ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಎಮರ್ಜೆನ್ಸಿ ಬಳಿಕ ಪತ್ರಿಕೆ ಭಯಮುಕ್ತವಾಗಿದೆಯೇ ?

ವಿಶ್ವವಾಣಿಯ ಪತ್ರಿಕೆಯಲ್ಲಿ ಪ್ರಕಟವಾದ ತುರ್ತುಪರಿಸ್ಥಿತಿ 50 ವರ್ಷದ ವಿಶೇಷ ಲೇಖನಗಳು ಬಹಳಷ್ಟು ಮಾಹಿತಿ ನೀಡಿದವು. ಅದರಲ್ಲಿ ಬಹಳ ಕಾಡಿದ್ದು, ಪತ್ರಿಕಾ ಸ್ವಾತಂತ್ರ್ಯ? ಇದರ ಬಗ್ಗೆ ದು.ಗು ಲಕ್ಷ್ಮಣರವರ ಬರಹ ಇಷ್ಟವಾಯಿತು. ಆದರೆ ಎಮರ್ಜೆನ್ಸಿ ಯ ಬಳಿಕ ಪತ್ರಿಕಾ ಸ್ವಾತಂತ್ರ್ಯದ ಭಯಮುಕ್ತವಾಯಿತೇ? ಸ್ವತಂತ್ರವಾಗಿ ಪಕ್ಷಾತೀತವಾಗಿ ಸುದ್ದಿಗಳನ್ನು ಜನರ ಮುಂದೆ ತಲುಪಿಸುವ ಸ್ವಾತಂತ್ರ್ಯ ಪಡೆದಿದೆಯೇ ಎಂದು ಕೇಳಿದರೆ, ಉತ್ತರ ಇಲ್ಲ. ಇದೊಂದು ಆಲೋಚಿಸಬೇಕಾದ ಪ್ರಶ್ನೆಯೆಂದು ನನ್ನ ಅನಿಸಿಕೆ.

ಎಮರ್ಜೆನ್ಸಿ ಬಳಿಕ ಪತ್ರಿಕೆ ಭಯಮುಕ್ತವಾಗಿದೆಯೇ ?

Profile Ashok Nayak Jun 28, 2025 8:54 AM

ಪ್ರಸ್ತುತ

ಸುರೇಂದ್ರ ಪೈ, ಭಟ್ಕಳ

ದೇಶದಲ್ಲಿ ಎಮರ್ಜೆನ್ಸಿ ಜಾರಿಯಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತ ಕಂಡು ಕೇಳರಿಯದ 21 ತಿಂಗಳ ಕಾಲದ ಕರಾಳ ದಿನದ ಪ್ರತಿಯೊಂದು ಘಟನೆಗಳ ಬಗ್ಗೆ ಕನ್ನಡದ ಬಹುತೇಕ ಎಲ್ಲಾ ಪತ್ರಿಕೆಗಳು ಬೆಳಕು ಚೆಲ್ಲಿದವು. ಎಮರ್ಜೆನ್ಸಿ ಸಮಯದ ಸಂಕಷ್ಟಗಳ ಸಂಕೋಲೆ ಯಿಂದ ನಮ್ಮ ಪ್ರಜಾಪ್ರಭುತ್ವ ಹೇಗೆ ಪುನಃ ತನ್ನ ಚೇತರಿಸಿಕೊಂಡಿತು ಎಂಬುದರ ಸಮಗ್ರ ವಿವರವು ಜನತೆಗೆ ಮತ್ತೆ ನೆನಪಿಸಿಕೊಳ್ಳುವ ವೇದಿಕೆ ನಿರ್ಮಾಣವಾಯಿತು.

ಈ ಎಮರ್ಜೆನ್ಸಿ ಸಮಯದಲ್ಲಿ ದೇಶದ ಸಾಮಾನ್ಯ ನಾಗರಿಕರು ಏನೆ ಕಷ್ಟಗಳನ್ನು ಅನುಭವಿ ಸಬೇಕಾಯಿತು, ಅಂದಿನ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಸಂಭವಿಸಿದ ಸಾವು ನೋವು, ಜೈಲು ವಾಸದ ಕಥೆ, ಚಿತ್ರರಂಗ, ಗಾಯಕರಿಗೂ ತಟ್ಟಿದ ತುರ್ತುಪರಿಸ್ಥಿತಿಯ ಬಿಸಿ ಎಲ್ಲವೂ ಒಮ್ಮೆ ಕಣ್ ಮುಂದೆ ಸುಳಿದು ಹೋದವು. ಇವೆ ಪರಿಸ್ಥಿತಿಗಳು ಇಂದು ಸಮಾಜದಲ್ಲಿ ಸುಸ್ಥಿತಿಯಲ್ಲಿ ಇವೆ ಎಂಬ ನೆಮ್ಮದಿ ಒಂದು ಕಡೆ.

