Kempegowda Awards 2025: ಗಾಯಕಿ ಸಂಗೀತಾ ಕಟ್ಟಿ ಸೇರಿ 52 ಮಂದಿಗೆ ಕೆಂಪೇಗೌಡ ಪ್ರಶಸ್ತಿ ಇಂದು ಪ್ರದಾನ
Kempegowda Awards 2025: ಸಮಾಜಸೇವೆ, ಮಾಧ್ಯಮ, ನ್ಯಾಯವಾದಿ, ಆಡಳಿತ, ವೈದ್ಯಕೀಯ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಇಂದು (ಜೂ.27) ಸಂಜೆ ಆರು ಗಂಟೆಗೆ ಬಿಬಿಎಂಪಿ ಗಾಜಿನ ಮನೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.


ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹೆಸರಲ್ಲಿ ಬಿಬಿಎಂಪಿಯಿಂದ (BBMP) ನೀಡುವ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ (Kempegowda Awards 2025) ಪ್ರಕಟಗೊಂಡಿದೆ. 52 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಸಮಾಜಸೇವೆ, ಮಾಧ್ಯಮ, ನ್ಯಾಯವಾದಿ, ಆಡಳಿತ, ವೈದ್ಯಕೀಯ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಸಂಗೀತಾ ಕಟ್ಟಿ, ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ, ನಿವೃತ್ತ ಐಎಎಸ್ ಅಧಿಕಾರಿ ಬಿಎಸ್ ಪಾಟೀಲ್ ಸೇರಿದಂತೆ 52 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಇಂದು (ಜೂ.27) ಸಂಜೆ ಆರು ಗಂಟೆಗೆ ಬಿಬಿಎಂಪಿ ಗಾಜಿನ ಮನೆಯಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ನಂದಕುಮಾರ್ (ಹೆಲಿಕಾಫ್ಟರ್ ಪೈಲೆಟ್), ಎಂ.ಜಿ.ರಾಜಗೋಪಾಲ್ (ಕೆಎಎಸ್ಎಸ್ಐಎ-ಅಧ್ಯಕ್ಷರು), ಅರುಣ್ ಪೈ (ಸಮಾಜ ಸೇವೆ), ಡಾ.ವೆಂಕಟಪ್ಪ (ಕಣ್ವ ಆಸ್ಪತ್ರೆ), ದೀಪಕ್ ತಿಮ್ಮಯ್ಯ (ಜರ್ನಲಿಸ್ಟ್), ಸತೀಶ್ (ದಿ ಹಿಂದೂ ಪತ್ರಿಕೆ), ಮಾರಸಪ್ಪ ರವಿ (ಛಾಯಾಚಿತ್ರಗ್ರಾಹಕ), ದರ್ಶನ್ ಗೌಡ , ಅವಿರಾಜ್ (ನ್ಯೂಸ್ ಫಸ್ಟ್), ಶ್ಯಾಮ್ ಸುಂದರ್ ( ಸುಪ್ರೀಂ ಕೋರ್ಟ್ ವಕೀಲರು), ಪ್ರೊ.ಮಿಶ್ರಾ ( ಆರ್ಕಿಟೆಕ್ಟ್), ಬಿ.ಎಸ್. ಪಾಟೀಲ್ (ನಿವೃತ್ತ ಐಎಎಸ್), ಸಿದ್ದಯ್ಯ(ನಿವೃತ್ತ ಐಎಎಸ್), ರವಿಚಂದರ್, ಉಮಾಶಂಕರ್ (ನಿವೃತ್ತ ಐಎಎಸ್), ಜೈಕಾರ್ ಜಯರೋಮೆ (ನಿವೃತ್ತ ಐಎಎಸ್) ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಯಾನಂದ್ (ಡಿಎಸ್ ಮ್ಯಾಕ್ಸ್ ಡೆವಲಪರ್ಸ್), ಕಲ್ಪನಾ ಶಿವಣ್ಣ (ಮಾಗಡಿ), ಚಂದ್ರಶೇಖರ್ ರಾಜು (ಬ್ಲೆಂಡ್ ಸ್ಕೂಲ್), ವರ್ಮಾ (ಎ.ಸಿ.ಇ ಕಂಪೆನಿ ಆರ್ಕಿಟೆಕ್ಟ್), ಹರ್ಷ ಬಿನ್ ಹಂಪನಾ ನಾಗರಾಜು (ಆರ್ಕಿಟೆಕ್ಟ್), ಕೆ.ಎಂ.ನಾಗರಾಜು, ಟಿ.ಎಸ್. ಲೂಕಸ್ (ಸ್ಕೌಟ್ಸ್ ಆಂಡ್ ಗೌಡ್ಸ್), ಪದ್ಮಶ್ರೀ, ಎಂ.ಚಂದ್ರರೆಡ್ಡಿ, ಎ.ಆರೋಗ್ಯಪ್ಪ, ವಿ.ಎಸ್.ಪ್ಯಾಟ್ರಿಕ್ ರಾಜು, ಸಂಗೀತ ಕಟ್ಟಿ, ಡಾ.ಗೌರಿ ಸುಬ್ರಮಣ್ಯ (ಮುಕ್ತಿ ನಾಗ), ವಿದ್ವಾನ್ ಆರ್.ಕೆ.ಶಂಕರ್, ಎಚ್.ಆರ್.ಭಾರ್ಗವ್, ಎಚ್.ತಿಮ್ಮರಾಜ್ ಅರಸ್, ರಾಜೇಶ್ ರೈ ಚಟ್ಲ, ಭಾವನಾ ನಾಗಯ್ಯ, ಮಹೇಶ್ ಭೂಪತಿ, ಧನುಷ್ ಎಂ., ಎಂ.ಅಭಿಮನ್ಯು (ಕರಗ) ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕು.ವಾನ್ಯವಿ ಬಿ.ಎಸ್., ಡಾ.ವಾಸು(ಈದಿನ ಡಾಟ್ಕಾಂ), ರಾಧಿಕಾ ಸ್ವಾಮಿ (ನೃತ್ಯೋಮ ಡ್ಯಾನ್ಸ್ ಅಕಾಡಮಿ), ರವಿಗೌಡ ಜಕ್ಕೂರು, ವಿದೂಷಿ ರೇಖಾ ಜಗದೀಶ್(ಲಲಿತಾ ಕಲಾನಿಕೇತನ), ದ್ಯಾಮಣ್ಣ ಎಂ.ಶಾಸ್ತ್ರಿ(ಜ್ಯೋತಿಷಿ), ಡಾ.ಬಿ.ಪಿ.ಆರಾಧ್ಯ(ಜ್ಯೋತಿಷಿ), ಮರಿಮಲ್ಲಯ್ಯ, ಡಾ.ಸಿ ಶಿವರಾಜು (ಸಂಸ್ಕೃತ ಪ್ರೊಫೆಸರ್), ಬಿ.ಎಂ.ಶಿವರುದ್ರಯ್ಯ, ವೈ.ಕೆ.ಬೆನ್ನೂರು, ಬನ್ನೇರುಘಟ್ಟ, ನಂದಿತಾ ಸುಬ್ಬರಾವ್, ಅತೀಕ್ ಅಹ್ಮದ್ ಬೇಗ್, ಸಂಗೀತಾ ಜೈನ್(ಹೆಲ್ತ್ಕ್ಯಾಂಪ್), ಎನ್.ದೇವರಾಜು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: KUWJ awards: ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ; ಯಾರಿಗೆ ಯಾವ ಪ್ರಶಸ್ತಿ?