Israel Attack: ಇಸ್ರೇಲ್ ದಾಳಿ ಬೆನ್ನಲ್ಲೇ ಇರಾನ್ ವಾಯುಪ್ರದೇಶ ಕ್ಲೋಸ್; ಏರ್ ಇಂಡಿಯಾ ವಿಮಾನಗಳ ಮಾರ್ಗ ಬದಲಾವಣೆ
ಇರಾನ್ (Iran) ಮೇಲೆ ಇಸ್ರೇಲ್ ಶುಕ್ರವಾರ ಭೀಕರ ದಾಳಿ ನಡೆಸಿದೆ. (Israel Attack) ಇರಾನ್ ರಾಜಧಾನಿ ಟೆಹ್ರಾನ್ ಹಾಗೂ ಪರಮಾಣು ನೆಲೆಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗಿದೆ. ಈ ಮೂಲಕ ಬದ್ದ ವೈರಿ ದೇಶಗಳ ನಡುವೆ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದೆ. ಇರಾನ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.


ಟೆಹ್ರಾನ್: ಇರಾನ್ (Iran) ಮೇಲೆ ಇಸ್ರೇಲ್ ಶುಕ್ರವಾರ ಭೀಕರ ದಾಳಿ ನಡೆಸಿದೆ. (Israel Attack) ಇರಾನ್ ರಾಜಧಾನಿ ಟೆಹ್ರಾನ್ ಹಾಗೂ ಪರಮಾಣು ನೆಲೆಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗಿದೆ. ಈ ಮೂಲಕ ಬದ್ದ ವೈರಿ ದೇಶಗಳ ನಡುವೆ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದೆ. ಇರಾನ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಶುಕ್ರವಾರ ಬೆಳಗ್ಗೆ ಇಸ್ರೇಲ್, ಇರಾಕ್ ಹಾಗೂ ಇರಾನ್ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಫ್ಲೈಟ್ರಾಡಾರ್24 ನೀಡಿರುವ ಮಾಹಿತಿ ಪ್ರಕಾರ, ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಈ ಹಿಂದೆ ವಿಮಾನಗಳ ಮಾರ್ಗ ಬದಲಾಯಿಸಿದೆ ಮತ್ತು ರದ್ದುಗೊಳಿಸಿದೆ.
ಇಸ್ರೇಲ್ನ ಟೆಲ್ ಅವಿವ್ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸೇನಾ ಮುನ್ನೆಚ್ಚರಿಕೆಯ ಭಾಗವಾಗಿ ಇಸ್ರೇಲ್ ವಾಯುಸೇನೆ ಎಚ್ಚೆತುಕೊಂಡಿದೆ. ಇಸ್ರೇಲ್ನ ಪ್ರಧಾನ ವಿಮಾನಯಾನ ಸಂಸ್ಥೆ ಎಲ್ ಅಲ್ ತನ್ನ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಇದರ ಮಧ್ಯೆ, ಇರಾನ್ ತನ್ನ ವಿಮಾನಮಾರ್ಗವನ್ನು ಮುಂದಿನ ಸೂಚನೆಗಳವರೆಗೆ ಸ್ಥಗಿತಗೊಳಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಏರ್ ಇಂಡಿಯಾ ಮಾರ್ಗ ಬದಲಾವಣೆ