ಆದರೆ ಎಮರ್ಜೆನ್ಸಿಯ ಸಮಯದಲ್ಲಿ ಜಾರಿಯಾದ ಹತ್ತಾರು ನಿರ್ಬಂಧನೆಗಳಲ್ಲಿ ಬಹಳ ಕಾಡಿದ್ದು ಹಾಗೂ ಇಂದಿಗೂ ನಾವು ಒಮ್ಮೆ ತುಲನಾತ್ಮಕವಾಗಿ ಯೋಚಿಸಬೇಕಾದ ಒಂದು ಸಂಗತಿ ಮಾತ್ರ ಗಾಢವಾಗಿ ಮನದಲ್ಲಿ ಕುತ್ತು ಬಿಟ್ಟಿತು. ಅದುವೇ ‘ಪತ್ರಿಕಾ ಸ್ವಾತಂತ್ರ್ಯ’.

1975ರ ಜೂನ್ 25ರ ಬಳಿಕ ಜನಿಸಿದವರಿಗೆ ಎಮರ್ಜೆನ್ಸಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಅಕ್ಷರಶಃ ಬಂಧನದಲ್ಲಿತ್ತು ಎಂಬುದಷ್ಟೇ ತಿಳಿದ ಸಂಗತಿ. ಈ ವಿಷಯದ ಬಗ್ಗೆ ದು.ಗು.ಲಕ್ಷ್ಮಣರವರ ತುರ್ತು ಪರಿಸ್ಥಿತಿಯಲ್ಲಿ ಹೇಗಿತ್ತು ಪತ್ರಿಕಾ ಪ್ರಪಂಚ ಎಂಬ ಲೇಖನವು ಜನತೆಯ ಮುಂದೆ ಸ್ಪಷ್ಟ ಚಿತ್ರಣ ವನ್ನು ತೆರೆದಿಟ್ಟಿದೆ. ಅದನ್ನೊಮ್ಮೆ ಓದುವಾಗ ಬ್ರಿಟಿಷರ ಕಾಲ ನೆನಪಾಯಿತು.

ಇದನ್ನೂ ಓದಿ: Surendra Pai Column: ದುಬಾರಿ ಶಾಲಾ ಶಿಕ್ಷಣಕ್ಕೆ ಕಡಿವಾಣ ಬೇಕಲ್ಲವೇ?

ನಮ್ಮನ್ನು ಮೂನ್ನೂರು ವರ್ಷಕ್ಕೂ ಹೆಚ್ಚು ಕಾಲ ಆಳಿದ ಆಂಗ್ಲರು ಸಹ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹೇಗೆ ನಮ್ಮ ಒಗ್ಗಟ್ಟನ್ನು ಮುರಿಯಲು, ಸತ್ಯ ಜನರಿಗೆ ತಿಳಿಯದ ಹಾಗೇ ಮಾಡಲು, ದೇಶಭಕ್ತಿಯನ್ನು ತುಂಡರಿಸಲು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹೇರಿದ ನಿರ್ಬಂಧಕ್ಕೂ ಎಮರ್ಜೆನ್ಸಿ ಸಮಯದಲ್ಲಿ ಹೇರಲಾದ ನಿರ್ಬಂಧಕ್ಕೂ ಯಾವ ವ್ಯತ್ಯಾಸವು ಕಾಣಲಿಲ್ಲ.

