಿನ ಸಂಖ್ಯೆ ಕನಿಷ್ಠ 263 ಎಂದು ಅಮೆರಿಕದಲ್ಲಿನ ಮಾನವ ಹಕ್ಕುಗಳ ಗುಂಪುಗಳು ಅಂದಾಜಿಸಿವೆ.
ಈ ಸುದ್ದಿಯನ್ನೂ ಓದಿ: Mossad: ಇರಾನ್ ವಿರುದ್ಧದ ಇಸ್ರೇಲ್ ದಾಳಿಯಲ್ಲಿ ಮೊಸಾದ್ ನೆರವಾಗಿದ್ದು ಹೇಗೆ? ಇಲ್ಲಿದೆ ರೋಚಕ ಡಿಟೇಲ್ಸ್
ಇನ್ನು ನೆತಾನ್ಯಾಹು ಭಾಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಆಕ್ರೋಶ ಹೊರಹಾಕಿದ್ದಾರೆ. ನೆತಾನ್ಯಾಹು ವಾಸ್ತಾವಿಕ ಸಮಸ್ಯೆಯನ್ನು ಭಾವನಾತ್ಮಕವಾಗಿ ಮಾರ್ಪಾಟು ಮಾಡುತ್ತಿದ್ದಾರೆ. ಜನರ ದುಃಖಕ್ಕಿಂತ ತನ್ನದೇ ಆದ ಇಮೇಜ್ಗೆ ಆದ್ಯತೆ ನೀಡಿದ್ದಾರೆ. ಪ್ರಧಾನಿಗೆ ತಮ್ಮ ಮಗನ ಮದುವೆಯದ್ದೇ ಚಿಂತೆಯಾಗಿದೆ. ಅದೆಷ್ಟೋ ತಾಯಂದಿರ ಮಕ್ಕಳು ಯುದ್ಧದಲ್ಲಿ ಮಡಿದಿದ್ದಾರೆ. ಇನ್ನು ಕೆಲವರು ಒತ್ತೆಯಾಳುಗಳಾಗಿ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ನೆತಾನ್ಯಾಹು ಈ ಹೇಳಿಕೆ ನಿಜಕ್ಕೂ ನಾಚಿಗೇಡಿನ ಸಂಗತಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.