ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಸ್ ಸ್ಪೋಕ್ ಇಂಡಿಯಾ ಇಂಕ್ 2025' ವರದಿ ಬಿಡುಗಡೆ ಮಾಡಿದ ಗಿವ್ ಗ್ರ್ಯಾಂಟ್ಸ್‌

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ʼಸಿಎಸ್‌ಆರ್” ಪ್ರಮುಖರು ಒಟ್ಟಾಗಿ ವಾರ್ಷಿಕವಾಗಿ ₹ 6,800 ಕೋಟಿಗೂ ಹೆಚ್ಚಿನ ಮೊತ್ತದ ʼಸಿಎಸ್‌ಆರ್‌ʼ ನಿಧಿಗಳನ್ನು ನಿರ್ವಹಿಸುತ್ತಾರೆ. ಈ ʼಸಿಎಸ್‌ಆರ್‌ʼ ನಿರ್ವಹಿಸುವವರ ಒಳ ನೋಟಗಳನ್ನು ಸೂಕ್ಷ್ಮ ದತ್ತಾಂಶದೊಂದಿಗೆ ಸಂಯೋಜಿಸುವ ಮೂಲಕ, ʼದಸ್ ಸ್ಪೋಕ್ ಇಂಡಿಯಾ ಇಂಕ್ 2025ʼ ವರದಿಯು ʼ ಸಿಎಸ್‌ಆರ್ʼ ಪಾಲಿಸಬೇಕಾದ ನಿಯಮ ದಿಂದ ವ್ಯವಸ್ಥಿತ ಬದಲಾವಣೆ ಕಂಡಿದೆ

ಗಿವ್ ಗ್ರ್ಯಾಂಟ್ಸ್‌ ನಿಂದ ದಸ್ ಸ್ಪೋಕ್ ಇಂಡಿಯಾ ಇಂಕ್ 2025' ವರದಿ ಬಿಡುಗಡೆ

Profile Ashok Nayak Jun 27, 2025 6:38 PM

ಬೆಂಗಳೂರು: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್) ಸದ್ಯದ ಪರಿಸ್ಥಿತಿ ವಿವರಿಸುವ ಮತ್ತು ಭವಿಷ್ಯದ ಮಾರ್ಗಸೂಚಿ ನೀಡುವ 'ದಸ್ ಸ್ಪೋಕ್ ಇಂಡಿಯಾ ಇಂಕ್ 2025' ವರದಿಯನ್ನು ಗಿವ್‌ ಗ್ರ್ಯಾಂಟ್ಸ್‌ ಇಂದು ಇಲ್ಲಿ ಬಿಡುಗಡೆ ಮಾಡಿದೆ.

ಈ ವರದಿಯು 47 ʼಸಿಎಸ್‌ಆರ್ʼ ಪ್ರಮುಖರು ಮತ್ತು 78 ಲಾಭರಹಿತ ಸಂಸ್ಥೆಗಳ ಮುಖ್ಯಸ್ಥರ ದೃಷ್ಟಿಕೋನಗಳನ್ನು ಒಳಗೊಂಡಿದೆ. ಜೊತೆಗೆ ಭಾರತದ ಮುಂಚೂಣಿ 200 ಕಂಪನಿಗಳ ʼಸಿಎಸ್‌ ಆರ್ʼ ದತ್ತಾಂಶಗಳ ವಿವರವಾದ ವಿಶ್ಲೇಷಣೆಯನ್ನೂ ಮಾಡಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ʼಸಿಎಸ್‌ಆರ್” ಪ್ರಮುಖರು ಒಟ್ಟಾಗಿ ವಾರ್ಷಿಕವಾಗಿ ₹ 6,800 ಕೋಟಿಗೂ ಹೆಚ್ಚಿನ ಮೊತ್ತದ ʼಸಿಎಸ್‌ಆರ್‌ʼ ನಿಧಿಗಳನ್ನು ನಿರ್ವಹಿಸುತ್ತಾರೆ. ಈ ʼಸಿಎಸ್‌ಆರ್‌ʼ ನಿರ್ವಹಿಸುವವರ ಒಳನೋಟಗಳನ್ನು ಸೂಕ್ಷ್ಮ ದತ್ತಾಂಶದೊಂದಿಗೆ ಸಂಯೋಜಿಸುವ ಮೂಲಕ, ʼದಸ್ ಸ್ಪೋಕ್ ಇಂಡಿಯಾ ಇಂಕ್ 2025ʼ ವರದಿಯು ʼ ಸಿಎಸ್‌ಆರ್ʼ ಪಾಲಿಸಬೇಕಾದ ನಿಯಮ ದಿಂದ ವ್ಯವಸ್ಥಿತ ಬದಲಾವಣೆ ಕಂಡಿದೆ. ʼಸಿಎಸ್‌ಆರ್‌ʼನ ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದನ್ನು ವರದಿಯಲ್ಲಿ ಪರಾಮರ್ಶಿಸಲಾಗಿದೆ.