ಅಂದು ಬ್ರಿಟಿಷ್ ಸ್ವಾಮ್ಯದ ದಬ್ಬಾಳಿಕೆ ಆದರೆ, ಎಮರ್ಜೆನ್ಸಿ ಸಮಯದಲ್ಲಿ ನಮ್ಮ ರಾಜಕೀಯ ಹಿತಾಸಕ್ತಿಯ ದಬ್ಬಾಳಿಕೆ ಒಂದೇ ಇದ್ದ ಏಕೈಕ ವ್ಯತ್ಯಾಸ ಎಂದೆನಿಸಿತು. ವಿಷಯ ಅಷ್ಟೇ, ಆಗಿದ್ದರೆ ಹೆಚ್ಚು ಬೇಸರವಿರಲಿಲ್ಲ. ಎಮರ್ಜೆನ್ಸಿಯ 21 ತಿಂಗಳ ಕಾಲದ ಕರಾಳ ಕಗ್ಗತ್ತಲಿನ ದಿನಗಳಲ್ಲಿ ಬಂಧಿ ಯಾಗಿದ್ದ ಪತ್ರಿಕಾ ಸ್ವಾತಂತ್ರ್ಯ ತದನಂತರದ ದಿನಗಳಲ್ಲಿ ಸ್ವತಂತ್ರವಾಗಿ ಉಸಿರಾಡುತ್ತಿದ್ದೇಯೆ ಎಂಬ ಪ್ರಶ್ನೆಯೊಂದು ಎದುರಾಯಿತು.

72 R

ಬಹುಶಃ ಈ ಪ್ರಶ್ನೆ ಬಹಳಷ್ಟು ಜನರಿಗೆ ಕಾಡಿದ್ದಿರಬಹುದು. ಈ ಪ್ರಶ್ನೆಗೆ ಬಹುಶಃ ಪ್ರತಿಕೋದ್ಯಮ ದಲ್ಲಿ ಇರುವ ಬಹುತೇಕರಿಗೆ ಹಾಗೂ ಪ್ರತಿಕೋದ್ಯಮ ಕ್ಷೇತ್ರಕ್ಕೆ ಆಪ್ತರಾಗಿರುವ ಹಲವರಿಗೆ ಸ್ಪಷ್ಟ ಉತ್ತರ ತಿಳಿದಿರಬಹುದು. ವಾಸ್ತವದಲ್ಲಿ ಪತ್ರಿಕಾ ಪ್ರಪಂಚ ಏಮರ್ಜೆನ್ಸಿ ಬಳಿಕ ಭಯ ಮುಕ್ತವಾ ಗಿದೆಯೇ? ಸ್ವತಂತ್ರವಾಗಿ ಪಕ್ಷಾತೀತವಾಗಿ ಸುದ್ದಿಗಳನ್ನು ಜನರ ಮುಂದೆ ತಲುಪಿಸುವ ಸ್ವಾತಂತ್ರ್ಯ ಪಡೆದಿದೆಯೇ ಎಂದು ಕೇಳಿದರೆ, ಉತ್ತರ ಇಲ್ಲ.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಡಬೇಕಾದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇಂದು ಸಹ ಸತ್ಯವನ್ನು ವಸ್ತುನಿಷ್ಠ ನೆಲೆಯಲ್ಲಿ ಪಕ್ಷಾತೀತವಾಗಿ ಪತ್ರಿಕೆ, ಸಾಮಾಜಿಕ ಸುದ್ದಿ ಮಾಧ್ಯಮಗಳ ಮೂಲಕ ಪ್ರಕಟಿಸುವ ಸ್ವಾತಂತ್ರ್ಯ ಇಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

ಸತ್ಯವನ್ನು ಪ್ರಕಟಿಸಲು ಹೊರಟ ಕೆಲವು ನಿಷ್ಠಾವಂತ, ಕ್ರಿಯಾಶೀಲ ಪತ್ರಕರ್ತರನ್ನು, ಸಂಪಾದಕ ರನ್ನು, ವರದಿಗಾರರನ್ನು ಹುದ್ದೆಯಿಂದ ರಾಜೀನಾಮೆ ನೀಡುವಂತೆ ಒತ್ತಡ ಹೇರಿ, ಕಿರುಕುಳ ನೀಡಿ ಉದ್ಯೋಗದಿಂದ ತೆಗೆಯಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಸೌಹಾರ್ದಯುತ ಚರ್ಚೆಯ ಮೂಲಕ ಅಭಿವೃದ್ಧಿ ಕಡೆಗೆ ಕೊಂಡೊಯ್ಯಬಲ್ಲ ಸತ್ಯ ಸುದ್ದಿಗಳನ್ನು ಪ್ರಸಾರ ಮಾಡುವ ಮಾಧ್ಯಮ ಪ್ರತಿನಿಧಿಗಳ, ಸುದ್ದಿವಾಹಕ ಪತ್ರಕರ್ತರ ನಿಗೂಢ ಕಾಣೆ, ಸಾವು, ಕೊಲೆಗಳು ದೇಶಾದ್ಯಂತ ಸಂಭವಿ ಸುತ್ತಲೇ ಇವೆ. ಇವೆ ನೋಡಿದಾಗ ನಿಜವಾಗಲೂ ಪತ್ರಕರ್ತರಿಗೆ ರಕ್ಷಣೆ ನಮ್ಮಲ್ಲಿ ಇದೆಯೇ ಎಂದರೆ ಉತ್ತರ, ಇಲ್ಲ ಎಂದೇ.