ಹೆಚ್ಚುತ್ತಿರುವ ಉದ್ವಿಗ್ನತೆಯಲ್ಲಿ ಏರ್ ಇಂಡಿಯಾ 15ಕ್ಕೂ ಹೆಚ್ಚು ವಿಮಾನಗಳನ್ನು ಮಾರ್ಗ ಬದಲಾಯಿಸಿರುವುದಾಗಿ ಪ್ರಕಟಿಸಿದ್ದು, ಇರಾನ್ ವಿಮಾನ ಮಾರ್ಗ ಮುಚ್ಚಿರುವುದರಿಂದ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇದರಲ್ಲಿ ಮುಖ್ಯವಾಗಿ
I130 – ಲಂಡನ್ ಹೀತ್ರೋ-ಮುಂಬೈ – ವಿಯೆನ್ನಾಗೆ ಮಾರ್ಗ ಬದಲಾವಣೆ
AI102 – ನ್ಯೂಯಾರ್ಕ್-ದೆಹಲಿ – ಶಾರ್ಜಾಗೆ ಮಾರ್ಗ ಬದಲಾವಣೆ
AI116 – ನ್ಯೂಯಾರ್ಕ್-ಮುಂಬೈ – ಜೆದ್ದಾಗೆ ಮಾರ್ಗ ಬದಲಾವಣೆ
AI2018 – ಲಂಡನ್ ಹೀತ್ರೋ-ದೆಹಲಿ – ಮುಂಬೈಗೆ ಬದಲಾವಣೆ
AI129 – ಮುಂಬೈ-ಲಂಡನ್ ಹೀತ್ರೋ – ಮುಂಬೈಗೆ ಹಿಂತಿರುಗಿತು, ಇವುಗಳನ್ನು ಸೇರಿ ಹಲವು ವಿಮಾನಗಳ ಸಂಚಾರ ಮಾರ್ಗ ಬದಲಾವಣೆಯಾಗಿದೆ.
ಇರಾನಿನ ಸೇನಾ ನೆಲೆಗಳು ಪರಮಾಣು ಶಸ್ತ್ರಾಗಾರಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ (Israeli Jets attack) ನಡೆಸಿದೆ. ಇದರಿಂದ ಟೆಹ್ರಾನ್ನಲ್ಲಿ ಭಾರಿ ಸ್ಫೋಟಗಳು ಉಂಟಾಗಿವೆ. ರಾಜ್ಯಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇಸ್ರೇಲ್ ಶುಕ್ರವಾರ ಇರಾನ್ನ ಪರಮಾಣು ಶಸ್ತ್ರಸ್ತಗಾರರನ್ನು ಮುಖ್ಯ ಗುರಿಯಾಗಿಸಿಕೊಂಡು ಹಠಾತ್ ಬಾಂಬ್ ದಾಳಿ ನಡೆಸಿದೆ. ಇರಾನ್ನ ಅಣುಸಂಸ್ಥೆಗಳು, ಕ್ಷಿಪಣಿ ಕಾರ್ಖಾನೆಗಳು ಮತ್ತು ಸೈನಿಕ ಮುಖ್ಯಸ್ಥರ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ಮೂಲಕ ತೆಹ್ರಾನ್ ಅಣ್ವಸ್ತ್ರ ನಿರ್ಮಿಸಲು ಮುಂದಾಗಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ. ಟೆಹ್ರಾನ್ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುವುದನ್ನು ತಡೆಯವ ಸಲುವಾಗಿ ಇಸ್ರೇಲ್ ಶುಕ್ರವಾರ ಇರಾನಿನ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿದೆ.
ಭಾರತೀಯರಿಗೆ ಎಚ್ಚರಿಕೆ ನೀಡಿದ ಕೇಂದ್ರ
ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ, ಭಾರತವು ಇರಾನ್ ಮತ್ತು ಇಸ್ರೇಲ್ನಲ್ಲಿರುವ ತನ್ನ ಸಾವಿರಾರು ನಾಗರಿಕರಿಗೆ ಎಚ್ಚರಿಕೆ ವಹಿಸಿ, ಸುರಕ್ಷತೆ ಕಾಪಾಡಿಕೊಳ್ಳಿ ಎಂದು ಎಚ್ಚರಿಕೆಯ ಕರೆ ನೀಡಿದೆ. ಈ ಕುರಿತು ವಿದೇಶಾಂಗ ಇಲಾಖೆ ಅಧಿಕೃತವಾಗಿ ಸೂಚನೆ ಬಿಡುಗಡೆ ಮಾಡಿದೆ.