ಇದನ್ನೂ ಓದಿ: Bengaluru Stampede: ಚಿನ್ನಸ್ವಾಮಿ ಕಾಲ್ತುಳಿತ ಕುರಿತು ಕೇಂದ್ರಕ್ಕೆ ರಾಜ್ಯ ವರದಿ; ʼಇದೇ ಕಾರಣʼ ಎಂದ ಸರಕಾರ

ವರದಿಯ ಮುಖ್ಯಾಂಶಗಳು:

ಮುಂಬರುವ ದಶಕದಲ್ಲಿ ಭಾರತದ ಅಭಿವೃದ್ಧಿಯ ಅಗತ್ಯಗಳಿಗೆ ₹ 1.2 ಲಕ್ಷ ಕೋಟಿ ಮೊತ್ತದ ಖಾಸಗಿ ಹಣಕಾಸು ನೆರವಿನ ಅತಿದೊಡ್ಡ ಸ್ಥಿರವಾದ ಮೂಲ ಇದಾಗಿದೆ.

ದೇಶದಾದ್ಯಂತ ಕೈಗಾರಿಕಾ ಬೆಳವಣಿಗೆಯು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುವುದರಿಂದ ಭೌಗೋಳಿಕ ಅಸಮಾನತೆ ಮುಂದುವರೆಯಲಿದೆ. ಕೈಗಾರಿಕರಣಗೊಂಡ ಕೆಲವೇ ರಾಜ್ಯಗಳಲ್ಲಿಯೇ ಈ ಖಾಸಗಿ ಹಣಕಾಸು ನೆರವು ಕೇಂದ್ರೀಕೃತವಾಗಿರಲಿದೆ. ಕೈಗಾರಿಕೆಗಳ ಉಪಸ್ಥಿತಿ ಗಮನಾರ್ಹ ವಾಗಿರುವ ಮಹಾರಾಷ್ಟ್ರ (ಶೇಕಡ 15), ಕರ್ನಾಟಕ (ಶೇಕಡ 9), ಗುಜರಾತ್ (ಶೇ 8 ), ಮತ್ತು ದೆಹಲಿ (ಶೇಕಡ 5) ನಂತಹ ಗರಿಷ್ಠ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ರಾಜ್ಯಗಳು ʼಸಿಎಸ್‌ ಆರ್‌ʼ ನಿಧಿಯ ಅತಿದೊಡ್ಡ ಪಾಲನ್ನು ಪಡೆಯುತ್ತಿವೆ. ಈಶಾನ್ಯದ ಬಹುಪಾಲು ರಾಜ್ಯಗಳು, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಕಡಿಮೆ ಆದಾಯದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ʼಸಿಎಸ್‌ಆರ್‌ʼ ನೆರವು ದೊರೆಯುತ್ತಿದೆ.

ಎಲ್ಲ ರಾಜ್ಯಗಳಿಗೂ ಸಮಾನ ಪ್ರಮಾಣದಲ್ಲಿ ʼಸಿಎಸ್‌ಆರ್‌ʼ ನೆರವು ದೊರೆಯಬೇಕೆಂಬ ಸರ್ಕಾರದ ಒತ್ತಾಸೆಗಳು ಇದುವರೆಗೂ ಕಾರ್ಯಗತಗೊಂಡಿಲ್ಲ.