‘ಸತ್ಯವನ್ನು ಅಭಿವ್ಯಕ್ತಿಗೊಳಿಸುವುದು ಎಂದರೆ ಪ್ರವಾಹದ ವಿರುದ್ಧ ದಿಕ್ಕಿಗೆ ಎದೆಯೊಡ್ಡಿ ನಿಲ್ಲುವುದು ಎಂದರ್ಥ ಎಂಬ ಮಾತೊಂದಿದೆ. ಎಮರ್ಜೆನ್ಸಿ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆಯು ಘೋಷಿತ ರೂಪದಲ್ಲಿ ನಡೆದಿದ್ದರೆ, ಇಂದು ಸಹ ಅಘೋಷಿತ ರೂಪದಲ್ಲಿ ಪತ್ರಿಕಾ ಸ್ವಾತಂತ್ರ್ಯದ ನೈತಿಕ ಮೌಲ್ಯಗಳನ್ನು ಹತ್ತಿಕ್ಕುವ ಘಟನೆಗಳು ನಡೆಯುತ್ತಿವೆ.

2023ರಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ಸರ್ಕಾರೇತರ ಸಂಸ್ಥೆಗಳ ಒಕ್ಕೂಟವಾದ ಇಂಡಿಯಾ ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಇನಿಶಿಯೇಟಿವ್‌ನ ಇಂಡಿಯಾ ಪ್ರೆಸ್ ಫ್ರೀಡಂ ‘2023 ರಲ್ಲಿ 5 ಪತ್ರಕರ್ತರ ಹತ್ಯೆ, 226 ಪತ್ರಕರ್ತರ ಮೇಲೆ ದಾಳಿ’ಯಾಗಿರುವ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿತ್ತು.

ಅವುಗಳಲ್ಲಿ ದೆಹಲಿಯ 54 ಪತ್ರಕರ್ತರು, ಪಶ್ಚಿಮ ಬಂಗಾಳ (25), ಮಣಿಪುರ (22), ಉತ್ತರ ಪ್ರದೇಶ (20), ಕೇರಳ (16), ಜಾರ್ಖಂಡ್ (11), ಮಹಾರಾಷ್ಟ್ರ ಮತ್ತು ತೆಲಂಗಾಣ (ತಲಾ ಎಂಟು), ಅಸ್ಸಾಂ, ಬಿಹಾರ ಮತ್ತು ಮಧ್ಯಪ್ರದೇಶ (ತಲಾ ಏಳು), ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ಒಡಿಶಾ (ತಲಾ ಐದು); ಆಂಧ್ರಪ್ರದೇಶ ಮತ್ತು ಹರಿಯಾಣ (ತಲಾ ನಾಲ್ಕು), ಪಂಜಾಬ್ (ಮೂರು), ತ್ರಿಪುರ (ಇಬ್ಬರು), ಮತ್ತು ತಮಿಳುನಾಡು, ರಾಜಸ್ಥಾನ ಮತ್ತು ಉತ್ತರಾಖಂಡ (ತಲಾ ಒಂದು) ಎಂದು ವರದಿ ತಿಳಿಸಿದೆ.

