ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನವಿಲುಗರಿಯಲ್ಲಿ ಮೂಡಿಬಂದ ಪುರಿ ಜಗನ್ನಾಥ ಸ್ವಾಮಿ; ಕಲಾವಿದೆಯ ಕೈಚಳಕಕ್ಕೆ ನೆಟ್ಟಿಗರು ಫುಲ್‌ ಫಿದಾ

ವಡೋದರಾ ಮೂಲದ ಕಲಾವಿದೆ ಗೌತಮಿ ಚೌಹಾಣ್ ನವಿಲುಗರಿಯ ಮೇಲೆ ಜಗನ್ನಾಥನ ಚಿತ್ರವನ್ನು ಬಿಡಿಸಿದ್ದಾಳೆ. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಈ ವಿಡಿಯೊ ಈಗಾಗಲೇ ಸಾವಿರಾರು ವ್ಯೂವ್ಸ್ ಗಳಿಸಿದೆ.

ನವಿಲುಗರಿಯಲ್ಲಿ ಮೂಡಿಬಂದ ಜಗನ್ನಾಥ; ನೆಟ್ಟಿಗರು ಫುಲ್‌ ಫಿದಾ!

Profile pavithra Jun 28, 2025 2:57 PM

ಭುವನೇಶ್ವರ: ಒಡಿಶಾದ ಪುರಿಯಲ್ಲಿ ಜಗನ್ನಾಥನ ರಥಯಾತ್ರೆ ಆಚರಣೆಗಳು ಬಹಳ ಅದ್ಧೂರಿಯಾಗಿ ನಡೆಯುತ್ತಿದೆ. ಹೀಗಿರುವಾಗ ವಡೋದರಾ ಮೂಲದ ಕಲಾವಿದೆ ಗೌತಮಿ ಚೌಹಾಣ್ ನವಿಲುಗರಿಯ ಮೇಲೆ ಜಗನ್ನಾಥನ ಚಿತ್ರವನ್ನು ಬಿಡಿಸಿದ್ದಾಳೆ. ಅದರ ವಿಡಿಯೊ ಈಗ ಸೋಶಿಯಲ್ ಮೀಡಿಯಾದ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ. ವಿಡಿಯೊದಲ್ಲಿ ಗೌತಮಿ ನವಿಲು ಗರಿಯನ್ನು ಹಿಡಿದುಕೊಂಡು ಕುಂಚದಿಂದ ಅದರ ಮೇಲೆ ಜಗನ್ನಾಥನ ಚಿತ್ರವನ್ನು ಬಿಡಿಸಿದ್ದಾಳೆ. ಈ ದೃಶ್ಯವು ಭಕ್ತಿಯಿಂದ ಕೂಡಿದ್ದು, ಇದನ್ನು ನೋಡಿ ನೆಟ್ಟಿಗರು ಕೂಡ ಫುಲ್‌ ಫಿದಾ ಆಗಿದ್ದಾರೆ.

ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದು, "ಜೈ ಜಗನ್ನಾಥ್" ಎಂಬ ಘೋಷಣೆಗಳನ್ನು ಬರೆದಿದ್ದಾರೆ ಮತ್ತು ಕಲಾವಿದೆಯ ಈ ಚಿತ್ರಕಲೆಯನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ರಥಯಾತ್ರೆ ಉತ್ಸವದ ಸಮಯದಲ್ಲಿ ಅವಳ ಈ ಚಿತ್ರಕಲೆ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದಿದ್ದು, ಈ ವಿಡಿಯೊ ಈಗಾಗಲೇ ಸಾವಿರಾರು ವ್ಯೂವ್ಸ್ ಗಳಿಸಿದೆ.

ವಿಡಿಯೊ ಇಲ್ಲಿದೆ ನೋಡಿ...

2025 ರಲ್ಲಿ, ಜಗನ್ನಾಥ ರಥಯಾತ್ರೆ ಜೂನ್ 27 ರಂದು (ಆಷಾಢ ಶುಕ್ಲ ದ್ವಿತೀಯ) ಪ್ರಾರಂಭವಾಗಿ ಜುಲೈ 5 ರಂದು (ದಶಮಿ ತಿಥಿ) ಮುಕ್ತಾಯಗೊಳ್ಳುತ್ತದೆ. ಈ ಉತ್ಸವವು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ರಥಯಾತ್ರೆಯ ಮಹತ್ವ:

ಪದ್ಮ ಪುರಾಣದ ಪ್ರಕಾರ, ದೇವಿ ಸುಭದ್ರಾ ಒಮ್ಮೆ ಪುರಿ ನಗರವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದಾಗ ಈ ಸಂಪ್ರದಾಯ ಶುರುವಾಯಿತು. ಆಕೆಯ ಆಸೆಯನ್ನು ಪೂರೈಸಲು, ಬಲಭದ್ರ ಮತ್ತು ಸುಭದ್ರರೊಂದಿಗೆ ಜಗನ್ನಾಥ ದೇವರು ರಥದಲ್ಲಿ ನಗರ ಪ್ರವಾಸ ಕೈಗೊಂಡು ತಮ್ಮ ತಾಯಿಯ ಚಿಕ್ಕಮ್ಮನ ಮನೆಯಲ್ಲಿ ತಂಗಿದರು. ಈಗ ಇದನ್ನು ಗುಂಡಿಚ ದೇವಾಲಯ ಎಂದು ಕರೆಯಲಾಗುತ್ತದೆ.

ರಥಯಾತ್ರೆಯು ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಅವಧಿಯಲ್ಲಿ ಜಗನ್ನಾಥ ಸ್ವಾಮಿಯ ಒಂದು ದರ್ಶನವು ಭಕ್ತರ ಎಲ್ಲಾ ಕಷ್ಟಗಳಿಂದ ಮುಕ್ತಿ ನೀಡುತ್ತದೆ ಮತ್ತು ಜೀವನದ ಕೊನೆಯಲ್ಲಿ ವಿಮೋಚನೆ (ಮೋಕ್ಷ) ನೀಡುತ್ತದೆ ಎಂದು ನಂಬಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಫಾದರ್ಸ್ ಡೇಯಂದು 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು ಉಡುಗೊರೆ ನೀಡಿದ ಅಪ್ಪ; ನೆಟ್ಟಿಗರು ಹೇಳಿದ್ದೇನು?

ಜಗನ್ನಾಥ ದೇವರು ಮತ್ತು ಅವರ ಅಣ್ಣ ಬಲಭದ್ರ ಮತ್ತು ತಂಗಿ ದೇವಿ ಸುಭದ್ರಾ ದೇವಿಯ ರಥಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಭಕ್ತರನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಲಭದ್ರನ ತಾಳಧ್ವಜ ರಥ ಎಳೆಯುವ ವೇಳೆ ವಿಳಂಬವಾಗಿತ್ತು. ಇದರಿಂದ ರಥಯಾತ್ರೆ ಮಾರ್ಗದ ತಿರುವಿನಲ್ಲಿ ಬಹಳಷ್ಟು ತೊಂದ್ರೆ ಉಂಟಾಗಿತ್ತು. ಈ ವೇಳೆ ರಥ ನಿಂತಿದ್ದರಿಂದ ರಥ ನಿಂತಿದ್ದರಿಂದ ಕಾಲ್ತುಳಿತ ಸಂಭವಿಸಿತು ಎಂದು ಹೇಳಲಾಗುತ್ತಿದೆ.