ʼಸಿಎಸ್‌ಆರ್‌ʼ ಹೂಡಿಕೆಗಳು ಪ್ರಮುಖ ಕ್ಷೇತ್ರಗಳಾದ ಶಿಕ್ಷಣ (ಶೇಕಡ 34 ), ಆರೋಗ್ಯ (ಶೇಕಡ 27 ), ಕೌಶಲ (ಶೇಕಡ 12 ), ಹವಾಮಾನ (ಶೇಕಡ 10 ), ಗ್ರಾಮೀಣ ಅಭಿವೃದ್ಧಿ (ಶೇಕಡ 8 ) ಮತ್ತು ಇತರ ವಲಯಗಳಲ್ಲಿ (ಶೇಕಡ 7 ) ಹೆಚ್ಚು ಕೇಂದ್ರೀಕೃತವಾಗಿವೆ.

ದೀರ್ಘಾವಧಿ ಬದಲಾವಣೆಗೆ ಶ್ರಮಿಸುತ್ತಿರುವ ವಿಶ್ವಾಸಾರ್ಹ ಸರ್ಕಾರಿಯೇತರ ಸ್ವಯಂ ಸೇವಾ ಸಂಘಗಳಿಗೆ (ಎನ್‌ಜಿಒ) ʼಸಿಎಸ್‌ಆರ್‌ʼ ನೆರವು ಹೆಚ್ಚಿನ ಪ್ರಮಾಣದಲ್ಲಿ ದೊರೆಯಬೇಕಾದ ಅಗತ್ಯ ಇರುವುದರ ಬಗ್ಗೆ ವರದಿಯು ಬೆಳಕು ಚೆಲ್ಲಿದೆ.

ಸಮಾನ ಗುರಿಗಳನ್ನು ಹೊಂದಿದ್ದರೂ, ಉದ್ದಿಮೆಗಳ ʼಸಿಎಸ್‌ಆರ್‌ʼ ಉಪಕ್ರಮಗಳು ಪರಸ್ಪರ ಸಂವ ಹನ, ಸಹಯೋಗದ ಕೊರತೆಯ ಕಾರಣಕ್ಕೆ ಅಸಮರ್ಪಕವಾಗಿ ಕಾರ್ಯಗತಗೊಳ್ಳುತ್ತಿವೆ.

ಭವಿಷ್ಯದ ʼಸಿಎಸ್‌ಆರ್‌ʼ ಉಪಕ್ರಮಗಳ ಸ್ವರೂಪ ರೂಪಿಸುವಲ್ಲಿ ಭಾರತದ ಮುಂಚೂಣಿ 200 ಕಂಪನಿಗಳು ಮಾಡುತ್ತಿರುವ ಶೇಕಡ 50ಕ್ಕಿಂತ ಹೆಚ್ಚಿನ ʼಸಿಎಸ್‌ಆರ್‌ʼ ವೆಚ್ಚಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಗಿವ್‌ ಗ್ರ್ಯಾಂಟ್ಸ್‌ನ ಸಿಇಒ ಸುಮಿತ್‌ ತಯಾಲ್‌ ಅವರು, ʼಭಾರತದಲ್ಲಿನ ಸಿಎಸ್‌ಆರ್‌ ಕಳೆದ ಒಂದು ದಶಕದಲ್ಲಿ ಗಮನಾರ್ಹವಾಗಿ ಬೆಳವಣಿಗೆ ದಾಖಲಿಸಿದೆ. ʼಸಿಎಸ್‌ಆರ್‌ʼನ ಮುಂದಿನ ಹಂತವು ದಿಟ್ಟ ಆಯ್ಕೆಗಳು ಇರಬೇಕು. ಹೆಚ್ಚಿನ ಅಗತ್ಯ ಇರುವೆಡೆಗೆ ಹಣಕಾಸು ನೆರವಿನ ದೊರೆಯಬೇಕು. ಗಮನಾರ್ಹ ಬದಲಾವಣೆಗೆ ಕಾರ್ಪೊರೇಟ್‌ಗಳು ಹೆಚ್ಚಿನ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯ ಇದೆʼ ಎಂದು ಹೇಳಿದ್ದಾರೆ.