ಅಷ್ಟೇ ಅಲ್ಲದೇ ಹಲ್ಲೆಗೊಳಗಾದವರಲ್ಲಿ 30 ಮಂದಿ ಮಹಿಳಾ ಪತ್ರಕರ್ತರು ಇರುವುದು ಕಂಡು ಬಂದಿದೆ ಎಂದು ತಿಳಿಸಿದೆ. ಎಮರ್ಜೆನ್ಸಿಯ ತರುವಾಯ 77 ರಿಂದ 2022ರ ನಡುವಿನ ಅವಧಿಯಲ್ಲಿ, ದೇಶದಲ್ಲಿ ಒಟ್ಟು 80 ಪತ್ರಕರ್ತರು ಕೊಲೆಯಾಗಿರುವ ಸಂಗತಿ ಕಳವಳಕಾರಿಯಾದದ್ದು. ಇವರಲ್ಲಿ ಪರಿಸರ ಹೋರಾಟಕ್ಕೆ ಸಂಬಂಧಿಸಿದ ಪತ್ರಕರ್ತರು, ಭೂ ಮಾಫಿಯಾ, ಮರಳು ಮಾಫಿಯಾ, ಇನ್ನಿತರ ವಿಷಯಗಳ ಮೇಲೆ ವರದಿ ಮಾಡಲು ಹೋರಟವರೇ ಹೆಚ್ಚಾಗಿzರೆ ಎಂಬ ಅಂಶವು ಬೆಳಕಿಗೆ ಬಂದಿದೆ.

ಕಳೆದ 15 ವರ್ಷಗಳಲ್ಲಿ, ಮಾಧ್ಯಮ ಕಾವಲು ಸಂಸ್ಥೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಖಊ) ನಿರ್ವಹಿಸುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 2009ರಲ್ಲಿ 105ರಿಂದ 2024ರಲ್ಲಿ 159ಕ್ಕೆ ತನ್ನ ಶ್ರೇಯಾಂಕಕ್ಕೆ ಭಾರಿ ಕುಸಿತ ಕಂಡಿದೆ ಎಂದು ವರದಿ ಮಾಡಿದೆ.

ಸ್ವತಂತ್ರ ಮಾಧ್ಯಮಗಳ ಬಾಯಿ ಮುಚ್ಚಿಸುವ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ಮೌನ ಗೊಳಿಸುವ ಸ್ಪಷ್ಟ ಉದ್ದೇಶದೊಂದಿಗೆ ನಾವು ಸರ್ವಾಧಿಕಾರಿ ಪ್ರವೃತ್ತಿಯನ್ನು ನೋಡುತ್ತಿದ್ದೇವೆ ಎಂದು ಆರ್ ಎಸ್‌ಎಫ್‌ ನ ದಕ್ಷಿಣ ಏಷ್ಯಾ ಡೆಸ್ಕ್‌ನ ಮುಖ್ಯಸ್ಥೆ ಸೆಲಿಯಾ ಮರ್ಸಿಯರ್ ಹೇಳುತ್ತಾರೆ.

ಅದೇನೆ ಇರಲಿ, ಇಂದಿನ ಆಧುನಿಕ ಡೀಫ್‌ ಫೇಕ್ ನಂತಹ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಹಲವಾರು ಕಾನೂನುಗಳನ್ನು ಪಾಲಿಸುವ ಅವಸರದಲ್ಲಿ, ಪತ್ರಿಕೆ ಹಾಗೂ ಸಾಮಾಜಿಕ ಸುದ್ದಿ ಮಾಧ್ಯಮಗಳ ಮೇಲೆ ಹಯಾಗುತ್ತಿವೆ ಎಂಬುದನ್ನು ತಳ್ಳಿ ಹಾಕಲಾಗದು. ಅರ್ಥಾತ್ ಇದು ಸಹ ಪರೋಕ್ಷವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಹದ್ದುಬಸ್ತಿನಲ್ಲಿ ಇರಿಸುವ ಪ್ರಯತ್ನವಲ್ಲವೇ? ಪತ್ರಿಕೆಯು ಕೇವಲ ಜನರಿಗೆ ಸುದ್ದಿ ತಲುಪಿಸುವ ಕೆಲಸ ಮಾಡುವುದಿಲ್ಲ, ಬದಲಾಗಿ ಸತ್ಯಾಂಶವನ್ನು ನಿಖರವಾಗಿ ಜನರ ಮುಂದೆ ತೆರೆದಿಡುವ ಕೆಲಸ ವನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಕಾಣದ ಕೈಗಳ ಕಪಿಮುಷ್ಟಿಯಿಂದ ಪತ್ರಿಕಾ ಪ್ರಪಂಚ ಪಾರಾಗುವ ಕಾಲ ಎಂದು ಬರುವುದು ಎಂಬುದೇ ಬಹು ದೊಡ್ಡ ಪ್ರಶ್ನೆ.